ಆನೆದಂತ ವಶ: ಮಂಜೇಶ್ವರ ನಿವಾಸಿ ಸಹಿತ ಮೂವರ ಸೆರೆ

ಮಂಜೇಶ್ವರ: ಲಕ್ಷಾಂತರ ರೂಪಾಯಿ ಮೌಲ್ಯದ ಆನೆ ದಂತಗಳ ಸಹಿತ ಮಂಜೇಶ್ವರ ನಿವಾಸಿ ಸೇರಿ ಮೂರು ಮಂದಿ ಮಂಗಳೂರಿನಲ್ಲಿ ಸೆರೆಗೀಡಾಗಿ ದ್ದಾರೆ. ಮಂಜೇಶ್ವರದ ಅಬ್ದುಲ್ ಖಾದರ್, ಬೆಳ್ತಂಗಡಿಯ ಶಶಾಂಕ, ಅತ್ತಾವರದ ಪ್ರಭಾಚಂದ್ರ ಎಂಬಿವರನ್ನು ಬೆಂಗಳೂರು- ಮಡಿಕೇರಿ ಫಾರೆಸ್ಟ್ ಎಸ್‌ಪಿ ಪವನ್ ನೆಜ್ಜೂರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಆನೆ ದಂತಗಳನ್ನು ಮಾರಾಟಗೈಯ್ಯಲು ತಂಡವೊಂದು ಮಂಗಳೂರಿನ ಮರೋಳಿಗೆ ಬರುತ್ತಿದೆ ಎಂಬ ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ತಲುಪಿದ್ದರು. ಈ ವೇಳೆ ಅಲ್ಲಿಗೆ ತಲುಪಿದ ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ …

ವಿಶ್ವಹಿಂದೂ ಪರಿಷತ್ ಕೋಡಿಬೈಲ್ ಉಪಖಂಡ ಸಮಿತಿ ರಚನೆ

ಉಪ್ಪಳ: ವಿಶ್ವ ಹಿಂದೂ ಪರಿಷತ್ ಕೋಡಿಬೈಲ್ ಉಪಖಂಡದ ನೂತನ ಸಮಿತಿ ರಚನೆ ಮತ್ತು ಧರ್ಮ ರಕ್ಷಾ ನಿಧಿ ಸಮರ್ಪಣಾ ಕಾರ್ಯಕ್ರಮ ಜರಗಿತು. ನೂತನ ಅಧ್ಯಕ್ಷರಾಗಿ ನಾರಾಯಣ ತೊಟ್ಟಿ, ಉಪಾಧ್ಯಕ್ಷÀ್ಷರಾಗಿ ರಾಮಚಂದ್ರ ಯಶೋನಂದ ನಗರ, ಕಾರ್ಯದರ್ಶಿ ಯÁಗಿ ರಾಜೇಶ್ ಕೋಡಿಬೈಲ್, ಬಜರಂಗದಳ ಸಂಯೋಜಕ್‌ರಾಗಿ ರಿತೇಶ್ ಯಶೋನಂದ ನಗರ, ವ್ಯವಸ್ಥಾ ಪ್ರಮುಖ್‌ರಾಗಿ ಕಾರ್ತಿಕ್ ಕೋಡಿಬೈಲು, ಮಾತೃಶಕ್ತಿ ಗೌರವ ಅಧ್ಯಕೆÀ್ಷಯÁಗಿ ಸರಸ್ವತಿ ಶೆಟ್ಟಿ ಕೋಡಿಬೈಲ್, ಅಧ್ಯಕೆÀ್ಷಯÁಗಿ ಶಶಿಕಲಾ ಮಜಲು ಮುಳಿಂಜ, ಉಪಾಧ್ಯಕೆÀ್ಷಯರಾಗಿ ಶಾಂತಿ ಕುಮಾರಿ ಯಶೋದನಂದ ನಗರ, ಶೋಭ ಅಶೋಕ ಕೋಡಿಬೈಲ್, …

