ನಗರದಿಂದ ಹಾಡಹಗಲೇ ಯುವಕನನ್ನು ಅಪಹರಿಸಿದ ತಂಡ ಕರ್ನಾಟಕದಲ್ಲಿ ಸೆರೆ

ಕಾಸರಗೋಡು: ಕಾಸರಗೋಡು ನಗರದಿಂದ ಹಾಡಹಗಲೇ ಮೇಲ್ಪ ರಂಬ ನಿವಾಸಿಯಾದ ಯುವಕನನ್ನು ಕಾರಿನಲ್ಲಿ ಅಪಹರಿಸಿದ  ತಂಡವನ್ನು ಕರ್ನಾಟಕದಲ್ಲಿ ಸೆರೆಹಿಡಿಯಲಾಗಿದೆ.   ಸಕಲೇಶಪುರದಿಂದ  ನಿನ್ನೆ ಸಂಜೆ ತಂಡ ಸೆರೆಗೀಡಾಗಿದೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಡಿದ ಮಾಹಿತಿ ಆಧಾರದಲ್ಲಿ ಕರ್ನಾಟಕ ಹಾಗೂ ಆಂಧ್ರ ಪೊಲೀಸರು ಸೇರಿ  ನಡೆಸಿದ ಕಾರ್ಯಾಚರಣೆಯಲ್ಲಿ ತಂಡ ಸೆರೆಗೀಡಾಗಿದೆ. ಮೇಲ್ಪರಂಬ ನಿವಾಸಿಯಾದ ಹನೀಫ ಎಂಬಾತನನ್ನು 5 ಮಂದಿ ಆಂಧ್ರ ನಿವಾಸಿಗಳು ನಿನ್ನೆ ಮಧ್ಯಾಹ್ನ ಕಾಸರಗೋಡು ನಗರದಿಂದ ಅಪಹರಿಸಿದೆ. ಅಶ್ವಿನಿನಗರದ ಹೋಟೆಲೊಂದರ ಮುಂಭಾಗದಲ್ಲಿ ನಿಂತಿದ್ದ ಯುವಕನನ್ನು ತಂಡ ಬಲವಂತವಾಗಿ ಹಿಡಿದು  …

ಬಾಲಕಿ ಸ್ನಾನಮಾಡುತ್ತಿದ್ದಾಗ ಮೊಬೈಲ್‌ನಲ್ಲಿ ದೃಶ್ಯ ಸೆರೆಹಿಡಿದ ಯುವಕನ ಬಂಧನ

ಮುಳ್ಳೇರಿಯ: ಸಾಮಗ್ರಿಗಳನ್ನು ಮಾರಾಟ ಮಾಡಲೆಂದು ತಲುಪಿ  ಬಾಲಕಿ ಸ್ನಾನ ಮಾಡುತ್ತಿದ್ದಾಗ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲು ಯತ್ನಿಸಿದ ಯುವಕ ಸೆರೆಯಾಗಿದ್ದಾನೆ. ಮಲಪ್ಪುರಂ ನಿವಾಸಿಯಾದ ಪ್ರಜಿಲ್ (21)ನನ್ನು ಸ್ಥಳೀಯರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.ಆದೂರು ಪೊಲೀಸರು ಆರೋಪಿಯನ್ನು ಸೆರೆ ದಾಖಲಿಸಿದ ಬಳಿಕ ಜಾಮೀನಿನಲ್ಲಿ  ಬಿಡುಗಡೆಗೊಳಿಸಿದ್ದಾರೆ. ಕಾರಡ್ಕ ಸಮೀಪದ ಪ್ರದೇಶವೊಂದರಲ್ಲಿ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ಪ್ರಜಿಲ್ ಬಾಲಕಿಯ ಮನೆಗೆ ಡೈರೆಕ್ಟ್ ಮಾರ್ಕೆಟಿಂಗ್‌ಗಾಗಿ ತಲುಪಿದಾಗ ಆ ಮನೆಯಲ್ಲಿ  ಇತರರಾರೂ ಇರಲಿಲ್ಲ. ಮನೆಯ ಹೊರಗಿರುವ ಸ್ನಾನದ ಕೊಠಡಿಯಲ್ಲಿ ನೀರು ಬೀಳುತ್ತಿರುವ ಶಬ್ದ ಕೇಳಿ ಯುವಕ …

ಕೇಳುಗುಡ್ಡೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ಮುಖ್ಯ ಅರ್ಚಕ ಸತ್ಯನಾರಾಯಣ ಅಡಿಗ ನಿಧನ

ಕಾಸರಗೋಡು:  ಕೇಳುಗುಡ್ಡೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ಮುಖ್ಯ ಅರ್ಚಕರಾಗಿದ್ದ ಕೂಡ್ಲು ಗಂಗೆ ಕ್ರಾಸ್‌ರೋಡ್ ಶ್ರೀ ದುರ್ಗಾ ನಿವಾಸ್‌ನ ಸತ್ಯನಾರಾಯಣ ಅಡಿಗ (73) ನಿಧನಹೊಂದಿದರು. ಕೇಳುಗುಡ್ಡೆ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ೨೫ ವರ್ಷಗಳ ಕಾಲ  ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ 10 ವರ್ಷಗಳ ಕಾಲ ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನೌಕರನೂ ಆಗಿದ್ದರು. ಶಿವಳ್ಳಿ ಬ್ರಾಹ್ಮಣ ಸಭಾದ ಸಕ್ರಿಯ ಕಾರ್ಯಕರ್ತನೂ ಆಗಿದ್ದರು. ನಿನ್ನೆ ಸಂಜೆ ಮನೆಯಲ್ಲಿ ನಿಧನ ಸಂಭವಿಸಿದೆ. ಮೃತರು ಪತ್ನಿ ಶಾಂತ, ಮಕ್ಕಳಾದ …

ನಿವೃತ್ತ ಬ್ಯಾಂಕ್ ಮೆನೇಜರ್ ನಿಧನ

ಕಾಸರಗೋಡು: ಅಡೂರು ಹೊಸಗದ್ದೆ ನಿವಾಸಿಯೂ ವಿಜಯ ಬ್ಯಾಂಕ್‌ನ ನಿವೃತ್ತ ಮೆನೇಜರ್ ರಾಧಾಕೃಷ್ಣ ಎಚ್ (71) ನಿಧನ ಹೊಂದಿದರು. ಪ್ರಸ್ತುತ ಇವರು ಕಾಸರಗೋಡು ಅಣಂಗೂರಿನಲ್ಲಿ ವಾಸಿಸುತ್ತಿದ್ದರು. ಮೃತರು ಪತ್ನಿ ಇಂದ್ರಾವತಿ ಉಳಯ, ಪುತ್ರಿಯರಾದ ರೇಶ್ಮಾ ಆರ್.ಕೆ, ಡಾ. ಶ್ವೇತಾ ಆರ್.ಕೆ, ಅಳಿಯಂದಿರಾದ ಅಶೋಕ ಎ.ಸಿ (ಎಲ್‌ಐಸಿ), ಡಾ. ಜಯೇಶ ನಾಯರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಯುವತಿಯ ಮಾನಭಂಗ ಯತ್ನ: ಓರ್ವ ಸೆರೆ

ಮುಳ್ಳೇರಿಯ: ಯುವತಿಯನ್ನು ಮಾನಭಂಗಗೊಳಿಸಲು ಯತ್ನಿಸಿದ ಪ್ರಕರಣದಂತೆ ನೀಡಿದ ದೂರಿನಲ್ಲಿ ಓರ್ವನನ್ನು ಬಂಧಿಸಲಾಗಿದೆ. ಚಾಮಕೊಚ್ಚಿ ನಿವಾಸಿ ನಾರಾಯಣ (42) ಸೆರೆಯಾಗಿದ್ದು, ಈತನನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಲಾ ಗಿದೆ.  ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಯುವತಿಯೋರ್ವೆಗೆ ಲಾಟರಿ ಮಗುಚಿದ್ದು ಈ ಹಣವನ್ನು ಏಜೆಂಟ್ ಯುವತಿಗೆ ನೀಡಲು ನಾರಾಯಣನಲ್ಲಿ ನೀಡಿದ್ದರೆನ್ನಲಾಗಿದೆ. ಈ ಹಣವನ್ನು ಯುವತಿಗೆ ನೀಡಲು ತೆರಳಿದಾಗ ಯುವತಿಯನ್ನು ಮಾನಭಂಗ ಪಡಿಸಿರುವುದಾಗಿ  ಆದೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವತಿ ಆರೋಪಿಸಿದ್ದಾರೆ.

ಪ್ಲಸ್‌ಟು ವಿದ್ಯಾರ್ಥಿ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಪ್ಲಸ್‌ಟು ವಿದ್ಯಾರ್ಥಿಯೋರ್ವ ಕಿಟಿಕಿಯ ಸರಳಿಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪೆರಿಯ ಕಾಲಿಯಡ್ಕ ನಿವಾಸಿಯೂ ಕಲ್ಯೋಟ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ಟು ವಿದ್ಯಾರ್ಥಿ ವೈಶಾಖ್ (17) ಮೃತಪಟ್ಟ ಬಾಲಕ. ಇಂದು ಬೆಳಿಗ್ಗೆ ತಂದೆ ಕಮಲಾಕ್ಷ ಹಾಗೂ ತಾಯಿ ಸಿಂಧು ಕೆಲಸಕ್ಕೆ ತೆರಳಿದ್ದರು.  ಇನ್ನೋರ್ವ ಸಹೋದರನಾದ ವೈಷ್ಣವ್ ಎದ್ದು ನೋಡಿದಾಗ ವೈಶಾಖ್ ನಿದ್ರಿಸಿದ್ದ ಕೊಠಡಿಯ ಬಾಗಿಲು ಮುಚ್ಚುಗಡೆ ಗೊಂಡಿರುವುದು ಕಂಡುಬಂದಿದೆ.   ಬಾಗಿಲು ತೆರೆದು ನೋಡಿದಾಗ ವೈಶಾಖ್ ಕಿಟಿಕಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ …

ಬಾಲಕಿಗೆ ಲೈಂಗಿಕ ಕಿರುಕುಳ: ಜಾಮೀನಿನಲ್ಲಿ ಬಿಡುಗಡೆಗೊಂಡು ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಕಾಸರಗೋಡು:   ಪ್ರಾಯ ಪೂರ್ತಿಯಾಗದ  ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ  ಜಾಮೀನಿನಲ್ಲಿ ಬಿಡುಗಡೆಗೊಂಡು ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಸೆರೆಗೀಡಾಗಿದ್ದಾನೆ. ನೆಲ್ಲಿಕುಂಜೆ ಕಡಪ್ಪುರ ನಿವಾಸಿಯಾದ ರತೀಶ್ (42) ಎಂಬಾತ ಸೆರೆಗೀಡಾದ ಆರೋಪಿ.  ಮಹಿಳಾ ಪೊಲೀಸ್ ಠಾಣೆ ಎಸ್‌ಐ ಕೆ. ಅಜಿತರ ನೇತೃತ್ವದಲ್ಲಿ ಮಲಪ್ಪುರಂ ಕುಟ್ಟಿಪ್ಪುರದಿಂದ  ಅತೀ ಸಾಹಸಿಕವಾಗಿ ಆರೋಪಿಯನ್ನು ಸೆರೆಹಿಡಿಯಲಾಗಿದೆ. ಕಾಸರಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಕಿಗೆ ಆರೋಪಿ ಕಿರುಕುಳ ನೀಡಿದಾನ. ೨೦೨೦ರಲ್ಲಿ ಹಾಗೂ ಬಳಿಕ ಹಲವು ಬಾರಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಪ್ರಕರಣದಲ್ಲಿ ತಿಳಿಸಲಾಗಿದೆ. ೨೦೨೧ರಲ್ಲಿ  ದಾಖಲಿಸಿಕೊಂಡ …

ಕುಸಿದು ಬಿದ್ದು ನಿಧನ

ಬದಿಯಡ್ಕ: ಮೂಲತಃ ಮೊಗ್ರಾಲ್ ಪುತ್ತೂರು ನಿವಾಸಿ ಹಾಗೂ ಈಗ ಬೇಳ ಸಮೀಪದ ಮಜೀರ್ಪಳ್ಳ ಕಟ್ಟೆಯಲ್ಲಿರುವ ರಾಘವ (56) ಕುಸಿದು ಬಿದ್ದು ನಿಧನ ಹೊಂದಿದರು. ಬೇಳ ಕೌಮುದಿ ನೇತ್ರಾಲಯದಲ್ಲಿ ಉದ್ಯೋಗಿಯಾಗಿ ದ್ದರು. ಮಾನ್ಯದ ತೋಟವೊಂದಕ್ಕೆ ತೆರಳಿದ ವೇಳೆ ಕುಸಿದು ಬಿದ್ದಿದ್ದಾರೆ ನ್ನಲಾಗಿದೆ. ಇವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ಮೋಹಿನಿ, ಮಕ್ಕಳಾದ ನವಿನಾಶ್, ನವ್ಯ, ಸೊಸೆ ಮೀನಾಕ್ಷಿ, ಅಳಿಯ ಸಜಿತ್, ಸಹೋದರರಾದ ಮಣಿಕಂಠನ್, ಸುಧಾಕರನ್, ಉಮೇಶ್, ಬಾಲಕೃಷ್ಣ, ಚಂದ್ರಶೇಖರ, ಜಗದೀಶ್, ಸಹೋದರಿ ಚಂದ್ರಾವತಿ …

