ಉಪ್ಪಳ: ಉಪ್ಪಳ ಬಳಿಯ ಶಾರದಾನಗರ ನಿವಾಸಿ ಜಗಜೀವನ್ರ ಪತ್ನಿ ಶಕುಂತಳ ಸಾಲಿಯಾನ್ (64) ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ಸಂಜೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರು ಮಂಜೇಶ್ವರ ದಲ್ಲಿ ಹಲವು ವರ್ಷಗಳ ಕಾಲ ಮೀನು ವ್ಯಾಪಾರಿಯಾಗಿದ್ದರು.
ಮೃತರು ಮಕ್ಕಳಾದ ಸತೀಶ, ಸೌಮ್ಯ, ಸುಷ್ಮ, ಸೊಸೆ ಪ್ರತಿಭಾ, ಅಳಿಯಂದಿ ರಾದ ಕಾರ್ತಿಕ್, ಪ್ರಶಾಂತ್, ಸಹೋದರರಾದ ಹರಿಶ್ಚಂದ್ರ, ಕೃಷ್ಣ ಸಾಲಿಯಾನ್, ಚಂದ್ರಹಾಸ, ಸದಾನಂದ, ರಾಜ್ ಕುಮಾರ್ ಸಾಲಿಯಾನ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಹೋದರ ರುಕ್ಕಯ್ಯ, ಸಹೋದರಿಯರಾದ ಸುಶೀಲ, ವಸಂತಿ ಈ ಹಿಂದೆ ನಿಧನ ಹೊಂದಿದ್ದಾರೆ.







