ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪಾರೆಕಟ್ಟೆ ಹಿಂದೂ ರುದ್ರಭೂಮಿಗೆ ಸಿಲಿಕಾನ್ ಛೇಂಬರ್

ಮಧೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳದ ಮುಖಾಂತರ ಮಧೂರು ಗ್ರಾಮ ಪಂಚಾಯತ್ ನ ಪಾರೆಕಟ್ಟೆ ಹಿಂದೂ ರುದ್ರಭೂಮಿಗೆ ಸಿಲಿಕಾನ್ ಛೇಂಬರ್ ಒದಗಿಸುವುದರ ಬಗ್ಗೆ ಮಂಜೂರಾತಿ ಪತ್ರವನ್ನು ನೀಡಲಾಯಿತು.  ಕಾರ್ಯಕ್ರಮದಲ್ಲಿ ಪಂಚಾಯತ್  ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿದರು.  ತಾಲೂಕು ಯೋಜನಾಧಿಕಾರಿ  ದಿನೇಶ್, ಕಾಸರಗೋಡು ವಲಯ ಮೇಲ್ವಿಚಾರಕ ಗೋಪಾಲಕೃಷ್ಣ,  ಕಾಸರಗೋಡು ವಲಯ ಜನಜಾಗೃತಿ ಅಧ್ಯಕ್ಷ  ಕಿರಣ್ ಪ್ರಸಾದ್ ಕೂಡ್ಲು, ಕೇಂದ್ರ ಒಕ್ಕೂಟದ ಅಧ್ಯಕ್ಷ  ಜ್ಞಾನೇಶ್ ಆಚಾರ್ಯ, ಸೇವಾ ಪ್ರತಿನಿಧಿ ಜ್ಯೋತಿ, ಜನಜಾಗೃತಿ ಸದಸ್ಯ ರವೀಂದ್ರ ರೈ, ಪಂಚಾತ್‌ನ ಉಪಾಧ್ಯಕ್ಷರು, ಸ್ಥಾಯೀ ಸಮಿತಿ ಅಧ್ಯಕ್ಷರು, ವಾರ್ಡ್‌ಗಳ ಜನಪ್ರತಿನಿ ಧಿಗಳು, ಪಂ. ಕಾರ್ಯದರ್ಶಿ ಮತ್ತು ಅಸಿಸ್ಟೆಂಟ್ ಸೆಕ್ರೆಟರಿ ಉಪಸ್ಥಿತರಿದ್ದರು.

ತಾಲೂಕು ಯೋಜನಾಧಿಕಾರಿ ದಿನೇಶ್, ಪಂ. ಅಧ್ಯಕ್ಷೆ ಸುಜ್ಞಾನಿ ಶ್ಯಾನು ಭೋಗ್ ಅವರಿಗೆ  ಮಂಜೂರಾತಿ ಪತ್ರವನ್ನು ಹಸ್ತಾಂತರಿಸಿದರು. ಸೇವಾ ಪ್ರತಿನಿಧಿ ಜ್ಯೋತಿ ಸ್ವಾಗತಿಸಿ, ಸ್ಥಾಯೀ ಸಮಿತಿಯ ಪುಷ್ಪಾ ಗೋಪಾಲನ್ ವಂದಿಸಿದರು.

You cannot copy contents of this page