ಮಳೆಗಾಲ ಆಗಮಿಸುವುದರೊಂದಿಗೆ ಕಳ್ಳರ ಭಯವೂ ಸೃಷ್ಟಿ: ಮಜೀರ್ಪಳ್ಳದಲ್ಲಿ ಜ್ಯುವೆಲ್ಲರಿ ಕಳವು ಯತ್ನ; ಆರೋಪಿಗಳಿಗಾಗಿ ವ್ಯಾಪಕ ಶೋಧ

ಕುಂಬಳೆ: ವರ್ಕಾಡಿ ಬಳಿ ಮಜೀರ್ಪಳ್ಳದ ಜ್ಯುವೆಲ್ಲರಿ ಕಳವಿಗೆ ಯತ್ನಿಸಿದ ಪ್ರಕರಣದಲ್ಲಿ  ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಅಶ್ರಫ್ ಹಾಗೂ ಶಹೀರ್ ಎಂಬವರು ಪಾಲುದಾರರಾಗಿರುವ ‘ಚೋಯ್ಸ್ ಗೋಲ್ಡ್’ ಎಂಬ ಜ್ಯುವೆಲ್ಲರಿಯಿಂದ ಕಳವು ಯತ್ನ ನಡೆದಿದೆ. ಎಂದಿನಂತೆ ಮೊನ್ನೆ ರಾತ್ರಿ 8 ಗಂಟೆಗೆ ಜ್ಯುವೆಲ್ಲರಿ ಮುಚ್ಚಿ ಇವರು ಮರಳಿದ್ದರು. ಇಲ್ಲಿ ಕಳವು ಯತ್ನ ನಡೆದಿರುವುದು ನಿನ್ನೆ ಬೆಳಿಗ್ಗೆ ಅರಿವಿಗೆ ಬಂದಿದೆ. ಮೊನ್ನೆ ರಾತ್ರಿ ಕಳ್ಳರು ಈ ಕೃತ್ಯ ನಡೆಸಿರಬಹುದೆಂದು ಅಂದಾಜಿಸಲಾಗಿದೆ. ಜ್ಯುವೆಲ್ಲರಿಯ ಮುಂಭಾಗದ ಶೆಟರ್‌ನ್ನು ಜಾಕಿ ಹಾಗೂ …

ಮುಖ್ಯಮಂತ್ರಿ ವಿ.ಡಿ. ಸತೀಶನ್‌ರ ಅರೆನಗ್ನ ಫೊಟೋ ಪ್ರಚಾರ: ಇಬ್ಬರ ವಿರುದ್ಧ ಕೇಸು

ಕಾಸರಗೋಡು: ಮುಖ್ಯಮಂತ್ರಿ ವಿ.ಡಿ. ಸತೀಶನ್‌ರ ಅರೆನಗ್ನ ಫೊಟೋವನ್ನು ವಾಟ್ಸಪ್‌ನಲ್ಲಿ ಪ್ರಚಾರ ಪಡಿಸಲಾಗಿದೆ ಎಂಬ ದೂರಿನಂತೆ ಇಬ್ಬರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಚಿತ್ತಾರಿಕಲ್, ಕಡುಮೇನಿ ಕರಿಮಾಡಂ ಹೌಸ್‌ನ ಕೆ.ಎ. ಜೋರ್ಜ್‌ರ ದೂರಿನಂತೆ ಕಣ್ಣಿವಯಲ್, ಚಿರವಿಳಯಿಲ್ ಶಾಜಹಾನ್, ಚಿತ್ತಾರಿಕಲ್‌ನ ಸ್ನೇಹಜನ್ ಎಂಬಿವರ ವಿರುದ್ಧ ಚಿತ್ತಾರಿಕಲ್ ಪೊಲೀಸರು ಕೇಸು ದಾಖಲಿಸಿದ್ದಾರೆ. ಈಸ್ಟ್ ಎಳೇರಿ ಎಂಬ ವಾಟ್ಸಪ್ ಗ್ರೂಪ್‌ನಲ್ಲಿ ಅರೆನಗ್ನ ಫೊಟೋ ಪ್ರಚಾರಪಡಿಸಲಾಗಿದೆ ಎಂದು ದೂರಲಾಗಿತ್ತು. ನಕಲಿಯಾಗಿ ಸೃಷ್ಟಿಸಿ ಮುಖ್ಯಮಂತ್ರಿಗೆ ಅವಮಾನಕರವಾಗುವ ರೀತಿಯಲ್ಲಿ ಪ್ರಚಾರಪಡಿಸಿದ ಬಗ್ಗೆ ಕೇಸು ದಾಖಲಿಸಲಾಗಿದೆ.

