ಯುವತಿ ನಾಪತ್ತೆ

ಮಂಜೇಶ್ವರ: ಮನೆಯಿಂದ ಹೊರ ಹೋದ ಯುವತಿ ವಾಪಸಾಗಲಿಲ್ಲವೆಂದು ದೂರಿ ತಾಯಿ ಮಂಜೇಶ್ವರ ಠಾಣೆಗೆ ದೂರು ನೀಡಿದ್ದಾರೆ.  ತಲಪಾಡಿ ಮರಿಯಾಶ್ರಮ ಚರ್ಚ್ ಬಳಿಯ ನಿವಾಸಿ ಅಂತೋಣಿ ಸಿಲ್ವರ್‌ಸ್ಟಾರ್ ಡಿಸೋಜಾರ ಪುತ್ರಿ ಅನಿಶಾ ಡಿಸಿಲ್ವಾ (24) ನಾಪತ್ತೆಯಾಗಿರುವುದಾಗಿ ತಾಯಿ ಜೆಸಿಂತಾ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ತಿಂಗಳ 5ರಂದು ಮಧ್ಯಾಹ್ನ 1 ಗಂಟೆಗೆ ಮನೆಯಿಂದ ಈಕೆ ಹೊರಕ್ಕೆ ಹೋಗಿದ್ದು, ಆದರೆ ವಾಪಸಾಗಲಿಲ್ಲ ವೆಂದು ದೂರಿನಲ್ಲಿ ತಿಳಿಸಲಾಗಿದೆ.

ಅಸೌಖ್ಯ: ಯುವಕ ನಿಧನ

ಬದಿಯಡ್ಕ: ಅಸೌಖ್ಯ ತಗಲಿ ಚಿಕಿತ್ಸೆಗೆ ದಾಖಲಿಸಿದ್ದ  ಚೆನ್ನಾರಕಟ್ಟೆ ನಿವಾಸಿ, ಸಂಘದ ಸಕ್ರಿಯ ಕಾರ್ಯ ಕರ್ತ ರವಿಕುಮಾರ್ ಯಾನೆ ಚಿನ್ನತಂಬಿ (20) ನಿಧನ ಹೊಂದಿದರು. ದಿ| ಗಣೇಶರ ಪುತ್ರನಾಗಿದ್ದಾರೆ. ಅಸೌಖ್ಯ ನಿಮಿತ್ತ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರು ತಾಯಿ ಮಹೇಶ್ವರಿ, ಸಹೋದರರಾದ ಮಣಿ, ರಂಜಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬಸ್ ಪ್ರಯಾಣ ಮಧ್ಯೆ 14ರ ವಿದ್ಯಾರ್ಥಿನಿಗೆ ಉಪಟಳ: ಮಧ್ಯವಯಸ್ಕನ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: ಬಸ್ ಪ್ರಯಾಣ ಮಧ್ಯೆ 14ರ ಹರೆಯದ ವಿದ್ಯಾರ್ಥಿನಿಗೆ ಉಪಟಳ ನೀಡಿರುವುದಾಗಿ ದೂರಲಾಗಿದೆ. ಶಾಲಾ ಅಧಿಕಾರಿಗಳು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಬೇಡಡ್ಕ ಪೊಲೀಸರು ಪೋಕ್ಸೋ ಪ್ರಕರಣದಂತೆ ಕೇಸು ದಾಖಲಿಸಿದ್ದಾರೆ. ನಿನ್ನೆ ಘಟನೆ ನಡೆದಿದೆ. ಖಾಸಗಿ ಬಸ್‌ನಲ್ಲಿ ಬಾಲಕಿ ಪ್ರಯಾಣಿಸುತ್ತಿದ್ದಾಗ ಮಧ್ಯವಯಸ್ಕನಾದ ಓರ್ವ ಬಾಲಕಿಯ ಸಮೀಪದಲ್ಲಿ ಕುಳಿತುಕೊಂಡು ಉಪಟಳ ನೀಡಿರುವುದಾಗಿ ಹೇಳಲಾ ಗಿದೆ. ಭಯದಿಂದ ಬಾಲಕಿ ಈ ವಿಷವನ್ನು ಯಾರಲ್ಲೂ ಹೇಳಿರಲಿಲ್ಲ. ಈ ಮಧ್ಯೆ ಉಪಟಳ ನೀಡಿದ ವ್ಯಕ್ತಿ ಇಳಿದು ಹೋಗಿದ್ದು, ಬಾಲಕಿ ಶಾಲೆಗೆ ತಲುಪಿದ ಬಳಿಕ ಅಧ್ಯಾಪಿಕೆಯರೊಂದಿಗೆ …

2 ಕಾರುಗಳು ಪಲ್ಟಿ: 4 ಮಂದಿಗೆ ಗಾಯ

ಉಪ್ಪಳ: ಕಾರುಗಳೆರಡು ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಮಣ್ಣಂಗುಳಿ ಪರಿಸರ ನಿವಾಸಿಗಳಾದ ಶಾಹಿಲ್ (22), ಮನಾಫ್ (19), ಫಹಾಲ್ (19), ರಾಶಿದ್ (25) ಗಾಯಗೊಂಡವರು. ನಿನ್ನೆ ಸಂಜೆ 4 ಗಂಟೆ ವೇಳೆ ಮಣ್ಣಂಗುಳಿ ಪರಿಸರದಲ್ಲಿ ಅಪಘಾತ ಸಂಭವಿಸಿದೆ. ಈ ನಾಲ್ಕು ಮಂದಿ ಎರಡು ಕಾರುಗಳಲ್ಲಾಗಿ ಬಾಯಾರು ಭಾಗದತ್ತ ತೆರಳುತ್ತಿರುವಾಗ ಮಣ್ಣಂಗುಳಿ ಇಳಿಜಾರಿನಲ್ಲಿ ಕಾರೊಂದನ್ನು ರಸ್ತೆ ಬದಿಗೆ ಚಲಾಯಿಸುತ್ತಿದ್ದಂತೆ ಹಿಂದಿನಿಂದ ಆಗಮಿಸುತ್ತಿದ್ದ ಈ ತಂಡದ ಇನ್ನೊಂದು ಕಾರು ಢಿಕ್ಕಿ ಹೊಡೆದಿದೆ. ಈ ವೇಳೆ ಎರಡೂ ಕಾರುಗಳು …

ಕಟ್ಟಡ ನಿರ್ಮಾಣ ಕಾರ್ಮಿಕ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಟ್ಟಡ ನಿರ್ಮಾಣ ಕಾರ್ಮಿಕ ಮನೆ ಯೊಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಪುಲ್ಲೂರಿನ ವಿ. ಸಜಿತ್ (42) ಮೃತಪಟ್ಟ ಕಾರ್ಮಿಕ. ನಿನ್ನೆ ಸಂಜೆ ೪ ಗಂಟೆ ವೇಳೆ ಕಿಟಿಕಿಯ ಸರಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಸಜಿತ್‌ರ ಮೃತದೇಹ ಪತ್ತೆಯಾಗಿದೆ. ಅಂಬಲತ್ತರ ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ. ವಿ. ನಾರಾಯಣನ್ ಮೇಸ್ತ್ರಿ- ಕೆ.ಕೆ. ನಾರಾಯಣಿ ದಂಪತಿ ಪುತ್ರನಾದ ಇವರು ಪತ್ನಿ ಪ್ರತಿಭಾ ಪೆರ್ಲ, ಮಕ್ಕಳಾದ ಆದಿದೇವ್, ಆರಾಧ್ಯ, ಸಹೋದರರಾದ ವಿ. ಸುನಿಲ್ ಕುಮಾರ್, ವಿ. …

ಪೆರ್ಲ- ಸೀತಾಂಗೋಳಿ ರಸ್ತೆಯಲ್ಲಿ ಅಪಾಯ ಆಹ್ವಾನಿಸುವ ಮೋರಿ ಸಂಕದ ಉಬ್ಬು ತಗ್ಗು

ಪುತ್ತಿಗೆ: ಸುಂದರವಾದ ರಸ್ತೆ ಎಂಬ ನೆಲೆಯಲ್ಲಿ ವಾಹನಗಳು ಹೆಚ್ಚಿನ ವೇಗದಲ್ಲಿ ಸಂಚರಿಸುವಾಗ ಜಾಗ್ರತೆ ವಹಿಸಬೇಕಾದ ಸ್ಥಳವೊಂದು ಪೆರ್ಲ- ಸೀತಾಂಗೋಳಿ ರಸ್ತೆಯಲ್ಲಿದೆ. ಪುತ್ತಿಗೆ ಸಮೀಪದ ಮುಖಾರಿಕಂಡ ಬಸ್ ತಂಗುದಾಣದ ಸಮೀಪವೇ ಮೋರಿಯೊಂದಿಗೆ. ಇಲ್ಲಿಗೆ ತಲುಪುವಾಗ ವಾಹನಗಳೆಲ್ಲ ಅಪಘಾತಕ್ಕೀಡಾಗುತ್ತಿದ್ದು, ಕಾಂಕ್ರೀಟ್‌ನ ಉಬ್ಬು ತಗ್ಗುಗಳು ಇದಕ್ಕೆ ಕಾರಣವಾಗಿದೆ. ಮೋರಿಯ ಕಾಂಕ್ರೀಟ್ ಹಾಗೂ ರಸ್ತೆ ಮಧ್ಯೆ ಅಂತರವಿದ್ದು, ವೇಗದಿಂದ ಚಲಿಲುವ ವಾಹನಗಳು ಕಾಂಕ್ರೀಟ್‌ಗೆ ಗುದ್ದಿ ಕೆಲವೊಮ್ಮೆ ರಸ್ತೆ ಬಿಟ್ಟು ಬದಿಗೆ ಅಪ್ಪಳಿಸುವುದು ಕಂಡು ಬರುತ್ತಿದೆ. ಚಾಲಕರಿಗೆ ಗೋಚರವಾಗದ ಈ ಅಪಾಯಕರ ಗಂಟೆಯಿಂದ ಅಪಘಾತ …

ಕಾರಿಗೆ ಕಿಚ್ಚಿಟ್ಟು ಸಾಮೂಹಿಕ ಆತ್ಮಹತ್ಯಾ ಯತ್ನ: ಸಾವಿಗೆ ಮುಂಚಿತ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಗೊಂಡ ವೀಡಿಯೋ ಬಗ್ಗೆ ಪೊಲೀಸ್ ತನಿಖೆ

ಮಾನಂತವಾಡಿ: ಕುಟುಂಬ ಸಹಿತ ಸಂಚರಿಸುತ್ತಿದ್ದ ಕಾರಿಗೆ ಕಿಚ್ಚಿರಿಸಿ ಸಾಮೂಹಿಕ ಆತ್ಮಹತ್ಯೆಗೈಯ್ಯಲಿರುವ ಪತಿಯ ಯತ್ನ ಗಮನಕ್ಕೆ ಬ ರಲಿಲ್ಲವೆಂದು ಮೃತಪಟ್ಟ ಸಜೀರ್‌ರ ಪತ್ನಿ ನಜ್ಮತ್ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಕೋಟದಲ್ಲಿ ವ್ಯಾಪಾರಿಯಾದ ಕಣ್ಣೂರು ನಿವಾಸಿ ಸಜೀರ್ ಹಾಗೂ ಕುಟುಂಬ ಊರಿಗೆ ಮರಳುತ್ತಿದ್ದ ಪ್ರಯಾಣ ಮಧ್ಯೆ ಮಾನಂತವಾಡಿಯಲ್ಲಿ ಕಾರಿಗೆ ಪೆಟ್ರೋಲ್ ಸುರಿದು ಕಿಚ್ಚಿರಿಸಲಾಗಿದೆ. ಸಜೀರ್ ಘಟನಾ ಸ್ಥಳದಲ್ಲೇ ಮೃತಪಟ್ಟರು. ತೀವ್ರ ಗಾಯಗೊಂಡ ಪತ್ಮಿ ನಜ್ಮತ್‌ರ ಹೇಳಿಕೆ ದಾಖಲಿಸುತ್ತಿದ್ದ ಮಧ್ಯೆ ಆಕೆ ಈ ವಿಷಯ ಪೊಲೀಸರಲ್ಲಿ ತಿಳಿಸಿ ದ್ದಾರೆ. ಕಣ್ಣೂರಿಗೆ …

ಕುಂಬಳೆಯಲ್ಲಿ ಐಕ್ಯರಂಗದ ನವಯುಗ ಯಾತ್ರೆಗೆ ಅದ್ಧೂರಿ ಚಾಲನೆ: ಐಕ್ಯರಂಗ ಅಧಿಕಾರಕ್ಕೇರಿದರೆ ದೇವಸ್ಥಾನ ಕಳ್ಳರನ್ನು ಸೆರೆ ಹಿಡಿಯಲಾಗುವುದು- ಕೆ.ಸಿ. ವೇಣುಗೋಪಾಲನ್

