ಉಳಿಯತ್ತಡ್ಕದಲ್ಲಿ ಯುವಕರ ಮಧ್ಯೆ ಘರ್ಷಣೆ: ಓರ್ವನಿಗೆ ಇರಿತ

ಕಾಸರಗೋಡು: ಮಧೂರು ಸಮೀಪದ ಉಳಿಯತ್ತಡ್ಕ ಆಜಾದ್‌ನಗರ ರಸ್ತೆ ಬಳಿ ನಿನ್ನೆ  ರಾತ್ರಿ ಯುವಕರ ಮಧ್ಯೆ  ಘರ್ಷಣೆ ಉಂಟಾಗಿ ಅದರಲ್ಲಿ ಓರ್ವ ಇರಿತ ಕ್ಕೊಳಗಾಗಿದ್ದಾನೆ. ಆತನನ್ನು  ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆಜಾದ್‌ನಗರದ ಇರ್ಫಾನ್ ಇರಿತಕ್ಕೊಳಗಾಗಿದ್ದ ಯುವಕ. ನಿನ್ನೆ ರಾತ್ರಿ ಸುಮಾರು 9.30ರ ವೇಳೆಗೆ ಈ ಘರ್ಷಣೆ ನಡೆದಿದೆ. ಇದರಲ್ಲಿ ಅಖಿಲ್ ಎಂಬಾತ ಗಾಯಗೊಂಡಿ ದ್ದನು. ಆತ ಚಿಕಿತ್ಸೆಗಾಗಿ ನಿನ್ನೆ ಆಸ್ಪತ್ರೆಗೆ ಬಂದಿದ್ದು ಚಿಕಿತ್ಸೆ ಪಡೆಯುವ ವೇಳೆ ಅಲ್ಲಿಗೆ ಪೊಲೀಸರು ಆಗಮಿಸಿದಾಗ ಆತ ಅಲ್ಲಿಂದ ತಪ್ಪಿಸಿಕೊಂಡಿರು ವುದಾಗಿ  ಪೊಲೀಸರು ತಿಳಿಸಿದ್ದಾರೆ. …

ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿ: ಗರ್ಭಿಣಿ ಮೃತ್ಯು

 ಕಲ್ಲಿಕೋಟೆ: ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿ ಯಾಗಿ ಗರ್ಭಿಣಿ ಮೃತಪಟ್ಟ ದಾರುಣ ಘಟನೆ ಕಲ್ಲಿಕೋಟೆ ಕಕ್ಕರಮುಖ್ ಎಂಬಲ್ಲಿ ಸಂಭವಿಸಿದೆ. ಕಕ್ಕರಮುಖ್ ನಿವಾಸಿ ರಜಿಲ್‌ಲಾಲು ಎಂಬವರ ಪತ್ನಿ ಸೋನ (27)ಎಂಬವರು ಮೃತಪಟ್ಟ ದುರ್ದೈವಿ. ಕಾರು ಚಲಾಯಿಸುತ್ತಿದ್ದ ರಜಿಲ್‌ಲಾಲು ಗಂಭೀರ ಗಾಯಗೊಂಡಿದ್ದು, ಇವರಲ್ಲಿ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ನಿನ್ನೆ  ರಾತ್ರಿ 9 ಗಂಟೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಸೋನಾರನ್ನು ಪೇರಾಂಬ್ರದ ಆಸ್ಪತ್ರೆಗೆ  ಕರೆದೊಯ್ದು ತಪಾಸಣೆಗೈದ ಬಳಿಕ ಮರಳಿ ಮನೆಗೆ ಬರುತ್ತಿದ್ದಾಗ ಕಾರು ಬೆಂಕಿಗಾಹುತಿಯಾಗಿದೆ. …

ಕುಟುಂಬ ಕಲಹ ಪರಿಹರಿಸಲು ತಲುಪಿದ ಪೊಲೀಸ್‌ಗೆ ಇರಿದು ಗಾಯ: ಸಹೋದ್ಯೋಗಿ ಸೆರೆ

ತಿರುವನಂತಪುರ: ಕುಟುಂಬ ಕಲಹ ಪರಿಹರಿಸಲು ತಲುಪಿದ ಪೊಲೀಸ್‌ಗೆ ಇರಿದು ಗಾಯಗೊಳಿಸಿದ ಘಟನೆಯಲ್ಲಿ ಸಹೋದ್ಯೋಗಿ ಪೊಲೀಸ್‌ನನ್ನು ಸೆರೆ ಹಿಡಿಯಲಾಗಿದೆ. ತಿರುವನಂತಪುರ ವಿಕಾಸ್‌ಭವನ್ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಇತ್ತೀಚೆಗೆ ಘಟನೆ ನಡೆದಿದೆ. ಎ.ಆರ್ ಕ್ಯಾಂಪ್‌ನ ಉದ್ಯೋಗಿಯಾದ ಅನೀಶ್‌ನನ್ನು ಸೆರೆಹಿಡಿಯಲಾಗಿದೆ. ಮ್ಯೂಸಿಯಂ ಪೊಲೀಸ್ ಠಾಣೆಯ ಅಧಿಕಾರಿಯಾದ ಅನ್ಸಾರ್‌ಗೆ ಇರಿಯಲಾಗಿದೆ. ಕಿವಿಗೆ ಗಾಯಗೊಂಡ ಅನ್ಸಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ನೆರೆಮನೆ ನಿವಾಸಿಯಾದ ಪೊಲೀಸ್‌ನ ಮನೆಯ ಕುಟುಂಬ ಕಲಹ ಪರಿಹರಿಸಲು ಇವರು ತಲುಪಿದ್ದರು. ಅನೀಶ್ ಮನೆಯಲ್ಲಿ ಗಲಾಟೆ ಮಾಡುತ್ತಿದ್ದಾನೆಂದು ೧೧೨ರಲ್ಲಿ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಅನ್ಸಾರ್ ಸ್ಥಳಕ್ಕೆ …

ಸಾರ್ವಜನಿಕ ಸ್ಥಳದ ಮರ ತೆರವು : ಪೊಲೀಸ್ ಕೇಸು ದಾಖಲು

ಕಾಸರಗೋಡು:  ಬೇಕಲ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಪನಯಾಲ್‌ನಲ್ಲಿ ಲೋಕೋಪಯೋಗಿ ರಸ್ತೆ ಬದಿಯ 100ರಷ್ಟು ಮರಗಳನ್ನು ಜೆಸಿಬಿ ಉಪಯೋಗಿಸಿ ಕಡಿದು ತೆರವುಗೊಳಿಸಿದ ಘಟನೆಯಲ್ಲಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಾಞಂಗಾಡ್ ಲೋಕೋಪಯೋಗಿ ಕಚೇರಿಯ ಅಸಿಸ್ಟೆಂಟ್ ಇಂಜಿನಿಯರ್‌ರ ದೂರಿನಂತೆ ಪಳ್ಳಾರ್ ನಿವಾಸಿ ವಿನಾಯಕ ಭಟ್ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ. ಪೆರಿಯಾಟಡ್ಕಂ- ಬೇಕಲ ರಸ್ತೆಯ ಪನಯಾಲ್, ಪಳ್ಳೋರತ್‌ನಲ್ಲಿದ್ದ ಹಲವಾರು ಮರಗಳನ್ನು  ಜೆಸಿಬಿ ಉಪಯೋಗಿಸಿ ಕಡಿದು ನಾಶಪಡಿಸಿ ಸರಕಾರಕ್ಕೆ ಲಕ್ಷ ರೂ.ಗಳ ನಷ್ಟ ಉಂಟುಮಾಡಿರುವುದಾಗಿ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ಬುಧವಾರ …

ಮಾಯಿಪ್ಪಾಡಿಗುತ್ತು ತರವಾಡು ಮನೆಯಲ್ಲಿ ದೈವಕೋಲ

ಮಾಯಿಪ್ಪಾಡಿ: ಮಾಯಿಪ್ಪಾಡಿ ಗುತ್ತು ತರವಾಡು ಮನೆಯಲ್ಲಿ ಶ್ರೀ ಧೂಮಾವತಿ ದೈವದ ಧರ್ಮನೇಮ ಮತ್ತು ಶ್ರೀ ಕೊರತಿ ದೈವದ ಕೋಲ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಗಣಹೋಮ, ತಂಬಿಲ, ಪಾನಕಪೂಜೆ, ಅನ್ನ ಸಂತರ್ಪಣೆ ಮಾಯಿಪ್ಪಾಡಿ ಶ್ರೀ ದುರ್ಗಾ ಮಹಿಳಾ ಭಜೇಶ್ವರಿ ಭಜನಾ ಸಂಘ ಮತ್ತು ಮಾಯಿಪಾಡಿಗುತ್ತು ಕುಟುಂ ಬಸ್ಥರಿಂದ ಭಜನೆ ನಡೆಯಿತು. ಪುತ್ತೂರುಕೊಟ್ಯದಿಂದ ಮಾಯಿಪ್ಪಾಡಿಗುತ್ತು ತರವಾಡಿಗೆ ಭಂಡಾರ ಆಗಮಿಸಿತು. ಎರಡು ಹರಕೆಯ ಕೊರತಿಕೋಲ ಸೇರಿದಂತೆ ಮೂರು ದಿನ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.

ರಾಪರ್‌ ವೇಡನ್‌ನಿಂದ ವಶಪಡಿಸಿದ್ದು ಯಥಾರ್ಥ ಹುಲಿ ಹಲ್ಲು: ಅರಣ್ಯ ಇಲಾಖೆಯಿಂದ ದೋಷಾರೋಪ ಪಟ್ಟಿ ಸಲ್ಲಿಸಲು ನಿರ್ಧಾರ

ಕೊಚ್ಚಿ: ಹುಲಿಯ ಹಲ್ಲು ವಶಪಡಿಸಿದ ಪ್ರಕರಣದಲ್ಲಿ ರಾಪರ್‌ವೇಡನ್‌ಗೆ ತಿರುಗೇಟು ಲಭಿಸಿದೆ. ವಶಪಡಿಸಿರುವುದು ನಿಜವಾದ ಹುಲಿಹಲ್ಲು ಆಗಿದೆ ಎಂದು ಖಚಿತಪಡಿಸಲಾಗಿದೆ. ಕೊಲ್ಕತ್ತದ ಜುವೋಲಜಿ ಲ್ಯಾಬ್‌ನಲ್ಲಿ ನಡೆಸಿದ ತಪಾಸಣೆಯಲ್ಲಿ ಹುಲಿ ಹಲ್ಲು ಎಂದು ಖಚಿತಪಡಿಸಲಾಗಿದೆ. ಪ್ರಕರಣದಲ್ಲಿ ಆರಣ್ಯ ಇಲಾಖೆ ಕೂಡಲೇ ದೋಷಾರೋಪ ಪಟ್ಟಿ ಸಲ್ಲಿಸಲಿದೆ. ಅನಧಿಕೃತವಾಗಿ ಹುಲಿ ಹಲ್ಲು  ಕೈವಶವಿರಿಸಿಕೊಂಡಿರುವುದಕ್ಕೆ, ಮೃಗ ಬೇಟೆ ನಡೆಸಿರುವುದಾಗಿ ಆರೋಪಿಸಿ ವೇಡನ್ ವಿರುದ್ಧ ಈ ಮೊದಲೇ ಅರಣ್ಯ ಇಲಾಖೆ ಕೇಸು ದಾಖಲಿಸಿತ್ತು. ಆದರೆ ನಿಜವಾದ ಹುಲಿ ಹಲ್ಲು ಅಲ್ಲವೆಂದು ತಮಿಳುನಾಡಿನಿಂದ ಅಭಿಮಾನಿಯೋರ್ವ ಕೊಡುಗೆಯಾಗಿ ನೀಡಿರುವುದಾಗಿಯೂ …

ಕಾಂಗ್ರೆಸ್ ಮುಖಂಡ ಗಂಗಾಧರನ್ ನಾಯರ್ ಸಂಸ್ಮರಣೆ

ಪೈವಳಿಕೆ : ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಜಿಲ್ಲಾಧ್ಯಕ್ಷ ಪಿ. ಗಂಗಾಧರನ್ ನಾಯರ್‌ರ ಸಂಸ್ಮರಣಾ ಕಾರ್ಯಕ್ರಮ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಜರುಗಿತು. ಗಂಗಾಧರನ್ ನಾಯರ್‌ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಹಿರಿಯ ಕಾರ್ಯಕರ್ತರಾದ ಅಬ್ದುಲ್ಲ ಶಾ, ಅಸಿಸ್ ಕಟ್ಟೆ, ಎಡ್ವರ್ಡ್ ಡಿ ಸೋಜ ಭಾಗವಹಿಸಿದರು. ಅಬ್ದುಲ್ ರಸಾಕ್ ಸ್ವಾಗತಿಸಿ, ಗಂಗಾಧರ ನಾಯಕ್ ವಂದಿಸಿದರು.

ಮಂಜೇಶ್ವರ ತಾಲೂಕು ಲೈಬ್ರರಿ  ಕೌನ್ಸಿಲ್ ತಾಲೂಕು ಸಂಗಮ ನಾಳೆ

ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ತಾಲೂಕು ಸಂಗಮ ನಾಳೆ ಬೆಳಿಗ್ಗೆ ೧೦ಕ್ಕೆ ಕುಂಬಳೆ ಜಿಎಸ್‌ಬಿಎಸ್ ಯುಪಿ ಶಾಲೆಯಲ್ಲಿ ನಡೆಯಲಿದೆ. ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಾ. ಪಿ. ಪ್ರಭಾಕರನ್ ಉದ್ಘಾಟಿಸುವರು. ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷೆ ಶ್ರೀಕುಮಾರಿ ಕೆ. ಅಧ್ಯಕ್ಷತೆ ವಹಿಸುವರು. ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ರಾಮಚಂದ್ರ ಎಂ. ಶ್ರದ್ಧಾಂಜಲಿ ಠರಾವು ಮಂಡಿಸುವರು. ಉಪಜಿಲ್ಲಾ ವಿದ್ಯಾಧಿಕಾರಿ ಜೋರ್ಜ್ ಕ್ರಾಸ್ತ ಸಿ.ಎಚ್. ಮುಖ್ಯ ಅತಿಥಿಯಾಗಿರುವರು. ತಾಲೂಕು ಲೈಬ್ರರಿ ಕೌನ್ಸಿಲ್‌ನ ಕಾರ್ಯಕಾರಿ ಸಮಿತಿಗೆ …

ಮಹಿಳೆಯರಿಗೆ, ಮಕ್ಕಳಿಗೆ ಮಾತ್ರವಾಗಿ ಪ್ರತ್ಯೇಕ ಘಟಕ, ಅತ್ಯಾಧುನಿಕ ಪಿಡಿಯಾಟ್ರಿಕ್ ಐಸಿಯು ಕಣ್ಣೂರು ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನಲ್ಲಿ ಉದ್ಘಾಟನೆ

