ಕಾಸರಗೋಡಿನ ಕನ್ನಡ ಭಾಷಿಗರ ಹಕ್ಕು ಸಂರಕ್ಷಿಸಲು ಸರಕಾರ ಬದ್ದ- ಮುಖ್ಯಮಂತ್ರಿ

ತಿರುವನಂತಪುರ: ಕಾಸರಗೋಡಿನ ಕನ್ನಡಿಗರು ಸೇರಿದಂತೆ  ರಾಜ್ಯದಲ್ಲಿರುವ ಭಾಷಾ ಅಲ್ಪ ಸಂಖ್ಯಾತರ ಮೇಲೆ ಮಲಯಾಳಂ ಭಾಷೆ ಹೇರಿಕೆ ಮಾಡುವುದಿಲ್ಲ. ಭಾಷಾ ಅಲ್ಪಸಂಖ್ಯಾತರ ಅದರಲ್ಲೂ ಮುಖ್ಯವಾಗಿ ಕೇರಳದ ಕನ್ನಡ ಮತ್ತು ತಮಿಳು ಭಾಷಿಗರ ಹಕ್ಕುಗಳನ್ನು ಸಂರಕ್ಷಿಸಲು ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯಗೊಳಿಸುವ  ಕೇರಳ ಸರಕಾರದ ಮಲಯಾಳಂ ಭಾಷಾ- ವಿಧೇಯಕ 2025 ವನ್ನು ವಿರೋಧಿಸಿ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇರಳ ಸರಕಾರಕ್ಕೆ ಬರೆದ ಪತ್ರಕ್ಕೆ, ಮುಖ್ಯಮಂತ್ರಿ ಪಿಣರಾಯಿ …

ಆಟೋರಿಕ್ಷಾದಿಂದ ಚಿನ್ನಾಭರಣ ಕಳವುಗೈದ ಇಬ್ಬರ ಸೆರೆ

ಕಾಸರಗೋಡು: ಮಾವುಂಗಾಲ್‌ನಲ್ಲಿ  ಆಸ್ಪತ್ರೆ ಮುಂಭಾಗದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾದಿಂದ 7 ಪವನ್ ಚಿನ್ನಾಭರಣ ಕಳವುಗೈದ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳಾರ್ ಒಕ್ಲಾವ್ ನಿವಾಸಿ ಸುಬೈರ್ (23), ಕಾಞಂಗಾಡ್ ವಡಗರಮುಖ್‌ನ ಆಶಿಕ್ (28) ಎಂಬಿವರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ವೆಳ್ಳರಿಕುಂಡ್ ಕಲ್ಲಂಜಿರ ನಿವಾಸಿ ಅಶ್ರಫ್‌ರ ಆಟೋ ರಿಕ್ಷಾದಿಂದ ಚಿನ್ನಾಭರಣವನ್ನು ಆರೋಪಿಗಳು ಕಳವುಗೈದಿದ್ದರೆನ್ನಲಾಗಿದೆ.

ಮಲೆಯಾಳ ಕಲಿಕೆ ಕಡ್ಡಾಯದಿಂದ ಕಾಸರಗೋಡಿನ ಕನ್ನಡಿಗರನ್ನು ಹೊರತುಪಡಿಸಬೇಕು-ಬಿಜೆಪಿ

ಕಾಸರಗೋಡು: ಕೇರಳ ವಿಧಾನ ಸಭೆ ಅಂಗೀಕರಿಸಿದ ಮಲೆಯಾಳ ಭಾಷಾ ಕಲಿಕೆ ಕಡ್ಡಾಯ  ಮಸೂದೆ ಯಿಂದ ಕಾಸರಗೋಡಿನ  ಭಾಷಾ ಅಲ್ಪ ಸಂಖ್ಯಾತರಾದ ಕನ್ನಡಿಗರನ್ನು ಹೊರತುಪಡಿಸಬೇಕೆಂದು  ಬಿಜೆಪಿ ಕಲ್ಲಿಕೋಟೆ ವಲಯ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್   ಒತ್ತಾಯಿಸಿದ್ದಾರೆ. ಇಂದು ಬೆಳಿಗ್ಗೆ ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿ  ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.  ಕಾಸರಗೋಡು ಜಿಲ್ಲೆಯ ಕನ್ನಡಿಗರಿಗೆ ಕನ್ನಡದಲ್ಲೂ ಕಲಿಯುವ ಅವಕಾಶ ನೀಡಬೇಕು ಎಂದೂ ಅವರು ಒತ್ತಾಯಿಸಿದರು. ಅದೇ ರೀತಿ ಚುನಾವಣಾ ಆಯೋಗದ ಎಸ್‌ಐಆರ್ ಸೇರಿದಂತೆ ಎಲ್ಲಾ ದಾಖಲೆಪತ್ರಗಳನ್ನು  ಕನ್ನಡದಲ್ಲಿ ತಯಾರಿಸಬೇಕು. ಮತದಾರರ ಪಟ್ಟಿ …

