ಪೈವಳಿಕೆ: ಚಿಪ್ಪಾರು ಶಾಲೆ ಬಳಿಯ ನಿವಾಸಿ ನಾರಾಯಣ ಸಿ. ಮೂಲ್ಯ (73) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕೂಲಿ ಕಾರ್ಮಿಕನಾಗಿದ್ದರು. ಇವರ ಪತ್ನಿ ಚಂದ್ರಾವತಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ರೋಹಿಣಿ, ಮಮತಾ, ಜಯಶ್ರೀ, ಅಳಿಯಂದಿರಾದ ಸೀತಾರಾಮ, ಶೇಖರ, ಜಗದೀಶ, ಸಹೋದರ ಚಂದಪ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಕೃಷ್ಣ, ಸಹೋದರಿ ಕಮಲ ಈ ಹಿಂದೆ ನಿಧನರಾಗಿದ್ದಾರೆ.
ಬ್ಲೋಕ್ ಪಂಚಾಯತ್ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, ಬಿಜೆಪಿ ಮುಖಂಡ ಶಂಕರ್ ಭಟ್ ಮಳಿವು, ಪಂಚಾಯತ್ ಸದಸ್ಯೆ ಯಶೋಧಾ ಚಿಪ್ಪಾರು, ಮಾಜಿ ಸದಸ್ಯ ನಾರಾಯಣ ಶೆಟ್ಟಿ ಪೈವಳಿಕೆ, ಫಾರೂಕ್ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.






