ಬೇರಿಕೆಯಲ್ಲಿ ರಸ್ತೆ ಸಮುದ್ರಪಾಲು 4 ಮನೆಗಳು ನೀರುಪಾಲು ಭೀತಿಯಲ್ಲಿ

ಉಪ್ಪಳ: ಉಪ್ಪಳ ಶಿವಾಜಿನಗರದಲ್ಲಿ ಕಡಲ್ಕೊರೆತದಿಂದ ಮನೆ ಸಮುದ್ರ ಪಾಲಾದ ಬೆನ್ನಲ್ಲೇ ಮಂಗಲ್ಪಾಡಿ ಪಂಚಾ ಯತ್‌ನ 16ನೇ ವಾರ್ಡ್ ಮುಟ್ಟಂ ಬೇರಿಕೆಯಲ್ಲಿ ರಸ್ತೆ ಸಮುದ್ರಪಾಲಾಗು ತ್ತಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾ ಗಿದೆ. ಈ ರಸ್ತೆ ಸಂಪೂರ್ಣ ನೀರುಪಾಲಾ ದರೆ ಈ ಪ್ರದೇಶದ ನೆಬಿನ್, ಇಬ್ರಾಹಿಂ, ಅನಿಲ್, ಆನಂದ ಎಂಬವರ ಮನೆಗೂ ಅಪಾಯವುಂಟಾಗಲಿದೆ. ಕಳೆದೆರಡು ದಿನಗಳಿಂದ ಈ ಪರಿಸರದಲ್ಲಿ ಕಡಲ್ಕೊ ರೆತ ಹೆಚ್ಚಾಗಿದೆ. ಶಾರದಾನಗರದಲ್ಲಿ ಶಶಿಕಲರ ಮನೆ ನೀರುಪಾಲಾಗಿದ್ದು, ಇಲ್ಲಿನ ಲಲಿತ, ನಿವೇದಿತ, ಗಿರಿಜ ಎಂ ಬವರ ಮನೆಗಳು ಅಪಾಯದಂಚಿನಲ್ಲಿದೆ. …

ಮಾರ್ಪನಡ್ಕ ಭಜನಾ ಮಂದಿರದ ಕಾಣಿಕೆ ಹುಂಡಿ ಕಳವುಗೈದ ಆರೋಪಿ ಸೆರೆ

ಬದಿಯಡ್ಕ:  ಮಾರ್ಪನಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಹೊರಗಡೆ ಇರಿಸಲಾ ಗಿದ್ದ 2 ಕಾಣಿಕೆ  ಹುಂಡಿಗಳನ್ನು ಕಳವುಗೈದ ಪ್ರಕರಣದ ಆರೋಪಿ ಸೆರೆಗೀಡಾಗಿದ್ದಾನೆ. ಆದೂರು ಗ್ರಾಮದ  ಆದೂರು ಪಯಂಗಡಿ ಹೌಸ್‌ನ  ಸಾಬಿತ್ ಎ.ಪಿ (33) ಎಂಬಾತನನ್ನು  ಬದಿಯಡ್ಕ ಪೊಲೀಸ್ ಇನ್‌ಸ್ಪೆಕ್ಟರ್ ಅನೂಪ್‌ಕೃಷ್ಣ ನೇತೃತ್ವದ  ಪೊಲೀಸರು ಬಂಧಿಸಿದ್ದಾರೆ.  ಜುಲೈ ೨೯ರಂದು  ರಾತ್ರಿ ಕಾಣಿಕೆ ಹುಂಡಿಗಳನ್ನು ಕಳವುಗೈಯ್ಯಲಾಗಿತ್ತು. ಭಜನಾ ಮಂದಿರದ ಹೊರಗಡೆ ಸ್ಥಾಪಿಸಲಾಗಿದ್ದ  ಗುಳಿಗ ದೈವದ ಹುಂಡಿಯಿಂದ ಸುಮಾರು 2 ಸಾವಿರ ರೂ. ಹಾಗೂ ಇನ್ನೊಂದು ಹುಂಡಿಯಿಂದ ಸುಮಾರು 2ಸಾವಿರ ರೂ.ಗಳನ್ನು …

ಯಕ್ಷಗಾನ ಕಲಾವಿದ, ಸಾರಣೆ ಮೇಸ್ತ್ರಿ ಜಯೇಂದ್ರ ಆತ್ಮಹತ್ಯೆ

ಕುಂಬಳೆ: ಯಕ್ಷಗಾನ ಕಲಾ ವಿದ, ಸಾರಣೆ ಮೇಸ್ತ್ರಿ ಕೆಲಸ ಮಾಡಿ ಕೊಂಡಿದ್ದ ಕಿದೂರು ದಂಡೆಗೋಳಿ ಮಂಜಲ್ಪಡ್ಪು ನಿವಾಸಿ ಜಯೇಂದ್ರ ಕೆ. (54) ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ಬೆಳಿಗ್ಗೆ 9ರಿಂದ  6 ಗಂಟೆ ಮಧ್ಯೆ ಘಟನೆ ನಡೆದಿದೆ. ಇವರು ಮನೆಯಲ್ಲಿ ಏಕಾಂಗಿಯಾಗಿದ್ದ ವೇಳೆ ಈ ಘಟನೆ ನಡೆದಿದ್ದು, ಮನೆಮಂದಿ ಸಂಜೆ ವೇಳೆ ಬರುವಾಗ ಹಗ್ಗ ತುಂಡಾಗಿ ಕೊಠಡಿಯಲ್ಲಿ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಚೆಂಗಳದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಆ ವೇಳೆ ನಿಧನರಾಗಿದ್ದಾರೆ. ಸುಂಕದಕಟ್ಟೆ ಮೇಳದಲ್ಲಿ …

ಕೆಲಸಕ್ಕೆಂದು ತಿಳಿಸಿ ಹೋದ ಬಿಜೆಪಿ ಕಾರ್ಯಕರ್ತ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟ ಬಿಜೆಪಿ ಕಾರ್ಯಕರ್ತ  ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾರೆ. ಉಪ್ಪಳ ಕೊಂಡೆವೂರು ನಿವಾಸಿ ದಿ| ನೇಮಿ ರಾಜ್ ಶೆಟ್ಟಿಯವರ ಪುತ್ರ ಸಂದೀಪ್ ಶೆಟ್ಟಿ ಯಾನೆ  ಅಣ್ಣು (44) ಎಂಬವರ ಮೃತದೇಹ  ಮನೆ ಸಮೀಪದ ತೋಟ ದಲ್ಲಿರುವ ಕೆರೆಯಲ್ಲಿ ಪತ್ತೆಯಾಗಿದೆ.  ಸಂದೀಪ್ ಶೆಟ್ಟಿ  ಉಪ್ಪಳ ಶಾರದಾನಗರ ದಲ್ಲಿರುವ  ತಂಪುಪಾನೀಯ  ತಯಾರಿ ಫ್ಯಾಕ್ಟರಿಯಲ್ಲಿ ನೌಕರನಾಗಿದ್ದರು. ಎಂದಿನಂತೆ  ನಿನ್ನೆ ಬೆಳಿಗ್ಗೆ  ಕೆಲಸಕ್ಕೆಂದು ತಿಳಿಸಿ ಇವರು ಮನೆಯಿಂದ ಹೊರಟಿದ್ದರು. ಮಧ್ಯಾಹ್ನ  ವರೆಗೆ ಇವರನ್ನು ಕಾಣದ ಹಿನ್ನೆಲೆಯಲ್ಲಿ   …

ಕೆಲಸ ನಷ್ಟಗೊಳ್ಳಬಹುದೆಂಬ ಆತಂಕ: ಕೆಎಸ್‌ಆರ್‌ಟಿಸಿ ತಾತ್ಕಾಲಿಕ ಕಂಡಕ್ಟರ್ ನೇಣು ಬಿಗಿದು ಆತ್ಮಹತ್ಯೆ

ಕಾಸರಗೋಡು: ಕೆಲಸ ನಷ್ಟಗೊಳ್ಳಬಹುದೆಂಬ ಆತಂಕದಿಂದ  18 ವರ್ಷಗಳಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತಾತ್ಕಾಲಿಕ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಯುವಕ ನೇಣುಬಿಗಿದು ಆತ್ಮಹತ್ಯೆಗೈದ  ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮುಳಿಯಾರು ಮಜಕ್ಕಾರಿನ ದಿ| ಮಹಾಲಿಂಗ ಪಾಟಾಳಿಯವರ ಪುತ್ರ ಯೋಗೀಶ್ ಕುಮಾರ್ (4೦) ಮೃತಪಟ್ಟ ವ್ಯಕ್ತಿ.  ನೂತನವಾಗಿ ನಿರ್ಮಿಸಿದ ಮನೆಯ ಶೆಡ್‌ನಲ್ಲಿ ಇವರ ಮೃತದೇಹ ಪತ್ತೆಯಾಗಿದೆ.  ಕಾಸರಗೋಡು-ಸುಳ್ಯ ರೂಟ್‌ನಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯೋಗೀಶ್ ಕುಮಾರ್ ಕಂಡಕ್ಟರ್ ಆಗಿದ್ದರು. ನಿನ್ನೆ ಬೆಳಿಗ್ಗೆ ಕೆಲಸ ಮುಗಿಸಿ ಮನೆಗೆ ಮರಳಿದ್ದರು. ಯೋಗೀಶ್ ಹಾಗೂ ತಾಯಿ  ಬೇಬಿ …

ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮೊತ್ತ ಕಡಿತ: ಎಡರಂಗದಿಂದ ಮಂಜೇಶ್ವರ ಪಂ. ಕಚೇರಿ ಮಾರ್ಚ್

ಮಂಜೇಶ್ವರ: ಪಂಚಾಯತ್, ನಗರ ಸಭೆಗಳಲ್ಲಿ ಹೊಸ ಆರ್ಥಿಕ ವರ್ಷದ ಅಭಿವೃದ್ಧಿ ಯೋಜನೆಗಳಿಗೆ ಹಣ ಕಡಿತಗೊಳಿಸಿದ ಯು ಡಿ ಎಫ್ ಸರಕಾರ ವಂಚಿಸುತ್ತಿದೆ. ಇದರಿಂದ ಹೊಸ ಯೋಜನೆಗಳ ನಿರ್ವಹಣೆಗೆ ಮಾತ್ರವಲ್ಲದೆ ಹಲವಾರು ಕ್ಷೇಮ ಪಿಂಚಣಿ ಯೋಜನೆಗಳು ಬಡಮೇಲು ಗೊಂಡಿದೆ. ಕಾರುಣ್ಯ, ಕುಟುಂಬ ಆರೋಗ್ಯ ಕೇಂದ್ರಗಳಲ್ಲಿರುವ ಡಾಕ್ಟರ್ ಸೇವೆಗೆ, ಅಂಗನವಾಡಿ, ಬಡ್ಸ್ ಶಾಲೆಗಳ ಚಟುವಟಿಕೆಗಳಿಗೆ ಹಣ ಕೊಡದ ಹಿನ್ನೆಲೆಯಲ್ಲಿ ಎಡರಂಗ ಪ್ರತಿಭಟಿಸಿದೆ.ಮಾತ್ರವಲ್ಲದೆ ಲೈಫ್ ಪದ್ಧತಿ, ಕಳೆದ ಎಡರಂಗ ಸರಕಾರ ಮಹಿಳೆಯರಿಗೆ ಕೊಡುವ ೧೦೦೦ ರೂ ಪಿಂಚಣಿಯಾದ ಸ್ತ್ರೀ ಸುರಕ್ಷಾ ಪಿಂಚಣಿ …

ವಾನಂದೆ ಬಯಲು ಪ್ರದೇಶದಲ್ಲಿ ಕೈಗೆಟಕುವ ರೀತಿಯಲ್ಲಿ ವಿದ್ಯುತ್ ತಂತಿ: ಸ್ಥಳೀಯ ಕೃಷಿಕರಲ್ಲಿ ಭೀತಿ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಶಿರಿಯ ವಾನಂದೆ ಬಯಲು ಪ್ರದೇಶದಲ್ಲಿ ಕೈಗೆಟುವ ರೀತಿಯಲ್ಲಿ ಹಾಗೂ ಹಳೆಯ ಕಾಲದ ವಿದ್ಯುತ್ ತಂತಿ ಆತಂಕವನ್ನುAಟುಮಾಡುತ್ತಿದೆ. ಶಿರಿಯ ಟ್ರಾನ್ಸ್ ಫಾರ್ಮರ್‌ನಿಂದ ಬಯಲು ಪ್ರದೇಶದಿಂದ ಹಾದು ಹೋದ ತಂತಿ ಕೈಗೆ ಎಟಕುವ ಸ್ಥಿತಿಯಲ್ಲಿದ್ದು, ಯಾವುದೇ ಕ್ಷಣದಲ್ಲಿ ತುಂಡಾಗಿ ಬೀಳುವ ಆತಂಕ ಕೃಷಿಕರನ್ನು ಕಾಡುತ್ತಿದೆ.ಈ ಮೊದಲು ಈ ವಿದ್ಯುತ್ ತಂತಿ ಹಲವು ಬಾರಿ ಮುರಿದು ಬಿದ್ದು ಉದ್ಯೋಗಸ್ಥರು ತಲುಪಿ ದುರಸ್ಥಿ ಮಾಡಿದ್ದರು. ಆದರೆ ಈ ತಂತಿಯನ್ನು ಬದಲಾಯಿಸಲು ಸ್ಥಳೀಯ ಕೃಷಿಕರು ಹಲವು ಬಾರಿ ತಿಳಿಸಿದರೂ ವಿದ್ಯುತ್ …

