ಸಮಸ್ತ ಸೀನಿಯರ್ ಉಪಾಧ್ಯಕ್ಷ ಯು.ಎಂ. ಅಬ್ದುಲ್ ರಹ್ಮಾನ್ ಮೌಲವಿ ನಿಧನ

ಕಾಸರಗೋಡು: ಸಮಸ್ತ ಕೇರಳ ಜಂಇಯತ್ತುಲ್ ಉಲಮ ಸೀನಿಯರ್ ಉಪಾಧ್ಯಕ್ಷ ಮೊಗ್ರಾಲ್ ಕಡವತ್ ದಾರುಲ್ ಸಲಾಮಿಲ್ ಯು.ಎಂ. ಅಬ್ದುಲ್ ರಹ್ಮಾನ್ ಮೌಲವಿ (86) ಇಂದು ಬೆಳಿಗ್ಗೆ ನಿಧನ ಹೊಂದಿದರು. ಚಟ್ಟಂಚಾಲ್ ಮಲಬಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ ಪ್ರಧಾನ ಕಾರ್ಯದರ್ಶಿ, ಕಣ್ಣಿಯತ್ ಉಸ್ತಾದ್ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. 1992ರಲ್ಲಿ ಸಮಸ್ತ ಕೇಂದ್ರ ಮುಷಾವರ ಸದಸ್ಯನಾಗಿದ್ದರು. 1991ರಿಂದ ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಮಂಡಳಿ ಸದಸ್ಯ, ಸಮಸ್ತ ಕಾಸರಗೋಡು ಜಿಲ್ಲಾ ಮುಷಾವರ ಸದಸ್ಯ, ಸಮಸ್ತ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ, ಎಂಎಸ್‌ಎಫ್ …

ಪದವಿ ವಿದ್ಯಾರ್ಥಿ ನೇಣು ಬಿಗಿದು ಮೃತಪಟ್ಟಸ್ಥಿತಿಯಲ್ಲಿ ಪತ್ತೆ: ನಾಡಿನಲ್ಲಿ ಶೋಕಸಾಗರ

ಕುಂಬಳೆ: ಕುಂಬಳೆ ಮೈಮೂನ್ ನಗರದಲ್ಲಿ ಪದವಿ ವಿದ್ಯಾರ್ಥಿ ನೇಣು ಬಿಗಿದು ಸಾವಿಗೀಡಾದ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಸೀತಾಂಗೋಳಿಯ ಖಾಸಗಿ ಕಾಲೇಜು ವಿದ್ಯಾರ್ಥಿಯೂ, ಕುಂಬಳೆ ಮೈಮೂನ್ ನಗರದ ಹಸನ್ ಎಂಬವರ ಪುತ್ರನಾದ ಮುಹಮ್ಮದ್ ಅಜ್ಸರ್ ಯಾನೆ ಅಜ್ಜು (19) ಮೃತಪಟ್ಟ ವಿದ್ಯಾರ್ಥಿ ಯಾಗಿದ್ದಾನೆ. ಶನಿವಾರ ಸಂಜೆ ಈತ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು.   ತಂದೆ, ತಾಯಿ ಖದೀಜ, ಸಹೋದರನಾದ ಅಬ್ದುಲ್ಲ ಎಂಬಿವರು ಮನೆಯಿಂದ ಹೊರಗೆ ತೆರಳಿದ್ದರು. ಅಬ್ದುಲ್ಲರಿಗೆ ಹೊಸ ಬುಲ್ಲೆಟ್ ಬೈಕ್ ಖರೀದಿಸಲೆಂದು ತೆರಳಿದ್ದರೆನ್ನಲಾಗಿದೆ. ಈ …

ಲೈಂಗಿಕ ಕಿರುಕುಳ: ಮೂರನೇ ಪ್ರಕರಣದಲ್ಲಿ ಸಿಲುಕಿ ಜೈಲು ಸೇರಿದ ಶಾಸಕ  ರಾಹುಲ್ ಮಾಂಕೂಟತ್ತಿಲ್

ಪಾಲಕ್ಕಾಡ್: ಈ ಹಿಂದೆ ದಾಖಲಿಸಲಾದ ಎರಡು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಲಭಿಸಿ ಬಂಧಿಸಲು ಸಾಧ್ಯವಾಗದ ಪಾಲಕ್ಕಾಡ್ ಶಾಸಕ ಹಾಗೂ ಕಾಂಗ್ರೆಸ್‌ನಿಂದ ಉಚ್ಛಾಲಿಸಲ್ಪಟ್ಟಿರುವ ರಾಹುಲ್ ಮಾಂಕೂಟತ್ತಿಲ್ ಅದೇ ರೀತಿಯ ಮೂರನೇ ಪ್ರಕಕರಣದಲ್ಲಿ ಕೊನೆಗೂ ಬಂಧಿತನಾಗಿ ನ್ಯಾಯಾಂಗ ಬಧನಕ್ಕೊಳಗಾಗಿ ಮಾವೇಲಿಕ್ಕರ ಸಬ್ ಜೈಲು ಸೇರಿದ್ದಾನೆ.   ವಿವಾಹಿತೆಯಾದ ಕೋಟ್ಟಯಂ ನಿವಾಸಿ ಹಾಗೂ ಈಗ ಕೆನಡಾದಲ್ಲಿರುವ 31ರ ಹರೆಯದ ಯುವತಿ ರಾಹುಲ್ ವಿರುದ್ಧ ಜನವರಿ 5ರಂದು ಇ ಮೈಲ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಳು. 2024 ಎಪ್ರಿಲ್ 8ರಂದು …

ಕಾರು-ಸ್ಕೂಟರ್ ಢಿಕ್ಕಿ ಹೊಡೆದು ಇಬ್ಬರು ಯುವಕರಿಗೆ ಗಂಭೀರ

ಕುಂಬಳೆ: ಮೊಗ್ರಾಲ್ ಕೊಪ್ಪರ ಬಜಾರ್‌ನಲ್ಲಿ ನಿನ್ನೆ ಸಂಜೆ ಕಾರು-ಸ್ಕೂಟರ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಗಂಭೀರ ಗಾಯಗೊಂ ಡಿದ್ದಾರೆ. ಮೊಗ್ರಾಲ್ ಪುತ್ತೂರು ಮುಂಡಕ್ಕಲ್ ಹೌಸ್‌ನ ಮುಹಮ್ಮದ್ ರಫ (18), ಜಬಲ್‌ನೂರ್ ಹೌಸ್‌ನ ಮುಹಸಿಲ್ ಅಬ್ದುಲ್ಲ (19) ಎಂಬಿವರು ಗಾಯಗೊಂಡಿ ದ್ದಾರೆ. ಇವರನ್ನು ಚೆಂಗಳ, ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ನೀರು ಅಮೂಲ್ಯವೇ… ಪೋಲಾಗುತ್ತಿರುವ ನೀರಿಗೆ ಮೌಲ್ಯವಿಲ್ಲವೇ; ಬ್ಯಾಂಕ್‌ರಸ್ತೆಯಲ್ಲಿ ಕಳೆದೆರಡು ದಿನಗಳಿಂದ ಕಾರಂಜಿಯಂತೆ ಚಿಮ್ಮುತ್ತಿರುವ ಶುದ್ಧಜಲ

ಕಾಸರಗೋಡು: ‘ನೀರು ಅಮೂಲ್ಯ. ಅದನ್ನು ಹಾಳುಮಾಡಬಾರದು’ ಎಂಬು ದನ್ನು ಕಲಿತಿರುವ ನಾವೆಲ್ಲ  ಕಾಸರ ಗೋಡು ನಗರದಲ್ಲೇ ಪೋಲಾಗುತ್ತಿರುವ ನೀರನ್ನು ಕಾಣುವಾಗ ಈ ನೀರು ಅಮೂಲ್ಯವಲ್ಲವೇ? ಎಂಬ ಶಂಕೆ ಮೂಡುವುದು ಸಾಮಾನ್ಯವಾಗಿದೆ.  ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗ ಆಟೋ ರಿಕ್ಷಾ ನಿಲ್ದಾಣಕ್ಕೆ ಹೊಂದಿಕೊಂಡು ಕಾರಂಜಿಯಂತೆ ಚಿಮ್ಮುತ್ತಿರುವ ನೀರು ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಸೋಜಿಗವಾ ಗಿದೆ. ಜಲಪ್ರಾಧಿಕಾರದ ಪೈಪ್ ತುಂಡಾಗಿ ಕಳೆದೆರಡು ದಿನಗಳಿಂದ ಇಲ್ಲಿ ನೀರು ಪೋಲಾಗುತ್ತಿದೆ. ನಗರ ಮಧ್ಯದ  ಬ್ಯಾಂಕ್ ರಸ್ತೆ  ಸದಾ ದಟ್ಟಣೆಯಲ್ಲಿದ್ದು ಈ ರಸ್ತೆಯಲ್ಲಿ …

ಹಿರಿಯ ಚಾಲಕ ನಿಧನ

ಕಾಸರಗೋಡು: ಖಾಸಗಿ ಬಸ್‌ನ ಹಿರಿಯ ಚಾಲಕರಾಗಿದ್ದ  ಕೇಳುಗುಡ್ಡೆ ಸಣ್ಣಕೂಡ್ಲು ನಿವಾಸಿ ಕೆ. ವಿಠಲ ನಾಯ್ಕ್ (78) ನಿಧನಹೊಂದಿದರು.  ಮೃತರು ಪತ್ನಿ ಗಿರಿಜಾ, ಮಕ್ಕಳಾದ ದೀಪ, ನಿಶಾ, ಅಳಿಯಂದಿರಾದ ವಸಂತ, ಪದ್ಮನಾಭ, ಸಹೋದರ ಸಂಜೀವ, ಸಹೋದರಿಯರಾದ ಗಿರಿಜಾ, ಅಂಬ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವೆ ಸಹೋದರಿ ಲಲಿತಾ ಈ ಹಿಂದೆ ನಿಧನಹೊಂದಿದ್ದಾರೆ.

ಬೇಲಿ ನಿರ್ಮಿಸಲು ಸ್ಥಾಪಿಸಿದ್ದ ಕಬ್ಬಿಣದ ಕಂಬಗಳು ಕುಸಿತ: ತಪ್ಪಿದ ಅಪಾಯ

ಮೊಗ್ರಾಲ್ ಪುತ್ತೂರು: ಮೊಗ್ರಾಲ್ ಪುತ್ತೂರು ಶಾಲಾ ಮೈದಾನದಲ್ಲಿ  ಶಾಲಾ ಗ್ರೌಂಡ್ ಇಂಪ್ರೂವ್‌ಮೆಂಟ್ ಯೋಜನೆ ಪ್ರಕಾರ  ಜಿಲ್ಲಾ ಪಂಚಾಯತ್ ಕಳೆದ ವರ್ಷ ಶಾಲಾ ಆವರಣಗೋಡೆಗೆ ಸೇರಿಕೊಂಡು  ವಾಲ್ ಸೇಫ್ಟಿ ನೆಟ್ ಹಾಕಲು ಸ್ಥಾಪಿಸಿದ ಕಬ್ಬಿಣದಬೇಲಿ  ಗಾಳಿಗೆ ಕುಸಿದಿದೆ. ಶಾಲೆಗೆ ರಜೆಯಾದ ಕಾರಣ ದೊಡ್ಡ ಮಟ್ಟಿನ ದುರಂತ ತಪ್ಪಿದೆ. 200 ಮೀಟರ್ ಉದ್ದದಲ್ಲೂ, 100 ಮೀಟರ್ ಎತ್ತರದಲ್ಲೂ  ಕಬ್ಬಿಣದ ಬೇಲಿ ಸ್ಥಾಪಿಸಲಾಗಿತ್ತು.  ಫುಟ್ಭಾಲ್ ಆಟದ ಮಧ್ಯೆ ಚೆಂಡು ಮೈದಾನದಿಂದ ಹೊರಗೆ ಹೋಗದಿರಲು ಬಲೆ ಸ್ಥಾಪಿಸಲು ಕಬ್ಬಿಣದ ಕಂಬಗಳನ್ನು ಸ್ಥಾಪಿಸಿ ಬೇಲಿ …

ವರ್ಕಾಡಿ ಸುಳ್ಯಮೆ ಶೆಡ್‌ನಿಂದ 116 ಕಿಲೋ ಗಾಂಜಾ ವಶಪಡಿಸಿದ ಪ್ರಕರಣ: ಮತ್ತೋರ್ವ ಸೆರೆ

ಮಂಜೇಶ್ವರ: ವರ್ಕಾಡಿ ಪಂಚಾ ಯತ್ ವ್ಯಾಪ್ತಿಯ ಕೊಡ್ಲಮೊಗರು ಸುಳ್ಯಮೆ ಎಂಬಲ್ಲಿ ಶೆಡ್ಡ್ವೊಂದರಿAದ 116 ಕಿಲೋ 200 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬAಧಿಸಿ ಮತ್ತೋರ್ವನನ್ನು ಮಂ ಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಹೊಸಬೆಟ್ಟು ಕಡಪುö್ಪರದ ಅಬೂಬಕ್ಕರ್ ಸಿದ್ದಿಕ್ ಯಾನೆ ಕಡಪುö್ಪರ ಹಾರೀಸ್ (36) ಬಂಧಿತ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎರಡು ವಾರಗಳ ರಿಮಾಂಡ್ ವಿಧಿಸಲÁಗಿದೆ. ಕಾಸರಗೋಡು ಎ.ಎಸ್.ಪಿ ನಂದಗೋಪನ್‌ರ ಸೂಚನೆಯಂತೆ ಮಂಜೇಶ್ವರ ಠಾಣೆಯ ಇನ್ಸ್ಫೆಕ್ಟರ್ ಅಜಿತ್ ಕುಮಾರ್.ಪಿ ಮತ್ತು ತಂಡ ಆರೋಪಿಯನ್ನು ಬಂದಿsಸಿದೆ. …

