ಅತೀವ ಭದ್ರತೆ ಹೊಂದಿದ ಸೇನಾ ಶಿಬಿರದಿಂದ 2 ಕೋಟಿ ರೂ. ಮೌಲ್ಯದ ಆನೆ ದಂತ ಕಳವು

ತಿರುವನಂತಪುರ: ಅತೀವ ಭದ್ರತೆ ಹೊಂದಿರುವ ತಿರುವನಂತಪುರದ ಪಾಂಙೋಟ್ ಸೇನಾ ಶಿಬಿರದಿಂದ ಸುಮಾರು 2 ಕೋಟಿ ರೂ. ಮೌಲ್ಯವಿರುವ ಆನೆ ದಂತಗಳನ್ನು ಕಳವುಗೈದ ಘಟನೆ ನಡೆದಿದೆ. ಪ್ರಸ್ತುತ ಸೇನಾ ಶಿಬಿರದ ಆಫೀಸರ್ಸ್ ಕ್ಲಬ್‌ನಲ್ಲಿ ಈ ಎರಡು ಆನೆದಂತಗಳನ್ನು ಭದ್ರತಾ ಕೊಠಡಿಯಲ್ಲಿರಿಸಲಾಗಿತ್ತು. 1929 ರಲ್ಲಿ ಭಾರತೀಯ ಸೇನಾ ಪಡೆಗೆ ಹಸ್ತಾಂತರಿಸಿದ ಆನೆ ದಂತ ಇದಾಗಿತ್ತು.  ಇದೂ ಸೇರಿದಂತೆ ಹಲವು ಭಾರೀ ಮೌಲ್ಯದ ಸಾಮಗ್ರಿಗಳನ್ನು  ಪ್ರಸ್ತುತ ಶಿಬಿರದ ಸ್ಟ್ರಾಂಗ್ ರೂಂನಲ್ಲಿರಿಸಲಾಗಿತ್ತು. ಮೊನ್ನೆ ರಾತ್ರಿ ಈ ಶಿಬಿರದಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊ ಳ್ಳಲಾಗಿತ್ತು. ಇದರಲ್ಲಿ …

ವಿದ್ಯುತ್ ತಂತಿಗೆ ಕಬ್ಬಿಣದ ಸರಳು ತಾಗಿ ಯುವಕನಿಗೆ ಶಾಕ್; ಆಸ್ಪತ್ರೆಯಲ್ಲಿ

ಕಾಸರಗೋಡು: ಕಾಲ್ಚೆಂಡಾಟ ಸ್ಪರ್ಧೆ ಮುಗಿದ ಬಳಿಕ ಚಪ್ಪರ ಹಾಗೂ ಇತರ ಸಾಮಗ್ರಿಗಳನ್ನು ಸ್ಥಳಾಂಚರಿಸುವ ಮಧ್ಯೆ ಕಬ್ಬಿಣದ ಸರಳು ಹೈಟೆನ್ಶನ್ ವಿದ್ಯುತ್ ತಂತಿಗೆ ತಾಗಿ ಓರ್ವನಿಗೆ ಶಾಕ್ ತಗಲಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊವ್ವಲ್‌ನ ಫಯಾಸ್ (18)ಗೆ ಶಾಕ್ ತಗಲಿದ್ದು, ಆಸ್ಟರ್ ಮಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದಾರೆ. ನಿನ್ನೆ ಸಂಜೆ 5 ಗಂಟೆಗೆ ದುರಂತ ಸಂಭವಿಸಿದೆ. ಚೆಟ್ಟಂಗುಳಿಯಲ್ಲಿ ಕಳೆದ ವಾರ ಕಾಲ್ಚೆಂಡಾಟ ಸ್ಪರ್ಧೆ ಇತ್ತೆನ್ನಲಾಗಿದೆ. ಸ್ಪರ್ಧೆಯಂಗವಾಗಿ ಸ್ಥಾಪಿಸಿದ ಚಪ್ಪರ ಹಾಗೂ ಇತರ ಸಾಮಗ್ರಿಗಳನ್ನು ಸ್ಥಳಾಂತರಿಸುವ …

ಪುಳ್ಕೂರು ಆರೋಗ್ಯಕೇಂದ್ರದಿಂದ ಕೋಪರ್ ಟಿ, ಸ್ಟೆಥೋಸ್ಕೋಪ್ ಕಳವು

ಮಧೂರು: ಪುಳ್ಕೂರು ಆರೋಗ್ಯ ಕೇಂದ್ರದಿಂದ ಕಳವು ನಡೆಸಲಾಗಿದೆ. ಬಾಗಿಲಿನ ಬೀಗ ಮುರಿದು ಒಳನುಗ್ಗಿ ಕೋಪರ್ ಟಿ, ಸ್ಟೆಥೋಸ್ಕೋಪ್, ಇಂಡಕ್ಷನ್ ಕುಕ್ಕರ್ ಮೊದಲಾದ ಸಾಮಗ್ರಿಗಳನ್ನು ಕಳವುಗೈಯ್ಯಲಾಗಿದೆ. ಆರೋಗ್ಯ ಕೇಂದ್ರ ನೌಕರ ಎಸ್.ಎಲ್. ಅಜೀಶ್‌ಖಾನ್ ನೀಡಿದ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಫೆಬ್ರವರಿ 9ರಂದು ರಾತ್ರಿ 8 ಗಂಟೆ ಮತ್ತು ಫೆ. 10ರಂದು ಬೆಳಿಗ್ಗೆ 9 ಗಂಟೆ ಮಧ್ಯೆ ಕಳವು ನಡೆದಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ. ಕೋಪರ್ ಟಿ ಹಾಗೂ ಸ್ಟೆಥೋಸ್ಕೋಪ್ ಕಳವು ನಡೆಸಿರುವುದು ಪೊಲೀಸ್ …

ವೃದ್ದೆ ವಿರುದ್ಧ ಕೊಲೆ ಬೆದರಿಕೆ : ಕೊಲೆ ಪ್ರಕರಣದಲ್ಲಿ ಆರೋಪಿಯಾದ ಪುತ್ರ ಸೆರೆ

ಕುಂಬಳೆ: ಕೊಲೆ ಪ್ರಕರಣದಲ್ಲಿ ಆರೋಪಿಯಾದ ಪುತ್ರ ಮನೆಗೆ ನುಗ್ಗಿ ಬೆದರಿಸಿರುವುದಾಗಿ ವೃದ್ದೆಯಾದ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೈವಳಿಕೆ ಕಳಾಯಿ ನಿವಾಸಿ ಬಾಲಕಬೇಬಿ(82) ನೀಡಿದ ದೂರಿನಂತೆ ಪುತ್ರ ಜಯ ಕೆ. ಅಲಿಯಾಸ್ ಜಯರಾಂ ನೋಂಡ (54)ನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಬೇಬಿಯ ಇನ್ನೋರ್ವ ಪುತ್ರ ಪದ್ಮನಾಭ ಎಂಬವರನ್ನು  ಕೊಲೆಗೈದ ಪ್ರಕರಣದಲ್ಲಿ ಜಯರಾಮ್ ಆರೋಪಿಯಾಗಿದ್ದಾನೆ. ಕೊಲೆ ಪ್ರಕರಣದಲ್ಲಿ ಸಾಕ್ಷಿಯಾದ ತಾಯಿ ನ್ಯಾಯಾಲಯದಲ್ಲಿ ಹೇಳಿಕೆ ಬದಲಿಸಿ ಹೇಳಬೇಕೆಂದೂ, ಇಲ್ಲದಿದ್ದರೆ ಕೊಲೆಗೈಯ್ಯುವುದಾಗಿಯೂ ಬೆದರಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇದರ ಜೊತೆ ಸೊತ್ತಿನಲ್ಲಿ ಪಾಲು …

ಮಂಜೇಶ್ವರದಲ್ಲಿ ಟ್ರಾಲಿ ಬ್ಯಾಗ್‌ನಲ್ಲಿ ಸಾಗಿಸುತ್ತಿದ್ದ 12.640 ಕಿಲೋ ಗಾಂಜಾ ಸಹಿತ ಓರ್ವ ಸೆರೆ

ಮಂಜೇಶ್ವರ: ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ಬೃಹತ್ ಗಾಂಜಾ ಬೇಟೆ ನಡೆಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಾಗಿಸುತ್ತಿದ್ದ 12.640 ಕಿಲೋ ಗ್ರಾಂ ಗಾಂಜಾ ಸಹಿತ ಯುವಕನನ್ನು ಸೆರೆ ಹಿಡಿಯಲಾಗಿದೆ. ಮಹಾರಾಷ್ಟ್ರ ನಿವಾಸಿಯಾದ ರಾಕೇಶ್ ಪ್ರಕಾಶ್ ಡೋಗ್ರಾ (37)ನನ್ನು ಸೆರೆ ಹಿಡಿಯಲಾಗಿದ್ದು, ಮಂಗಳೂರಿನಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಈತ ಪ್ರಯಾಣಿಸುತ್ತಿದ್ದನು. ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ನಡೆದ ವಾಹನ ತಪಾಸಣೆ ಮಧ್ಯೆ ಗಾಂಜಾ  ವಶಪಡಿಸಲಾಗಿದೆ.  ಅಬಕಾರಿ ಇನ್ಸ್‌ಪೆಕ್ಟರ್ ಕೆ.ಕೆ. ಶಿಜಿನ್ ಕುಮಾರ್ ಹಾಗೂ ತಂಡ ನಡೆಸಿದ ತಪಾಸಣೆಯಲ್ಲಿ ಟ್ರೋಲಿ ಬ್ಯಾಗ್‌ನಲ್ಲಿ ಸಾಗಿಸಿದ …

ಕಂಚಿಕಟ್ಟೆ-ಕೊಡ್ಯಮ್ಮೆ ಸೇತುವೆ ಪುನರ್‌ನಿರ್ಮಾಣ: ನಬಾರ್ಡ್ ತಂಡದಿಂದ ಸ್ಥಳ ಸಂದರ್ಶನ

ಕುಂಬಳೆ: ಜೀರ್ಣಗೊಂಡು ಹಾನಿಯಾದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಸಂಚಾರ ನಿಷೇಧಿಸಿದ ಕುಂಬಳೆ ಪಂಚಾಯತ್‌ನ ಕಂಚಿಕಟ್ಟೆ – ಕೊಡ್ಯಮ್ಮೆ ಸೇತುವೆ ಪುನರ್ ನಿರ್ಮಾಣಕ್ಕೆ ಸಂಬಂಧಿಸಿ ನಬಾರ್ಡ್‌ನ ಜಿಲ್ಲೆಯ ಹಿರಿಯ ಅಧಿಕಾರಿ ಶರಣ್, ನೀರಾವರಿ ಇಲಾಖೆಯ ಅಧಿಕಾರಿಗಳ ತಂಡ ಮೈನರ್ ಇರಿಗೇಶನ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಅರ್ಜುನನ್ ಇ.ಕೆ., ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಗೋಕುಲನ್ ಟಿ., ಅಸಿಸ್ಟೆಂಟ್ ಇಂಜಿನಿಯರ್ ರಾಘವನ್ ಕೆ. ಮೊದಲಾದವರು ಸ್ಥಳ ಸಂದರ್ಶಿಸಿದರು. ಈ ವೇಳೆ ಬ್ಲೋಕ್ ಪಂಚಾಯತ್ ಸದಸ್ಯ ಪೃಥ್ವಿರಾಜ್ ಶೆಟ್ಟಿ, ನಸೀಮ ಕುಂಬಳೆ, ಪಂಚಾಯತ್ ಉಪಾಧ್ಯಕ್ಷ …

ಅಸೌಖ್ಯ: ನಿಧನ

ಬೇಳ: ಮೂಲತಃ ಅಣಂಗೂರು ನಿವಾಸಿಯಾಗಿದ್ದು, ಪ್ರಸ್ತುತ ಬೇಳ ದರ್ಭೆತ್ತಡ್ಕದಲ್ಲಿ ವಾಸವಾಗಿದ್ದ ಮೋಹನ ಕೆ. (61) ನಿಧನ ಹೊಂದಿದರು. ಇವರು ಈ ಮೊದಲು  ಕಾಸರಗೋಡಿನಲ್ಲಿ ಆಟೋ ಚಾಲಕನಾಗಿದ್ದರು. ಬಳಿಕ ಲಾಟರಿ ಮಾರಾಟ ಕೆಲಸ ನಡೆಸಿಕೊಂಡಿದ್ದರು. ಕಳೆದ ಒಂದು ವಾರದಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ಸವಿತ, ಮಕ್ಕಳಾದ ಅಮಿತ್, ಸುಮಿತ್, ಅಂಜಿತ, ಸಹೋದರರಾದ ಸುಬ್ಬ ಕೆ, ನಾಗೇಶ, ಸತೀಶ್, ಸಹೋದರಿಯರಾದ ಲೀಲ, ಕಮಲಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕಾರಿನಲ್ಲಿ ಸಾಗಿಸುತ್ತಿದ್ದ ನಿಷೇಧಿತ ತಂಬಾಕು ಉತ್ಪನ್ನ ವಶ: ಓರ್ವ ಸೆರೆ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಕಣ್ಣೂರು ಮುನೀಶ್ವರ ಕೋವಿಲ್‌ನಿಂದ ಪೊಲೀಸರು ಪತ್ತೆಹಚ್ಚಿ ವಶಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿ ತೃಕರಿಪುರ ನೋರ್ತ್ ನಿವಾಸಿ ಪಿ.ಕೆ. ಮುಹಮ್ಮದ್ ಸಫೀರ್ (26) ಎಂಬಾತನನ್ನು ಸೆರೆಹಿಡಿದು ಪ್ರಕರಣ ದಾಖಲಿಸಲಾಗಿದೆ. ಈತ ಚಲಾಯಿಸುತ್ತಿದ್ದ ಕಾರಿನಿಂದ ೧೦ ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಹಲವಾರು ಲೋಡ್ ಮಣ್ಣು ಸಾಗಾಟ: ಚಂದ್ರಗಿರಿ ಕೋಟೆ ಸಂರಕ್ಷಿಸಲು ಎಂ.ಎಲ್. ಅಶ್ವಿನಿ ಆಗ್ರಹ

ಕಾಸರಗೋಡು: ಅನಧಿಕೃತವಾಗಿ ಮಣ್ಣು ಸಾಗಿಸಿದ ಹಿನ್ನೆಲೆಯಲ್ಲಿ ಅಪಾಯಕರ ಸ್ಥಿತಿಗೆ ತಲುಪಿದ ಜಿಲ್ಲೆಯ ಚೆಮ್ಮನಾಡು ಪಂಚಾಯತ್‌ನ ಕಳನಾಡುನಲ್ಲಿರುವ ಚಂದ್ರಗಿರಿ ಕೋಟೆಯನ್ನು ಸಂರಕ್ಷಿಸಲು ಜಿಲ್ಲಾ- ರಾಜ್ಯ ಆಡಳಿತ ಕೂಟಗಳು ಸಿದ್ಧವಾಗಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಬಾಬುರಾಜ್, ಜಿಲ್ಲಾ ಕಾರ್ಯದರ್ಶಿ  ಕೆ.ಟಿ. ಪುರುಷೋತ್ತಮನ್, ಜಿಲ್ಲಾ ಸಮಿತಿ ಸದಸ್ಯ ಶ್ರೀನಿವಾಸನ್, ಉದುಮ ಮಂಡಲ ಉಪಾಧ್ಯಕ್ಷ ಸದಾಶಿವನ್ ಮಣಿಯಂಗಾನ, ಕಾರ್ಯದರ್ಶಿ ಸೌಮ್ಯಾ ಪದ್ಮನಾಭನ್, ಕೋಶಾಧಿಕಾರಿ ರತೀಶ್ ವಿ.ಎ., ರಾಜೇಶ್ ಕೈಂದಾರ್, ಪ್ರಮೋದ್ ಕೀಳೂರು, ಹರೀಶ್ …

ಅಸೌಖ್ಯ: ಇಲೆಕ್ಟ್ರೀಷನ್ ನಿಧನ

ಮಧೂರು: ಅರಂತೋಡು ಬಾಬು ಪಾಟಾಳಿ ಯವರ ಪುತ್ರ ಜಯರಾಮ (49) ಮೆದುಳು ಸಂಬಂಧ ಅಸೌಖ್ಯದಿಂದ ನಿಧನ ಹೊಂದಿದರು. ಇಲೆಕ್ಟ್ರೀಶ್ಯನ್ ಆಗಿದ್ದರು. ಮೃತರು ತಂದೆ, ಪತ್ನಿ ಮಮತ, ಮಕ್ಕಳಾದ ಅಹ್‌ನ, ಅಶ್‌ನ, ಸಹೋದರ ರಾದ ಬಾಲಕೃಷ್ಣ, ಚಂದ್ರ, ಸಹೋದರಿ ಪುಷ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.