ಕಣ್ಣೂರು: ಕಣ್ಣೂರು ಬೇಬಿ ಮೆಮೋರಿಯಲ್ ಹಾಸ್ಟಿಟಲ್‌ನಲ್ಲಿ ಮಹಿಳೆಯರಿಗೂ, ಮಕ್ಕಳಿಗೂ ಹೆಚ್ಚು ಸೌಕರ್ಯಪ್ರದವಾದ ಹಾಗೂ ಸಮಗ್ರ ಪರಿಚರಣೆ ಖಚಿತಪಡಿಸುವ ಹೊಸ ಸೆಂಟರ್ ಫಾರ್ ವುಮೆನ್ ಆಂಡ್ ಚೈಲ್ಡ್ ಅತ್ಯಾಧುನಿಕ ಪಿಡಿಯಾಟ್ರಿಕ್ ಐಸಿಯು ಉದ್ಘಾಟಿಸಲಾಯಿತು. ತಾಯಿಗೆ ಹಾಗೂ ಮಗುವಿಗೆ ಒಂದೇ ಸೂರಿನಡಿಯಲ್ಲಿ ಸಮಗ್ರ ಚಿಕಿತ್ಸೆ ಸೌಕರ್ಯ ಲಭ್ಯಗೊಳಿಸುವ ಈ ಹೊಸ ಕ್ಲಸ್ಟರ್ ವ್ಯವಸ್ಥೆಯ ಆಸ್ಪತ್ರೆಯ ಸೇವಾ ರಂಗದಲ್ಲಿ ನೂತನ ಅಧ್ಯಯವೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಈ ಕೇಂದ್ರದಲ್ಲಿ ಒಬ್‌ಸ್ಟೆಸ್ಟ್ರಿಕ್ಸ್ ಆಂಡ್ ಗೈನೋಕಾಲಜಿ, ನೀಯೋ ನೆಟಾಲೋಜಿ ಪಿಡಿಯಾಟ್ರಿಕ್ಸ್, ಪಿಡಿಯಾಡ್ರಿಕ್ ಕ್ರಿಟಿಕಲ್ ಕೇರ್ ಎಂಬೀ …

ಮಟ್ಟಲಾಯಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಬಿರುಕು : ತನಿಖಾ ತಂಡ ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ

ಹೊಸದುರ್ಗ: ಚೆರುವತ್ತೂರು ಮಟ್ಟಲಾಯಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ನಿರ್ಮಾಣ ರಸ್ತೆಯಲ್ಲಿ ಬಿರುಕು ಪತ್ತೆಯಾದ ಘಟನೆಯಲ್ಲಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ನೇಮಕ ಮಾಡಿದ ಆರ್‌ಡಿಒ ನೇತೃತ್ವದಲ್ಲಿರುವ ತನಿಖಾ ತಂಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಮಳೆಗಾಲದಲ್ಲಿ ದುರಂತ ಹೊರತುಪಡಿಸಲು ಕಠಿಣ ಕ್ರಮಗಳಿಗೆ ಜಿಲ್ಲಾಧಿಕಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶ ನೀಡಿದ್ದಾರೆ. ಮುಂದಿನ ಕ್ರಮಗಳಿಗಾಗಿ ವರದಿ ಯನ್ನು ಸರಕಾರಕ್ಕೆ ಸಲ್ಲಿಸಲಾಗು ವುದು. ಹೆದ್ದಾರಿ ಪ್ರಾಧಿಕಾರದೊಂದಿಗೆ ಸೇರಿಕೊಂಡು ಮುಂದಿನ ನಿರ್ಮಾಣ ಚಟುವಟಿಕೆಗಳನ್ನು ನಿರೀಕ್ಷಿಸುವುದಕ್ಕೆ ಕಾಞಂಗಾಡ್ ಆರ್‌ಡಿಒರಿಗೆ ಜಿಲ್ಲಾಧಿಕಾರಿ ಹೊಣೆ ನೀಡಿದರು. ನಿರ್ಮಾಣದಲ್ಲಿನ ಲೋಪದೋಷಗಳನ್ನು …