ಐಎಪಿಯಿಂದ ಶಿಶುರೋಗ ತಜ್ಞರಿಗಾಗಿ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ

ಕಾಸರಗೋಡು: ಐಎಪಿ ಕಾಸರಗೋಡು ಶಾಖೆಯ ನೇತೃತ್ವದಲ್ಲಿ ಶಿಶು ರೋಗ ತಜ್ಞರಿಗಾಗಿ ‘ಫ್ಯೂಯೆಲ್’ ಎಂಬ ಹೆಸರಲ್ಲಿ  ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ನಡೆಯಿತು. ಕಾಸರಗೋಡು ಸಿಟಿ ಟವರ್ ಹೋಟೆಲ್‌ನಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಶಿಶು ರೋಗ ತಜ್ಞರು, ಫಿಸೀಶಿಯನ್‌ಗಳು, ಜನರಲ್ ಪ್ರಾಕ್ಟೀಶನರ್‌ಗಳು ಹಾಗೂ ಮಂಗಳೂರಿನ ಪೀಡ್ರಿಯಾಟಿಕ್ಸ್ ಪೋಸ್ಟ್ ಗ್ರಾಜ್ಯುವೆಟ್ ವಿದ್ಯಾರ್ಥಿಗಳು ಪಾಲ್ಗೊಂಡರು. ಐಎಪಿ ಕಾಸರಗೋಡು ಘಟಕ ಅಧ್ಯಕ್ಷ ಡಾ| ಮಾಹಿನ್ ಪಿ. ಅಬ್ದುಲ್ಲ ಸ್ವಾಗತಿಸಿದರು.  ಹಿರಿಯ ಶಿಶುರೋಗ ತಜ್ಞ ಡಾ| ನಾರಾಯಣ ನಾಯ್ಕ್ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. …

ಕನ್ನಡ ಮಾಧ್ಯಮ ಅಧ್ಯಾಪಕರಿಗೆ ವಿದಾಯಕೂಟ ಸಮಾರಂಭ

ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವತಿಯಿಂದ 2025-26ನೇ ಸಾಲಿನಲ್ಲಿ ನಿವೃತ್ತಿ ಹೊಂದುತ್ತಿರುವ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕ ಶಿಕ್ಷಕಿಯರಿಗೆ ವಿದಾಯ ಕೂಟ ಸಮಾರಂಭ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಕಾಸರಗೋಡು ಸರಕಾರಿ ಕಾಲೇಜು ನಿವೃತ್ತ ಕನ್ನಡ ಪ್ರಾಧ್ಯಾಪಿಕೆ ಯು ಮಹೇಶ್ವರಿ ಉದ್ಘಾಟಿಸಿ, ನಮ್ಮ ಹಿರಿಯರು ಕನ್ನಡವನ್ನು ಉಳಿಸಿ ಬೆಳೆಸಲು ತುಂಬಾ ಪ್ರಯತ್ನಪಟ್ಟಿದ್ದಾರೆ. ಅವರ ಶ್ರಮದ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ನಾವು ಕೂಡಾ ಹಿರಿಯರು ಮಾಡಿದ ಸಾಧನೆ ಕೆಲಸಗಳನ್ನು ಮಾಡಬೇಕು. ಕನ್ನಡಕ್ಕಾಗಿ ಹೋರಾಡಿದಂತಹ …

ಬಿಜೆಪಿ ಅಭ್ಯರ್ಥಿಯಿಂದ ಚರ್ಚ್‌ಗಳ ಸಹಿತ ವಿವಿಧೆಡೆ ಮತ ಯಾಚನೆ

ಕಾಸರಗೋಡು:  ಕಾಸರಗೋಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಎಲ್. ಅಶ್ವಿನಿಯವರು ನಿನ್ನೆ ವಿವಿಧ ಕಡೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು.  ಮಧೂರು ಪಂಚಾ ಯತ್ ಸದಸ್ಯ, ಬಿಜೆಪಿ ನೇತಾರನಾದ  ರವಿ ಗಟ್ಟಿಯವರ ಮನೆಯಿಂದ ನಿನ್ನೆಯ ಪ್ರಚಾರ ಕಾರ್ಯ ಆರಂಭಗೊಂಡಿತು. ಬಳಿಕ ಗರಿಗಳ ರವಿವಾರ ಆಚರಣೆಯಂಗವಾಗಿ ಬೇಳ, ಕೊಲ್ಲಂಗಾನ, ಕಾಸರಗೋಡು ಕೋಟೆಕಣಿಯ ಚರ್ಚ್‌ಗಳಿಗೆ ಎಂ.ಎಲ್. ಅಶ್ವಿನಿ ಹಾಗೂ ನೇತಾರರು ಭೇಟಿ ನೀಡಿ ಶುಭಾಶಯ ತಿಳಿಸಿದರು.  ಮಧೂರು ಮಿತ್ರಕಲಾ ವೃಂದದ ಆಶ್ರಯದಲ್ಲಿ ಹಮ್ಮಿಕೊಂಡ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ ತಂಡಗಳಿಗೆ ಅವರು …

