ಯುವತಿಗೆ ಲೈಂಗಿಕ ದೌರ್ಜನ್ಯಕ್ಕೆತ್ನಿಸಿದ ತಂಡದ ಮೇಲೆ ಗುಂಡು ಹಾರಾಟ: ಓರ್ವ ಸಾವು

ಮುಂಬೈ: ಯುವತಿಗೆ ಲೈಂಗಿಕ  ದೌರ್ಜನ್ಯಕ್ಕೆ ಯತ್ನಿಸಿದ ತಂಡದ ಮೇಲೆ ನಡೆದ ಗುಂಡು ಹಾರಾಟದಲ್ಲಿ ಓರ್ವ ಮೃತಪಟ್ಟ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.  ಇಬ್ಬರು ಗಾಯಗೊಂಡಿದ್ದಾರೆ.  ವಲಸೆ ಕಾರ್ಮಿಕರು  ಅತೀ ಹೆಚ್ಚಿರುವ ಸ್ಥಳದಲ್ಲಿ ಈ ಘಟನೆ ನಡೆದಿದೆ.   ಅಕ್ಬರ್ ಅಹಮ್ಮದ್ ಎಂಬಾತ ಮೃತ ವ್ಯಕ್ತಿಯಾಗಿದ್ದಾನೆಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ ಕೇರಳೀಯನಾದ ಜಯನ್ ಶಿವಾನಂದನ್ ನಾಯರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  ಗಾಯಗೊಂಡ ಇಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ಜಯನ್ ಕೇರಳೀಯ ನಾಗಿದ್ದರೂ ಜನಿಸಿ ಬೆಳೆದಿರುವುದು ಮಹಾರಾಷ್ಟ್ರದಲ್ಲಾಗಿದೆ. ತಾನು ಸಹೋದರಿಯಂತೆ …

ಎಲ್‌ಡಿಎಫ್‌ನ ಬೃಹತ್ ಫ್ಲೆಕ್ಸ್ ನಾಶ ಪ್ರಕರಣ: ಅಪ್ರಾಪ್ತ ಸೇರಿ ಐದು ಮಂದಿ ಸೆರೆ

ಕಾಸರಗೋಡು: ಪೊಯಿನಾಚಿ ಮೈಲಾಟಿಯ ರಾಷ್ಟ್ರೀಯ ಹೆದ್ದಾರಿ ಬದಿ ಖಾಸಗಿ ಹಿತ್ತಿಲಲ್ಲಿ ಎಡರಂಗದ ರಾಜ್ಯ ಸಮಿತಿ ಸ್ಥಾಪಿಸಿದ ಬೃಹತ್ ಫ್ಲೆಕ್ಸ್ ಬೋರ್ಡನ್ನು ನಾಶಪಡಿಸಿದ ಪ್ರಕರಣದಲ್ಲಿ ಅಪ್ರಾಪ್ತ ಸೇರಿ ಐದು ಮಂದಿಯನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಪನೆಯಾಲ್, ಚೌಕಿ, ಪೊನ್ನಂಬಾರ ನಿವಾಸಿ ಗುರುಪ್ರಸಾದ್ (28), ಚೌಕಿಯ ಹರ್ಷಿತ್ (24), ಮಿಥುನ್‌ರಾಜ್ (25), ಗುರುವಯ್ಯ (25), ಪೃಥ್ವಿರಾಜ್ (22), ಹಾಗೂ 17ರ ಹರೆಯದ ಅಪ್ರಾಪ್ತ ಸೆರೆಯಾದವರು. ಒಂದು ವಾರದ ಹಿಂದೆ ಘಟನೆ ನಡೆದಿದೆ. ಸಿಪಿಎಂ ಪನಯಾಲ್ ಲೋಕಲ್ ಕಾರ್ಯದರ್ಶಿ ಒ. ನಾರಾಯಣನ್ …

ನಿವೃತ್ತ ಸೆಕ್ಯೂರಿಟಿ ಗಾರ್ಡ್ ನಿಧನ

ವಿದ್ಯಾನಗರ: ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಸೆಕ್ಯೂರಿಟಿಗಾರ್ಡ್ ಆಗಿ ನಿವೃತ್ತರಾಗಿದ್ದ ಉದಯಗಿರಿ ನಿವಾಸಿ  ದಾಮೋದರನ್ ಸಿ.ಕೆ. (62) ನಿನ್ನೆ ರಾತ್ರಿ ನಿಧನ ಹೊಂದಿದರು.  ಮೃತರು ತಾಯಿ ಮಾಧವಿ ಚೆಂಬರಿಕ, ಪತ್ನಿ ಉಮಾ ಕೆ.ಎನ್, ಮಕ್ಕಳಾದ ವರುಣ್, ವರ್ಷ, ಸಹೋದರರಾದ ಅರವಿಂದನ್, ಸತೀಶ್, ಸಹೋದರಿಯರಾದ ಅನಿತ, ಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಂದೆ ಕುಂಞಿಕಣ್ಣನ್, ಓರ್ವ ಸಹೋದರ ಅನಿಲ್ ಈ ಹಿಂದೆ ನಿಧನ ಹೊಂದಿದ್ದಾರೆ.

