ಕುಂಬಳೆ ಪಂ. ಓಣಂ ಆಚರಣೆ ಲೀಗ್ ಕಾರ್ಯಕರ್ತನ ಮನೆಯಲ್ಲಿ  ತೀವ್ರಗೊಂಡ ವಿವಾದ; ಬಿಜೆಪಿಯಲ್ಲೂ ಪ್ರತಿಭಟನೆ

ಕುಂಬಳೆ: ಕುಂಬಳೆ ಪಂಚಾಯತ್‌ನ ಓಣಂ ಆಚರಣೆ ವಿವಾದಕ್ಕೆಡೆಯಾಗಿದೆ. ಓಣಂ ಆಚರಣೆ 23ರಂದು ನಡೆಸುವುದಾಗಿ ಪೋಸ್ಟರ್ ಸಿದ್ಧಪಡಿಸಿದ್ದರೂ ಅದಕ್ಕೆ  ಸ್ಥಳ ಎಲ್ಲಿ ಎಂದು ತಿಳಿಸಿರಲಿಲ್ಲ. ಕಾರ್ಯಕ್ರಮ ನಡೆಯುವ ಸ್ಥಳವನ್ನು  ಕೊನೆಯವರೆಗೆ ಗೌಪ್ಯವಾಗಿರಿಸಿದ ಪಂಚಾಯತ್ ಅಧಿಕಾರಿಗಳು ಕೊನೆಗೆ ನಿನ್ನೆ ಬೆಳಿಗ್ಗೆ ಪಂಚಾಯತ್ ಸದಸ್ಯನೂ ಅಲ್ಲದ ಲೀಗ್ ಕಾರ್ಯಕರ್ತನ ಮನೆಯಲ್ಲಿ ಓಣಂ ಆಚರಣೆ ನಡೆಸಿರುವುದಾಗಿ ಲೀಗ್ ಕಾರ್ಯಕರ್ತರು ತಿಳಿಸಿದ್ದಾರೆ. ಪಂಚಾಯತ್ ಕಚೇರಿಯಲ್ಲಿ ವಿಶಾಲವಾದ ಸಭಾಂಗಣ ಸಹಿತ ಸೌಕರ್ಯವಿರುವಾಗ ಪಂಚಾಯತ್‌ಗೆ ಸಂಬಂಧಪಟ್ಟ ಹಲವು ವಿವಾದಗಳಲ್ಲಿ ಸಿಲುಕಿಕೊಂಡಿರುವ ಮರ್ಚೆಂಟ್ಸ್ ಅಸೋಸಿಯೇಶನ್ ಘಟಕ ಕಾರ್ಯದರ್ಶಿಯ  ಮನೆಯಲ್ಲಿ …

ಲಾರಿಗಳು ಢಿಕ್ಕಿ ಹೊಡೆದು ಬೆಂಕಿಗಾಹುತಿ: ಹೊಸದುರ್ಗ ನಿವಾಸಿ ಸಹಿತ ಇಬ್ಬರು ಸಜೀವ ದಹನ

ಕಣ್ಣೂರು: ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಮಿಕ್ಸರ್ ಹೆವ್ವೀ  ಲಾರಿ ಢಿಕ್ಕಿ  ಹೊಡೆದು ಬೆಂಕಿ ಎದ್ದು ಇಬ್ಬರು ಸಜೀವ ದಹನಗೊಂಡ ಘಟನೆ ಕಣ್ಣೂರಿನಲ್ಲಿ ಇಂದು ಮುಂಜಾನೆ ನಡೆದಿದೆ.  ಹೊಸದುರ್ಗ ಮಾವುಂಗಾಲ್ ನಿವಾಸಿ  ಇಬಿನೈಸರ್ ಆಂಟೋ (24) ಮತ್ತು ಪಾಲಕ್ಕಾಡ್ ನಿವಾಸಿ ಮುಹಮ್ಮದ್ ಶೆಬಿನ್ (22) ಸಾವನ್ನಪ್ಪಿದ ದುರ್ದೈವಿಗಳು. ಕಣ್ಣೂರು ಪಿಲಾತ್ತರ ಮಂಡೂರು ರಾಜ್ಯ ಹೆದ್ದಾರಿಯ ಮಂಡೂರು ಮಸೀದಿ ಬಳಿ ಇಂದು ಮುಂಜಾನೆ 3.25ಕ್ಕೆ ದುರ್ಘಟನೆ ನಡೆದಿದೆ. ಪಳಯಂಗಾಡಿಯಿಂದ ಬರುತ್ತಿದ್ದ ಲಾರಿಯ ಕ್ಲಚ್ ಕೆಟ್ಟುಹೋದ ಪರಿಣಾಮ ಅದನ್ನು ನಿನ್ನೆ …

ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಐದು ಹುಂಜಗಳ ವಶ, ಐವರ ಸೆರೆ

ಕುಂಬಳೆ: ಇಚ್ಲಂಗೋಡು ದೇವ ಸ್ಥಾನಕ್ಕೆ ಸಮೀಪ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಕುಂಬಳೆ ಠಾಣೆ ಎಸ್‌ಐ ಗಣೇಶನ್ ಕೆ.ಪಿ ನೇತೃತ್ವದ ಪೊಲೀಸರು ನಿನ್ನೆ ದಾಳಿ ನಡೆಸಿ ಐದು ಮಂದಿಯನ್ನು ಸೆರೆಹಿಡಿದು, ಐದು ಹುಂಜ ಕೋಳಿಗಳನ್ನು  ವಶಕ್ಕೆ ತೆಗೆದುಕೊಂಡಿದ್ದಾರೆ. ಮೀಯಪದವು ಬೇರಿಕೆ ನಿವಾಸಿ  ದೀಕ್ಷಿತ್ (25), ಮೊಗ್ರಾಲ್ ಪುತ್ತೂರು ಎಡಚ್ಚೇರಿಯ ಮಹೇಶ್ ಕೆ (40), ಜೋಡುಕಲ್ಲಿನ ಪ್ರಕಾಶ್ ಶೆಟ್ಟಿ (60), ಮೀಯಪದವು ಅಡ್ಕತ್ತಗುರಿಯ ಗಂಗಾಧರ ಮೂಲ್ಯ (63) ಮತ್ತು ಪೈವಳಿಕೆ ನಗರ ಮರಿಕದ ಐತ್ತಪ್ಪ (40) ಎಂಬವರನ್ನು ಪೊಲೀಸರು …

ಓಣಂ ಸ್ಪೆಷಲ್ ಡ್ರೈವ್: ಮನೆಯಲ್ಲಿ ಬಚ್ಚಿಟ್ಟಿದ್ದ ಮೆಥಾಫಿಟಾಮಿನ್ ಪತ್ತೆ

ಕುಂಬಳೆ: ಮನೆಯಲ್ಲಿ ಬಚ್ಚಿಟ್ಟಿದ್ದ ಮಾದಕವಸ್ತುವಾದ 8.98 ಗ್ರಾಂ ಮೆಥಾಫಿಟಮಿನ್ ಅಬಕಾರಿ ತಂಡ ಓಣಂ ಸ್ಪೆಷಲ್ ಡ್ರೈವ್ ಪ್ರಕಾರ ನಿನ್ನೆ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕುಂಬಳೆ ಮುಖಾರಿಕಂಡ ತಂಶೀರಾ ಮಹಲ್ ವೀಟಿಲ್‌ನ ಮೊಹಮ್ಮದ್ ರಿಸ್ವಾನ್ (27) ಎಂಬಾತನ ವಿರುದ್ಧ ಎನ್‌ಡಿಪಿಎಸ್ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆ ವೇಳೆ ಆತ ಮನೆಯಲ್ಲಿ ಇಲ್ಲದ ಕಾರಣ ಆತನನ್ನು ಸೆರೆ ಹಿಡಿಯಲು ಸಾಧ್ಯವಾಗಿಲ್ಲ ವೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮಾರಾಟಕ್ಕಾಗಿ ಮನೆಯಲ್ಲಿ ಮಾದಕದ್ರವ್ಯ ಬಚ್ಚಿಟ್ಟಿರುವ …

ವ್ಯಾಪಾರಿಯನ್ನು ಯುವತಿ ಮನೆಗೆ ಕರೆಸಿ ಫೊಟೋ, ವೀಡಿಯೋ ತೆಗೆದು ಹಣ, ಮೊಬೈಲ್ ಫೋನ್‌ಗಳ ಲಪಟಾವಣೆ: ದಂಪತಿ ಸಹಿತ ಮೂವರ ಬಂಧನ

ಕುಂಬಳೆ: ಸಾಲ ಕೊಟ್ಟ ವ್ಯಾಪಾರಿ ಯನ್ನು ಉಪಾಯದಿಂದ ಮನೆಗೆ ಕರೆಸಿ ಬೆಡ್‌ರೂಂನಲ್ಲಿ ವಿವಿಧ ರೀತಿಯ ಫೊಟೋ ತೆಗೆದು ಬ್ಲ್ಯಾಕ್‌ಮೇಲ್ ನಡೆಸಿ ಹಣ ಹಾಗೂ ಮೊಬೈಲ್ ಫೋನ್ ಲಪಟಾಯಿಸಿದ ಆರೋಪದಂತೆ ದಂಪತಿ ಸಹಿತ ಮೂವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಮುಟ್ಟಂ ಬಂಗರ ನಿವಾಸಿಯಾದ ೬೪ರ ಹರೆಯದ ವ್ಯಾಪಾರಿ ನೀಡಿದ ದೂರಿನಂತೆ ಕುಬಣೂರಿನ ರಿಸ್ವಾನ (28), ಈಕೆಯ ಪತಿ ಹಸ್ಸನ್ ಆಸಿಫ್ (33), ಸಂಬಂಧಿಕ ಮೊಗ್ರಾಲ್ ನಿವಾಸಿ ಮುಹ ಮ್ಮದ್ ಸಿರಾಜ್ (32) ಎಂಬಿವರನ್ನು ಬಂಧಿಸಲಾಗಿದೆ. ಇವರಿಗೆ ನ್ಯಾಯಾಲಯ ರಿಮಾಂಡ್ …