ಕುಂಬಳೆ ಪೇಟೆ ಶುಚೀಕರಣ ಮೂಲಕ ಪಂ. ಆಡಳಿತ ಸಮಿತಿ ಚಟುವಟಿಕೆ ಆರಂಭ

ಕುಂಬಳೆ:  ಕುಂಬಳೆ ಪಂಚಾಯತ್‌ನ ನೂತನ ಆಡಳಿತ ಸಮಿತಿಯ ಚಟುವಟಿಕೆಗಳು ಇಂದು ಬೆಳಿಗ್ಗೆ ಕುಂಬಳೆ ಪೇಟೆಯನ್ನು ಶುಚೀ ಕರಿಸುವ ಮೂಲಕ ಆರಂಭಿಸಲಾಯಿತು.  ಪಂ. ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಹಾಜಿ, ಉಪಾಧ್ಯಕ್ಷ ಬಲ್ಕೀಸ್ ಎಂ, ಸದಸ್ಯರಾದ ಎಂ.ಪಿ. ಖಾಲಿದ್, ಇನಾಸ್, ರಮೇಶ್ ಭಟ್, ಕಾಂಚಾರ, ಮಂಜುನಾಥ ಆಳ್ವ, ಅಮಿತ, ಶಾರದ, ಹಮೀದ್ ಕೊಯಿಪ್ಪಾಡಿ ಮೊದಲಾದವರು ಪಾಲ್ಗೊಂಡರು. ಪಂ. ಸಿಬ್ಬಂದಿಗಳು, ಉದ್ಯೋಗ ಖಾತರಿ ಕಾರ್ಮಿಕರು, ಹಸಿರು  ಕ್ರಿಯಾ ಸೇನೆ ಸದಸ್ಯೆಯರು, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ, ವ್ಯಾಪಾರಿ ವ್ಯವ ಸಾಯಿ …

ರೀಲ್ಸ್ ಚಿತ್ರೀಕರಣ ವೇಳೆ ಉಂಟಾದ ಲೋಪದಿಂದ ಮನನೊಂದು ಯುವಕ ನೇಣುಬಿಗಿದು ಮೃತ್ಯು

ಕುಂಬಳೆ: ರೀಲ್ಸ್  ಚಿತ್ರೀಕರಣ ವೇಳೆ ಉಂಟಾದ ಲೋಪದಿಂದ ಮನನೊಂದು ಯುವಕ ಬೆಡ್‌ರೂಂ ನಲ್ಲಿ ನೇಣುಬಿಗಿದು ಸಾವಿಗೀಡಾದ  ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಕುಂಬಳೆ ಆರಿಕ್ಕಾಡಿ ಒಡ್ಡು ಮೈದಾನ ಸಮೀಪದ ಬಾಬು ಎಂಬವರ ಪುತ್ರ ಸಂತೋಷ್ (30) ಮೃತಪಟ್ಟ ಯುವಕ. ನಿನ್ನೆ ರಾತ್ರಿ 11 ಗಂಟೆ ವೇಳೆ ಘಟನೆ ನಡೆದಿದೆ. ಸಂತೋಷ್ ರೀಲ್ಸ್ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ  ಹಂಚುತ್ತಿದ್ದುದಾಗಿ ಸಂಬಂಧಿಕರು ತಿಳಿಸಿದ್ದಾರೆ. ನಿನ್ನೆ ಥರ್ಮೋಕೋಲ್‌ಗೆ ಸಂಬಂಧಪಟ್ಟ ರೀಲ್ಸ್ ಚಿತ್ರೀಕರಿಸಿರುವು ದಾಗಿ ಹೇಳಲಾಗುತ್ತಿದೆ.  ಈ ಮಧ್ಯೆ ಥರ್ಮೋಕೋಲ್ ಪುಡಿಯಾಗಿದ್ದು ಇದರ ವೀಡಿಯೋವನ್ನು …

