ಮಲಪ್ಪುರಂ: ಪಾಳು ಕೆರೆಯಲ್ಲಿ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಅರಿಕೋಡ್ ಕಾವನ್ನೂರ್ ಇರುವೇಟಿ ಚಾತನ್ಪಾರದಲ್ಲಿರುವ ಯಾರೂ ಕೂಡಾ ಉಪಯೋಗಿಸದೇ ಪಾಳುಬಿದ್ದಿದ್ದ ಕೆರೆಯಲ್ಲಿ 3, 4ನೇ ತರಗತಿ ವಿದ್ಯಾರ್ಥಿಗಳ ಮೃತದೇಹಗಳು ಪತ್ತೆಯಾಗಿವೆ. ಗುಡಲ್ಲೂರಿನ ಬಾವ ಎಂಬವರ ಮಕ್ಕಳಾದ ಅಫಿಯ, ಅಫ್ನನ್ ಎಂಬಿವರು ಮೃತಪಟ್ಟವರು.
ನಿನ್ನೆ ಸಂಜೆ ಶಾಲೆಯಿಂದ ಹಿಂತಿರುಗಿದ ಬಳಿಕ ಇವರು ಮನೆಯಿಂದ ತೆರಳಿದ್ದರು. ಶಾಲೆಯಿಂದ ಹಿಂತಿರುಗಿದ ಬಳಿಕ ಸಾಮಾನ್ಯವಾಗಿ ಇವರು ಆಟವಾಡಲು ಹೋಗುತ್ತಿದ್ದರು. ಆದರೆ ಸಮಯ ಕಳೆದರೂ ಹಿಂತಿರುಗದ ಹಿನ್ನೆಲೆಯಲ್ಲಿ ಮನೆಯವರು ಹಾಗೂ ಸ್ಥಳೀಯರು ನಡೆಸಿದ ಹುಡುಕಾಟದಲ್ಲಿ ಮಕ್ಕಳ ಮೃತದೇಹವನ್ನು ಕೆರೆಯಲ್ಲಿ ಪತ್ತೆಹಚ್ಚಲಾಗಿದೆ. ಬಳಿಕ ಮಂಜೇರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಯಿತು.






