ಟೋಲ್ ಬೂತ್ ಘರ್ಷಣೆ: ಸಿಪಿಎಂ, ಲೀಗ್ ನೇತಾರರ ಸಹಿತ 10 ಮಂದಿ ವಿರುದ್ಧ ಕೇಸು

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಆರಿಕ್ಕಾಡಿಯಲ್ಲಿರುವ ಟೋಲ್ ಬೂತ್‌ನಲ್ಲಿ    ಘರ್ಷಣೆ ಹಾಗೂ ಸಾರಿಗೆ ಅಡಚಣೆ ಸೃಷ್ಟಿಸಿದ ಆರೋಪ ದಂತೆ  ಕ್ರಿಯಾಸಮಿತಿ ನೇತಾರರಾದ  ಸಿಪಿಎಂ, ಲೀಗ್ ನೇತಾರರಾದ 10 ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  ಕ್ರಿಯಾ ಸಮಿತಿ ನೇತಾರನೂ,  ಸಿಪಿಎಂ  ಕುಂಬಳೆ ಏರಿಯಾ ಸೆಕ್ರೆಟರಿಯಾದ ಸಿ.ಎ. ಸುಬೈರ್, ಲೀಗ್ ಪದಾಧಿಕಾರಿಗಳಾದ ಎ.ಕೆ.ಆರೀಫ್, ಅಶ್ರಫ್ ಕಾರ್ಳೆ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇತರ 7 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಟೋಲ್ ಬೂತ್ ಮೆನೇಜರ್ ಹರ್ಯಾಣ ನಿವಾಸಿಯಾದ ಅಮಿತ್ ಕುಮಾರ್ …

ಸ್ವರ್ಗ ತೂಂಬಡ್ಕದಲ್ಲಿ ಚಿರತೆಯ ಹೆಜ್ಜೆ ಹೋಲುವ ಗುರುತು ಪತ್ತೆ

ಪೆರ್ಲ: ಪಾಣಾಜೆ ಸ್ವರ್ಗ ಸಮೀಪದ ತೂಂಬಡ್ಕದಲ್ಲಿ ನಿನ್ನೆ ಸಂಜೆ ಚಿರತೆ ಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ. ಕೇರಳ- ಕರ್ನಾಟಕ ಗಡಿ ಪ್ರದೇಶವಾದ ತೂಂಬಡ್ಕ ಬಯಲಿನ ಕಲ್ಲುಕೋರೆ ಸಮೀಪ ಚಿರತೆ ಕಂಡು ಬಂದಿದೆ ಎಂದು ಮುಳಿಹುಲ್ಲು ಎರೆಯುತ್ತಿದ್ದ ಮಹಿಳೆಯೊಬ್ಬರು ತಿಳಿಸಿದ್ದಾರೆ.  ಭಯಗೊಂಡ ಇವರು ಸಮೀಪದ ಮನೆಯವರಲ್ಲಿ ತಿಳಿಸಿದ್ದು, ಬಳಿಕ ಸ್ಥಳೀಯರು ನಡೆಸಿದ ಹುಡುಕಾಟದಲ್ಲಿ ಚಿರತೆಯದ್ದೆಂದು ಶಂಕಿಸುವ ಹೆಜ್ಜೆಗುರುತು ಪತ್ತೆಹಚ್ಚಲಾಗಿದೆ. ಮಹಿಳೆ ನೀಡಿದ ಹೇಳಿಕೆಯಂತೆ ಪಾಣಾಜೆ ಅಧಮೂಲೆ ಅಥವಾ ಸ್ವರ್ಗ ಬೈರಡ್ಕ ಭಾಗಕ್ಕೆ ಚಿರತೆ ತೆರಳಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲವು ದಿನಗಳ …