ಆಹಾರ ಸೇವಿಸುತ್ತಿದ್ದಾಗ ಕುಸಿದುಬಿದ್ದ ಪದವಿ ವಿದ್ಯಾರ್ಥಿ ಚಿಕಿತ್ಸೆ ಮಧ್ಯೆ ಮೃತ್ಯು

ಕುಂಬಳೆ: ಆಹಾರ ಸೇವಿಸುತ್ತಿದ್ದ ವೇಳೆ ಕುಸಿದುಬಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಪ್ರಥಮ ವರ್ಷ ಪದವಿ ವಿದ್ಯಾರ್ಥಿ ಮೃತಪಟ್ಟನು. ಕುಂಬಳೆ ಕುಂಟಂಗೇರಡ್ಕದ ಅಬ್ದುಲ್ಲ ಎಂಬವರ ಪುತ್ರ ಮುಬಾರಿಸ್  (18) ಮೃತಪಟ್ಟ ದುರ್ದೈವಿ. ಶನಿವಾರ ರಾತ್ರಿ ಮನೆಯಲ್ಲಿ ಆಹಾರ ಸೇವಿಸುತ್ತಿದ್ದಾಗ ಮುಬಾರಿಸ್ ಕುಸಿದುಬಿದ್ದಿದ್ದರು. ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಲಾಯಿತು. ಅಲ್ಲಿ ವೈದ್ಯರು ನಡೆಸಿದ ತಪಾಸಣೆ ವೇಳೆ ಗಂಭೀರ ಸ್ಥಿತಿಯಲ್ಲಿರುವುದಾಗಿ ತಿಳಿದುಬಂತು.  ಈ ಹಿನ್ನೆಲೆಯಲ್ಲಿ  ಮಂಗಳೂರಿನ ಆಸ್ಪತ್ರೆಗೆ  ಕೊಂಡೊಯ್ದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ನಿಧನ …

ವಾಹನಗಳಲ್ಲಿ ಹಿಂಬಾಲಿಸಿ  ಬಂದು ಯುವಕರಿಬ್ಬರ ಮೇಲೆ ಹಲ್ಲೆ: ಐದು ಮಂದಿ ವಿರುದ್ಧ ಕೇಸು ದಾಖಲು

ಬದಿಯಡ್ಕ: ವಾಹನಗಳಲ್ಲಿ ಹಿಂಬಾಲಿಸಿಕೊಂಡು ಬಂದ ತಂಡವೊಂದು ಸ್ನೇಹತರಿಬ್ಬರ ಮೇಲೆ ಹಲ್ಲೆ  ನಡೆಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಐದು ಮಂದಿ ಯ ವಿರುದ್ದ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬದಿಯಡ್ಕ ವಳಮಲೆ ನಿವಾಸಿ ಧ್ವನೀಶ್ ಶೆಟ್ಟಿ ಸಿ.ಆರ್ (18) ಮತ್ತು ಆತನ ಸ್ನೇಹಿತ ಬದಿಯಡ್ಕ ಯಶ್ವಂತ್(19) ಎಂಬವರು  ಹಲ್ಲೆಗೊಳಗಾಗಿದ್ದು, ಆ ಬಗ್ಗೆ ಧ್ವನೀಶ್ ನೀಡಿದ ದೂರಿನಂತೆ ಶುಹೈಬ್ (26), ಬದಿಯಡ್ಕದ ಹನನ್ ಶಹಲ್ (18) ಹಾಗೂ ಕಂಡರೆ ಗುರುತುಹಚ್ಚಲು ಸಾಧ್ಯವಾಗುವ ಇತರ ಮೂವರು ಸೇರಿದಂತೆ  ಒಟ್ಟು ಐದು ಮಂದಿ …

