ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಮಾವುಂಗಾಲ್, ಕಲ್ಯಾಣ್ ರಸ್ತೆ ಕ್ರೈಸ್ಟ್ ಶಾಲೆಯ ಸಮೀಪ ಸಂಭವಿಸಿದ ಅಪಘಾತದಲ್ಲಿ ಯುವತಿ ಮೃತಪಟ್ಟರು. ಮಾವುಂಗಾಲ್ ನೆಲ್ಲಿಕ್ಕಾಟ್ ಪೈರಡ್ಕದ ವೇಣುಗೋಪಾಲರ ಪತ್ನಿ ಕೆ. ರಜನಿ (38) ಮೃತಪಟ್ಟವರು. ಇವರ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಪುತ್ರ ಅದ್ವೈತ್ (11) ಗಂಭೀರ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾನೆ. ನಿನ್ನೆ ಸಂಜೆ 6.3೦ರ ವೇಳೆ ಇನ್ನೋವ ಕಾರು ಸ್ಕೂಟರ್ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬಳಿಕ ನಿಲ್ಲಿಸದೆ ಪರಾರಿಯಾದ ಕಾರನ್ನು ರಾತ್ರಿ 8 ಗಂಟೆ ವೇಳೆ ಹೊಸದುರ್ಗ ಪೊಲೀಸರು ಪತ್ತೆಹಚ್ಚಿದ್ದಾರೆ.







