ಶಾಲಾ ಬಸ್ -ಬೈಕ್ ಢಿಕ್ಕಿ ಹೊಡೆದು ಯುವಕ ಮೃತ್ಯು

ಮುಳ್ಳೇರಿಯ:  ಶಾಲಾ ಬಸ್  ಹಾಗೂ ಬೈಕ್ ಢಿಕ್ಕಿ ಹೊಡೆದು  ಗಾಳಿಮುಖ ಬಳಿಯ ನಿವಾಸಿ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.  ಗಾಳಿಮುಖ ಗೋಳಿ ತ್ತಡಿ ಪುದಿಯವಳಪ್ಪ್‌ನ ಶಮ್ಮಾಸ್ ಅಬ್ದುಲ್ಲ (25) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಂದು ಬೆಳಿಗ್ಗೆ  9 ಗಂಟೆ ವೇಳೆ ಬೋವಿಕ್ಕಾನ ಬಳಿಯ ಮಾಸ್ತಿಕುಂಡ್ ನಲ್ಲಿ     ಕುನಿಲ್ ಶಾಲೆಯ ಬಸ್ ಹಾಗೂ  ಬೈಕ್ ಢಿಕ್ಕಿ ಹೊಡೆದು   ಅಪಘಾತ ಸಂಭವಿಸಿದೆ.  ಅಪಘಾತದಲ್ಲಿ ಗಂಭೀರ ಗಾಯಗೊಂಡ ಶಮ್ಮಾಸ್ ಅಬ್ದುಲ್ಲರನ್ನು ತಕ್ಷಣ ಸ್ಥಳೀಯರ ನೇತೃತ್ವದಲ್ಲಿ  ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  …

ಟ್ಯಾಂಕರ್ ಲಾರಿ ಢಿಕ್ಕಿ ಹೊಡೆದು ಸ್ಕೂಟರ್ ಸವಾರನಾದ ಫ್ಲೆಕ್ಸ್ ಅಂಗಡಿ ಮಾಲಕ ಮೃತ್ಯು

ಕಾಸರಗೋಡು: ಟ್ಯಾಂಕರ್ ಲಾರಿ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಸಾವನ್ನಪ್ಪಿದ ದಾರುಣ ಘಟನೆ ನಗರದ ಎಂ.ಜಿ ರಸ್ತೆಯಲ್ಲಿ ನಡೆದಿದೆ. ತಳಂಗರೆ ಬಾಂಗೋಡು ನಿವಾಸಿ ಹನೀಫಾ (55) ಸಾವನ್ನಪ್ಪಿದ ದುರ್ದೈವಿ. ವಿದ್ಯಾನಗರ ಬಿ.ಸಿ ರೋಡ್‌ನಲ್ಲಿರುವ ಫ್ಲೆಕ್ಸ್ ಅಂಗಡಿಯ ಮಾಲಕನಾಗಿರುವ ಹನೀಫಾ ನಿನ್ನೆ ಮಧ್ಯಾಹ್ನ ಸ್ಕೂಟರ್‌ನಲ್ಲಿ ಹೊಸ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣಕ್ಕೆ  ಭಾರೀ ವಾಹನಗಳ ನಿಬಿಡತೆ ಹೊಂದಿರುವ ಎಂ.ಜಿ ರಸ್ತೆ ಮೂಲಕ ಸಾಗುತ್ತಿದ್ದ ವೇಳೆ ಸ್ಕೂಟರ್ ಟ್ಯಾಂಕರ್ ಲಾರಿಗೆ ಢಿಕ್ಕಿ  ಹೊಡೆದಿತ್ತು. ಈ ವೇಳೆ ಸ್ಕೂಟರ್‌ನಿಂದ ಕೆಳಕ್ಕೆ …

