ಆನೆದಂತ ವಶ: ಮಂಜೇಶ್ವರ ನಿವಾಸಿ ಸಹಿತ ಮೂವರ ಸೆರೆ
ಮಂಜೇಶ್ವರ: ಲಕ್ಷಾಂತರ ರೂಪಾಯಿ ಮೌಲ್ಯದ ಆನೆ ದಂತಗಳ ಸಹಿತ ಮಂಜೇಶ್ವರ ನಿವಾಸಿ ಸೇರಿ ಮೂರು ಮಂದಿ ಮಂಗಳೂರಿನಲ್ಲಿ ಸೆರೆಗೀಡಾಗಿ ದ್ದಾರೆ. ಮಂಜೇಶ್ವರದ ಅಬ್ದುಲ್ ಖಾದರ್, ಬೆಳ್ತಂಗಡಿಯ ಶಶಾಂಕ, ಅತ್ತಾವರದ ಪ್ರಭಾಚಂದ್ರ ಎಂಬಿವರನ್ನು ಬೆಂಗಳೂರು- ಮಡಿಕೇರಿ ಫಾರೆಸ್ಟ್ ಎಸ್ಪಿ ಪವನ್ ನೆಜ್ಜೂರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಆನೆ ದಂತಗಳನ್ನು ಮಾರಾಟಗೈಯ್ಯಲು ತಂಡವೊಂದು ಮಂಗಳೂರಿನ ಮರೋಳಿಗೆ ಬರುತ್ತಿದೆ ಎಂಬ ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ತಲುಪಿದ್ದರು. ಈ ವೇಳೆ ಅಲ್ಲಿಗೆ ತಲುಪಿದ ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ …