ಕುಂಬಳೆ: ಪೆರ್ಮುದೆಯಲ್ಲಿ ನಿನ್ನೆ ಸಂಜೆ ಆಟೋ ರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕ ಹಾಗೂ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಆಟೋ ಚಾಲಕ ಕಯ್ಯಾರು ದೊಡ್ಡಮೂಲೆಯ ಉದಯ ಕುಮಾರ್ (45), ಪ್ರಯಾಣಿಕರಾದ ಈಶ್ವರ, ಶೋಭಿಕ, ವಸಂತಿ ಎಂಬಿವರು ಗಾಯಗೊಂಡಿದ್ದಾರೆ. ಈ ಪೈಕಿ ಉದಯ ಕುಮಾರ್ರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇತರರು ಚಿಕಿತ್ಸೆ ಪಡೆದು ಮುರಳಿದ್ದಾರೆ. ನಿನ್ನೆ ಸಂಜೆ ಕಯ್ಯಾರಿನಿಂದ ಪೆರ್ಮುದೆಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಆಟೋ ರಿಕ್ಷಾ ಪೆರ್ಮುದೆ ಪೇಟೆಗೆ ತಲುಪುತ್ತಿದ್ದಂತೆ ಕಾರು ಢಿಕ್ಕಿ ಹೊಡೆದಿರುವುದಾಗಿ ದೂರಲಾಗಿದೆ.