ಶಬರಿಮಲೆ ಚಿನ್ನ ಕಳವು: ಬಂಧಿತ ತಂತ್ರಿಗೆ ನ್ಯಾಯಾಂಗ ಬಂಧನ, ಪೂಜಾಪುರ ಜೈಲಿಗೆ

ಶಬರಿಮಲೆ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ  ಕ್ರೈಂ ಬ್ರಾಂಚ್ ವಿಭಾಗದ ಮುಖ್ಯಸ್ಥ ಎಚ್. ವೆಂಕಟೇಶ್  ನೇತೃತ್ವದ ವಿಶೇಷ ತನಿಖಾ (ಎಸ್ ಐಟಿ)ತಂಡ ನಿನ್ನೆ ಬಂಧಿಸಿದ ಶಬರಿಮಲೆ ಕ್ಷೇತ್ರದ ಪ್ರಧಾನ ತಂತ್ರಿವರ್ಯ ಕಂಠರರ್ ರಾಜೀವರ್ (66)ರನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ  14 ದಿನಗಳ ತನಕ ಪೂಜಾಪುರ   ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಇವರನ್ನು  ಈ ಪ್ರಕರಣದ 13ನೇ ಆರೋ ಪಿಯನ್ನಾಗಿ ಸೇರ್ಪಡೆಗೊಳಿಸಲಾಗಿದೆ. ಶಬರಿಮಲೆ ದೇಗುಲದ ತಂತ್ರಿ ಸ್ಥಾನ ಪರಂಪರಾಗತವಾಗಿ ಲಭಿಸುವ ಚೆಂಗನ್ನೂರು ತಾಳೆಮಣ್ಣ್ ಕುಟುಂಬಕೆ ಸೇರಿದವರಾಗಿದ್ದಾರೆ. ಕಂಠರರ್ …

ಮೀಂಜ ಪಂ. ಸ್ಥಾಯಿ ಸಮಿತಿ ಅಧ್ಯಕ್ಷರ ಹೆಸರಲ್ಲಿ  ಲೀಗ್ ಕಚೇರಿಯಲ್ಲಿ ಹೊಡೆದಾಟ

ಮಂಜೇಶ್ವರ: ಮೀಂಜ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಸ್ಥಾನದ ಹೆಸರಲ್ಲಿ  ಉಂಟಾದ ತರ್ಕ ನಿನ್ನೆ ಬೆಳಿಗ್ಗೆ ಮೀಂಜ ಪಂಚಾಯತ್ ಲೀಗ್ ಕಚೇರಿಯಲ್ಲಿ ಹೊಡೆದಾಟದೊಂದಿಗೆ ಕೊನೆಗೊಂಡಿತು. ಲೀಗ್ ಕಚೇರಿಯಲ್ಲಿದ್ದ ಓರ್ವೆ ಸದಸ್ಯೆಗೂ ಹಲ್ಲೆಗೈದಿರುವುದಾಗಿ ಆರೋಪವುಂಟಾಗಿದೆ. ಓರ್ವ ಸ್ಥಾಯೀ ಸಮಿತಿಗೆ ಲೀಗ್ ಸದಸ್ಯರಾದ ಸಲೀಂ ಹಾಗೂ ಕೆ.ಸಿದ್ದಿಕ್‌ರ ಹೆಸರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಮಂಡಲ ಸಮಿತಿ ಪಂಚಾಯತ್ ಸಮಿತಿಯೊಂದಿಗೆ  ಚರ್ಚೆ ಕೂಡಾ ನಡೆಸದೆ  ಅದರಲ್ಲೊಂದು ಹೆಸರನ್ನು ಸೂಚಿಸಿರುವುದಾಗಿ ಹೇಳಲಾಗುತ್ತಿದೆ. ಪಂಚಾಯತ್‌ನಲ್ಲಿ ಆ ಕುರಿತಾಗಿ  ಅಸಮಾಧಾನ ವ್ಯಕ್ತವಾಗುವುದರೊಂದಿಗೆ ಜಿಲ್ಲಾ ಸಮಿತಿ ವಿವಾದದಲ್ಲಿ ಮಧ್ಯಪ್ರವೇಶಿಸಿ …

