ಕಾಂಗ್ರೆಸ್ ಮುಖಂಡ ಗಂಗಾಧರನ್ ನಾಯರ್ ಸಂಸ್ಮರಣೆ

ಪೈವಳಿಕೆ : ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಜಿಲ್ಲಾಧ್ಯಕ್ಷ ಪಿ. ಗಂಗಾಧರನ್ ನಾಯರ್‌ರ ಸಂಸ್ಮರಣಾ ಕಾರ್ಯಕ್ರಮ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಜರುಗಿತು. ಗಂಗಾಧರನ್ ನಾಯರ್‌ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಹಿರಿಯ ಕಾರ್ಯಕರ್ತರಾದ ಅಬ್ದುಲ್ಲ ಶಾ, ಅಸಿಸ್ ಕಟ್ಟೆ, ಎಡ್ವರ್ಡ್ ಡಿ ಸೋಜ ಭಾಗವಹಿಸಿದರು. ಅಬ್ದುಲ್ ರಸಾಕ್ ಸ್ವಾಗತಿಸಿ, ಗಂಗಾಧರ ನಾಯಕ್ ವಂದಿಸಿದರು.

RELATED NEWS

You cannot copy contents of this page