ಕಟ್ಟಡ ನಿರ್ಮಾಣದಲ್ಲಿ ವಂಚನೆ: ಕುಂಬಳೆ ಪಂ. ಕಚೇರಿಯಲ್ಲಿ ವಿಜಿಲೆನ್ಸ್‌ನಿಂದ ಮತ್ತೆ ಪರಿಶೀಲನೆ

ಕುಂಬಳೆ: ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟು ಭಾರೀ ವಂಚನೆ ನಡೆದಿದೆ ಯೆಂಬ ಆರೋಪದಂತೆ ಕುಂಬಳೆ ಗ್ರಾಮ ಪಂಚಾ ಯತ್‌ಗೆ ವಿಜಿಲೆನ್ಸ್ ನಿನ್ನೆ ದಾಳಿ ನಡೆಸಿ ಕಡತಗಳನ್ನು ಪರಿಶೀಲಿ ಸಿದೆ. ಪರ್ಮಿಟ್‌ನಲ್ಲಿ ತಿಳಿಸಿ ರುವುದಕ್ಕಿಂತಲೂ  ಹೆಚ್ಚು ವಿಸ್ತೀ ರ್ಣದಲ್ಲಿ ಕಟ್ಟಡ ನಿರ್ಮಾಣ ನಡೆಸಲಾಗಿದೆಯೆಂಬ ಆರೋಪ ಕೇಳಿಬಂದಿತ್ತು. 1200 ಚದರ ಅಡಿ ವಿಸ್ತೀರ್ಣವುಳ್ಳ ಶಾಪಿಂಗ್ ಕಾಂಪ್ಲೆಕ್ಸ್  ಕಟ್ಟಡದ ವಿಸ್ತೀರ್ಣವನ್ನು 653 ಚದರ ಅಡಿಯಾಗಿದೆಯೆಂದು ತಿಳಿಸಿ ಪಂಚಾಯತ್‌ಗೆ ಆದಾಯ ನಷ್ಟವುಂಟುಮಾಡಲಾಗಿದೆಯಂದು ದೂರು ಕೇಳಿಬಂದಿದೆ. ಇದರಂತೆ ನಿನ್ನೆ ಕಾಸರಗೋಡು ವಿಜಿಲೆನ್ಸ್ ಆಂಡ್ ಆಂಟಿ ಕರೆಪ್ಶನ್ …

ಜ್ವರ ಬಾಧಿಸಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತ್ಯು

ಪೆರ್ಲ:  ಜ್ವರ ಬಾಧಿಸಿ  ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಅಸೌಖ್ಯ ಉಲ್ಭಣಗೊಂಡು ಮೃತಪಟ್ಟ ಘಟನೆ ನಡೆದಿದೆ. ಪಡ್ರೆ ಸಜಂಗದ್ದೆ ನಿವಾಸಿ ತಿಲು ನಾಯ್ಕ (58) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಕೂಲಿ ಕಾರ್ಮಿಕನಾ ಗಿದ್ದರು. ಇತ್ತೀಚೆಗಿನಿಂದ ಇವರಿಗೆ ಜ್ವರ ಬಾಧಿಸಿತ್ತೆನ್ನಲಾಗಿದೆ. ಇದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಮನೆಯಲ್ಲಿದ್ದ ಇವರು ನಿನ್ನೆ ಮಧ್ಯಾಹ್ನ 2.15ರ ವೇಳೆ ಅರೆಪ್ರ ಜ್ಞಾವಸ್ಥೆಯಲ್ಲಿ ಕಂಡುಬಂದಿದ್ದಾರೆ. ತಕ್ಷಣ ಉಕ್ಕಿನಡ್ಕ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.   ಮೃತದೇಹ ವನ್ನು ಕುಂಬಳೆ ಜಿಲ್ಲಾ …

ಮಾಜಿ ಬಸ್ ಕಂಡಕ್ಟರ್ ಸುಬ್ಬ ಮಣಿಯಾಣಿ ನಿಧನ

ಕುಂಬ್ಡಾಜೆ: ಬೆಳಿಂಜ ಬಳಿಯ ಕುದಿಂಗಿಲ ಕಟ್ಟದಕೋರಿಕ್ಕಾರು ನಿವಾಸಿ  ಸುಬ್ಬ ಮಣಿಯಾಣಿ (53) ನಿಧನಹೊಂದಿದರು. ಕಿಡ್ನಿ ಸಂಬಂಧ ಅಸೌಖ್ಯ ಬಾಧಿಸಿದ್ದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ನಿನ್ನೆ ರಾತ್ರಿ ಅಲ್ಲಿ ನಿಧನ ಸಂಭವಿಸಿದೆ. ಸುಬ್ಬ ಮಣಿಯಾಣಿ ಈ ಹಿಂದೆ ಖಾಸಗಿ ಬಸ್‌ನಲ್ಲಿ ಕಂಡಕ್ಟರ್ ಆಗಿದ್ದರು. ಅನಂತರ ಸ್ವಲ್ಪ ಕಾಲ ಬದಿಯಡ್ಕ ಪೇಟೆಯಲ್ಲಿ ಹೂವು ಮಾರಾಟ ನಡೆಸುತ್ತಿ ದ್ದರು. ಮೃತರು ಪತ್ನಿ  ಸಾವಿತ್ರಿ, ಸಹೋದರ ಕೃಷ್ಣ ಮಣಿಯಾಣಿ, ಸಹೋದರಿಯರಾದ ಲೀಲಾವತಿ, ಗೀತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. …