ಕೇಳುಗುಡ್ಡೆಯ ಬಾಲಕಿ ಇಂಡಿಯ ಬುಕ್ ಆಫ್ ರೆಕಾರ್ಡ್ ಸಾಧಕಿ

ಕಾಸರಗೋಡು: ಕೇಳುಗುಡ್ಡೆಯ ಮನು- ಮಾಳವಿಕ ದಂಪತಿ ಪುತ್ರಿ 1 ವರ್ಷ 6 ತಿಂಗಳ ಪ್ರಾಯದ ಮಿನ್ಹಾ ಎಂ. ಈಗ ಇಂಡಿಯ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ಬಂದ ಬಾಲಕಿಯಾಗಿದ್ದಾಳೆ. 5 ದೇವತೆಗಳು, 10 ಪ್ರಾಣಿಗಳು, 5 ತರಕಾರಿಗಳು, 14 ಹಣ್ಣುಗಳು, 8 ಪಕ್ಷಿಗಳು, 7 ವಾಹನಗಳು, 8 ದೇಹದ ಅಂಗಗಳು, 9  ಇತರ ವಸ್ತುಗಳನ್ನು ಗುರುತಿಸಿದ ಹಿನ್ನೆಲೆಯಲ್ಲಿ ಈಕೆ ‘ಐಬಿಆರ್ ಸಾಧಕಿ’ ಎಂಬ ಬಿರುದು ಪಡೆದಿದ್ದಾಳೆ. ಡಿಸೆಂಬರ್ 15ರಂದು ಈಕೆಯ ಹೆಸರು ಇಂಡಿಯ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ …

ಲೈಂಗಿಕ ಕಿರುಕುಳ ಆರೋಪ: ಎಣ್ಮಕಜೆ ಪಂ. ಸದಸ್ಯ ಸುಧಾಕರ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಎಣ್ಮಕಜೆ: ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಎಣ್ಮಕಜೆ ಪಂಚಾಯತ್ ಸದಸ್ಯ, ಸಿಪಿಎಂ ನೇ ತಾರ ಸುಧಾಕರ ಕೂಡಲೇ ಪಂಚಾ ಯತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ನಿನ್ನೆ ಸಂಜೆ ಬಾಳೆಮೂಲೆ ಬಿಜೆಪಿ ವಾರ್ಡ್ ಸಮಿತಿಯ ವತಿಯಿಂದ ಬಾಳೆಮೂಲೆ ಟಿವಿ ಶೆಡ್‌ನಿಂದ ಬಾಳೆಮೂಲೆ ಶಾಲೆಯವರೆಗೆ ಪ್ರತಿಭಟನೆ ಮೆರವಣಿಗೆ ನಡೆಯಿತು. ರಾಜಿನಾಮೆ ನೀಡದಿದ್ದಲ್ಲಿ ಮುಂದಕ್ಕೆ ಸುಧಾಕರ ಪಂಚಾಯತ್ ಪ್ರವೇಶಿಸುವುದಕ್ಕೆ ತಡೆ ಮಾಡಿ ಕಪ್ಪು ಬಾವುಟ ಪ್ರದರ್ಶನ ಮಾಡಿ ಉಗ್ರ ಪ್ರತಿರೋಧಕ್ಕೆ ಬಿಜೆಪಿ ಸನ್ನದ್ಧವಾಗಿದೆ ಎಂಬ ಎಚ್ಚರಿಕೆ ನೀಡಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ …

ಲೈಂಗಿಕ ಕಿರುಕುಳ ಎದುರಿಸುತ್ತಿರುವ ಅಧ್ಯಾಪಕನನ್ನು ಹೊರಹಾಕಬೇಕೆಂದು ಒತ್ತಾಯಿಸಿ ಯೂತ್ ಕಾಂಗ್ರೆಸ್‌ನಿಂದ ಕಳತ್ತೂರು ಶಾಲೆಗೆ ಮಾರ್ಚ್

ಕುಂಬಳೆ:  ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಸಿಪಿಎಂ ನೇತಾರನೂ, ಅಧ್ಯಾಪಕನಾದ ಸುಧಾಕರನನ್ನು ಶಾಲೆಯಿಂದ ಹೊರ ಹಾಕಬೇಕೆಂದು ಒತ್ತಾಯಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಕಳತ್ತೂರು ಶಾಲೆಗೆ  ಮಾರ್ಚ್ ನಡೆಸಿದರು.  ಮಂಜೇಶ್ವರ ವಿಧಾನಸಭಾ ಕ್ಷೇತ್ರ ಯೂತ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮಾರ್ಚ್ ನಡೆಸಲಾಯಿತು. ಮಾರ್ಚ್ ಶಾಲೆಗೆ ತಲುಪುವ ಮೊದಲೇ ಪೊಲೀಸರು ತಡೆಯೊಡ್ಡಿದರು. ಕುಂಬಳೆ ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ ಶೆರಿನ್ ಕಯ್ಯಂಕೂಡ್ಲು,  ವಿಧಾನಸಭಾ ಕ್ಷೇತ್ರ  ಯೂತ್ ಕಾಂಗ್ರೆಸ್ ಅಧ್ಯಕ್ಷ ಜುನೈದ್ ಉರ್ಮಿ, ಫಾರೂಕ್, ದಯಾನಂದ ಬಾಡೂರು, ರವಿರಾಜ್ ಮೊದಲಾದವರು ನೇತೃತ್ವ ನೀಡಿದರು. …