ಪ್ರಧಾನಿ ಮೋದಿ ಸರಕಾರ ಅನುಸರಿಸುತ್ತಿರುವುದು ಡಾ. ಅಂಬೇಡ್ಕರ್‌ರ ದಾರಿ-ಎಂ.ಎಲ್. ಅಶ್ವಿನಿ

ಕಾಸರಗೋಡು: ಪ್ರಧಾನಮಂತ್ರಿ ನರೇಂದ್ರಮೋದಿ ಸರಕಾರ ಅನುಸರಿ ಸುತ್ತಿರುವುದು ಡಾ. ಅಂಬೇಡ್ಕರ್‌ರ ದಾರಿಯಾಗಿದೆಯೆಂದೂ ಸವಲತ್ತು ಗಳ ವಿತರಣೆಯಲ್ಲಾಗಲೀ, ಯೋಜ ನೆಗಳ ಅನುಷ್ಠಾನದಲ್ಲಾಗಲೀ ಯಾವು ದೇ ರೀತಿಯ ತಾರತಮ್ಯ ತೋರದೆ ಅದನ್ನು ಜ್ಯಾರಿಗೊಳಿಸುತ್ತಿರುವ ಸರಕಾರವಾಗಿದೆ ಕೇಂದ್ರದಲ್ಲಿ  ಆಳುತ್ತಿ ದೆಯೆಂದು ಕಾಸರಗೋಡು ಲೋಕ ಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಹೇಳಿದ್ದಾರೆ.

ಅರಮಂಗಾನದಲ್ಲಿ ನಿನ್ನೆ ನಡೆದ ಉದುಮ ವಿಧಾನಸಭಾ ಮಂಡಲದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಎಲ್ಲಾ ವಿಭಾಗದ ಜನರ ಕಲ್ಯಾಣವನ್ನು ಖಾತರಿಪಡಿಸುವುದರ ಜೊತೆಗೆ ಬಡವರ ಹಾಗೂ  ದೀನದಲಿತರ ಸಬ ಲೀಕರಣ ಖಾತರಿಪಡಿಸಲು ಮೋದಿ ಸರಕಾರದಿಂದ ಸಾಧ್ಯವಾಗಿದೆ ಯೆಂದೂ ಅವರು ಹೇಳಿದರು. ಉದು ಮ ಮಂಡಲ ಅಧ್ಯಕ್ಷ ಕೆ.ಟಿ. ಪುರು ಷೋತ್ತಮನ್, ಪ್ರಧಾನ ಕಾರ್ಯದರ್ಶಿ ರತೀಶ್ ಪೊಳ್ಳಕಡ, ಕಾರ್ಯದರ್ಶಿ ಗಂಗಾಧರನ್ ತಚ್ಚಂ ಗಾಡ್, ಮಣಿಕಂಠನ್ ಚಾತಂಗೈ, ಸುಂದರನ್,  ಕುಮಾರನ್, ಕರುಣಾಕರನ್ ಮೊದಲಾದವರು ಮಾತನಾಡಿದರು.

Leave a Reply

Your email address will not be published. Required fields are marked *

You cannot copy content of this page