ಮಧೂರು ಎಸ್.ಸಿ-ಎಸ್.ಟಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಕಾಸರಗೋಡು: ಸ್ಮಾರ್ಟ್ ಫೋನ್ ಸಹಿತದ ಆಧುನಿಕ,ತಾಂತ್ರಿಕ ವ್ಯವಸ್ಥೆಗಳನ್ನು  ವಿನೋದಕ್ಕಾಗಿ ಮಾತ್ರವಲ್ಲದೆ ಶಿಕ್ಷಣಕ್ಕಾಗಿಯೂ ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳ ಬೇಕೆಂದು,  ತಾಂತ್ರಿಕ ಶಿಕ್ಷಣ ದುರುಪಯೋಗವಾಗುತ್ತಿಲ್ಲವೆಂಬುದನ್ನು ಹೆತ್ತವರು ಖಚಿತಪಡಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಮಧೂರು ಎಸ್‌ಸಿ-ಎಸ್‌ಟಿ ಪಂಚಾಯತ್ ಸಮಿತಿ ಕೂಡ್ಲು ಗೋಪಾಲಕೃಷ್ಣ ಶಾಲೆಯಲ್ಲಿ ಆಯೋಜಿಸಿದ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗಿರುವ ಪುಸ್ತಕ ವಿತರಣೆ ಉದ್ಘಾಟಿಸಿ ಅವರು  ಮಾತನಾಡು ತ್ತಿದ್ದರು.  ಕಳೆದ 12ವರ್ಷದಿಂದ ಶಿಕ್ಷಣ ಸಹಿತದ ಮೂಲಭೂತ ವಲಯದಲ್ಲಿ ಬಹಳ ದೊಡ್ಡ ಸಾಧನೆ ಕೇಂದ್ರ ಸರಕಾರ ನಡೆಸಿದೆ. ಎಸ್‌ಸಿ-ಎಸ್‌ಟಿ ಜನ ವಿಭಾಗಗಳನ್ನು ಆರ್ಥಿಕವಾಗಿ ಸಬಲಗೊಳಿಸುವುದು …

ಪೆರ್ಣೆಯಲ್ಲಿ ತ್ಯಾಜ್ಯ ಉಪೇಕ್ಷೆ: ಕಾಸರಗೋಡಿನ  ಮೂವಿಮ್ಯಾಕ್ಸ್ ಥಿಯೇಟರ್‌ಗೆ 10,000 ರೂ. ದಂಡ

ಕುಂಬಳೆ: ನಾಯ್ಕಾಪು ಸಿದಿ ಬಯಲು ಪೆರ್ಣೆಯಲ್ಲಿ   ಉಪೇಕ್ಷಿಸಿದ ತ್ಯಾಜ್ಯವನ್ನು ಅದರ ವಾರಸುದಾರರನ್ನು ಪತ್ತೆಹಚ್ಚಿ ಅವರ ಮೂಲಕ ಅದನ್ನು ತೆರವುಗೊಳಿಸಲಾಯಿತು. ಮಾತ್ರವಲ್ಲದೆ ಅವರಿಗೆ 10,000 ರೂ. ದಂಡ ಹೇರಲಾಗಿದೆ. 27 ಪ್ಲಾಸ್ಟಿಕ್ ಗೋಣಿಚೀಲಗಳಲ್ಲಿ ತ್ಯಾಜ್ಯಗಳನ್ನು ತುಂಬಿಸಿ ಲಾರಿಯಲ್ಲಿ ತಂದು ಪೆರ್ಣೆಯ ಪಿ.ಜಿ. ಗೋವಿಂದ ಎಂಬವರ ತೋಟಕ್ಕಿರುವ ದಾರಿಯಲ್ಲಿ ಉಪೇಕ್ಷಿಸಲಾಗಿತ್ತು. ಈ ಕುರಿತು ಪುತ್ತಿಗೆ ಪಂಚಾಯತ್ ಹಾಗೂ ಪೊಲೀಸರಿಗೆ ಗೋವಿಂದ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ತಲುಪಿದ ಪಂಚಾಯತ್ ಅಧಿಕಾರಿಗಳು ಗೋಣಿಚೀಲಗಳನ್ನು ಬಿಚ್ಚಿ ಪರಿಶೀಲಿಸಿದಾಗ ಅದರಲ್ಲಿ  ಕಾಸರಗೋಡಿನ ಮೂವಿಮ್ಯಾಕ್ಸ್ ಟಾಕೀಸ್‌ನ …

ಕುಂಬಳೆ ಮಂಡಲ ಕಾಂಗ್ರೆಸ್ ಸಮಿತಿ ಬೇಡಿಕೆಗೆ ಅಂಗೀಕಾರ: ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ ಕಾಸರಗೋಡಿನ ವಿದ್ಯಾರ್ಥಿಗಳಿಗೂ ಉಚಿತ ಪ್ರಯಾಣ

ಕಾಸರಗೋಡು: ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರಕಾರ ಕರ್ನಾಟಕ ರಾಜ್ಯ ಸಾರಿಗೆ ಬಸ್ (ಕೆಎಸ್‌ಆರ್‌ಟಿಸಿ)ಗಳಲ್ಲಿ ಕಾಸರಗೋಡಿನ  ವಿದ್ಯಾರ್ಥಿಗಳಿಗೂ ಉಚಿತ ಪ್ರಯಾಣ ಸೌಕರ್ಯ ಮಂಜೂರು ಮಾಡಿದ್ದು, ಇದಕ್ಕಾಗಿ ಮುಂದಾಳುತ್ವ ವಹಿಸಿದ  ಕಾಂಗ್ರೆಸ್ ಕುಂಬಳೆ ಮಂಡಲ ಸಮಿತಿಯನ್ನು ವಿದ್ಯಾರ್ಥಿಗಳು ಹಾಗೂ ರಕ್ಷಕರು ಅಭಿನಂದಿಸಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಸರಕಾರದ ತೀರ್ಮಾನವನ್ನು ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿ ಪೂಜಾರಿ ಸ್ವಾಗತಿಸಿದ್ದಾರೆ.   ಕಾಸರಗೋಡಿನ ವಿದ್ಯಾರ್ಥಿ ಗಳಿಗೂ ಉಚಿತ ಪ್ರಯಾಣ ಲಭ್ಯಗೊಳಿಸಲು ಸರಕಾರದಿಂದ ಆದೇಶ ಲಭಿಸಿದೆಯೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತಿಳಿಸಿದೆ. …

ಬಿಎಂಎಸ್ ಮೀಂಜ ಪಂಚಾಯತ್ ಸಮ್ಮೇಳನ: ನೂತನ ಪದಾಧಿಕಾರಿಗಳ ಆಯ್ಕೆ

ಮಂಜೇಶ್ವರ: ಭಾರತೀಯ ಮಜ್ಡೂರ್ ಸಂಘ ಮಿಂಜ ಪಂಚಾಯತ್ ಸಮ್ಮೇಳನ ಮೊರತ್ತಣೆ ಬಿ ಆರ್ ಕಾಂಪ್ಲೆಕ್‌ನ ಅನುಗ್ರಹ ಸಭಾಂಗಣದಲ್ಲಿ ನಡೆಯಿತು. ಸಮಿತಿ ಅಧ್ಯಕ್ಷ ರವಿಚಂದ್ರ ಶೆಟ್ಟಿ ಪದೆಂಜಿಬೈಲ್ ಅಧ್ಯಕ್ಷತೆ ವಹಿಸಿದÀÄ್ದ, ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಯಶವಂತಿ ಬೆಜ್ಜ ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಮುಖ್ಯ ಭಾಷಣ ಮಾಡಿದರು. ನೂತನ ಪದಾಧಿಕಾರಿಗಳನ್ನು ವಲಯ ಅಧ್ಯಕ್ಷ ರವಿ ಎಂ.ಕೆ. ಕೋಳ್ಯೂರು ಆಯ್ಕೆ ಮಾಡಿದರು. ಪಂಚಾಯತ್ ಸದಸ್ಯೆ ಶಾಂತ ಕೋಳ್ಯೂರು, ಗೋಪಿನಾಥ್ ಮೊರತ್ತಣೆ ಭಾಗವಹಿಸಿದರು. ಸತೀಶ್ ಬಟ್ಟಿಪದವ್ ವರದಿ …

ಮಲಯಾಳ ಭಾಷಾ ಮಸೂದೆ: ಕನ್ನಡಿಗರ ಸಮಸ್ಯೆ ಪರಿಹಾರಕ್ಕೆ ನೂತನ ಉಸ್ತುವಾರಿ ಸಚಿವರಿಗೆ ಮನವಿ

ಕಾಸರಗೋಡು: ರಾಜ್ಯದಲ್ಲಿ ಕಳೆದ ಎಡರಂಗ ಸರಕಾರ ಜ್ಯಾರಿಗೆ ತಂದ ಮಲಯಾಳ ಭಾಷಾ ಕಡ್ಡಾಯ ಮಸೂದೆಯಿಂದಾಗಿ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರಿಗೆ ಆಗಬಹುದಾದ ತೊಂದರೆಗಳ ಬಗ್ಗೆ ಹಾಗೂ ಆ ಮಸೂದೆಯಲ್ಲ್ಲಿರುವ ಕನ್ನಡ ವಿರೋಧಿ ಅಂಶಗಳ ಬಗ್ಗೆ ನೂತನ ಸರಕಾರಕ್ಕೆ ಮನವರಿಕೆ ಮಾಡಲು ಮನವಿ ಸಲ್ಲಿಸಲಾಯಿತು. ಇಂದು ಬೆಳಿಗ್ಗೆ ಜಿಲ್ಲೆಗೆ ತಲುಪಿದ ರಾಜ್ಯ ಸ್ಥಳೀಯಾಡಳಿತ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಾಜಿಯವರಿಗೆ ಕರ್ನಾಟಕ ಸಮಿತಿ ಮೂಲಕ ಈ ಮನವಿ ಸಲ್ಲಿಸಲಾಗಿದೆ. ಮನವಿ ಸಲ್ಲಿಸಿದ  ತಂಡದಲ್ಲಿ ಕರ್ನಾಟಕ ಸಮಿತಿ ಅಧ್ಯಕ್ಷ ನ್ಯಾಯವಾದಿ …

ಆಟೋ ಚಾಲಕ ನಿಧನ

ಬದಿಯಡ್ಕ: ಇಲ್ಲಿನ ಪೇಟೆಯಲ್ಲಿ ಆಟೋ ಚಾಲಕರಾಗಿದ್ದ ವಳಮಲೆ ನಿವಾಸಿ ಸುನಿ ಯಾನೆ ಸುರೇಶ್ ರೈ (43) ನಿಧನಹೊಂದಿದರು. ಸಕ್ರಿಯ ಸಂಘ ಪರಿವಾರ ಕಾರ್ಯಕರ್ತರಾ ಗಿದ್ದರು. ಮೊನ್ನೆ ರಾತ್ರಿ ಇವರು ಊಟಮಾಡಿ ಮಲಗಿದ್ದು ನಿನ್ನೆ ಬೆಳಿಗ್ಗೆ ಏಳದ ಹಿನ್ನೆಲೆಯಲ್ಲಿ ನೋಡಿದಾಗ  ಮೃತಪಟ್ಟಿರು ವುದು ತಿಳಿದುಬಂದಿದೆ. ಕೂಡಲೇ ಬದಿಯಡ್ಕದ ಆಸ್ಪತ್ರೆಗೆ ಕೊಂಡೊಯ್ದು ಮರಣ ದೃಢೀಕರಿಸ ಲಾಗಿದೆ.  ದಿ| ರಾಧಾಕೃಷ್ಣ ರೈಯವರ ಪುತ್ರನಾದ ಇವರು ಅವಿವಾಹಿತ ರಾಗಿದ್ದರು. ಮೃತರು ತಾಯಿ  ಚಂದ್ರಾವತಿ, ಸಹೋದರ ಪ್ರಸನ್ನ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ನಿಲ್ಲಿಸಿದ್ದ ಲಾರಿಗಳಿಂದ ಬ್ಯಾಟರಿ ಕಳವು: ಆರೋಪಿಗಳ ಪೈಕಿ ಓರ್ವ ಬಂಧನ ; ಇತರ ಮೂವರಿಗಾಗಿ ಶೋಧ, ಬ್ಯಾಟರಿ ಕಾಣೆಯಾದದ್ದು 9 ಲಾರಿಗಳಿಂದ

ಕುಂಬಳೆ: ನಿಲ್ಲಿಸಿದ್ದ ಲಾರಿ ಗಳಿಂದ ಬ್ಯಾಟರಿ ಕಳವು ನಡೆಸಿದ ಪ್ರಕರಣದಲ್ಲಿ ಓರ್ವ ಆರೋಪಿ ಯನ್ನು ಕುಂಬಳೆ ಪೊಲೀಸರು ನಡೆಸಿದ  ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಇತರ ಮೂವರು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ. ಆಲಂಪಾಡಿ ತೈವಳಪ್ಪು ನಿವಾಸಿಯಾದ ಶಮೀರ್ ಯಾನೆ ತೈವಳಪ್ಪು ಶಮೀರ್ (50) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಇತರ ಆರೋಪಿಗಳಾದ ಚೆರ್ಕಳ ಮಜೀದ್, ಪವಾಸ್, ಫಾರೂಕ್ ಎಂಬಿವರಿಗಾಗಿ ಶೋಧ ನಡೆಸುತ್ತಿರುವುದಾಗಿ ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್ ತಿಳಿಸಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಕುಂಬಳೆ ಪೊಲೀಸ್ ಠಾಣೆ …

ಮುಖ್ಯಮಂತ್ರಿ, ಕುಟುಂಬಕ್ಕೆ ಕೊಲೆ ಬೆದರಿಕೆ:  ಓರ್ವ ಸೆರೆ ; ಸಮಗ್ರ ವಿಚಾರಣೆ

ತಿರುವನಂತಪುರ: ಮುಖ್ಯಮಂತ್ರಿ ವಿ.ಡಿ. ಸತೀಶನ್ ಮತ್ತು ಕುಟುಂಬಕ್ಕೆ  ಫೋನ್ ಮೂಲಕ ಕೊಲೆ ಬೆದರಿಕೆಯೊಡ್ಡಲಾಗಿದೆ. ತಿರುವನಂತಪುರ ಸಿಟಿ ಪೊಲೀಸ್ ಕಮಾಂಡಿಂಗ್ ಸೆಂಟರಿನ ಅಧಿಕೃತ  ಫೋನ್ ಸೆಂಟರಿಗೆ ಈ ಬೆದರಿಕೆ ಫೋನ್ ಕರೆ ಮಾಡಲಾಗಿದೆ. ಆ ಫೋನ್ ನಂಬರಿನ ಜಾಡು ಹಿಡಿದು ಪೊಲೀಸರು ತಕ್ಷಣ ನಡೆಸಿದ ಕಾರ್ಯಾಚರಣೆಯಲ್ಲಿ ಫೋನ್ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಿರುವನಂತಪುರದಲ್ಲಿ  ಚಿರಯಿಲ್‌ಕೀಳ್ ನಿವಾಸಿ ಟೋನಿ ಎಂಬಾತ ಬಂಧಿತ ವ್ಯಕ್ತಿ. ಈತ ಸಿಟಿ ಪೊಲೀಸ್ ಕಮಾಂಡಿಂಗ್ ಸೆಂಟರಿಗೆ ನಿನ್ನೆ ಸಂಜೆ ಹಲವು ಬಾರಿ …