ಬದಿಯಡ್ಕ: ದಲಿತ್ ಕಾಂಗ್ರೆಸ್‌ನಿಂದ ಜನಪ್ರತಿನಿಧಿಗಳಿಗೆ ಅಭಿನಂದನೆ

ಬದಿಯಡ್ಕ: ತ್ರಿಸ್ತರ  ಪಂಚಾಯತ್ ಚುನಾವಣೆಯಲ್ಲಿ ಬದಿಯಡ್ಕ ಪಂಚಾಯತ್‌ನ ವಿವಿಧ ವಾರ್ಡ್‌ಗಳಲ್ಲಿ ಜಯಗಳಿಸಿದ ಜನಪ್ರತಿನಿಧಿಗಳಿಗೆ ಭಾರತೀಯ ದಲಿತ್ ಕಾಂಗ್ರೆಸ್ ನೇತೃತ್ವ ದಲ್ಲಿ  ಅಭಿನಂದನಾ ಕಾರ್ಯಕ್ರಮ ನಡೆಸಲಾಯಿತು. ಬದಿಯಡ್ಕ ಮಂಡಲ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಲಿತ್ ಕಾಂಗ್ರೆಸ್ ಮಂಡಲ ಸಮಿತಿ ಅಧ್ಯಕ್ಷ ಗಂಗಾಧರ ಗೋಳಿಯಡ್ಕ ಅಧ್ಯಕ್ಷತೆ ವಹಿಸಿದರು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಮುಖ್ಯ ಅತಿಥಿಯಾಗಿದ್ದರು. ದಲಿತ್ ಕಾಂಗ್ರೆಸ್ ಮಂಡಲ ಕೋಶಾಧಿಕಾರಿ ಗೋಪಾಲ ದರ್ಬೆತ್ತಡ್ಕ ಅಭಿನಂದನಾ ಭಾಷಣ ಮಾಡಿದರು. ಜಿಲ್ಲಾ ಕಾರ್ಯದರ್ಶಿ ರಾಮ ಪಟ್ಟಾಜೆ, ಮಂಡಲ …

ಬಾಡೂರಿನಲ್ಲಿ ಅಕ್ಷಯ ಸೆಂಟರ್, ಹೋಟೆಲ್, 3 ಅಂಗಡಿಗಳಿಂದ ಕಳವು: ತನಿಖೆ ಆರಂಭ

ಪುತ್ತಿಗೆ: ಪುತ್ತಿಗೆ ಬಾಡೂರಿನಲ್ಲಿ ವ್ಯಾಪಕ ಕಳವು ನಡೆದ ಬಗ್ಗೆ ದೂರಲಾ ಗಿದೆ. ಇಲ್ಲಿನ ಅಕ್ಷಯ ಸೆಂಟರ್, ಹೋಟೆಲ್ ಹಾಗೂ ಮೂರು ಅಂಗಡಿಗಳ ಬೀಗ ಮುರಿದು ಒಳನುಗ್ಗಿದ ಕಳ್ಳರು 1 ಲಕ್ಷ ರೂಪಾಯಿಯಷ್ಟು ಮೊತ್ತ ವನ್ನು ದೋಚಿದ್ದಾರೆ. ನಿನ್ನೆ ಬೆಳಿಗ್ಗೆ ಅಂಗಡಿ ತೆರೆಯಲು ತಲುಪಿದಾಗ ಕಳವು ನಡೆದ ವಿಷಯ ಅರಿವಿಗೆ ಬಂದಿದೆ. ಬಾಲಕೃಷ್ಣ ಶೆಟ್ಟಿ ಎಂಬವರ ‘ಅಮ್ಮ’ ಹೋಟೆಲ್, ಸುರೇಶ್ ಬಾಡೂರು ಅವರ ಶಿವದುರ್ಗ ಸ್ಟೋರ್, ರಾಜೇಶ್ ಶೆಟ್ಟಿಯವರ ದುರ್ಗಾಲಕ್ಷ್ಮಿ ಸ್ಟೋರ್, ಇಬ್ರಾಹಿಂರ ಅಕ್ಷಯ ಸೆಂಟರ್, ಕೊರಗಪ್ಪರ ಬಿ.ಕೆ. …