ಯುಡಿಎಫ್ ಅಭ್ಯರ್ಥಿಯಿಂದ ವಿವಿಧ ಚರ್ಚ್‌ಗಳಿಗೆ ಸಂದರ್ಶನ

ಕಾಸರಗೋಡು:  ಕಾಸರಗೋಡು ವಿಧಾಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಅವರು ಗರಿಗಳ ರವಿವಾರದ ಅಂಗವಾಗಿ ನಿನ್ನೆ ವಿವಿಧ ಚರ್ಚ್‌ಗಳಿಗೆ ಭೇಟಿ ನೀಡಿ ಶುಭಾಶಯ ತಿಳಿಸಿದರು.  ಬೇಳ ಅವರ್ ಲೇಡಿ ಆಫ್ ಡೋಲರ್ಸ್ ಚರ್ಚ್‌ಗೆ ಭೇಟಿ ನೀಡಿ ಫಾದರ್ ಸ್ಟ್ಯಾನಿ ಪೆರೇರ, ಬದಿಯಡ್ಕ ಸೈಂಟ್ ಮೇರೀಸ್ ಚರ್ಚ್‌ನ ಫಾದರ್ ಚಾಕೋ ಕುಡಿಪರಂಬಿಲ್, ಉಕ್ಕಿನಡ್ಕ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚ್‌ನ  ಫಾದರ್ ಸುನಿಲ್ ಮಿರಾಂಡ ಮೊದಲಾದವರನ್ನು  ಭೇಟಿ ನೀಡಿ ಶುಭಾಶಯ ಕೋರಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕ …

ಶಾರದನಗರ ಸಮುದ್ರ ತೀರ ಪ್ರದೇಶದಲ್ಲಿ ಬಿಜೆಪಿ ಸಭೆ: ಉಡುಪಿ ಶಾಸಕರಿಂದ ಮಾರ್ಗದರ್ಶನ

ಉಪ್ಪಳ: ಮಂಜೇಶ್ವರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್‌ರ ಚುನಾವಣಾ ಪ್ರಚಾರದ ಅಂಗವಾಗಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಹನುಮಾನ್ ನಗರ ಹಾಗೂ ಶಾರದಾ ನಗರ ಸಮುದ್ರ ತೀರ ಪ್ರದೇಶದ ಬಿಜೆಪಿ ಸಭೆ ಶಾರದಾನಗರದ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಿನ್ನೆ ಸಭೆ ನಡೆಯಿತು. ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ನಾಡಿನ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕರೆ ನೀಡಿದರು. ಬಿಜೆಪಿ ಮುಖಂಡರಾದ ಕೆ.ಪಿ. ವಲ್ಸರಾಜ್, ವಿಜಯ ಕುಮಾರ್, ದಿನೇಶ್ ಚೆರುಗೋಳಿ, ಜಯಪ್ರಕಾಶ ಸುಳ್ಯ ಮೊದಲಾದವರು …

ಯುಡಿಎಫ್‌ನ ಒತ್ತಡದಿಂದ ಎಸ್‌ಡಿಪಿಐ ನಾಮಪತ್ರ ಹಿಂತೆಗೆದುಕೊಂಡಿದೆ-ಎಂ.ಎ. ಬೇಬಿ

ಕಾಸರಗೋಡು: ವಿಧಾನಸಭಾ ಚುನಾವಣೆಯಲ್ಲಿ  ಎಸ್‌ಡಿಪಿಐ ಯೊಂದಿಗೆ ಎಡರಂಗ ಯಾವುದೇ ರೀತಿಯ ಡೀಲ್ ಮಾಡಿಕೊಂಡಿಲ್ಲ ವೆಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಹೇಳಿದ್ದಾರೆ. ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ನಿನ್ನೆ ನಡೆದ ಮುಖಾಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್‌ನ ಒತ್ತಡಕ್ಕೆ ಮಣಿದು ಅಲ್ಲಿ ಎಸ್‌ಡಿಪಿಐ ಅಭ್ಯರ್ಥಿ ತನ್ನ ನಾಮಪತ್ರ ಹಿಂಪಡೆದುಕೊಂಡಿದೆ ಎಂದು ಎಂ.ಎ. ಬೇಬಿ ಇದೇ ಸಂದರ್ಭದಲ್ಲಿ ಆರೋಪಿಸಿದ್ದಾರೆ. ಎಸ್‌ಡಿಪಿಐ ಅದರ ನಿಲುವನ್ನು ಈಗಾಗಲೇ ಘೋಷಿಸಿದೆ. ಆದರೆ ಎಸ್‌ಡಿಪಿಐಯ ಮತ ಎಡರಂಗಕ್ಕೆ ಬೇಡವೆಂದು …

ಯುವತಿ, ಇಬ್ಬರು ಮಕ್ಕಳು ನಾಪತ್ತೆ

ಕಾಸರಗೋಡು: ಯುವತಿ ಹಾಗೂ ಇಬ್ಬರು ಮಕ್ಕಳು ನಾಪತ್ತೆಯಾದ ಬಗ್ಗೆ ದೂರಲಾಗಿದೆ. ನೆಲ್ಲಿಕುಂಜೆ ಬೀಚ್ ರೋಡ್‌ನ ಎನ್. ಯಮುನ ಎಂಬವರ ಪುತ್ರಿ ಶರಣ್ಯ (27) ಹಾಗೂ ಈಕೆಯ ಆರರ ಹರೆಯದ ಪುತ್ರ, ಎರಡರ ಹರೆಯದ ಪುತ್ರಿ ಎಂಬಿವರು ನಾಪತ್ತೆಯಾದ ವರಾಗಿದ್ದಾರೆ. ಶನಿವಾರ ಮಧ್ಯಾಹ್ನ ಕೋಟಿಕುಳದಲ್ಲಿರುವ ಪತಿಯ ಮನೆಗೆ ಹೋಗುವುದಾಗಿ ತಿಳಿಸಿ ಶರಣ್ಯ ಮಕ್ಕ ಳನ್ನು ಕರೆದುಕೊಂಡು ಮನೆಯಿಂದ ಹೋಗಿದ್ದು ಅನಂತರ ಅವರು ನಾಪತ್ತೆ ಯಾಗಿರುವುದಾಗಿ ತಾಯಿ ಕಾಸರ ಗೋಡು ನಗರ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕುಂಬಳೆ ಪೇಟೆಯಲ್ಲಿ ಕಟ್ಟಿ ನಿಂತ ಮಳೆನೀರು: ಬಸ್ ಪ್ರಯಾಣಿಕರಿಗೆ ಸಂಕಷ್ಟ

ಕುಂಬಳೆ: ಬೇಸಿಗೆಯ ಮಳೆ ಬಿಸಿಗೆ ಅಲ್ಪ ತಂಪು ಎರಚಿದ ಮಧ್ಯೆ ಕುಂಬಳೆಯಲ್ಲಿ ನೀರು ಕಟ್ಟಿ ನಿಂತು ಸಮಸ್ಯೆ ಸೃಷ್ಟಿಯಾಗಿದೆ. ಕುಂಬಳೆ ಪೇಟೆಯಲ್ಲಿ ಬದಿಯಡ್ಕ, ಮುಳ್ಳೇರಿಯ, ಪೇರಾಲ್ ಕಣ್ಣೂರು ಭಾಗಗಳಿಗೆ ತೆರಳುವ ಬಸ್ ತಂಗುದಾಣದ ಬಳಿಯಲ್ಲೇ ನೀರು ಕಟ್ಟಿ ನಿಂತ ಕಾರಣ ಬಸ್‌ನವರಿಗೆ ಜನರನ್ನು ಇಳಿಸಲು, ಹತ್ತಿಸಲು ಸಮಸ್ಯೆಯಾಯಿತು. ರಸ್ತೆ ನಿರ್ಮಾಣದ ವೇಳೆ ಕೈಗೊಂಡ ಅವೈಜ್ಞಾನಿಕ ಚರಂಡಿಯಿಂದಾಗಿ ಮಳೆ ನೀರು ಇಲ್ಲಿ ಕಟ್ಟಿ ನಿಲ್ಲುತ್ತಿರುವುದಾಗಿ ಸ್ಥಳೀಯರು ದೂರುತ್ತಾರೆ. ಒಂದು ಮಳೆಗೆ ಈ ರೀತಿ ಸಮಸ್ಯೆ ಉಂಟಾದರೆ ಮಳೆಗಾಲದಲ್ಲಿ ಇಲ್ಲಿನ …

ಕಾಸರಗೋಡು, ಮಂಜೇಶ್ವರದಲ್ಲಿ ಐಕ್ಯರಂಗಕ್ಕೆ ಸುಲಭ ಜಯ- ಚೆನ್ನಿತ್ತಲ

ಕಾಸರಗೋಡು: ಮಂಜೇಶ್ವರ, ಕಾಸರಗೋಡು ವಿಧಾನಸಭಾ ಮಂಡಲಗಳಲ್ಲಿ ಐಕ್ಯರಂಗದ ಅಭ್ಯರ್ಥಿಗಳು ಸುಲಭದಲ್ಲಿ ಜಯಗಳಿಸುವರೆಂದು ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ನುಡಿದರು. ಪ್ರೆಸ್‌ಕ್ಲಬ್‌ನ ಮೀಟ್ ದ ಪ್ರೆಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಎರಡು ಮಂಡಲಗಳಲ್ಲಿ ಐಕ್ಯರಂಗಕ್ಕೆ ಯಾವುದೇ ಆತಂಕವಿಲ್ಲ. ರಾಜ್ಯದಲ್ಲಿ ಐಕ್ಯರಂಗ 100ಕ್ಕೂ ಹೆಚ್ಚು ಸೀಟು ಗಳಿಸಿ ಅಧಿಕಾರಕ್ಕೇರಲಿದೆ. ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ- ಬಿಜೆಪಿ ಮಧ್ಯೆ ಡೀಲ್ ಇದೆ. 2021ರ ಚುನಾವಣೆಯಲ್ಲಿ 60 ಮಂಡಲಗಳಲ್ಲಿ ಈ ರೀತಿಯ ಡೀಲ್ ನಡೆಸಲಾಗಿತ್ತು ಎಂದು ಚೆನ್ನಿತ್ತಲ ಆರೋಪಿಸಿದರು. ಕಲ್ಲಟ್ರ ಮಾಹಿನ್ ಹಾಜಿ, …

ತ್ಯಾಜ್ಯ ಉಪೇಕ್ಷೆ ಉಪಟಳ: ಶಾಂತಿಪಳ್ಳ- ಭಾಸ್ಕರನಗರ ರಸ್ತೆ ಬದಿ ನವೋದಯ ಫ್ರೆಂಡ್ಸ್ ಕ್ಲಬ್‌ನಿಂದ ಸೋಲಾರ್ ಕ್ಯಾಮರಾ ಸ್ಥಾಪನೆ

ಕುಂಬಳೆ: ಶಾಂತಿಪಳ್ಳದಿಂದ ಭಾಸ್ಕರನಗರ ವರೆಗಿರುವ ರಸ್ತೆ ಬದಿಯಲ್ಲಿ ತ್ಯಾಜ್ಯ ತಂದೆಸೆಯುವವರು ಇನ್ನು ಜಾಗ್ರತೆ ವಹಿಸದಿದ್ದರೆ ಸಮಸ್ಯೆಯಾಗಲಿದೆ. ರಸ್ತೆ ಬದಿಯಲ್ಲಿ ತ್ಯಾಜ್ಯವನ್ನು ಉಪೇಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ನವೋದಯ ಫ್ರೆಂಡ್ಸ್ ಕ್ಲಬ್ ಈ ಪರಿಸರದಲ್ಲಿ ಸೋಲಾರ್ ಕ್ಯಾಮರಾ ಸ್ಥಾಪಿಸಿದೆ. ಶಾಂತಿಪಳ್ಳದಿಂದ ಭಾಸ್ಕರನಗರ ವರೆಗಿರುವ ರಸ್ತೆ ಬದಿ ಕ್ಲಬ್ ಕ್ಯಾಮರಾ ಸ್ಥಾಪಿಸಿದ್ದು, ತ್ಯಾಜ್ಯ ತಂದೆಸೆಯುವವರು ಇದರಲ್ಲಿ ಸಿಕ್ಕಿ ಬೀಳುವ ಸಾಧ್ಯತೆ ಇದೆ. ರಸ್ತೆ ಬದಿಯನ್ನು ಕ್ಲಬ್‌ನವರು ಇತ್ತೀಚೆಗೆ ಶುಚಿಗೊಳಿಸಿದ್ದರು. ಅಲ್ಲದೆ ಎರಡು ಬಾರಿ ತ್ಯಾಜ್ಯ ತಂದೆಸೆಯುವವರನ್ನು ಸೆರೆ ಹಿಡಿದು ದಂಡ ವಸೂಲಿ ಮಾಡಲಾಗಿತ್ತು. …