ಬಿಜೆಪಿಯಿಂದ ಓಣಂ ಕಿಟ್ ವಿತರಣೆ

ನಾರಂಪಾಡಿ: ಬಿಜೆಪಿ ಬದಿಯಡ್ಕ ಮಂಡಲ ೫ನೇ ವಾರ್ಡ್ ನಾರಂಪಾಡಿ ಸಮಿತಿ ವತಿಯಿಂದ ೬೦ರಷ್ಟು ಕುಟುಂಬಗಳಿಗೆ ಓಣಂ ಕಿಟ್‌ಗಳನ್ನು ವಿತರಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ಓಣಂನಂತಹ ಆಚರಣೆ ಸಂದರ್ಭಗಳಲ್ಲಿ ಧರ್ಮ, ಸಮಾಜ, ರಾಷ್ಟ್ರೀಯ ಭಿನ್ನತೆಗಳನ್ನು ಮರೆತು ಒಂದಾಗಲಿರುವ ವೇದಿಕೆಗಳಾಗಬೇಕೆಂದು ಅವರು ಆಹ್ವಾನ ನೀಡಿದರು. ಬೂತ್ ಅಧ್ಯಕ್ಷ ಸತ್ಯಗೋಪಾಲ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ರಾಜ್ಯ ಕೌನ್ಸಿಲ್ ಸದಸ್ಯ ಹರೀಶ್ ನಾರಂಪಾಡಿ, ಬದಿಯಡ್ಕ ಮಂಡಲ ಅಧ್ಯಕ್ಷ ಎಂ. ಗೋಪಾಲಕೃಷ್ಣನ್ ಮಾತನಾಡಿದರು.

ಅಣಂಗೂರಿನಿಂದ ಹೊಸ ಬಸ್ ನಿಲ್ದಾಣವರೆಗೆ ವನ್‌ವೇ ಏರ್ಪಡಿಸಲು ಶಾಸಕ ಕಲ್ಲಟ್ರ ಮಾಹಿನ್ ಆಗ್ರಹ

ಕಾಸರಗೋಡು: ನಗರದ ಸಂಚಾರ ತಡೆ ಸಮಸ್ಯೆ ಪರಿಹಾರಕ್ಕಾಗಿ ಅಣಂಗೂರಿನಿಂದ ಹೊಸ ಬಸ್ ನಿಲ್ದಾಣದವರೆಗೆ ವನ್‌ವೇ ವ್ಯವಸ್ಥೆ ಏರ್ಪಡಿಸಬೇಕೆಂದು ಶಾಸಕ ಕಲ್ಲಟ್ರ ಮಾಹಿನ್ ಆಗ್ರಹಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡುವುದಕ್ಕಾಗಿ  ಜಿಲ್ಲಾ ರಸ್ತೆ ಸುರಕ್ಷಾ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿ ನಿರ್ದೇಶ ನೀಡಿದರು. ಕಾಸರಗೋಡು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಶಾಸಕ ಈ ಬೇಡಿಕೆ ಮುಂದಿಟ್ಟಿದ್ದಾರೆ. ಪ್ರಾಧಿಕಾರದ ಸಭೆ ಮುಂದಿನ ತಿಂಗಳು ಮೊದಲ ವಾರದಲ್ಲಿ ನಡೆಸುವುದಕ್ಕಾಗಿ ಜಿಲ್ಲಾಧಿಕಾರಿ ನಿರ್ದೇಶ ನೀಡಿದ್ದಾರೆ. ನಗರದ ಸಾರಿಗೆ ತಡೆ ಪರಿಹರಿಸಲು ತುರ್ತು ಕ್ರಮ ಅನಿವಾರ್ಯವೆಂದು …

ಹೃದಯಾಘಾತ: ಪಾಮೋಯಿಲ್ ಸೇಲ್ಸ್ ಎಕ್ಸಿಕ್ಯೂಟಿವ್ ನಿಧನ

 ಕಾಸರಗೋಡು: ಖಾಸಗಿ ಪಾಮೋ ಯಿಲ್ ಕಂಪೆನಿಯ ಕಾಸರಗೋಡು ಸೇಲ್ಸ್ ಎಕ್ಸಿಕ್ಯೂಟಿವ್ ಹೃದಯಾಘಾತ ದಿಂದ ನಿಧನ ಹೊಂದಿದರು. ಕಾಸರ ಗೋಡು ಬೀಚ್ ರಸ್ತೆ ಪೈ ಕಪೌಂಡ್‌ನ ದಿ| ಜಯರಾಮ ಪೈಯವರ ಪುತ್ರ ವೆಂಕಟೇಶ್ ಪೈ (42) ನಿಧನ ಹೊಂದಿ ದವರು.  ನಿನ್ನೆ ಮುಂಜಾನೆ ೪.೩೦ರ ವೇಳೆ ವಾಂತಿಯುಂಟಾಗಿ ಅಸ್ವಸ್ಥಗೊಂಡಿ ದ್ದರು. ಕೂಡಲೇ ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ತಾಯಿ ಗೀತಾ ಪೈ ಹಾಗೂ  ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರ ಸುನಿಲ್ ಪೈ ಈ ಹಿಂದೆ …