ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ, ಗಾಂಜಾ ಸಹಿತ ಇಬ್ಬರ ಸೆರೆ

ಬದಿಯಡ್ಕ: ಕಾರಿನಲ್ಲಿ ಮಾದಕವಸ್ತುಗಳಾದ ಗಾಂಜಾ ಹಾಗೂ ಎಂಡಿಎಂಎ ಸಹಿತ ಪ್ರಯಾಣಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.  ಬದಿಯಡ್ಕ ಚೆನ್ನಾರಕಟ್ಟೆ ನಿವಾಸಿ ರಂಜಿತ್ ರೈ (36), ಸುಳ್ಯ ಆಲೆಟ್ಟಿ ಸಂಗಂ ನಿಲಯದ  ಪೂಜಿತ್ ಸಾಗರ್ ಎಸ್.ವಿ (29) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ನಿನ್ನೆ ಸಂಜೆ 6.30ಕ್ಕೆ  ಬದಿಯಡ್ಕ-ಮುಳ್ಳೇರಿಯ ರಸ್ತೆಯಲ್ಲಿ ಕನ್ಯಾನ ಕನ್ವೆನ್ಶನ್ ಹಾಲ್‌ನ ಮುಂಭಾಗದ ರಸ್ತೆಯಲ್ಲಿ ಬದಿಯಡ್ಕ ಇನ್‌ಸ್ಪೆಕ್ಟರ್ ಅನೂಪ್ ಕೃಷ್ಣ ಆರ್.ಪಿ ನೇತೃತ್ವದಲ್ಲಿ ಕಾರು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ 0.36 ಗ್ರಾಂ ಎಂಡಿಎಂಎ  ಹಾಗೂ 95.89 ಗ್ರಾಂ …

ಇಲಿ ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಎ.ಸಿ ಮೆಕ್ಯಾನಿಕ್ ಮೃತ್ಯು

ಬದಿಯಡ್ಕ: ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು.  ಕುಂಬ್ಡಾಜೆ ಉಬ್ರಂಗಳ ಪಡುಮೂಲೆ ನಿವಾಸಿ ಬಾಲಕೃಷ್ಣ ಪೂಜಾರಿ ಎಂಬವರ ಪುತ್ರ  ಅಕ್ಷಿತ್ (21) ಮೃತಪಟ್ಟ ಯುವಕನಾಗಿದ್ದಾರೆ. ಇವರು ಎ.ಸಿ ಮೆಕ್ಯಾನಿಕ್ ಆಗಿದ್ದರ. ಈ ತಿಂಗಳ 6ರಂದು ಮನೆಯಲ್ಲಿ  ಇಲಿವಿಷ ಸೇವಿಸಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಅಕ್ಷಿತ್ ಪತ್ತೆಯಾಗಿದ್ದರ.  ಇದರಿಂದ ಕೂಡಲೇ ಇವರನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ತಲುಪಿಸಲಾಗಿತ್ತು. ಆದರೆ  ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಿದರೂ ಫಲಕಾರಿ ಯಾಗದೆ ನಿನ್ನೆ ಮಧ್ಯಾಹ್ನ ಇವರು …

ಗಾಯಗೊಂಡು ಆಸ್ಪತ್ರೆಗೆ ತಲುಪಿದ ಬೈಕ್ ಕಳವು ಪ್ರಕರಣದ ಆರೋಪಿ ಸೆರೆ: ಪೊಲೀಸ್ ಕಾವಲಿನಲ್ಲಿ ಚಿಕಿತ್ಸೆ

ಕುಂಬಳೆ: ಹೋಟೆಲ್‌ನ ಮುಂಭಾಗದಿಂದ ಬೈಕ್ ಕಳವು ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಬ್ರಾಣದ ರವಿ ಯಾನೆ ಡಬ್ಬಿ ರವಿ ಎಂಬಾತ ಬಂಧಿತ ಆರೋಪಿ. ಕುಂಬಳೆ ಕಂಚಿಕಟ್ಟೆಯ ಅಜಿತ್ ಕುಮಾರ್‌ರ ಪಲ್ಸರ್ ಬೈಕ್ ಕಳವುಗೈದ ಪ್ರಕರಣದಲ್ಲಿ ಡಬ್ಬಿ ರವಿಯನ್ನು ಬಂಧಿಸಲಾಗಿದೆ. ಕಳೆದ ಮಾರ್ಚ್ 28ರಂದು ಅಜಿತ್ ಕುಮಾರ್ ಕುಂಬಳೆ ಪೇಟೆಯ ಬಸ್ ನಿಲ್ದಾಣ  ಹಿಂಭಾಗದಲ್ಲಿರುವ ಹೋಟೆಲ್‌ವೊಂದರ ಬಳಿ ನಿಲ್ಲಿಸಿ ಆಹಾರ ಸೇವಿಸಲು ತೆರಳಿದ್ದರು. ಬಳಿಕ ಮರಳಿ ಬರುವಷ್ಟರಲ್ಲಿ ಬೈಕ್ ನಾಪತ್ತೆಯಾಗಿತ್ತು. ಈ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಕೇಸು …

ಕಳತ್ತೂರು: ಮಹಿಳೆ ಸಾವಿಗೆ ಕಾರಣ ಹೃದಯಾಘಾತ

ಕುಂಬಳೆ: ಕಳತ್ತೂರಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಗೃಹಿಣಿ ಮೃತಪಟ್ಟಿರುವುದು ಹೃದಯಾಘಾತದಿಂದಾಗಿದೆಯೆಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ಕಳತ್ತೂರು ಅಮೆರಿಕ ರಸ್ತೆಯ  ಅಬೂಬಕ್ಕರ್ ಎಂಬವರ ಪತ್ನಿ ಆಮಿನ (70) ಮೊನ್ನೆ ಬೆಳಿಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮನೆಯಿಂದ ದುರ್ನಾತ ಬೀರುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.   ಪೊಲೀಸರು ತಲುಪಿ ಪರಿಶೀಲಿಸಿದಾಗ  ಮನೆಯೊಳಗೆ ಮಂಚದಲ್ಲಿ ಮಲಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿತ್ತು. ಮನೆಯ ಮುಂಭಾಗ ಹಾಗೂ ಹಿಂಭಾಗದ ಬಾಗಿಲುಗಳು ತೆರೆದಿಟ್ಟ ಸ್ಥಿತಿಯಲ್ಲಿದ್ದುದು ಸಂಶಯಕ್ಕೆ ಕಾರಣವಾಗಿತ್ತು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ  …

ಸಮುದ್ರದಲ್ಲಿ ನಾಪತ್ತೆಯಾದ ಯುವಕನ ಮೃತದೇಹ ಪತ್ತೆ

ಮಂಜೇಶ್ವರ: ಕುಂಡುಕೊಳಕೆ ಸಮುದ್ರದಲ್ಲಿ ನಾಪತ್ತೆಯಾದ ಯುವಕನ ಮೃತದೇಹ ನಿನ್ನೆ ಸಂಜೆ ಪತ್ತೆಯಾಗಿದೆ. ಮಂಜೇಶ್ವರ ಚೌಕಿ ನಿವಾಸಿ ಉಮರುಲ್ ಫಾರೂಕ್ ಎಂಬವರ ಪುತ್ರ ಮೊಹಮ್ಮದ್ ಸೈನುಲ್ ಆಬಿದ್ (18)ನ ಮೃತದೇಹವನ್ನು ಮೀನು ಕಾರ್ಮಿಕರು ಪತ್ತೆಹಚ್ಚಿ ದಡಕ್ಕೆ ತಲುಪಿಸಿದ್ದಾರೆ. ಮೊನ್ನೆ ಸಂಜೆ ಕುಂಡು ಕೊಳಕೆ ಬೀಚ್‌ಗೆ ಸಂಬಂಧಿಕರೊಂದಿಗೆ ಬಂದಿದ್ದ ಮೊಹ್ಮದ್ ಸೈನುಲ್ ಆಬಿದ್ ಸಮುದ್ರ ಕಿನಾರೆಯಲ್ಲಿ ನಿಂತಿದ್ದ ವೇಳೆ ಬಲವಾದ ಅಲೆಯಲ್ಲಿ ಸಿಲುಕಿ ನಾಪತ್ತೆ ಯಾಗಿದ್ದನು. ಮಂಜೇಶ್ವರ ಪೊಲೀಸ್, ಅಗ್ನಿಶಾಮಕದಳ ಹಾಗೂ ಕರಾವಳಿ ಪೊಲೀಸರು ತಕ್ಷಣ ಶೋಧ ನಡೆಸಿ ದರೂ  …

ಹೃದಯಾಘಾತ: ಮಹಿಳೆ ನಿಧನ

ಉಪ್ಪಳ: ಹಲ್ಲಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ ಮಹಿಳೆಗೆ ಹೃದಯಾಘಾತ ಉಂಟಾಗಿ ನಿಧನ ಹೊಂದಿದ ಘಟನೆ ನಡೆದಿದೆ. ಉಪ್ಪಳ ಸಮೀಪದ ಕೋಡಿಬೈಲು ನಿಡುಮದಿ ನಿವಾಸಿ ದಿ| ಬೋಜರ ಪತ್ನಿ ಸಾವಿತ್ರಿ (55) ನಿಧನ ಹೊಂದಿದವರು. ನಿನ್ನೆ ಸಂಜೆ ಇವರು ಉಪ್ಪಳದ ಖಾಸಗಿ ಆಸ್ಪತ್ರೆಗೆ ಹಲ್ಲಿನ ಚಿಕಿತ್ಸೆಗೆಂದು ತೆರಳಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಉಂಟಾಗಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಿ ನಿಧನ ಹೊಂದಿದ್ದಾರೆ. ಮೃತರು ತಾಯಿ ಸುಶೀಲ, ಮಕ್ಕಳಾದ ರೂಪೇಶ್, ರೂಪಿಕ, ಅಳಿಯ ರಂಜಿತ್, ಸಹೋದರಿಯರಾದ ಚಂದ್ರಾ …

ಆಟವಾಡುತ್ತಿದ್ದ ಬಾಲಕನಿಗೆ ಸೂರ್ಯಾಘಾತ: ರಾಜ್ಯದ 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್: ಎರಡು ದಿನ ಕಟ್ಟೆಚ್ಚರ

ಕಾಸರಗೋಡು: ಮೈದಾನದಲ್ಲಿ ಫುಟ್ಬಾಲ್ ಆಡುತ್ತಿದ್ದ ಬಾಲಕ ಸೂರ್ಯಾಘಾತಕ್ಕೊಳಗಾಗಿ ಸುಟ್ಟು ಗಾಯಗೊಂಡ ಘಟನೆ ನಡೆದಿದೆ. ಹೊಸದುರ್ಗ ಇಟ್ಟುಮ್ಮಲ್‌ನ ರಹ್ಮಾನ್ ಪಾತ್ತೂರು-ಜುವೈರಿಯಾ ದಂಪತಿ ಪುತ್ರ ಮೊಹಮ್ಮದ್  ಜುಬೈರ್ (13) ಸೂರ್ಯಾಘಾತ ಕ್ಕೊಳಗಾದ ಬಾಲಕ. ಈತ ಸ್ನೇಹಿತ ರೊಂದಿಗೆ  ಸುಡು ಬಿಸಿಲಲ್ಲಿ ಫುಟ್ಬಾಲ್‌ಆಟವಾಡುತ್ತಿದ್ದ ವೇಳೆ ತಾಪಾಘಾತಕ್ಕೊಳಗಾಗಿದ್ದು ಆತನನ್ನು ಅಜಾನೂರು ಕುಟುಂಬ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ತಾಪಮಾನ ಮಟ್ಟ ಗರಿಷ್ಠ ಮಟ್ಟಕ್ಕೇರಿದ್ದು, ಇದರಿಂದ ಕಾಸರಗೋಡು ಸೇರಿದಂತೆ ರಾಜ್ಯದ 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ತಾಪಮಾನ …

ಒಂದೇ ಊರಿನ ಇಬ್ಬರು ವ್ಯಾಪಾರಿಗಳು ಒಂದೇ ದಿನ ನಿಧನ

ಮೊಗ್ರಾಲ್: ಒಂದೇ ಊರಿನಲ್ಲಿ ಜನಿಸಿ  ಇಬ್ಬರು ದೀರ್ಘ ಕಾಲ ಗೋವಾದಲ್ಲಿ ಹೋಟೆಲ್ ಗಳನ್ನು ನಡೆಸಿ ಅಲ್ಲಿಂದ ಸಮಾನ ಸಮಯದಲ್ಲಿ ಊರಿಗೆ ಹಿಂತಿರುಗಿ ವಿಶ್ರಾಂತಿ ಜೀವನ ನಡೆಸುತ್ತಿದ್ದ ಮಧ್ಯೆ ಒಂದೇ ದಿನ ನಿಧನ ಹೊಂದಿದ ಘಟನೆ ಸಂಭವಿಸಿದೆ. ಈ ನಿಧನ ಸ್ಥಳೀಯರಲ್ಲಿ ದುಃಖ ಹಾಗೂ ಮರಣದ ಆಕಸ್ಮಿಕತೆ  ವಿಸ್ಮಯ ಮೂಡಿಸಿದೆ. ಮೊಗ್ರಾಲ್ ನಾಂಗಿ ಹೌಸ್‌ನ ಮುಹಮ್ಮದ್ ಗೋವಾ (80) ನಿನ್ನೆ ನಿಧನ ಹೊಂದಿದ್ದರು. ಮಧ್ಯಾಹ್ನದ ವೇಳೆ ನಾಂಗಿ ರಸ್ತೆಯ ನಾಂಗಿ ಹೌಸ್‌ನ ಎನ್.ಎಂ. ಇಸ್ಮಾಯಿಲ್ (82) ಕೂಡಾ ನಿಧನ …

