ಕಾಸರಗೋಡು: ಕಾಸರಗೋಡು ನಗರಸಭೆ, ಜಿಲ್ಲಾಡಳಿತ, ಜಿಲ್ಲಾ ಟೂರಿಸಂ ಪ್ರಮೋಷನ್ ಕೌನ್ಸಿಲ್ ಎಂಬಿವುಗಳ ಜಂಟಿ ಆಶ್ರಯದಲ್ಲಿ ನಾಳೆ ನೆಲ್ಲಿಕುಂಜೆ ಬೀಚ್ನಲ್ಲಿ ನಡೆಯಲಿರುವ ಕಾಸರಗೋಡು ಬೀಚ್ ರನ್ ಅಂಗವಾಗಿ ಬೀಚ್ನ್ನು ಶುಚೀಕರಿಸಲಾಯಿತು. ನಗರಸಭಾ ಉಪಾಧ್ಯಕ್ಷ ಕೆ.ಎಂ. ಹನೀಫ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಹಮೀದ್ ಬೆದಿರ, ಮೆಹರುನ್ನಿಸ ಹಮೀದ್, ಜಾಫರ್ ಕಮಾಲ್, ಕೌನ್ಸಿಲರ್ಗಳಾದ ತಶ್ರಿಫ್ ಬಷೀರ್, ಆಯಿಷಾ ಸಲಾಂ, ಅಬ್ದುಲ್ ರಹ್ಮಾನ್, ಉಮೇಶನ್, ಹರೀಶ್, ರಾಮಕೃಷ್ಣ ಹೊಳ್ಳ, ರೇಷ್ಮ, ಕಾರ್ಯದರ್ಶಿ ಶಾಜು, ನಗರಸಭಾ ಆರೋಗ್ಯ ವಿಭಾಗ ಅಧಿಕಾರಿಗಳಾದ ಮಧು, ಶೀನಾ, ವಿದ್ಯಾ, ವೈಶಾಖ್ ನೇತೃತ್ವ ನೀಡಿದರು. ನಗರಸಭಾ ನೌಕರರು, ಕಾರ್ಮಿಕರು, ಡಿಟಿಪಿಸಿ ಕಾರ್ಯಕರ್ತರು, ಸ್ಥಳೀಯರು ಭಾಗವಹಿಸಿದರು. ನಾಳೆ ಬೆಳಿಗ್ಗೆ ೬ ಗಂಟೆಗೆ ಬೀಚ್ ರನ್ ಆರಂಭಗೊಳ್ಳಲಿದೆ.