ಸಾವರ್ಕರ್ ಹೆಸರಿನಲ್ಲಿನ ರಸಪ್ರಶ್ನೆ: ಅಧ್ಯಾಪಕ ಗುರುಪ್ರಸಾದ್‌ರ ಅಮಾನತಿಗೆ ಹೈಕೋರ್ಟ್ ತಡೆಯಾಜ್ಞೆ

ಕೊಚ್ಚಿ: ಶಾಲಾ ರಸಪ್ರಶ್ನೆ ಸ್ಪರ್ಧೆಗಾಗಿ ವಿ.ಡಿ. ಸಾವರ್ಕರ್ ಹೆಸರಿನ ಪ್ರಶ್ನೆ ಸಿದ್ಧಪಡಿಸಿದ ಘಟನೆಯಲ್ಲಿ ಅಧ್ಯಾಪಕನನ್ನು ಅಮಾನತುಗೊಳಿಸಿದ ಸರಕಾರದ ಕ್ರಮಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಒಂದು ತಿಂಗಳ ವರೆಗೆ ಈ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ. ಒಂದು ತಿಂಗಳೊಳಗೆ ತನಿಖೆ ಪೂರ್ತಿಗೊಳಿಸಿ ಅಧ್ಯಾಪಕನ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆಯೆಂದು ನ್ಯಾಯಾಲಯ ನಿರ್ದೇಶ ನೀಡಿದೆ. ಅದರೆ ತುರ್ತು ಶಿಸ್ತುಕ್ರಮ ಮುಂದುವರಿಸಬಹುದೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪಳ್ಳತ್ತಡ್ಕ ಎಯುಪಿ ಶಾಲೆಯ ಅಧ್ಯಾಪಕನಾಗಿರುವ ಗುರುಪ್ರಸಾದ್ ನೀಡಿದ ಅರ್ಜಿ ಪರಿಗಣಿಸಿ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ. ಎಇಒರ …

ರೈಲಿನಲ್ಲಿ ಬಾಯಾರು ನಿವಾಸಿಯ ಲ್ಯಾಪ್‌ಟೋಪ್ ಕಳವು

ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಯಾರು ಬಳಿಯ ನಿವಾಸಿಯ ಲಾಪ್‌ಟಾಪ್ ಕಳವಿಗೀಡಾದ ಬಗ್ಗೆ ದೂರಲಾಗಿದೆ.  ಬಾಯಾರು ಬಳ್ಳೂರು ನಿವಾಸಿ  ಇಬ್ರಾಹಿಂ ಇಹ್‌ಸಾನ್  ನೀಡಿದ ದೂರಿನಂತೆ ರೈಲ್ವೇ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.  ನಿನ್ನೆ ಮಧ್ಯಾಹ್ನ 2 ಗಂಟೆ ವೇಳೆ ಏರನಾಡ್ ಎಕ್ಸ್‌ಪ್ರೆಸ್‌ನಲ್ಲಿ  ಪ್ರಯಾಣಿಸುತ್ತಿದ್ದ ದೂರುಗಾರನ ಸುಮಾರು 80 ಸಾವಿರ ರೂ. ಮೌಲ್ಯದ  ಲಾಪ್‌ಟಾಪ್ ಒಳಗೊಂಡ ಬ್ಯಾಗ್ ಕಳವಿಗೀಡಾಗಿರುವುದಾಗಿ ದೂರಲಾಗಿದೆ. ಕಣ್ಣೂರು ರೈಲ್ವೇ ನಿಲ್ದಾಣಕ್ಕೆ ತಲುಪಿದಾಗ ಬ್ಯಾಗ್ ಕಳವಿಗೀಡಾದ ಬಗ್ಗೆ ತಿಳಿದುಬಂದಿತ್ತೆನ್ನಲಾಗಿದೆ.

ಕುಂಬಳೆ ಪಂಚಾಯತ್‌ನಿಂದ ಶಿರಿಯ ಹೊಳೆಯ ಹೊಯ್ಗೆ ವ್ಯಾಪಾರಕ್ಕೆ ಕಡಿವಾಣ: ಹೊಯ್ಗೆ ಸಂಗ್ರಹಕ್ಕೆ ಹೈಕೋರ್ಟ್‌ನಿಂದ ತಡೆ

