ವರದಕ್ಷಿಣೆ ಕಿರುಕುಳ ಆರೋಪ: ರಾಸಾಯನಿಕ ಸೇವಿಸಿ ಯುವತಿ ಸಾವು: ಪತಿ ಸೆರೆ

ಕಾಸರಗೋಡು:  ಪತಿ ಮನೆಯಲ್ಲಿ ಯುವತಿ ರಾಸಾಯನಿಕ ದ್ರವ್ಯ ಸೇವಿಸಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಪತಿಯನ್ನು ವಿದ್ಯಾನಗರ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಪಿ. ವಿನೀಶ್ ಕುಮಾರ್ ನತೃತ್ವದ ಪೊಲೀಸರು ಬಂಧಿಸಿದ್ದಾರೆ. ಬದಿಯಡ್ಕ ಚರ್ಲಡ್ಕದ ಅಬ್ಬಾಸ್-ಸಫಿಯ ದಂಪತಿ ಪುತ್ರಿ ಹಾಗೂ  ಚೆಂಗಳ ಪಾಣಲಂನ ಮೊಹಮ್ಮದ್ ಆದಿಲ್‌ನ ಪತ್ನಿ ಎಂ.ಕೆ. ಫಾತಿಮ್ಮತ್ ಸುಬೈದ (24) ರಾಸಾಯನಿಕ ದ್ರವ್ಯ ಸೇವಿಸಿ ಆತ್ಮಹತ್ಯೆಗೈದ ಯುವತಿ. ಈ ಬಗ್ಗೆ ಆಕೆಯ ಸಹೋದರ ಎಂ.ಕೆ. ಅಬ್ದುಲ್  ವಾಸಿಲ್ ನೀಡಿದ ದೂರಿನಂತೆ ಸುಬೈದಾರ ಪತಿ ಮೊಹಮ್ಮದ್ ಆದಿಲ್ (27) ವಿರುದ್ಧ …

10 ದಿನಗಳಲ್ಲಿ ನಾಲ್ಕನೇ ಬಾರಿ ಇಂಧನ ಬೆಲೆ ಏರಿಕೆ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಅನಿಶ್ಚಿತತೆಯಿಂದಾಗಿ ದೇಶದಲ್ಲಿ ಇಂಧನ ದರಗಳು ಮತ್ತೊಮ್ಮೆ ಗಗನಕ್ಕೇರಿದೆ. ಇದರಂತೆ ದೇಶಾದ್ಯಂತ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೇವಲ ಹತ್ತು ದಿನಗಳಲ್ಲಿ ನಾಲ್ಕನೇ ಬಾರಿ ಏರಿಸಲಾಗಿದೆ. ಈ ಪರಿಷ್ಕೃತ ದರದಂತೆ ಪೆಟ್ರೋಲ್ಗೆ ಪ್ರತಿ ಲೀಟರ್ಗೆ ತಲಾ 2.61 ರೂ.ನಂತೆ ಹೆಚ್ಚಿಸಲಾಗಿದ್ದು ಇದರಿಂದಾಗಿ ರಾಜಧಾನಿ ದೆಹಲಿಯಲ್ಲಿ ಈ ಹಿಂದೆ ಇದ್ದ 99.51 ರೂ. ನಿಂದ 102.12ಕ್ಕೇರಿದೆ. …

