ಕೇಂದ್ರ ಸಚಿವ ರಾಜ್‌ನಾಥ್ ಸಿಂಗ್ ನಾಳೆ ಕಾಸರಗೋಡಿಗೆ

ಕಾಸರಗೋಡು: ಕಾಸರಗೋಡಿನ ಲೋಕಸಭಾ ಕ್ಷೇತ್ರದಲ್ಲಿ  ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುವ ಎಂ.ಎಲ್. ಅಶ್ವಿನಿಯವರ ಪ್ರಚಾರಕ್ಕಾಗಿ ಕೇಂದ್ರ ರಕ್ಷಣಾ ಖಾತೆ ಸಚಿವ ರಾಜ್‌ನಾಥ್ ಸಿಂಗ್ ನಾಳೆ ಕಾಸರಗೋಡಿಗೆ ಆಗಮಿಸುವರು.

ನಾಳೆ ಬೆಳಿಗ್ಗೆ 10 ಗಂಟೆಗೆ ಕಾಸರಗೋಡು ತಾಳಿಪಡ್ಪು ಮೈದಾನದಲ್ಲಿ ನಡೆಯುವ ಎನ್‌ಡಿಎ ಚುನಾವಣಾ ಪ್ರಚಾರ ಸಭೆಯಲ್ಲಿ  ರಾಜ್‌ನಾಥ್ ಸಿಂಗ್ ಭಾಗವಹಿಸಿ ಮಾತನಾಡುವರು. ಎನ್‌ಡಿಎಯ ಹಲವು ರಾಜ್ಯ ಮತ್ತು ಜಿಲ್ಲಾ ನೇತಾರರು ಇದರಲ್ಲಿ ಭಾಗವಹಿಸುವರು.

ಕೇಂದ್ರ ಸಚಿವರು ಭಾಗವಹಿಸುವ ಚುನಾವಣಾ ಪ್ರಚಾರವೇದಿಕೆ ನಿರ್ಮಾಣಕ್ಕೆ ನಿನ್ನೆಯೇ ಚಾಲನೆ ನೀಡಲಾಗಿದೆ.  ಸಚಿವರಿಗೆ ಬಿಗಿ ಭದ್ರತೆ ಒದಗಿಸಲು ಎನ್‌ಎಸ್‌ಜಿ ಪಡೆ ಈಗಾಗಲೇ ಕಾಸರೋಡಿಗೆ ಆಗಮಿಸಿ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ.

ರಾಜ್‌ನಾಥ್ ಸಿಂಗ್‌ರವರು ಕೇಂದ್ರ ರಕ್ಷಣಾ ಖಾತೆ ಸಚಿವರಾಗಿರುವ ಹಿನ್ನೆಲೆಯಲ್ಲಿ ನಾಳೆ ನಡೆಯುವ ಅವರ ಕಾರ್ಯಕ್ರಮಕ್ಕೆ ಪೊಲೀಸರು ಬಿಗಿ ಭದ್ರತೆ ಏರ್ಪಡಿಸುವ ಸಿದ್ಧತೆಯಲ್ಲಿ ಈಗಾಗಲೇ ತೊಡಗಿದ್ದಾರೆ. ಇದಕ್ಕಾಗಿ ಹೆಚ್ಚುವರಿಯಾಗಿ  ಕಣ್ಣೂರು, ವಯನಾಡು ಸೇರಿದಂತೆ ಸಮೀಪದ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕಾಸರಗೋಡಿಗೆ ಕರೆತರಲಾಗಿದೆ. ಕೇಂದ್ರ ಸಚಿವರು ಭಾಗವಹಿಸುವ ಕಾರ್ಯಕ್ರಮದ ವೇದಿಕೆ ಮತ್ತು ಪರಿಸರ ಪ್ರದೇಶಗಳಲ್ಲಿ ಪೊಲೀಸರು ಇಂದಿನಿಂದಲೇ ತೀವ್ರ ನಿಗಾ ಇರಿಸಿ ಕೊಳ್ಳತೊಡಗಿದ್ದಾರೆ. ವೇದಿಕೆಯನ್ನು ಪದೇ ಪದೇ ಬಿಗಿ ತಪಾಸಣೆಗೊ ಳಪಡಿಸಲಾಗುತ್ತಿದೆ. ಬಿಜೆಪಿಯ ಐವರು ಸ್ಟಾರ್ ಪ್ರಚಾರಕರಲ್ಲೋರ್ವರಾಗಿದ್ದಾರೆ ರಾಜ್‌ನಾಥ್ ಸಿಂಗ್.

Leave a Reply

Your email address will not be published. Required fields are marked *

You cannot copy content of this page