ಅಸೌಖ್ಯ: ಆರ್‌ಎಸ್‌ಎಸ್ ಕಾರ್ಯಕರ್ತ ನಿಧನ

ಉಪ್ಪಳ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಉಪ್ಪಳ ಹನುಮಾನ್‌ನಗರ ನಿವಾಸಿ, ಮೀನು ಕಾರ್ಮಿಕ ಚಂದ್ರಶೇಖರ ಆರ್.ಐಲ್ (63) ನಿಧನ ಹೊಂದಿದರು. ದಿ| ರಾಮ ಸಾಲ್ಯಾನ್-ದಿ| ಸರ್ವಾಣಿ ದಂಪತಿ ಪುತ್ರರಾಗಿದ್ದು, ಇವರು ಆರ್.ಎಸ್.ಎಸ್‌ನ ಹಿರಿಯ ಸ್ವಯಂ ಸೇವಕರಾಗಿದ್ದರು. ಉಪ್ಪಳ ಶ್ರೀ ಅಯ್ಯಪ್ಪ ಮಂದಿರ ಸೇವಾ ಸಮಿತಿಯ ಹಿರಿಯ ಸದಸ್ಯರು, ಅಲ್ಲದೆ ಅಯೋಧೆ್ಯ ಕರಸೇವಕರಾಗಿದ್ದರು. ಮೃತರು ಪತ್ನಿ ಪುಷ್ಪ, ಮಕ್ಕಳಾದ ನಿಶಿತ, ನಿಖಿತ, ಕಾವ್ಯ, ಅಳಿಯ ನಾಗಪ್ರಸಾದ್, ಸಹೋದರಿಯರಾದ ಜಾನಕಿ, ನಾಗಮ್ಮ, ವಾರಿಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರ ಸಹಿತ ಹಲವು ಮಂದಿ ಗಣ್ಯರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ನಿಧನಕ್ಕೆ ಉಪ್ಪಳ ಶ್ರೀ ಅಯ್ಯಪ್ಪ ಮಂದಿರದ ಸೇವಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಸಂತಾಪ ಸೂಚಿಸಿದ್ದಾರೆ.

RELATED NEWS

You cannot copy contents of this page