ಅಪರಿಮಿತ ರಕ್ತದೊತ್ತಡ: ಚಿಕಿತ್ಸೆಯಲ್ಲಿದ್ದ ಬಿಎಸ್‌ಎನ್‌ಎಲ್ ಉದ್ಯೋಗಿ ನಿಧನ

ಬದಿಯಡ್ಕ: ತೀವ್ರ ರಕ್ತದೊತ್ತಡದಿಂದ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟ ಘಟನೆ ನಡೆದಿದೆ. ಬದಿಯಡ್ಕ ಚಂಬಲ್ತಿಮಾರ್ ಬಳಿಯ ವಳಮಲೆ ಸುಳ್ಯೋಡು ನಿವಾಸಿ ದಿ| ಸದಾಶಿವ ಎಂಬವರ ಪುತ್ರ ಕೀರ್ತೀಶ್ (37) ಮೃತಪಟ್ಟ ಯುವಕನಾಗಿದ್ದಾರೆ. ಇವರು ಮಂಗಳೂರು ಮುಲ್ಕಿಯಲ್ಲಿ ಬಿಎಸ್‌ಎನ್‌ಎಲ್ ಉದ್ಯೋಗಿಯಾಗಿದ್ದರು. ಶನಿವಾರ ಅಲ್ಲಿನ ವಾಸಸ್ಥಳದಲ್ಲಿ ಇವರು ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಜತೆಗಿದ್ದವರು ಸುರತ್ಕಲ್‌ನ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಅಪರಿಮಿತ ರಕ್ತದೊತ್ತಡದಿಂದ ಅಸ್ವಸ್ಥತೆ ಉಂಟಾಗಿರುವುದಾಗಿ ತಪಾಸಣೆಯಲ್ಲಿ ತಿಳಿದು ಬಂದಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೀರ್ತೀಶ್ ನಿನ್ನೆ ಬೆಳಿಗ್ಗೆ ಮೃತಪಟ್ಟಿದ್ದಾರೆ. ಮೃತದೇಹವನ್ನು …

ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯ ಮೊಬೈಲ್ ಫೋನ್  ಕಳವು: ಆರೋಪಿ ಪೊಲೀಸ್ ಕಸ್ಟಡಿಗೆ

ಕಾಸರಗೋಡು:   ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಮಹಿಳೆಯ ಮೊಬೈಲ್ ಫೋನ್ ಕಳವುಗೈದ ಪ್ರಕರಣದ ಆರೋಪಿಯನ್ನು ಕಾಸರಗೋಡು ಪೊಲೀಸರು ಕಸ್ಟಡಿಗೆ   ತೆಗೆದುಕೊಂಡಿದ್ದಾರೆ. ಈಗ ಚೆರ್ಕಳದ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿರುವ ಮೂಲತಃ ಮುಟ್ಟತ್ತೋಡಿ ತೈವಳಪ್ಪು ನಿವಾಸಿ ಅಜ್ಮಲ್ ಫಿರೋಸಾ (23)  ಪೊಲೀಸ್ ಕಸ್ಟಡಿಗೊಳಗಾದ ಆರೋಪಿ. ಮೇ ೫ರಂದು ಚಿಕಿತ್ಸೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಮಹಿಳಾ ವಾರ್ಡ್‌ನಲ್ಲಿ  ದಾಖಲಾಗಿದ್ದ ಬೋವಿಕ್ಕಾನ ನಿವಾಸಿ ರಮ್ಯ ಎಂಬವರ 70,000 ರೂ. ಮೌಲ್ಯದ  ಮೊಬೈಲ್ ಫೋನ್ ಕಳವುಗೈದ ಬಗ್ಗೆ ಅವರು ನಿಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂ …

ರೈತಸಂಘ ಮಂಜೇಶ್ವರ ಏರಿಯಾ ಸಮಿತಿಯಿಂದ ಬಾಯಾರು ಪದವುನಲ್ಲಿ ಪ್ರತಿಭಟನಾ ಸಭೆ

ಪೈವಳಿಕೆ: ರಸಗೊಬ್ಬರದ ಬೆಲೆಯೇರಿಸಿದ ಕೇಂದ್ರ ಸರಕಾರದ ರೈತದ್ರೋಹಿ ತೀರ್ಮಾನಕ್ಕೆದುರಾಗಿ ಬಾಯಾರು ಪದವುನಲ್ಲಿ ರೈತಸಂಘದ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ನಡೆಸಿದ ಪ್ರತಿಭಟನಾ ಸಭೆಯನ್ನು ರೈತಸಂಘದ ರಾಜ್ಯಸಮಿತಿ ಸದಸ್ಯರಾದ ಕೆ. ಆರ್ ಜಯಾನಂದ ಉದ್ಘಾಟಿಸಿದರು. ಚಂದ್ರಹಾಸ ಶೆಟ್ಟಿ ಮಾಸ್ಟರ್ ಅಧ್ಯಕ್ಷತೆ ವಹಿಸಿದರು. ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ ಸ್ವಾಗತಿಸಿದರು. ರೈತಸಂಘ ಜಿಲ್ಲಾ ಸಮಿತಿ ಸದಸ್ಯೆ ಗೀತಾ ಸಾಮಾನಿ, ಪುರುಷೋತ್ತಮ ಬಿ, ಶ್ಯಾಮ್ ಭಟ್ ಮಾಸ್ಟರ್, ವಿನಯ್ ಕುಮಾರ್ ಬಾಯಾರ್, ಚಂದ್ರ ನಾಯಕ್, ಹುಸೈನ್ ಮಾಸ್ತರ್, ಕರುಣಾಕರ ಶೆಟ್ಟಿ ಭಾಗವಹಿಸಿದರು.