ಕೊಚ್ಚಿ: ಕುಂಬಳೆ ಗ್ರಾಮ ಪಂಚಾಯತ್‌ನ ಆರಿಕ್ಕಾಡಿ, ಶಿರಿಯ ಹೊಳೆಗಳ ಸಂಗಮ ಸ್ಥಾನವಾದ ಅಳಿವೆ ಬಾಗಿಲಿನಿಂದ ಹೊಯ್ಗೆ ಸಂಗ್ರಹಿಸುವು ದನ್ನು ಹೈಕೋರ್ಟ್ ತಡೆಯೊಡ್ಡಿದೆ. 9 ವರ್ಷಗಳಿಂದ ಇಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಹೊಯ್ಗೆ ವ್ಯಾಪಾರದಲ್ಲಿ ಸುಮಾರು 15 ಕೋಟಿ ರೂಪಾಯಿ ಗಳನ್ನು ಪಂಚಾಯತ್ ದಂಡವಾಗಿ ಪಾವತಿಸಬೇಕಾಗಿ ಬರಲಿದೆ ಎಂಬ ಸೂಚನೆಯಿದೆ. ಇದರ ಹೊರತು ಪಂಚಾಯತ್ ಕಾರ್ಯದರ್ಶಿ ಸಹಿತ ಇಲ್ಲಿಂದ ಹೊಯ್ಗೆ ಸಂಗ್ರಹಿಸಲು ಅನುಮತಿ ನೀಡಿದ ಸರಕಾರಿ ನೌಕರರ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ವರ್ಷದ  ಶಿರಿಯದ ಹೊಯ್ಗೆ …

ನೆಕ್ರಾಜೆ ಸಹಕಾರಿ ಬ್ಯಾಂಕ್ ನಿರ್ದೇಶಕಿ ಮೆಹಾರುನ್ನೀಸ ನಿಧನ

ನೆಕ್ರಾಜೆ: ನೆಕ್ರಾಜೆ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕಿ ಪೈಕ ನಿವಾಸಿ ಮೆಹಾರುನ್ನೀಸ (44) ನಿಧನ ಹೊಂದಿದರು. ಹೃದಯ ಸಂಬಂಧವಾದ ಅಸೌಖ್ಯದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೈತ್ರಿ ಪೈಕ ಮಹಿಳಾ ವೇದಿಯ ಸಂಚಾಲಕಿಯಾಗಿಯೂ, ಸಾರ್ವಜನಿಕ ರಂಗದಲ್ಲಿ ಸಕ್ರಿಯರಾಗಿದ್ದರು. ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತೆಯಾಗಿದ್ದಾರೆ. ಮೃತರು ಪತಿ ಚೆಂಗಳ ಪಂಚಾಯತ್ ೭ನೇ ವಾರ್ಡ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಜೆ.ಪಿ. ಬಷೀರ್, ಮಕ್ಕಳಾದ ಮುಹಮ್ಮದ್ ಸಿನಾನ್ , ಅನಾನ್ ಅಬ್ಬಾಸ್, ಆಯಿಷ ಹಾದಿಯ, ಸಹೋದರರಾದ ನಾಸರ್, …

ಎಂಡಿಎಂಎ ಪ್ರಕರಣ ಮಧ್ಯವರ್ತಿ ಉಪ್ಪಳ ನಿವಾಸಿ ಸೆರೆ

ಮಂಜೇಶ್ವರ: ಕಾರಿನಲ್ಲಿ ಬೆಂಗಳೂರಿಗೆ ಮಾದಕ ವಸ್ತುವಾದ 405 ಗ್ರಾಂ ಎಂಡಿ ಎಂಎ ಸಾಗಿಸಿದ ಪ್ರಕರಣದಲ್ಲಿ ಮಧ್ಯವರ್ತಿಯಾಗಿ ಕಾರ್ಯವೆಸಗಿದ ಆರೋಪದಂತೆ ಉಪ್ಪಳ ನಿವಾಸಿಯನ್ನು ಪೆರಿಂದಲ್‌ಮಣ್ಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುಮೇಶ್ ಸುಧಾಕರನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ಮಣ್ಣಂಗುಳಿ ನಿಜಾಮ್ ಮಂಜಿಲ್‌ನ ಸಯ್ಯಿದ್ ಮುಹಮ್ಮದ್ ನವಾಜ್ (33) ಬಂಧಿತ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ದಿನಗಳ ಹಿಂದೆ ಕೆಲವರನ್ನು ಬಂಧಿಸಿದ್ದರು. ಈಗ ಬಂಧಿತನಾದವನ ವಿರುದ್ಧ ಮಂಜೇಶ್ವರ ಠಾಣೆಯಲ್ಲಿ  ಮಾದಕದ್ರವ್ಯ ಪ್ರಕರಣ ಹಾಗೂ ಹಲ್ಲೆ ಪ್ರಕರಣಗಳಿವೆ. ಮಾತ್ರವಲ್ಲ ಕಾಪಾ …