ಹೊಸಂಗಡಿಯಲ್ಲಿ ಕಬಡ್ಡಿ ಪಂದ್ಯಾಟ ನಾಳೆ

ಹೊಸಂಗಡಿ: ಬಂಗ್ರಮಂಜೇಶ್ವರ ಶ್ರೀ ಅಯ್ಯಪ್ಪಕೃಪ ವೀರಮಾರುತಿ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ಅಖಿಲ ಭಾರತ ಮಟ್ಟದ ಎ ಗ್ರೇಡ್ ಕಬಡ್ಡಿ ಪಂದ್ಯಾಟ ನಾಳೆ ಹೊಸಂಗಡಿಯಲ್ಲಿ ಜರಗಲಿದೆ. ಕಾಸರಗೋಡು ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಸಹಕಾರದೊಂದಿಗೆ ನಡೆಯುವ ಪಂದ್ಯಾಟದಲ್ಲಿ ವಿಜೇತರಿಗೆ ಪ್ರಥಮ ಬಹುಮಾನವಾಗಿ 5೦,೦೦೦ ರೂ. ಮತ್ತು ಟ್ರೋಫಿ, ದ್ವಿತೀಯ 3೦,೦೦೦ ರೂ., ಟ್ರೋಫಿ, ತೃತೀಯ ಹಾಗೂ ಚತುರ್ಥ 1೦,೦೦೦ ರೂ. ಮತ್ತು ಟ್ರೋಫಿ ನೀಡಲಾಗುವುದು. ಅಲ್ಲದೆ ಉತ್ತಮ ರಕ್ಷಣೆಗಾರ, ಉತ್ತಮ ಸವ್ಯಸಾಚಿ, ಉತ್ತಮ ಹಿಡಿತಗಾರ ಬಹುಮಾನ ನೀಡಲಾಗುವುದು. ನಾಳೆ ಸಂಜೆ …

25 ವರ್ಷಗಳ ಹಿಂದೆ ವಾಹನ ಅಪಘಾತ: ಕಾಲುಗಳ ಬಲ ಕಳೆದುಕೊಂಡು ಹಾಸಿಗೆ ಹಿಡಿದ ಮನೆಯೊಡೆಯ; ಚಿಕಿತ್ಸೆಗೆ ಬೇಕು ಭಾರೀ ಮೊತ್ತ; ದಾನಿಗಳ ಸಹಾಯ ನಿರೀಕ್ಷೆಯಲ್ಲಿ ಕುಟುಂಬ

ಪೆರ್ಲ: 25 ವರ್ಷಗಳ ಹಿಂದೆ ಸಂಭವಿಸಿದ ವಾಹನ ಅಪಘಾತದಲ್ಲಿ ಕಾಲುಗಳಿಗೆ ಉಂಟಾದ ಏಟು ವ್ಯಕ್ತಿಯ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರ ಪರಿಣಾಮ ಒಂದು ಕಾಲು ಬಲಹೀನಗೊಂಡು ನಡೆದಾಡಲು ಕಷ್ಟಪಡುತ್ತಿದ್ದು ಇದರಿಂದ ಕುಟುಂಬದ ಜೀವನ ಸಂಕಷ್ಟ ಮಯವಾಗಿ ಮಾರ್ಪಾಡುಗೊಂಡಿದೆ. ಪೆರ್ಲ ನಿವಾಸಿಯಾದ ಸುಬ್ರಹ್ಮಣ್ಯ ಭಟ್ (50) ಎಂಬವರು ಪ್ರಸ್ತುತ ನಡೆದಾಡಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇವರು ೨೫ ವರ್ಷಗಳ ಹಿಂದೆ ಕರ್ನಾಟಕದಲ್ಲಿ ಆಟೋರಿಕ್ಷಾ ಚಾಲಕನಾಗಿ ದುಡಿ ಯುತ್ತಿದ್ದರು. ಈ ವೇಳೆ ಮಡಂತ್ಯಾರು ಎಂಬಲ್ಲಿ ಆಟೋರಿಕ್ಷಾ ಅಪಘಾತ …

ಬೇಕಲದಲ್ಲಿ ನಾಳೆ ಸಮನ್ವಯ ಗಡಿನಾಡ ಜನಪದ ಉತ್ಸವ

ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್ ಬೇಕಲ, ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಇದರ ಜಂಟಿ ಆಶ್ರಯದಲ್ಲಿ ಸಮನ್ವಯ ಗಡಿನಾಡ ಜಾನಪದ ಉತ್ಸವ ನಾಳೆ ಬೆಳಿಗ್ಗೆ 9ರಿಂದ ರಾತ್ರಿ 10 ಗಂಟೆವರೆಗೆ ಅರವತ್ ಎನ್‌ಕೆಪಿಎಸ್‌ಕೆ ಟ್ರಸ್ಟ್ ಆಂಪಿಥಿಯೇಟರ್‌ನಲ್ಲಿ ನಡೆಯಲಿದೆ. ಬೆಳಿಗ್ಗೆ ೯ರಿಂದ ಮುದಿಯಕಲ್‌ನಿಂದ ಟ್ರಸ್ಟ್ ಕಚೇರಿವರೆಗೆ ಸಾಂಸ್ಕೃತಿಕ ಮೆರವಣಿಗೆ, 9.30ರಿಂದ ಚೆಂಡೆಮೇಳ, 10ರಿಂದ …