ಅಪಘಾತಕ್ಕೀಡಾದ ಕಾರಿನಲ್ಲಿ ಮದ್ಯ ಪತ್ತೆ: ಬಂಧಿತ ಆರೋಪಿಗೆ ರಿಮಾಂಡ್

ಉಪ್ಪಳ: ಕಾರಿನಲ್ಲಿ ಬೃಹತ್ ಪ್ರಮಾಣದ ಮದ್ಯ ಸಾಗಾಟ ವೇಳೆ ಸೆರೆಗೀಡಾದ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಕುಳೂರು ಚಾರ್ಲ ಕೆಮ್ಮಜಲು ನಿವಾಸಿ ಪ್ರಜ್ವಲ್ (25) ಎಂಬಾತ ರಿಮಾಂಡ್‌ಗೊಳಗಾದ ಆರೋಪಿಯಾಗಿದ್ದಾನೆ. ಪ್ರಜ್ವಲ್  ಮದ್ಯ ಸಾಗಿಸುತ್ತಿದ್ದ ಕಾರು ಮೊನ್ನೆ ರಾತ್ರಿ 11.20ರ ವೇಳೆ ಉಪ್ಪಳ ಗೇಟ್ ಬಳಿ ಸರ್ವೀಸ್ ರಸ್ತೆಯಲ್ಲಿ ಚರಂಡಿಗಾಗಿ ತೋಡಿದ ಹೊಂಡಕ್ಕೆ ಬಿದ್ದಿತ್ತು. ವಿಷಯ ತಿಳಿದು ಮಂಜೇ ಶ್ವರ ಪೊಲೀಸರು ಅಲ್ಲಿಗೆ ತಲುಪಿ ಕಾರನ್ನು ಪರಿಶೀಲಿಸಿದಾಗ ಕರ್ನಾಟಕ ನಿರ್ಮಿತ 180 ಎಂಎಲ್‌ನ 1483 ಬಾಟ್ಲಿ ಮದ್ಯ, 90 …

ಮಲಗುವ ಕೊಠಡಿಯಲ್ಲಿ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಬೇಕಲ ಕೋಟಿಕುಳಂ ಕೋಟಪ್ಪಾರದಲ್ಲಿ  ಮನೆಯ ಮಲಗುವ ಕೊಠಡಿ ಯಲ್ಲಿ ನೇಣು ಬಿಗಿದ ಸ್ಥಿತಿ ಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಮುಹಮ್ಮದ್ ಅನ್ಸಾಫ್ (30) ಮೃತಪಟ್ಟ ಯುವಕ. ನಿನ್ನೆ ಅಪರಾಹ್ನ 2.30ರಿಂದ ಸಂಜೆ 6.30ರ ಮಧ್ಯೆ ನೇಣು ಬಿಗಿದಿರ ಬೇಕೆಂದು ಶಂಕಿಸಲಾಗಿದೆ. ಆದರೆ ಆತ್ಮಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲ. ಬೇಕಲ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಎಸ್‌ಎಫ್‌ಐ ಸ್ಥಾಪಿಸಿದ ಬ್ಯಾನರ್ ತೆರವು: ಪ್ರತಿಭಟನೆ ನಡೆಸಿದ ಪಂಚಾಯತ್ ಅಧ್ಯಕ್ಷರೂ ಸೇರಿ 42 ಮಂದಿ ವಿರುದ್ಧ ಪ್ರಕರಣ ದಾಖಲು

ಕಾಸರಗೋಡು: ಶಾಲಾ ಪ್ರವೇಶೋತ್ಸವದಂಗವಾಗಿ ಎಸ್‌ಎಫ್‌ಐ ಸ್ಥಾಪಿಸಿದ್ದ ಬ್ಯಾನರ್‌ನ್ನು ಪೊಲೀಸರು ತೆರವುಗೊಳಿಸಿರುವುದನ್ನು ಪ್ರತಿಭಟಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಮ ಪಂಚಾಯತ್ ಅಧ್ಯಕ್ಷರೂ ಸೇರಿದಂತೆ 42 ಮಂದಿ ವಿರುದ್ಧ ಅಂಬಲತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪುಲ್ಲೂರು ಪೆರಿಯ ಪಂಚಾಯತ್ ಅಧ್ಯಕ್ಷೆ ಸಿ.ಕೆ. ಸಬಿತ, ಜ್ಯೋತಿಬಸು,ಅನೂಪ್,ಮಂಜೂಷ, ನಾರಾಯಣ ಬಂಗ್ಲಾವ್ ಸೇರಿದಂತೆ ೪೨ ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪುಲ್ಲೂರು ಇರಿಯ ಸರಕಾರಿ ಪ್ರೌಢಶಾಲೆಯಲ್ಲಿ ಪ್ರವೇಶೋತ್ಸವ ದಂಗವಾಗಿ ಎಸ್‌ಎಫ್‌ಐ ಸ್ವಾಗತ ಬ್ಯಾನರ್ ಸ್ಥಾಪಿಸಿತ್ತು.  ಶಾಲೆಯಲ್ಲಿ  ವಿದ್ಯಾರ್ಥಿ ರಾಜಕೀಯ ಸಲ್ಲದೆಂಬ ನಿಲುವನ್ನು ಪ್ರಸ್ತುತ ಶಾಲೆಯ …

ಅಂಡರ್ ಪಾಸ್‌ನಲ್ಲಿ ಕಟ್ಟಿ ನಿಂತ ನೀರು: ಅಪಾಯಕ್ಕೀಡಾದ ಶಾಲಾ ಬಸ್; ಮಕ್ಕಳು ಪಾರು

ಕಾಸರಗೋಡು: ಶಾಲಾ ಮಕ್ಕಳನ್ನು ಹೇರಿಕೊಂಡು ಸಾಗುತ್ತಿದ್ದ ಬಸ್ ರಾಷ್ಟ್ರೀಯ ಹೆದ್ದಾರಿಯ ಮಾವುಂಗಲ್ ಮೂಲಕಂಡಂ ಅಂಡರ್‌ಪಾಸ್‌ನಡಿಯಲ್ಲಿ ಸಿಲುಕಿ ಮಗುಚುವ ಹಂತಕ್ಕೆ ತಲುಪಿದ್ದು, ಅದೃಷ್ಟವಶಾತ್ ಅಪಾಯದಿಂದ ಮಕ್ಕಳು ಪಾರಾಗಿದ್ದಾರೆ. ನೆಲ್ಲಿತ್ತರ- ವಣ್ಣಾಟ್ ಮೂಲಕ ವೆಳ್ಳಿಕ್ಕೋತ್‌ಗೆ ತೆರಳುವ ಸದ್ಗುರು ಶಾಲೆಯ ಬಸ್ ನಿನ್ನೆ ಸಂಜೆ ಅಪಾಯಕ್ಕೀಡಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿ ಚರಂಡಿ ನಿರ್ಮಾಣ ಇಲ್ಲಿ ಅರ್ಧದಲ್ಲೇ ನಿಂತಿದೆ. ಪುಲ್ಲೂರು ತೋಡಿಗೆ ಹರಿದುಹೋಗಬೇಕಾದ ನೀರು ನಿರ್ಮಾಣದ ಲೋಪದಿಂದಾಗಿ ಅಂಡರ್ ಪ್ಯಾಸೇಜ್‌ನಲ್ಲಿ ಕಟ್ಟಿ ನಿಲ್ಲುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಇದರಿಂದಾಗಿ ಅಂಡರ್ ಪ್ಯಾಸೇಜ್‌ನ …