ಜಲಜೀವನ್ ಮಿಷನ್: ಲೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಕೆಡಬ್ಲ್ಯುಎ ಎಂಪ್ಲೋಯೀಸ್ ಸಂಘ್ ಆಗ್ರಹ

ಕಾಸರಗೋಡು: ಕೋಟ್ಯಂತರ ರೂ. ವೆಚ್ಚ ಮಾಡಿಯೂ ಜಲಜೀವನ್ ಮಿಷನ್ ಯೋಜನೆಯಲ್ಲಿ ಲೋಪ ಸಂಭವಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಕೆಡಬ್ಲ್ಯುಎ ಎಂಪ್ಲೋ ಯೀಸ್ ಸಂಘ್ ಕಾಸರಗೋಡು ಜಿಲ್ಲಾ ಸಮಿತಿ ಆಗ್ರಹಿಸಿದೆ. ಉಚಿತ ಸಂಪರ್ಕವೆಂದು ತಿಳಿಸಿ ಅಗತ್ಯವಿಲ ದವರಿಗೆ ಕೂಡಾ ಒತ್ತಾಯಪೂರ್ವಕ ಸಂಪರ್ಕ ನೀಡಿದ ಹಿನ್ನೆಲೆಯಲ್ಲಿ ಸಂಪರ್ಕಗಳ ಸಂಖ್ಯೆ ಹೆಚ್ಚಾಯಿದಾದರೂ ನೀರು ಲಭ್ಯವಾಗುವ ಟ್ಯಾಪ್‌ಗಳ ಸಂಖ್ಯೆ ಸಾಮಾನ್ಯ ಕಡಿಮೆ ಇದೆ. ನೀರು ಲಭಿಸದೆ ಬಿಲ್ಲು ಪಾವತಿಸಬೇಕಾಗಿ ಬಂದಿರುವುದ ರಿಂದ ಫಲಾನುಭವಿಗಳು ಸಂಪರ್ಕ ವಿಚ್ಛೇಧಿಸಲು ಮುಂದಾಗುತ್ತಿದ್ದಾರೆ. ಕಾರಡ್ಕ, ದೇಲಂಪಾಡಿ, …

ಎಎಡಬ್ಲ್ಯುಕೆ ಕಾಸರಗೋಡು ಯೂನಿಟ್ ಸಮ್ಮೇಳನ, ಕುಟುಂಬ ಸಂಗಮ

ಕಾಸರಗೋಡು: ಅಸೋಸಿಯೇ ಶನ್ ಆಫ್ ಆಟೋಮೊಬೈಲ್ ವರ್ಕ್‌ಶಾಪ್ಸ್ ಕೇರಳ (ಎಎಡಬ್ಲ್ಯುಕೆ) ಕಾಸರಗೋಡು ಘಟಕ ಸಮ್ಮೇಳನ ಹಾಗೂ ಕುಟುಂಬ ಸಂಗಮ ನಡೆಸಲಾಯಿತು. ಪಿಲಿಕುಂಜೆ ಭಗವತಿ ಸಭಾ ಭವನದಲ್ಲಿ ನಡೆದ ಕಾರ್ಯ ಕ್ರಮವನ್ನು ಅಸೋಸಿಯೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಸೀರ್ ಕಲ್ಲಿಕೋಡ್ ಉದ್ಘಾಟಿಸಿದರು. ಘಟಕ ಅಧ್ಯಕ್ಷ ಎಸ್.ಕೆ. ಪ್ರಕಾಶ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಕೋಶಾಧಿಕಾರಿ ಸುಧೀರ್ ಮೆನೋನ್, ರತೀಶ್ ಕುಂಡಡ್ಕ, ರಾಜ್ಯ ಜೊತೆ ಕಾರ್ಯದರ್ಶಿ ಕೆ. ಸುರೇಶ್ ಕುಮಾರ್, ಮುಖಂಡದರಾದ ಗುಣೇಂದ್ರಲಾಲ್ ಸುನಿಲ್, ದೇವಿದಾಸ್, ಮನು ವಿನಾಯಕ, ಪ್ರಕಾಶನ್, ಜೋಷಿ …