ಬದಿಯಡ್ಕ ಪಂಚಾಯತ್‌ಗೆ ಎಡರಂಗ ಮಾರ್ಚ್

ಬದಿಯಡ್ಕ: ಸ್ಥಳೀಯಾಡಳಿತ ಸಂಸ್ಥೆಗಳ ಅಭಿವೃದ್ಧಿ ಮೊತ್ತ ಕಡಿತಗೊಳಿಸಿದ, ರಾಜ್ಯ ಸರಕಾರದ ಜನವಿರುದ್ಧ ನೀತಿ ಆರೋಪಿಸಿ ಎಲ್‌ಡಿಎಫ್ ಬದಿಯಡ್ಕ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಪಂಚಾಯತ್ ಕಚೇರಿಗೆ ಪ್ರತಿಭಟನಾ ಮಾರ್ಚ್ ನಡೆಸಲಾಯಿತು. ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ ಉದ್ಘಾಟಿಸಿದರು. ಸಿಪಿಐ ಬದಿಯಡ್ಕ ಲೋಕಲ್ ಕಾರ್ಯದರ್ಶಿ ಸುಧಾಕರ ವಿದ್ಯಾಗಿರಿ ಅಧ್ಯಕ್ಷತೆ ವಹಿಸಿದರು. ಕುಂಬಳೆ ಏರಿಯಾ ಸಮಿತಿ ಸದಸ್ಯ ಪಿ. ರಂಜಿತ್ ಸ್ವಾಗತಿಸಿದರು. ರಾಜ್ಯದಲ್ಲಿ ಯುಡಿಎಫ್ ಅಧಿಕಾರಕ್ಕೇರಿದ ಬಳಿಕ ಮಹಿಳಾ ಸುರಕ್ಷಾ ಪಿಂಚಣಿ ವಿತರಣೆ ಮೊಟಕುಗೊಂಡಿದ್ದು, ತೀವ್ರ ಮಳೆಗೆ ವಿವಿಧ …

ಹಿಂದೂ ಸಾರ್ವಜನಿಕ ರುದ್ರಭೂಮಿಗಳ ಸಂರಕ್ಷಣೆ ಖಚಿತಪಡಿಸಬೇಕು- ರವೀಶ ತಂತ್ರಿ ಕುಂಟಾರು

ವರ್ಕಾಡಿ: ಕಾಸರಗೋಡು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಾಗಿ ಬದಲಾಗುತ್ತಿರುವ ಹಿಂದೂ ಸಮಾಜಕ್ಕೆ ಅಂತ್ಯಕ್ರಿಯೆಗಳನ್ನು ನಿರ್ವಹಿಸಲು ಕೂಡಾ ಸ್ಥಳ ಹಾಗೂ ಹಕ್ಕು ನಿಷೇಧಿಸಲ್ಪಡುವ ಸನ್ನಿವೇಶವಿದೆಯೆಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ನುಡಿದರು. ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ವರ್ಕಾಡಿ ಪಂಚಾಯತ್ ಕಚೇರಿಗೆ ನಡೆಸಿದ ಪ್ರತಿಭಟನಾ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹಿಂದೂ ಸಾರ್ವಜನಿಕ ಸ್ಮಶಾನಗಳ ಸಂರಕ್ಷಣೆಯಲ್ಲಿ, ಪರಿಪಾಲನೆಯಲ್ಲಿ ವಿವಿಧ ಪಂಚಾಯತ್ ಆಡಳಿತ ಸಮಿತಿಗಳು ತೀವ್ರ ಅನಾಸಕ್ತಿ ತೋರಿಸುತ್ತಿದೆ ಎಂದು ಅವರು ಆರೋಪಿಸಿದರು. ಹಲವು ಸ್ಥಳಗಳಲ್ಲಿ ಸಾರ್ವಜನಿಕ ಸ್ಮಶಾನಗಳನ್ನು …