ಅನುಚಿತವಾಗಿ ವರ್ತಿಸಿರುವುದನ್ನು ಪ್ರಶ್ನಿಸಿದ ಯುವತಿಯರ ಮೇಲೆ ತಂಡದಿಂದ ಹಲ್ಲೆ: ಮೂವರ ಬಂಧನ; 7 ಮಂದಿಗಾಗಿ ಶೋಧ

ಕೊಚ್ಚಿ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿ ಚುಡಾಯಿಸಿದ ಯುವಕರನ್ನು ಪ್ರಶ್ನಿಸಿದ ಯುವತಿಯರಿಗೆ ಯುವಕರ ತಂಡ ಸಾರ್ವಜನಿಕವಾಗಿ ಹಲ್ಲೆಗೈದ ಘಟನೆ ಕೊಚ್ಚಿಯ ಕಲೂರ್‌ನಲ್ಲಿ ನಡೆದಿದೆ. ಈ ಸಂಬಂಧ ಮೂವರನ್ನು ಪೊಲೀಸರು ಸೆರೆಹಿಡಿದಿದ್ದು, ಇನ್ನೂ ಹಲವರು ತಲೆಮರೆಸಿಕೊಂಡಿದ್ದಾರೆ.  ಮಲಪ್ಪುರಂ ಎಡಪ್ಪಾಲ್ ನಿವಾಸಿ ಅಲ್ಬಿನ್, ಪಾಲಕ್ಕಾಡ್ ಮಣ್ಣಾರಕಾಡ್ ನಿವಾಸಿಗಳಾದ ಸಾಬಿತ್, ಅರುಣ್ ಎಂಬಿವರು ಸೆರೆಗೀಡಾದವರಾಗಿದ್ದಾರೆ. ಪ್ರಕರಣದ ಒಂದನೇ ಆರೋಪಿಯಾದ ಪಾಲಕ್ಕಾಡ್ ಮಣ್ಣಾರಕ್ಕಾಡ್ ನಿವಾಸಿ ಅಕ್ಭರ್ ನಡೆಸುವ ಲಾಡ್ಜ್‌ನಲ್ಲಿ ಇತರ ಆರೋಪಿಗಳು ನೌಕರರಾಗಿದ್ದಾರೆ. ಎರ್ನಾಕುಳಂ ನೋರ್ತ್ ಪೊಲೀಸರು ನಡೆಸಿದ ಕಾರ್ಯಾಚ …

ಪದ್ಮಶಾಲಿ ಸಮಾಜಸೇವಾ ಸಮಿತಿ ವಾರ್ಷಿಕ ಮಹಾಸಭೆ, ಅಭಿನಂದನೆ

ಪೈವಳಿಕೆ: ಪದ್ಮಶಾಲಿ ಸಮಾಜ ಸೇವಾ ಸಮಿತಿಯ ವಾರ್ಷಿಕ ಮಹಾಸಭೆ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಬಾಯಿಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಇತ್ತೀಚೆಗೆ ಜರಗಿತು. ಸುಂದರ ಶೆಟ್ಟಿಗಾರ್ ಪೆರಿಯಪ್ಪಾಡಿ ಉದ್ಘಾಟಿಸಿದರು. ಸಮಿತಿಯ ಅಧ್ಯಕ್ಷ ಉಮೇಶ್ ಶೆಟ್ಟಿಗಾರ್ ಕುಂಡೇರಿ ಅಧ್ಯಕ್ಷತೆ ವಹಿಸಿದರು. ಗುರುಪ್ರಸಾದ್ ಶೆಟ್ಟಿಗಾರ್ ಕೋಡಿಬೈಲು, ಹರೀಶ್ಚಂದ್ರ ಶೆಟ್ಟಿಗಾರ್ ಉದ್ಯಾವರ, ಹರೀಶ ಶೆಟ್ಟಿಗಾರ್ ಬಿಜೈ, ಕಿಶೋರ್ ಶೆಟ್ಟಿಗಾರ್ ಉದ್ಯಾವರ, ಸಾವಿತ್ರಿ ಶೆಟ್ಟಿಗಾರ್ ಅತಿಥಿಗಳಾಗಿ ಭಾಗವಹಿಸಿದರು. ಕೃಷ್ಣ ಮಾಸ್ಟರ್ ಚಿಪ್ಪಾರು ಸ್ವಾಗತಿಸಿದರು. ಮನ್ವಿತ್ ಬಾಯಿಕಟ್ಟೆ, ಸುಹಾಸ್ ಕುಂಡೇರಿ ಪ್ರಾರ್ಥನೆ ಹಾಡಿದರು. ಪೈವಳಿಕೆ …

 ಸಂಜೀವ ಪುಳ್ಕೂರುರಿಗೆ ‘ಬಿರ್ಸಾಮುಂಡಾ’ ಪ್ರಶಸ್ತಿ ಪ್ರದಾನ

ಕಾಸರಗೋಡು: ಹಲವಾರು ವರ್ಷಗಳಿಂದ ಆದಿವಾಸಿ ಗೋತ್ರವರ್ಗದ ಹಾಗೂ ಕೊರಗ ಜನಾಂಗದ ಅಭಿವೃದ್ಧಿಗಾಗಿ ಸಮಾಜಮುಖಿ ಸೇವೆಗಳನ್ನು ಮಾಡುತ್ತಿರುವ ಮಧೂರು ಪುಳ್ಕೂರು ನಿವಾಸಿ ಸಂಜೀವ ಪುಳ್ಕೂರು ಅವರಿಗೆ ಬಿರ್ಸಾಮುಂಡಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಕೀರ್ತಾಡ್ ಕಲ್ಲಿಕೋಟೆ ಇದರ ಜಂಟಿ ಆಶ್ರಯದಲ್ಲಿ ಕೇಂದ್ರ ಸರಕಾರದ ಜನ್‌ಜಾತಿಯ ಗರೀಮಾ ಉತ್ಸವದಂಗವಾಗಿ ತಿರುವನಂತಪುರದ ಅಯ್ಯಂಗಾಳಿ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಇವರ ಸೇವೆಯನ್ನು  ಪರಿಗಣಿಸಿ ಲಭಿಸಿದ ಈ ಪ್ರಶಸ್ತಿಯಿಂದ ಇವರು …

ಬಿಜೆಪಿ ಕೇರಳ ನೇತಾರರಿಗೆ ರಾಷ್ಟ್ರೀಯ ಮಟ್ಟದಲ್ಲಿ ಪರಿಗಣನೆ ಸಾಧ್ಯತೆ

ತಿರುವನಂತಪುರ: ಬಿಜೆಪಿ ಕೇರಳ ಘಟಕ ನೇತಾರರ ಪೈಕಿ ಕೆಲವರಿಗೆ ಈ ಬಾರಿ ಪಕ್ಷದ ರಾಷ್ಟ್ರೀಯ ನಾಯಕತ್ವದಲ್ಲಿ ಸ್ಥಾನ ಲಭಿಸುವ ಸಾಧ್ಯತೆ ಇದೆ ಎಂದು ಅಂದಾಜಿಸ ಲಾಗಿದೆ. ಇದರಂತೆ ಬಿಜೆಪಿ ಮಾಜಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್‌ರಿಗೆ ರಾಜ್ಯಸಭಾ ಸೀಟು ಅಥವಾ ಪಕ್ಷದ ಕೇಂದ್ರ ನಾಯಕತ್ವದಲ್ಲಿ ಪ್ರಧಾನ ಹುದ್ದೆ ಲಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪಕ್ಷದ ಅಧ್ಯಕ್ಷನಾಗಿದ್ದ ವೇಳೆ ರಾಜ್ಯದಲ್ಲಿ ನಡೆಸಿದ ಉತ್ತಮ ಕಾರ್ಯವನ್ನು ಪರಿಗಣಿಸಿ ಬಿಜೆಪಿ ಕೇಂದ್ರ ನಾಯಕತ್ವ ಕೆ. ಸುರೇಂದ್ರನ್‌ರಿಗೆ ಉತ್ತಮ ಸ್ಥಾನ ನೀಡಲಿದೆ …