ಕೊಲ್ಲಂಗಾನದಲ್ಲಿ ಮೊಬೈಲ್ ಟವರ್ ಸ್ಥಾಪನೆ ವಿರುದ್ಧ ಸ್ಥಳೀಯರಿಂದ ಪ್ರತಿಭಟನೆ

ಕೊಲ್ಲಂಗಾನ: ಮಧೂರು ಪಂಚಾಯತ್ ೫ನೇ ವಾರ್ಡ್ ಕೊಲ್ಲಂಗಾನದಲ್ಲಿ ಸ್ಥಾಪಿಸಲು ಯತ್ನಿಸುವ ಮೊಬೈಲ್ ಟವರ್ ವಿರುದ್ಧ ಸ್ಥಳೀಯರು ತೀವ್ರ ಪ್ರತಿಭಟನೆಗಿಳಿದಿದ್ದಾರೆ. ಬ್ಲೋಕ್ ಪಂಚಾಯತ್ ಸದಸ್ಯ ಖಾದರ್ ಮಾನ್ಯರ ಅಧ್ಯಕ್ಷತೆಯಲ್ಲಿ ಜರಗಿದ ಸರ್ವಪಕ್ಷ ಸಭೆಯಲ್ಲಿ ವಿವಿಧ ರಾಜಕೀಯ, ಸಾಮಾಜಿಕ ಸಂಘಟನಾ ಪ್ರತಿನಿಧಿಗಳು ಭಾಗವಹಿಸಿದರು. ಜನವಾಸವಲಯವಾದ ಕೊಲ್ಲಂಗಾನದಲ್ಲಿ ಮೊಬೈಲ್ ಟವರ್ ಸ್ಥಾಪಿಸುವುದು ಆರೋಗ್ಯಪರವಾದ ಹಾಗೂ ಪರಿಸರಕ್ಕೆ ಮಾರಕವಾದ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂಬ ಭೀತಿ ಹಿನ್ನೆಲೆಯಲ್ಲಿ ಜನರ ಸುರಕ್ಷಿತೆ ಹಾಗೂ ಆರೋಗ್ಯವನ್ನು ಮುಂದಿಟ್ಟುಕೊಂಡು ಟವರ್ ಸ್ಥಾಪಿಸುವ ಕ್ರಮದಿಂದ ಹಿಂಜರಿಯಬೇಕೆಂದು ಸಭೆ ಅಭಿಪ್ರಾಯಪಟ್ಟಿದೆ. ಈ …

ರಾಜ್ಯದಲ್ಲಿ ಮೂರನೇ ಬದಲಿಗೆ ಜನರ ಅಂಗೀಕಾರ- ವಿ.ಕೆ. ಸಜೀವನ್

ಕಾಸರಗೋಡು: ವಿಧಾನಸಭಾ ಚುನಾವಣೆಯ ಫಲಿತಾಂಶ ಮೂರನೇ ಬದಲಿಗಿರುವ ಅಂಗೀಕಾರವಾಗಿದೆ ಎಂದು ಬಿಜೆಪಿ ರಾಜ್ಯ ಸೆಲ್ ಕೋ-ಆರ್ಡಿನೇಟರ್, ಕಲ್ಲಿಕೋಟೆ ವಲಯ ಪ್ರಭಾರಿ ವಿ.ಕೆ. ಸಜೀವನ್ ಅಭಿಪ್ರಾಯಪಟ್ಟರು. ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಮಂದಿರದಲ್ಲಿ ಜರಗಿದ ಜಿಲ್ಲಾ ನಾಯಕತ್ವ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ೩೦ಲಕ್ಷ ಮತ ಮೂರು ಶಾಸಕರಿಗೆ ಕೇರಳದಲ್ಲಿ ಲಭ್ಯವಾಗಿರುವುದು ಜನರು ಬಿಜೆಪಿಯನ್ನು ಅಂಗೀಕರಿಸಿದಕ್ಕಿರುವ ಪುರಾವೆಯಾಗಿದೆ. ಬಿಜೆಪಿ ಮುಂದಿಡುವ ಅಭಿವೃದ್ಧಿ ರಾಜಕೀಯಕ್ಕಿರುವ ಅಂಗೀಕಾರ ಕೂಡಾ ಇದಾಗಿದೆ ಎಂದು ಅವರು ನುಡಿದರು. ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಜನರು …