ಜನವಾಸ ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಉಪೇಕ್ಷಿಸಲು ಯತ್ನ : ನಾಗರಿಕರನ್ನು ಕಂಡು ವಾಹನ ಉಪೇಕ್ಷಿಸಿ ಪರಾರಿಯಾದ ವ್ಯಕ್ತಿಗಳ ಪತ್ತೆಗಾಗಿ ಪೊಲೀಸ್ ಶೋಧ
ಕುಂಬಳೆ: ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮಿನಿ ಟೆಂಪೋದಲ್ಲಿ ತಂದು ಜನವಾಸ ಪ್ರದೇಶದಲ್ಲಿ ಉಪೇಕ್ಷಿಸಲೆತ್ನಿಸಿದ ವೇಳೆ ನಾಗರಿಕರನ್ನು ಕಂಡು ವಾಹನ ಉಪೇಕ್ಷಿಸಿ ಪರಾರಿಯಾದ ಇಬ್ಬರಿಗಾಗಿ ಕುಂಬಳೆ ಪೊಲೀಸರು ಶೋಧ ನಡೆಸಿದ್ದಾರೆ. ಪುತ್ತಿಗೆ ಪಂಚಾಯತ್ನ ಜನವಾಸ ಪ್ರದೇಶವಾದ ಪೇರಾಲ್ ಕಣ್ಣೂರು ಸಿದ್ದಿಬಯಲಿನಲ್ಲಿ ಕೆಂಪು ಕಲ್ಲು ಕಡಿದು ತೆಗೆದು ಸೃಷ್ಟಿಯಾದ ಹೊಂಡದಲ್ಲಿ ಉಪೇಕ್ಷಿಸಲೆಂದು ನಿನ್ನೆ ಮುಂಜಾನೆ ಮಿನಿ ಟೆಂಪೋದಲ್ಲಿ ಭಾರೀ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತರಲಾಗಿತ್ತು. ಇದನ್ನರಿತ ನಾಗರಿಕರು ಒಗ್ಗೂಡಿ ಅಲ್ಲಿಗೆ ತಲುಪಿದಾಗ ವಾಹನದಲ್ಲಿದ್ದ ಇಬ್ಬರು ಓಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ನಾಗರಿಕರು …