ಬದಿಯಡ್ಕದ ಮೋಟಾರು ವಿವಾದದ ಹಿಂದೆ ರಾಜಕೀಯದಾಟ- ಪಂ. ಅಧ್ಯಕ್ಷೆ ಶಾಂತ

ಬದಿಯಡ್ಕ: ಪೆರಡಾಲ ಕಾಲನಿಯ ಶುದ್ಧ ಜಲ ವಿತರಣೆಗಾಗಿದ್ದ ಮೋಟಾರು ಪಂಪ್ ಕಳವು ನಡೆಸಲಾಗಿದೆ ಎಂಬ ಪ್ರಚಾರ ರಾಜಕೀಯ ಲಾಭಕ್ಕಾಗಿ ಕೆಲವರು ನಡೆಸುವ ಯತ್ನವಾಗಿದೆ ಎಂದು ಪಂಚಾಯತ್ ಅಧ್ಯಕ್ಷೆ ಶಾಂತಾ ಬಿ. ತಿಳಿಸಿದ್ದಾರೆ. ಈ ಆರೋಪ ಅಸತ್ಯವೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೆರಡಾಲ ಕಾಲನಿಯ ಮೋಟಾರು ಒಂದು ವರ್ಷದ ಹಿಂದೆ ಹಾನಿಯಾಗಿತ್ತು. ಆ ಬಗ್ಗೆ ಆ ಪಂಪ್ ಆಪರೇಟರ್ ತಿಳಿಸಿದಾಗ ಮೆಕ್ಯಾನಿಕ್‌ನನ್ನು ಕರೆಸಿ ದುರಸ್ತಿ ನಡೆಸಲಾಗಿತ್ತು. ಅದಕ್ಕೆ ೧೮೦೦೦ ರೂಪಾಯಿ ಬಿಲ್  ಮೆಕ್ಯಾನಿಕ್ ನೀಡಿದ್ದು, ಅಷ್ಟು ಮೊತ್ತ ನೀಡಲು ಸಾಧ್ಯವಿಲ್ಲವೆಂದು ಪಂ. ಕಾರ್ಯದರ್ಶಿ ತಿಳಿಸಿದ್ದರು. ಸುಮಾರು ಒಂದು ವರ್ಷದಿಂದ ಆ ಹಣಕ್ಕಾಗಿ ಮೆಕ್ಯಾನಿಕ್ ಪಂಚಾಯತ್‌ಗೆ ತಲುಪುತ್ತಿದ್ದು, ಬಳಿಕ ಪಂಪ್ ತೆಗೆದುಕೊಂಡು ಹೋಗಿರುವುದಾಗಿಯೂ ಆ ಬಗ್ಗೆ ಪಂಚಾಯತ್ ಅಧ್ಯಕ್ಷೆ, ಕಾರ್ಯದರ್ಶಿ, ಸದಸ್ಯರು ಸೇರಿ ಬದಿಯಡ್ಕ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಂ. ಅಧ್ಯಕ್ಷೆ, ಕಾರ್ಯದರ್ಶಿ, ಸದಸ್ಯ ಹಾಗೂ ಮೆಕ್ಯಾನಿಕನ್ನು ಠಾಣೆಗೆ ಕರೆಸಿ ಸಮಸ್ಯೆ ಪರಿಹರಿಸಿದ್ದು, ಬಳಿಕ ಮೆಕ್ಯಾನಿಕ್ ಪಂಪ್ ಇದ್ದರೂ ಸ್ಥಾಪಿಸಿದ್ದರು. ಇದು ಬದಿಯಡ್ಕ ಪಂ.ನಲ್ಲಿ ಮೋಟಾರು ಪಂಪ್‌ನ ಬಗೆಗಿನ ಸತ್ಯ ವಿಷಯ ವೆಂದು ಪಂ. ಅಧ್ಯಕ್ಷೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page