ಕೇಂದ್ರ ಸಚಿವ ಸುರೇಶ್ಗೋಪಿ ಕಚೇರಿಗೆ ದಾಳಿ: ವ್ಯಾಪಕ ಪ್ರತಿಭಟನೆ ಜಿಲ್ಲೆಯ ಮತದಾರ ಯಾದಿಯನ್ನು ಪರಿಶೀಲಿಸಬೇಕು-ಬಿಜೆಪಿ
ಕಾಸರಗೋಡು: ಕೇಂದ್ರ ಸಚಿವ ಸುರೇಶ್ ಗೋಪಿಯವರ ತೃಶೂರಿನಲ್ಲಿ ರುವ ಎಂ.ಪಿ. ಕಚೇರಿಯ ನಾಮಫಲಕಕ್ಕೆ ಕರಿ ಆಯಿಲ್ ಸುರಿದು ವಿಕೃತಗೊಳಿಸಿದ ದುಷ್ಕೃತ್ಯವನ್ನು ಪ್ರತಿಭಟಿಸಿ ಬಿಜೆಪಿ ನೇತೃತ್ವದಲ್ಲಿ ನಿನ್ನೆ ಜಿಲ್ಲೆಯಾದ್ಯಂತ ಹಲವೆಡೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಇದರಂತೆ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಿನ್ನೆ ಸಂಜೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸಿಪಿಎಂ, ಕಾಂಗ್ರೆಸ್ನ ವಿರುದ್ಧ ಕಾರ್ಯಕರ್ತರು ಮುಗಿಲು ಮುಟ್ಟುವ ಘೋಷಣೆ ಕೂಗಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಪ್ರತಿಭಟನಾ ಮೆರವಣಿಗೆಯನ್ನು ಉದ್ಘಾಟಿಸಿದರು. ಪ್ರಜಾತಂತ್ರ ಸಂರಕ್ಷಣಾ ಆಂದೋಲನ ಎಂಬ ಹೆಸರಲ್ಲಿ ಈ ಪ್ರತಿಭಟನೆ …