ಉಪ್ಪಳ: ಬಸ್ನಲ್ಲಿ ಅನಧಿಕೃತ ವಾಗಿ ಸಾಗಿಸುತ್ತಿದ್ದ ಚಿನ್ನ ವಶಪಡಿಸಿ ಓರ್ವನನ್ನು ಬಂಧಿಸಲಾಗಿದೆ. ಪಶ್ಚಿಮಬಂ ಗಾಲ ನಿವಾಸಿಯಾದ ಸುರಜಿತ್ ಖೋರಾಯಿ ಎಂಬಾತ ಬಂಧಿತ ವ್ಯಕ್ತಿ. ಈತನ ಕೈಯಿಂದ 595.68 ಗ್ರಾಂ ಚಿನ್ನ ವಶಪಡಿಸ ಲಾಗಿದೆ. ಮಂಜೇಶ್ವರ ಅಬಕಾರಿ ಚೆಕ್ಪೋಸ್ಟ್ನಲ್ಲಿ ಅಧಿಕಾರಿ ಗಳು ನಡೆಸಿದ ಕಾರ್ಯಾಚರಣೆ ವೇಳೆ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸುರಜಿತ್ನ ಕೈಯಲ್ಲಿ ಚಿನ್ನ ಪತ್ತೆಯಾಗಿತ್ತು. ಈಬಗ್ಗೆ ಮುಂದಿನ ತನಿಖೆಗಾಗಿ ಪ್ರಕರಣವನ್ನು ರಾಜ್ಯ ಸರಕು ಸೇವಾ ತೆರಿಗೆ ಇಲಾಖೆಯ ಎನ್ಫೋರ್ಸ್ಮೆಂಟ್ಗೆ ಹಸ್ತಾಂತರಿಸಲಾಗಿದೆ.
ಮಂಜೇಶ್ವರ ಅಬಕಾರಿ ಚೆಕ್ಪೋಸ್ಟ್ನ ಸರ್ಕಲ್ ಇನ್ಸ್ಪೆಕ್ಟರ್ ಪಿ.ಎ. ಜೋಸೆಫ್, ಎಕ್ಸೈಸ್ಇನ್ ಸ್ಪೆಕ್ಟರ್ ಪ್ರಮೋದ್ ಕುಮಾರ್, ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ಪಿ. ಸುರೇಶನ್, ಪ್ರಿವೆಂಟೀವ್ಆಫೀಸರ್ ಪ್ರಜಿತ್ ಕುಮಾರ್, ಸಿವಿಲ್ಎಕ್ಸೈಸ್ ಆಫೀಸರ್ಗಳಾದ ನಿಖಿಲ್, ಪವಿತ್ರನ್, ರಾಜೇಶ್ ಎಂಬಿವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.