ಮಾದಕವಸ್ತು ಪ್ರಕರಣದ ಆರೋಪಿ ಮುಂಜಾಗ್ರತಾ ಕ್ರಮದಂಗವಾಗಿ ಸೆರೆ

ಕುಂಬಳೆ: ಮಾದಕವಸ್ತು ಪ್ರಕರಣದಲ್ಲಿ ಈ ಹಿಂದೆ ಸೆರೆಗೀಡಾಗಿದ್ದ ಆರೋಪಿಯನ್ನು ಕುಂಬಳೆ ಪೊಲೀಸರು ಇದೀಗ ಮುಂಜಾಗ್ರತಾ ಕ್ರಮದಂಗವಾಗಿ ಸೆರೆಹಿಡಿದು ಪಿಟ್ ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಕೇಸು ದಾಖಲಿಸಿ ಕೊಂಡಿದ್ದಾರೆ.ಕುಂಬಳೆ ಕೊಯಿಪ್ಪಾಡಿ ಕಡಪ್ಪುರ ಶಫೀರ ಮಂಜಿಲ್‌ನ ಸಾದಿಕ್ ಕೆ (34) ಎಂಬಾತನನ್ನು ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ಬೈಜು ಕೆ ಜೋಸ್,  ಎಸ್‌ಐ  ಗಳಾದ ಕೆ. ಸನಿತ್, ಅನಂತಕೃಷ್ಣನ್ ಆರ್ ಮೆನೋನ್ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ.2025 ಡಿಸೆಂಬರ್ 6ರಂದು ಕುಂಬಳೆ ಪೊಲೀಸರು ಉಪ್ಪಳ ಸೋಂಕಾಲ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 43.77 ಗ್ರಾಂ ಎಂಡಿಎಂಎ ಮಾದಕವಸ್ತುವನ್ನು …

ಎಡರಂಗ ಮತ್ತು ಐಕ್ಯರಂಗದ ಚುನಾವಣಾ ಪ್ರಣಾಳಿಕೆ ಪ್ರಕಟ: ಸಾಮಾಜಿಕ ಪಿಂಚಣಿ ಮೊತ್ತವನ್ನು 3000 ರೂ.ಗೇರಿಸಲಾಗುವುದೆಂದು ಉಭಯ ಒಕ್ಕೂಟಗಳ ಭರವಸೆ

ತಿರುವನಂತಪುರ: ಕೇರಳ ವಿಧಾನಸಭೆಗೆ ಚುನಾವಣೆಗೆ ಸಂಬಂಧಿಸಿ ಆಡಳಿತ ಒಕ್ಕೂಟವಾದ ಎಡರಂಗ ಮತ್ತು ವಿರೋಧಪಕ್ಷ ಯುಡಿಎಫ್ ಇಂದು ಎರಡೆಡೆಗಳಲ್ಲಾಗಿ  ಏಕ ಕಾಲದಲ್ಲಿ ತಮ್ಮ ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆಗೊಳಿಸಿವೆ. ಸಾಮಾಜಿಕ ಕಲ್ಯಾಣ ಪಿಂಚಣಿ ಮೊತ್ತವನ್ನು 3೦೦೦ ರೂ.ಗೇರಿಸಲಾಗುವು ದೆಂದು ಎಡರಂಗ ಮತ್ತು ಐಕ್ಯರಂಗವು  ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿವೆ.  ಎಡರಂಗದ ಚುನಾ ವಣಾ ಪ್ರಣಾಳಿಕೆಯನ್ನು ಕಲ್ಲಿಕೋಟೆ ಯಲ್ಲಿ ಇಂದು ಬೆಳಿಗ್ಗೆ ನಡೆದ ಎಡರಂಗ ಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಿಡುಗಡೆಗೊಳಿಸಿದರು. ಯುಡಿಎಫ್ ಚುನಾವಣಾ ಪ್ರಣಾಳಿಕೆ ಯನ್ನು ಕೊಚ್ಚಿಯಲ್ಲಿ ಇಂದು …

ಟಿಪ್ಪರ್, ಹೊಯ್ಗೆ ಸೋಸುವ ಯಂತ್ರ ವಶ; ಪರಾರಿಯಾದ ಲಾರಿ ಚಾಲಕ ಸಹಿತ 7 ಮಂದಿ ವಿರುದ್ಧ ಕೇಸು

ಕುಂಬಳೆ: ಇಚ್ಲಂಗೋಡು ಹೊಳೆಯಿಂದ  ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ  ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು,  ಈ ವೇಳೆ ಲಾರಿಯನ್ನು ಉಪೇಕ್ಷಿಸಿ  ಚಾಲಕ ಸಹಿತ ಹಲವರು ಪರಾರಿಯಾಗಿದ್ದಾರೆ.  ಈ ಹಿನ್ನೆಲೆಯಲ್ಲಿ ಪೊಲೀಸರು  ಲಾರಿ ಚಾಲಕ,  ಹೊಯ್ಗೆ ಸಂಗ್ರಹಿಸಿಟ್ಟಿದ್ದ ಸ್ಥಳದ ಮಾಲಕ ಹಾಗೂ ಹೊಯ್ಗೆ ಸಂಗ್ರಹಗಾರರ ಸಹಿತ 7 ಮಂದಿ ವಿರುದ್ಧ    ಕೇಸು ದಾಖಲಿಸಿಕೊಂಡಿ ದ್ದಾರೆ. ಲಾರಿ ಹಾಗೂ ಹೊಯ್ಗೆ ಸೋಸುವ ಯಂತ್ರವನ್ನು ವಶಕ್ಕೆ ತೆಗೆಯಲಾಗಿದೆ. ಆರೋಪಿಗಳ ವಿರುದ್ಧ  ಕಳವು ಪ್ರಕರಣ ದಾಖಲಿಸಿಕೊಂಡಿರು ವುದಾಗಿ ಎಸ್‌ಐ ಅನಂತಕೃಷ್ಣನ್ ಆರ್. ಮೆನೋನ್ ತಿಳಿಸಿದ್ದಾರೆ. …

ಮುಂದುವರಿದ ಕಾಳಧನ ಬೇಟೆ ಕುಂಬಳೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 61.5 ಲಕ್ಷ ರೂ.ವಶ: ಓರ್ವ ಸೆರೆ

ಕಾಸರಗೋಡು: ಕಾಸರ ಗೋಡಿಗೆ  ಕಾಳಧನ ಸಾಗಾಟ ತೀವ್ರಗೊಂಡಿದೆ. ನಿನ್ನೆ ಎರಡು ಬಾರಿಯಾಗಿ ಕಾಸರಗೋಡು ಹಾಗೂ ಕುಂಬಳೆಯಿಂದ ಒಟ್ಟು 72.9 ಲಕ್ಷ ರೂಪಾಯಿಯನ್ನು  ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಕಾರಿನಲ್ಲಿ ಸಾಗಿಸುತ್ತಿದ್ದ  61.5 ಲಕ್ಷ ರೂಪಾಯಿಗಳನ್ನು ಕುಂ ಬಳೆಯಿಂದ ವಶಪಡಿಸಲಾಗಿದೆ.   ಈ ಸಂಬಂಧ  ಓರ್ವನನ್ನು ಬಂಧಿಸ ಲಾಗಿದೆ. ಕಾಸರಗೋಡು ತಳಂ ಗರೆಯ ಮಡನ್ನೂರ್ ಹೌಸ್‌ನ ಶಬೀರ್ ಎಂಬಾತ ಬಂಧಿತ ವ್ಯಕ್ತಿ ಯೆಂದು ಪೊಲೀಸರು ತಿಳಿಸಿದ್ದಾರೆ.  ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸ್ಕ್ವಾಡ್  ಹಾಗೂ ಕುಂಬಳೆ ಪೊಲೀಸರು ಆರಿಕ್ಕಾಡಿ …

ಹಿರಿಯ ಹೋಟೆಲ್ ಮಾಲಕರಾಗಿದ್ದ ಸದಾಶಿವ ಉಡುಪ ನಿಧನ

ಕಾಸರಗೋಡು: ನಗರದ ಏರ್‌ಲೈನ್ಸ್ ವಸತಿಗೃಹದಲ್ಲಿ ನಾಲ್ಕು ದಶಕಗಳ ಕಾಲ ಉಡುಪಿ ಹೋಟೆಲ್ ನಡೆಸುತ್ತಿದ್ದ ಎ. ಸದಾಶಿವ ಉಡುಪ (94) ನಿಧನ ಹೊಂದಿದರು. ಕಟೀಲು ನಿವಾಸಿಯಾದ ಇವರು ಮಂಗಳೂರಿನಲ್ಲಿರುವ ಪುತ್ರನ ಮನೆಯಲ್ಲಿ ವಾಸವಾಗಿದ್ದರು. ಕೇರಳ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ಜಿಲ್ಲಾ ಸಮಿತಿಯ ಸ್ಥಾಪಕ ಅಧ್ಯಕ್ಷನಾಗಿದ್ದರು. ಸಂಘಟನೆಯ ರಾಜ್ಯ ಎಕ್ಸಿಕ್ಯೂಟಿವ್ ಸಮಿತಿ ಸದಸ್ಯ, ಜಿಲ್ಲಾ ಗೌರವಾಧ್ಯಕ್ಷ, ಕಾಸರಗೋಡು ವೆಂಕಟ್ರಮಣ ಕ್ಷೇತ್ರ ಸಮೀಪದ ಸ್ವಾಮೀ ರಾಘವೇಂದ್ರ ಮಠ ಸ್ಥಾಪಕ ಅಧ್ಯಕ್ಷ, ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ಇದರ ಸ್ಥಾಪಕ ಸದಸ್ಯ, …

ಪಶುರೋಗತಜ್ಞ ಪದ್ಮನಾಭ ಪೈ ನಿಧನ

ಪೆರ್ಲ:  ಅಮೆಕ್ಕಳ ನಿವಾಸಿ  ಪತ್ತು ಪೈ ಎಂದೇ ಕರೆಯಲ್ಪಡುತ್ತಿದ್ದ ಬಳ್ಳಂಬೆಟ್ಟು ಪದ್ಮನಾಭ ಪೈ (79) ನಿನ್ನೆ ಸ್ವ-ಗೃಹದಲ್ಲಿ ನಿಧನಹೊಂದಿ ದರು. ಅಲ್ಪ ಕಾಲದಿಂದ ಅನಾರೋ ಗ್ಯದಿಂದ ಬಳಲುತ್ತಿದ್ದರು. ಪಶುರೋಗ ತಜ್ಞರಾಗಿದ್ದ ಇವರು ಜಾನುವಾರುಗಳ ವಿವಿಧ ಕಾಯಿಲೆಗಳಿಗೆ ಔಷಧ ನೀಡು ತ್ತಿದ್ದರು. ಪೆರ್ಲ ಬಳಿಯ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ(ಉಳ್ಳಾಲ್ತಿ) ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಸಮಿತಿಯ ಸದಸ್ಯರಾಗಿದ್ದರು. ಮೃತರು ಪತ್ನಿ ವಿನಯಾ ಪೈ, ಮಕ್ಕಳಾದ ಶ್ರೀಲತಾ, ಅಮಿತ, ಶ್ರೀನಿವಾಸ ಪೈ (ಇಂಜಿನಿಯರ್), ಗಿರೀಶ್ ಪೈ (ಪೆರ್ಲದಲ್ಲಿ ವ್ಯಾಪಾರಿ), ಅಳಿಯಂದಿರಾದ ನಾಗೇಂದ್ರನಾಥ …

ಆಸ್ಟರ್‌ಮಿಮ್ಸ್‌ನಲ್ಲಿ ಅತ್ಯಾಧುನಿಕ ಸೌಲಭ್ಯದ ಸ್ತನ ಚಿಕಿತ್ಸಾಲಯ ಆರಂಭ

ಕಾಸರಗೋಡು: ಮಹಿಳೆಯರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ‘ಸ್ತನ ಚಿಕಿತ್ಸಾಲಯ’ ಕಾಸರಗೋಡಿನ ಆಸ್ಟರ್ ಮಿಮ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಆಸ್ಟರ್ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ| ಸೂರಜ್ ಕೆ.ಎಂ. ಉದ್ಘಾಟಿಸಿದರು. ಜಿಲ್ಲೆಯಲ್ಲಿ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುವುದು ದೊಡ್ಡ ಸಾಧನೆ ಎಂದು ಡಾ| ಸೂರಜ್ ಕೆ.ಎಂ ಹೇಳಿದರು. ಜಿಲ್ಲೆಯ ಸಾಮಾನ್ಯ ಜನರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವುದು ಆಸ್ಟರ್ ಮಿಮ್ಸ್ನ ಗುರಿಯಾಗಿದೆ ಮತ್ತು ಮುಂದಿನ ದಿನಗಳಲ್ಲಿ …