ರಾಜ್ಯಸರಕಾರದ ಕೊನೆಯ ಮುಂಗಡಪತ್ರವೂ ನಿರಾಶಾಜನಕ- ಎಂ.ಎಲ್. ಅಶ್ವಿನಿ

ಕಾಸರಗೋಡು: ಜಿಲ್ಲೆಯ ಅಭಿವೃದ್ಧಿ ಹಿಂದುಳಿದಾವಸ್ಥೆಯನ್ನು ಪರಿಹರಿಸಲು ಸೂಕ್ತವಾದ ಯೋಜನೆಗಳು ಹಾಗೂ ಮೊತ್ತ ಮೀಸಲಿಡದ ಪಿಣರಾಯಿ ವಿಜಯನ್‌ರ ದ್ವಿತೀಯ ಹಂತದ ಸರಕಾರದ ಕೊನೆಯ ಮುಂಗಡಪತ್ರ ನಿರಾಸೆ ಮೂಡಿಸಿರುವುದಾಗಿಯೂ ಜಿಲ್ಲೆಯನ್ನು ಸಂಪೂರ್ಣವಾಗಿ ಅವಗಣಿಸಿರುವುದಾಗಿಯೂ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು. ಜಿಲ್ಲೆಗಿರುವ ರಾಜ್ಯ ಸರಕಾರದ ಬಜೆಟ್ ಪಾಲು ಜಿಲ್ಲೆಯ ಆರೋಗ್ಯವಲಯ ಹಾಗೂ ಶಿಕ್ಷಣವಲಯದಲ್ಲಿರುವ ಹಿಂದುಳಿದಾವಸ್ಥೆಯನ್ನು ಪರಿಹರಿಸಲು ಸಾಕಾಗುವಂತದ್ದಲ್ಲ. ಕಾಸರಗೋಡು ಮೆಡಿಕಲ್ ಕಾಲೇಜಿನ ಜೊತೆಗೆ ರಾಜ್ಯದ ಇತರ ಮೂರು ಮೆಡಿಕಲ್ ಕಾಲೇಜುಗಳಿಗೂ ಸೇರಿ ಒಟ್ಟು 53 ಕೋಟಿ ರೂ. ಮೀಸಲಿಡಲಾಗಿದೆ. 40 …

ಪೈವಳಿಕೆ ಮಂಡಲ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಸ್ಮೃತಿ ಆಚರಣೆ

ಪೈವಳಿಕೆ: ಮಹಾತ್ಮಾ ಗಾಂಧಿ ಯವರ ನೆನಪು ಹಾಗೂ ಅವರ ತತ್ವ ಆದರ್ಶಗಳು ವರ್ತಮಾನ ಕಾಲದಲ್ಲಿ ಅತ್ಯಂತಾಪೇಕ್ಷಿತವಾಗಿದ್ದು ಮುಂದಿನ ಪೀಳಿಗೆಗೆ ಅದನ್ನು ತಲುಪಿಸುವ ಕೆಲಸ ನಡೆಯಬೇಕು ಎಂದು ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ನುಡಿದರು. ಪೈವಳಿಕೆ ಮಂಡಲ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗಾಂಧೀಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಬ್ಲೋಕ್ ಕಾಂಗ್ರೆಸ್ ಪದಾಧಿಕಾರಿಗಳಾದ ನಾರಾಯಣ ಏದಾರ್, ಸಚ್ಚಿದಾನಂದ ರೈ, ಮಂಡಲ ಕಾಂಗ್ರೆಸ್ ನೇತಾರರಾದ ಶಾಜಿ, ಪೌಲ್ ರೋಡ್ರಿಗಸ್, ಅಸೀಸ್ ಕಟ್ಟೆ, …

ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಸೊಸೈಟಿಯಿಂದ 4.76 ಕೋಟಿ ರೂ.ಗಳ ವಂಚನೆ: ಮತ್ತೆ ನಾಲ್ಕು ಮಂದಿ ಸೆರೆ

ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚ ರಿಸ್ಟ್ ವೆಲ್ಫೇರ್ ಸಹಕಾರಿ ಸಂಘದಲ್ಲಿ 4.76 ಕೋಟಿ ರೂಪಾಯಿಗಳ ವಂಚನೆ ನಡೆಸಿದ ಪ್ರಕರಣದಲ್ಲಿ ಮತ್ತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಪಳ್ಳಿಕರೆಯ ಅಬೂಬಕ್ಕರ್ (61), ಪೈವಳಿಕೆ ಬಾಯಾರಿನ ಅಬ್ದುಲ್ ಅಸೀಸ್ (55), ಏತಡ್ಕದ ಆರಿಫ್ (43), ನೆಕ್ರಾಜೆ ಮವ್ವಾರಿನ ಶಂಸುದ್ದೀನ್ (41) ಎಂಬಿವರನ್ನು ಕಣ್ಣೂರು ಕ್ರೈಂ ಬ್ರಾಂಚ್ ಬಂಧಿಸಿದೆ. ಸಿಪಿಎಂ ನಿಯಂತ್ರಣದಲ್ಲಿರುವ ಸಹಕಾರಿ ಸಂಘದಲ್ಲಿ ಈ ವಂಚನೆ ನಡೆದಿದೆ. ವಂಚನಾ ತಂಡಕ್ಕೆ ವಿವಿಧ ಸ್ಥಳಗಳಲ್ಲಿ ವಂಚನೆ ನಡೆಸಲು ಸೂಕ್ತ ಸಂಸ್ಥೆಗಳನ್ನು ತೋರಿಸಿಕೊಟ್ಟು ಹೇಗೆ ವಂಚನೆ …

ಹೊಸಂಗಡಿಯಲ್ಲಿ ಯುವಕ- ಗೆಳತಿಯ ಅರೆನಗ್ನ ವೀಡಿಯೋ ಚಿತ್ರೀಕರಿಸಿದ ಪ್ರಕರಣ: ಇನ್ನೋರ್ವ ಸೆರೆ

ಹೊಸಂಗಡಿ: ವಸತಿಗೃಹಕ್ಕೆ ಅತಿಕ್ರಮಿಸಿ ನುಗ್ಗಿ ಯುವಕ ಹಾಗೂ ಗೆಳತಿಯ ಅರೆನಗ್ನ ವೀಡಿಯೋ ಹಾಗೂ ಫೊಟೋ ಚಿತ್ರೀಕರಿಸಿ ಬೆದರಿಕೆಯೊಡ್ಡಿ ಹಣ ಹಾಗೂ ಮೊಬೈಲ್ ಫೋನ್ ಅಪಹರಿಸಿದ ಪ್ರಕರಣದಲ್ಲಿ ಇನ್ನೋರ್ವನನ್ನು ಸೆರೆ ಹಿಡಿಯಲಾಗಿದೆ. ಬಡಾಜೆ ಕಾಜೂರ್ ಮಾಲಿ ನಿವಾಸಿ ಟಿ.ಕೆ. ಮೊಹಮ್ಮದ್ ಫೈಸಲ್ (42)ನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗಿದ್ದು, 2 ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದಲ್ಲಿ ಇನ್ನೋರ್ವ ಆರೋಪಿಯಾದ ಮಂಜೇಶ್ವರ ಪಿರಾರಮೂಲೆ ನಿವಾಸಿ ಹಾಗೂ ಕಡಂಬಾರ್‌ನಲ್ಲಿ ವಾಸವಾಗಿರುವ ಕೆ.ಎ. ಹಾರಿಸ್ (40)ನನ್ನು …

ಹೊಯ್ಗೆ ಬೇಟೆಗಿಳಿದ ಪೊಲೀಸರಿಗೆ ಲಭಿಸಿದ್ದು ಎಂಡಿಎಂಎ: ಓರ್ವ ಸೆರೆ

ಉಪ್ಪಳ: ಹೊಯ್ಗೆ ಬೇಟೆಗಿಳಿದ ಪೊಲೀಸರು ಮಾದಕವಸ್ತು ಸಹಿತ ಓರ್ವನನ್ನು ಬಂಧಿಸಿದ್ದಾರೆ. ಮೂಸೋಡಿ ನಿವಾಸಿ ಮುನೀರ್ ಎಂ (36)  ಎಂಬಾತನ ಕೈಯಿಂದ 1.01 ಗ್ರಾಂ ಎಂಡಿಎಂಎ ವಶಪಡಿಸ ಲಾಗಿದೆ. ಇಂದು ಮುಂಜಾನೆ 3.15 ರ ವೇಳೆ ಉಪ್ಪಳ ಬಳಿಯ ಮೈದಾನದಲ್ಲಿ ಸಂಶಯಾಸ್ಪದವಾಗಿ ಕಂಡುಬಂದ ಮುನೀರ್‌ನನ್ನು ಎಸ್‌ಐ ವೈಷ್ಣವ್ ನೇತೃತ್ವದ ತಂಡ ತಪಾಸಣೆ ನಡೆಸಿ ದಾಗ  ಎಂಡಿಎಂಎ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿದೆ. ಉಪ್ಪಳ, ಮಣಿ ಮುಂಡ ಭಾಗಗಳ ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಾಗಾಟ ನಡೆಯುತ್ತಿದೆಯೆಂಬ ಮಾಹಿತಿಯ ಹಿನ್ನೆಲೆಯಲ್ಲಿ …