ಮಧೂರು ಕ್ಷೇತ್ರ ಜಾತ್ರೆ :ಸುಡುಮದ್ದು ಪ್ರದರ್ಶನ ಇಂದು

ಮಧೂರು: ಇಲ್ಲಿನ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾಮ ಹೋತ್ಸವದಂಗವಾಗಿ ಇಂದು ಬೆಳಿಗ್ಗೆ ಉತ್ಸವಬಲಿ, ದೀಪೋತ್ಸವ, ದರ್ಶನಬಲಿ ನಡೆಯಿತು. ಮಧ್ಯಾಹ್ನ 12ಕ್ಕೆ ತುಲಾ ಭಾರಸೇವೆ, 12.30  ಮಹಾಪೂಜೆ, ಸಂಜೆ 5ಕ್ಕೆ ತಾಯಂಬಕ, ದೀಪಾರಾ ಧನೆ, ರಾತ್ರಿ 7ಕ್ಕೆ ಉತ್ಸವಬಲಿ, ಉಳಿಯ ತ್ತಡ್ಕ ದಲ್ಲಿರುವ ಮೂಲಸ್ಥಾನಕ್ಕೆ ದೇವರ ಶೋಭಾಯಾತ್ರೆ ತೆರಳಲಿದೆ. ಈ ವೇಳೆ ಕಾಸರಗೋಡು ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯವರಿಂದ ತಾಲೀಮು ಪ್ರದರ್ಶನವಿರುವುದು. 8.3೦ಕ್ಕೆ ಉಳಿಯತ್ತಡ್ಕ ಮೂಲಸ್ಥಾನ ದಲ್ಲಿ ಕಟ್ಟೆಪೂಜೆ, 10ಕ್ಕೆ ಬೆಡಿಕಟ್ಟೆಯಲ್ಲಿ ಪೂಜೆ, ಅನಂತರ ಸುಡುಮದ್ದು …

ಜೋಡುಕಲ್ಲು ರಸ್ತೆ ಬದಿ ಒಣಗಿದ ಮರದಿಂದ ಅಪಾಯ ಭೀತಿ: ತೆರವಿಗೆ ಆಗ್ರಹ

ಉಪ್ಪಳ: ಕೈಕಂಬ-ಬಾಯಾರು ರಸ್ತೆಯ ಜೋಡುಕಲ್ಲು ಎಂಬಲ್ಲಿ ಒಣಗಿದ ಮರಗಳು ಯಾವುದೇ ಕ್ಷಣ ಧರಾಶಾಯಿಯಾಗುವ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ. ಈ ರಸ್ತೆ ಅಭಿವೃದ್ದಿಗೊಳಿಸುವ ವೇಳೆ ಗುತ್ತಿಗೆದಾರ ಅಪಾಯದ ಸ್ಥಿತಿಯ ಲ್ಲಿರುವ ಮರಗಳನ್ನು ತೆರೆವುಗೊಳಿಸಿ ದ್ದರು. ಅದರೆ ಒಣಗಿದ ಈ ಮರವನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಅಪಾಯ ಸಾz್ಯÀsತೆಯಿದೆ. ಈ ಪರಿಸರ ದಲ್ಲಿ ಪ್ರಮುಖ ವಿದ್ಯುತ್ ತಂತಿಹೊA ದಿರುವ ಕಂಬಗಳಿದ್ದು, ಮರ ಮುರಿದು ತಂತಿ ಮೇಲೆ ಬಿದ್ದಲ್ಲಿ ಹಲವಾರು ಕಂಬಗಳು ರಸ್ತೆಗೆ ಮುರಿದು ಬೀಳಬಹುದಾಗಿದೆ. ದಿನನಿತ್ಯ ನೂರಾ ರು ವಾಹನಗಳು ಸಂಚರಿಸುತ್ತಿದೆ. …