ಕುಂಬಳೆ: ವಿಧಾನಸಭಾ ಚುನಾವಣೆ ಯಲ್ಲಿ ಐಕ್ಯರಂಗ ಅಧಿಕಾರಕ್ಕೇರಿದರೆ ದೇವಸ್ಥಾನ ಕಳ್ಳರನ್ನು ಸೆರೆ ಹಿಡಿಯುವುದೇ ಪ್ರಥಮ ಕಾರ್ಯವೆಂದು ಎಐಸಿಸಿ ಜನರಲ್ ಸೆಕ್ರೆಟರಿ, ಸಂಸದ ಕೆ.ಸಿ. ವೇಣುಗೋಪಾಲ್ ನುಡಿದರು.  ಕುಂಬಳೆಯಲ್ಲಿ ಐಕ್ಯರಂಗದ ನವಯುಗ ಯಾತ್ರೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜಾಥಾ ನಾಯಕ ವಿ.ಡಿ. ಸತೀಶನ್‌ರಿಗೆ ಐಕ್ಯರಂಗದ ಘಟಕ ಪಕ್ಷಗಳ ಪತಾಕೆಗಳು ಒಳಗೊಂಡ ಧ್ವಜವನ್ನು ಹಸ್ತಾಂತರಿಸಿ ಅವರು ಉದ್ಘಾಟನೆ ನೆರವೇರಿಸಿದರು. ಯಾತ್ರೆ ಮಾರ್ಚ್ 7ರಂದು ತಿರುವನಂತಪುರದಲ್ಲಿ ಸಮಾಪ್ತಿಗೊಳ್ಳುವಾಗ ರಾಜ್ಯದ ಎಡರಂಗ ಸರಕಾರ ಹೊರ ಹೋಗುವುದರ ರಣಕಹಳೆ ಮೊಳಗಲಿದೆ. ಪಿಣರಾಯಿ ವಿಜಯನ್ ಸರಕಾರ …

ಬಿಸಿಲಲ್ಲಿ ಬೆವರಿಳಿಸಿ ಬಸ್‌ಗಾಗಿ ಕಾಯಬೇಕಾಗುತ್ತಿದೆ ಹೊಸಂಗಡಿಯಲ್ಲಿ ತಂಗುದಾಣವಿಲ್ಲದೆ ಸಮಸ್ಯೆ

ಮಂಜೇಶ್ವರ: ಕಾಸರಗೋಡಿ ನಿಂದ ಮಂಗಳೂರು ಕಡೆಗೆ ತೆರಳುವ ಸರ್ವೀಸ್ ರಸ್ತೆಯಲ್ಲಿ ಹೊಸಂಗಡಿ ಯಲ್ಲಿ ಬಸ್ ತಂಗುದಾಣ ನಿರ್ಮಿಸದೇ ಇರುವುದರಿಂದ ಪ್ರಯಾಣಿಕರು ಬಿಸಿ ಲಲ್ಲೇ ಬಸ್‌ಗೆ ಕಾಯುವ ಪರಿಸ್ಥಿತಿ ಉಂಟಾಗಿದೆ. ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದರೂ ಹೊಸಂಗಡಿ ಪೇಟೆಯಲ್ಲಿ ಮಂ ಗಳೂರು ಭಾಗಕ್ಕೆ ತೆರಳುವ ಸರ್ವೀಸ್ ರಸ್ತೆಯಲ್ಲಿ ಇನ್ನೂ ಬಸ್ ತಂಗುದಾಣ ನಿರ್ಮಿಸದಿರುವುದು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಆನೆಕಲ್ಲು, ಮೀಯಪದವು, ಬಂಗ್ರಮAಜೇಶ್ವರ ಮೊದಲಾದ ಪ್ರದೇಶಗಳಿಂದ ದಿನನಿತ್ಯ ನೂರಾರು ಮಂದಿ ಮಂಗಳೂರಿಗೆ ತೆರ ಳಲು ಬಸ್‌ಗಾಗಿ …

ನಿವೃತ್ತ ಅಧ್ಯಾಪಕ ನಿಧನ

ನೀರ್ಚಾಲು: ಮಾನ್ಯ ಕಾರ್ಮಾರು ನಿವಾಸಿ ನಿವೃತ್ತ ಅಧ್ಯಾಪಕ, ಕೃಷಿಕ ಕಾರಿಂಜ ವೆಂಕಪ್ಪ ಶೆಟ್ಟಿ (94) ನಿಧನ ಹೊಂದಿದರು. ಎಡನೀರು, ಕಡಂಬಳ ಸಹಿತ ಹಲವಾರು ಶಾಲೆಗಳಲ್ಲಿ ಅಧ್ಯಾಪಕನಾಗಿದ್ದರು. ಇವರ ಪತ್ನಿ ರತ್ನಾವತಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ವಿಶಾಲಾಕ್ಷಿ, ವಿನುತ, ವಿನೋದಿನಿ, ಅಳಿಯಂದಿರಾದ ಮಹಾಬಲ, ಪ್ರಸನ್ನ, ಸುಧೀರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.