ವಯನಾಡು ನಿವಾಸಿಗೆ ಬಂದ್ಯೋಡು ಅಡ್ಕದಲ್ಲಿ ಹಲ್ಲೆ

ಬಂದ್ಯೋಡು: ವಯನಾಡು ನಿವಾಸಿಯಾದ ರಮೇಶನ್ ಎಂಬವರು ತಿರುವನಂತಪುರ ನಿವಾಸಿಯಾದ ಮನು ಎಂಬಾತ ನಿನ್ನೆ ರಾತ್ರಿ ಬಂದ್ಯೋಡು ಅಡ್ಕದಲ್ಲಿ ಹಲ್ಲೆಗೈದ ಘಟನೆ ನಡೆದಿದೆ.

ರಾತ್ರಿ ೯ ಗಂಟೆಗೆ ನೀನು ಯಾಕೆ ಇಲ್ಲಿ ನಿಂತಿದ್ದಿ ಎಂದು ಪ್ರಶ್ನಿಸಿ ಹಲ್ಲೆಗೈದಿರುವುದಾಗಿ ರಮೇಶನ್ ಕುಂಬಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ತಿರುವನಂತಪುರ ನಿವಾಸಿ ಮನು ಯಾಕಾಗಿ ಆ ಹೊತ್ತಿನಲ್ಲಿ ಅಲ್ಲಿಗೆ ಬಂದನೆಂದು ಆತನನ್ನು ಪ್ರಶ್ನಿಸಬೇಕೆಂದು ರಮೇಶನ್ ಪೊಲೀಸರಲ್ಲಿ ಆಗ್ರಹಪಟ್ಟಿದ್ದಾನೆ. ಪೊಲೀಸರು ದೂರು ಸ್ವೀಕರಿಸಿ ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಅಡ್ಕ ಕೇಂದ್ರೀಕರಿಸಿ ಎಂಡಿಎಂಎ, ಗಾಂಜಾ ಮಾರಾಟ ವ್ಯಾಪಕ ಗೊಂಡಿದೆಯೆಂದು ನಾಗರಿಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page