ಆಟೋದಲ್ಲಿ ಗಾಂಜಾ ಸಾಗಿಸಲು ಯತ್ನ: ಓರ್ವ ಸೆರೆ

ಕಾಸರಗೋಡು: ಉದುಮ ನಂಬ್ಯಾರ್‌ಕೀಚಲ್‌ನಲ್ಲಿ ಅಬಕಾರಿ ದಳ ನಡೆಸಿದ ದಾಳಿಯಲ್ಲಿ ಆಟೋದಲ್ಲಿ ಸಾಗಿಸಲು ಯತ್ನಿಸಿದ 1.100 ಕಿಲೋ ಗ್ರಾಂ ಗಾಂಜಾ ಸೆರೆಹಿಡಿಯಲಾಗಿದೆ. ಘಟನೆಗೆ ಸಂಬಂಧಿಸಿ ಕೂಡ್ಲು ಚೌಕಿ ಆಜಾದ್‌ನಗರದ ಎಂ. ಅಹಮ್ಮದ್ ನನ್ನು ಬಂಧಿಸಲಾಗಿದೆ. ನಿನ್ನೆ ಮಧ್ಯಾಹ್ನ 2 ಗಂಟೆ ವೇಳೆ ಹೊಸದುರ್ಗ ಅಬಕಾರಿ ಸರ್ಕಲ್ ಇನ್ಸ್‌ಪೆಕ್ಟರ್ ವಿ.ವಿ. ಪ್ರಸನ್ನ ಕುಮಾರ್ ಹಾಗೂ ತಂಡ ನಡೆಸಿದ ವಾಹನ ತಪಾಸಣೆಯಲ್ಲಿ ಈತನನ್ನು ಸೆರೆ ಹಿಡಿಯಲಾಗಿದೆ. ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಶಂಕೆ ತೋರಿದ ಅಬಕಾರಿ ಅಧಿಕಾರಿಗಳು ಆಟೋವನ್ನು ಪರಿಶೀಲಿಸಿ ಕಸ್ಟಡಿಗೆ …

ಯುವಕರು,ವಿದ್ಯಾರ್ಥಿಗಳಿಗೆ ವಿತರಿಸಲು ಗಾಂಜಾ ಸಾಗಾಟ: ಯುವಕ ಬಂಧನ

ಕಾಸರಗೋಡು: ಕ್ರಿಸ್ಮಸ್, ಹೊಸ ವರ್ಷದಂಗವಾಗಿ ಅಬಕಾರಿ ಅಧಿಕಾರಿಗಳು  ಆರಂಭಿಸಿದ ಸ್ಪೆಷಲ್ ಡ್ರೈವ್‌ನ ವೇಳೆ ಮಂಜೇಶ್ವರ ಚೆಕ್‌ಪೋಸ್ಟ್‌ನಲ್ಲಿ ನಡೆಸಿದ ತಪಾಸಣೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ಯುವಕನನ್ನು ಸೆರೆಹಿಡಿಯಲಾಗಿದೆ. ಉತ್ತರ ಪ್ರದೇಶದ ಮೊರಾದಾಬಾದ್ ಮಹ್ಲಾಕ್‌ಪುರ್ ಮಾಫಿ ನಿವಾಸಿಯಾದ ನಾಜಿರ್ (35) ಎಂಬಾತ ಸೆರೆಗೀಡಾದ ವ್ಯಕ್ತಿ.ನಿನ್ನೆ ಬೆಳಿಗ್ಗೆ ೧೦ ಗಂಟೆ ವೇಳೆ ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನ ಇನ್‌ಸ್ಪೆಕ್ಟರ್ ಸಂತೋಷ್ ಕುಮಾರ್ ಹಾಗೂ ತಂಡ ನಡೆಸಿದ ಕಾರ್ಯಾಚರಣೆ ವೇಳೆ ಗಾಂಜಾ ಸಾಗಾಟ ಪತ್ತೆಯಾಗಿದೆ.  ಮಂಜೇಶ್ವರ, ಕುಂಬಳೆ ಭಾಗದ ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ …