ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಮತ್ತು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಫೆಬ್ರವರಿ 28ರಿಂದ ಆವರಿಸಿಕೊಂಡಿದ್ದ ಯುದ್ಧದ ಕರಿಛಾಯೆ ಕೊನೆಗೊಂಡ ನಂತರ ಹಾರ್ಮುಜ್ ಜಲಸಂಧಿಯ ಮೂಲಕ ಕಚ್ಚಾತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಹರಿವು ಪುನಃ ಸ್ಥಾಪಿಸಿದ ನಂತರ ಜಾಗತಿಕ ಕಚ್ಚಾತೈಲಗಳ ಬೆಲೆ ಇಳಿಯತೊ ಡಗಿದೆ. ಅದಕ್ಕೆ ಹೊಂದಿಕೊಂಡು ಭಾರತೀಯ ತೈಲ ಮಾರುಕಟ್ಟೆ ಕಂಪೆನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್, ಪೆಟ್ರೋಲ್ ಮತ್ತು ಡೀಸೆಲ್‌ನ ಬೆಲೆಯನ್ನು ಇಳಿಸಿದೆ. ಇದು ದೇಶದಲ್ಲಿ ಇಂದಿನಿಂದಲೇ ವಿದ್ಯುಕ್ತವಾಗಿ ಜ್ಯಾರಿಗೆ ಬಂದಿದೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ …

ಚಂದ್ರಗಿರಿ ರಸ್ತೆಯ ಚಳಿಯಂಗೋಡ್ ಜಂಕ್ಷನ್‌ನಲ್ಲಿ ಗುಡ್ಡೆ ಕುಸಿತ : ವಾಹನ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು

ಕಾಸರಗೋಡು: ತೀವ್ರ ಮಳೆ ಹಿನ್ನೆಲೆಯಲ್ಲಿ ಕಾಸರ ಗೋಡು- ಕಾಞಂಗಾಡ್ ಕೆಎಸ್‌ಟಿಪಿ ರಸ್ತೆಯಲ್ಲಿ ಗುಡ್ಡೆ ಕುಸಿದಿದೆ. ಚಂದ್ರಗಿರಿ, ಚಳಿಯಂಗೋಡು, ಕೋಟರು ವತ್‌ನಲ್ಲಿ ಇಂದು ಬೆಳಿಗ್ಗೆ ಅಪಾಯ ಉಂಟಾಗಿದೆ. ಮಣ್ಣು ಕುಸಿಯುವುದನ್ನು ತಡೆಯುವುದಕ್ಕಾಗಿ ನಿರ್ಮಿಸಿದ ಕಾಂಕ್ರೀಟ್ ತಡೆಗೋಡೆಯ ಮೇಲಿನ ಭಾಗದಿಂದ ಮಣ್ಣು ಹಾಗೂ ಬಂಡೆಕಲ್ಲುಗಳು ರಸ್ತೆಗೆ ಬಿದ್ದಿದೆ. ಬೃಹತ್ ಗಾತ್ರದ ಬಂಡೆಕಲ್ಲು  ಆ ದಾರಿಯಾಗಿ ಸಾಗುತ್ತಿದ್ದ ಕಾರಿನ ಮೇಲೆ ಬಿದ್ದಿದೆ. ಇದರಿಂದ ಕಾರಿನ ಮುಂಭಾಗ ಹಾನಿಗೊಂಡಿದೆ. ಇದರಿಂದಾಗಿ ಈ ರಸ್ತೆ ಮೂಲಕ ವಾಹನ ಸಂಚಾರ ಅಲ್ಪಹೊತ್ತು ಮೊಟಕುಗೊಂಡಿತ್ತು. ಮಾಹಿತಿ ತಿಳಿದು …

ಅಪರಿಮಿತ ವೇಗದಲ್ಲಿ ತಲುಪಿದ ಕಾರು ಢಿಕ್ಕಿ ಹೊಡೆದಿದ್ದ ಪ್ಲಸ್ ಟು ವಿದ್ಯಾರ್ಥಿನಿ ಮೃತ್ಯು: ಮುಳ್ಳೇರಿಯದಲ್ಲಿ ಶೋಕಸಾಗರ

ಮುಳ್ಳೇರಿಯ: ಅಪರಿಮಿತ ವೇಗದಲ್ಲಿ ಸಂಚರಿಸಿದ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಪ್ಲಸ್‌ಟು ವಿದ್ಯಾರ್ಥಿನಿ ಮೃತಪಟ್ಟಳು. ಮುಳ್ಳೇರಿಯ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ ದೀಕ್ಷ (17) ನಿನ್ನೆ ಮಧ್ಯಾಹ್ನ ೨ ಗಂಟೆ ವೇಳೆ ಮೃತಪಟ್ಟಿದ್ದಾಳೆ. ಇಂದು ಬೆಳಿಗ್ಗೆ ಮುಳ್ಳೇರಿಯ ಶಾಲೆಯಲ್ಲಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕಿರಿಸಿದ ಬಳಿಕ ಮುಳ್ಳೇರಿಯ ವಿವೇಕಾನಂದ ನಗರದ ಮನೆ ಬಳಿ ಅಂತ್ಯ ಸಂಸ್ಕಾರ ನಡೆಸಲಾಯಿತು. ವಿವೇಕಾನಂದ ನಗರ ನಿವಾಸಿ ಹಾಗೂ ಮುಳ್ಳೇರಿಯ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ …

ವೈದ್ಯಕೀಯ ರಂಗದಲ್ಲಿ ಸಾಧನೆಗೈದ ಡಾ| ನಾರಾಯಣ ನಾಯ್ಕ್

ಜೀವನದಲ್ಲಿ ಕಠಿಣ ಪರಿಸ್ಥಿತಿಗಳನ್ನು ಜಯಿಸಿ, ಶಿಕ್ಷಣದ ಮೂಲಕ ಜೀವನವನ್ನು ರೂಪಿಸಿಕೊಂಡು, ಸಮಾಜಸೇವೆಗೆ ತಮ್ಮನ್ನು ಸಮರ್ಪಿಸಿದ ಹಿರಿಯ ವೈದ್ಯರಾಗಿದ್ದಾರೆ ಡಾ| ಬಿ. ನಾರಾಯಣ ನಾಯ್ಕ್. ಕಾಸರಗೋಡು ಜಿಲ್ಲೆಯ ಗ್ರಾಮೀಣ ಪ್ರದೇಶದ ಬಡ ಕುಟುಂಬದಲ್ಲಿ ಜನಿಸಿದ ಇವರು ತಮ್ಮ ಪರಿಶ್ರಮ, ದೃಢಸಂಕಲ್ಪ ಮತ್ತು ಸೇವಾಭಾವದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಹಾಗೂ ಸಮಾಜ ಸೇವೆಯಲ್ಲಿ ಅಪಾರ ಗೌರವ ಗಳಿಸಿದ್ದಾರೆ. ಡಾ| ನಾರಾಯಣ ನಾಯ್ಕ್ ಕಾಸರಗೋಡು ಜಿಲ್ಲೆಯ ಎಣ್ಮಕಜೆ ಪಂಚಾಯತ್‌ನ ಏಳ್ಕಾನ ಬಾಲೆಗುಳಿ ಗ್ರಾಮದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಜನಿಸಿದರು. ಎಂಟು ಮಕ್ಕಳಲ್ಲಿ ಏಳನೇಯವರಾಗಿದ್ದರು.   …

ಮನೆಗಳ ಮೇಲೆ ಗುಡ್ಡೆ ಕುಸಿದು ಮೂವರು ದಾರುಣ ಮೃತ್ಯು; ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು: ಮಂಗಳೂರು ಕಂಕನಾಡಿ ಗರೋಡಿ ಎಂಬಲ್ಲಿ ಇಂದು ಮುಂಜಾನೆ ದಾರುಣ ಘಟನೆ

ಮಂಗಳೂರು: ಧಾರಾಕಾರ ಮಳೆ ಸುರಿಯುತ್ತಿದ್ದಂತೆ  ಗುಡ್ಡೆ ಕುಸಿದು ಮನೆಗಳ ಮೇಲೆ ಬಿದ್ದು ಸಂಭವಿಸಿದ ದುರ್ಘಟನೆಯಲ್ಲಿ ಮೂರು ಮಂದಿ ಮೃತಪಟ್ಟ ಘಟನೆ ಕಂಕನಾಡಿ ನಾಗುರಿ ಬಳಿಯ ಗರೋಡಿ ಎಂಬಲ್ಲಿ ನಡೆದಿದೆ.  ಬಿಹಾರ ನಿವಾಸಿಗಳಾದ ಲಾಲ್ ಬಾಬು ಎಂಬವರ ಮಕ್ಕಳಾದ ಚೌರಸ್ಯ (8), ಪ್ಯಾರಿ (4), ನೆರೆಮನೆ ನಿವಾಸಿ  ಬಾಲಕೃಷ್ಣ ಎಂಬವರ ಪತ್ನಿ ಶಾಂತ (40) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇಂದು ಮುಂಜಾನೆ 5 ಗಂಟೆ ವೇಳೆ ದುರ್ಘಟನೆ ಸಂಭವಿಸಿದೆ. ಬಿಹಾರ ನಿವಾಸಿಗಳಾದ ಕುಟುಂಬಗಳು ವಾಸಿಸುವ ಎರಡು ಮನೆಗಳ ಮೇಲೆ …

ಮಳೆ: ಕೀಯೂರಿನಲ್ಲಿ ಮನೆ ಕುಸಿತ; ಕುಟುಂಬ ಅದೃಷ್ಟವಶಾತ್ ಅಪಾಯದಿಂದ ಪಾರು

ಕಾಸರಗೋಡು:  ತೀವ್ರ ಮಳೆ ಸುರಿಯುತ್ತಿದ್ದಂತೆ  ಹೆಂಚಿನ ಮನೆಯೊಂದು ಕುಸಿದುಬಿದ್ದ ಘಟನೆ ಇಂದು ಮುಂಜಾನ್ಗೆ ಕೀಯೂರಿನಲ್ಲಿ ಸಂಭವಿಸಿದೆ. ಈ ವೇಳೆ  ಮನೆಯೊಳಗೆ ನಿದ್ರಿಸುತ್ತಿದ್ದ  ರೋಗಿ ಸಹಿತ ೫ ಮಂದಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಇಂದು ಮುಂಜಾನೆ ೪ ಗಂಟೆ ವೇಳೆ ದುರ್ಘಟನೆ ಸಂಭವಿಸಿದೆ.  ನಿದ್ದೆಯಲ್ಲಿದ್ದಾಗ ಮನೆಯ ಮೇಲ್ಛಾವಣಿ ಕುಸಿಯುವ ಸದ್ದು ಕೇಳಿದ್ದು, ಕೂಡಲೇ ಕುಟುಂಬ  ಹೊರಗೆ ಓಡಿದ್ದು ಇದರಿಂದ ಅಪಾಯದಿಂದ ಪಾರಾಗಿದ್ದಾರೆ.  ಕೀಯೂರು ಕಡಪ್ಪುರ ಶ್ರೀ ಸುಬ್ರಹ್ಮಣ್ಯ ಮಠ ಸಮೀಪದ ಕುಂಞಿಕೃಷ್ಣನ್ ಎಂಬವರ ಮನೆ ಕುಸಿದು ಬಿದ್ದಿದೆ.  ಈ …

ಹತ್ಯೆಯತ್ನ ಪ್ರಕರಣದಲ್ಲಿ ಆರೋಪಿಗಳಾದ ಯೂಟ್ಯೂಬರ್ ಖಾದರ್ ಕರಿಪ್ಪೊಡಿ, ತಂಡ ಕರ್ನಾಟಕಕ್ಕೆ ಪಲಾಯನಗೈದಿರುವುದಾಗಿ ಸೂಚನೆ

ಕಾಸರಗೋಡು: ಹತ್ಯೆಯತ್ನ ಪ್ರಕರಣ ದಾಖಲಾಗುವುದರೊಂದಿಗೆ ಯೂಟ್ಯೂಬರ್ ಖಾದರ್ ಕರಿಪ್ಪೊಡಿ ಹಾಗೂ ತಂಡ ಕರ್ನಾಟಕಕ್ಕೆ ಪಲಾಯನಗೈದಿರುವುದಾಗಿ ಸೂಚನೆಯಿದೆ. ಈ ಹಿನ್ನೆಲೆಯಲ್ಲಿ  ಪೊಲೀಸರು ತನಿಖೆಯನ್ನು ಕರ್ನಾಟಕಕ್ಕೆ ವಿಸ್ತರಿಸಿದ್ದಾರೆ. ಪಳ್ಳಿಕ್ಕೆರೆ ನಿವಾಸಿ ಅಬ್ದುಲ್ ಅಹದ್‌ರನ್ನು ಕೊಲೆಗೈಯ್ಯಲು  ಯತ್ನಿಸಲಾಯಿತೆಂಬುದಾಗಿ  ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಖಾದರನ ಸಹಚರರಾದ  ರಾಶಿದ್ ಹಾಗೂ ಅಶ್ರಫ್ ಎಂಬಿವರು ತಲೆಮರೆಸಿಕೊಂಡಿದ್ದಾರೆ. ಪಳ್ಳಿಕ್ಕರೆಯ ಅಹದ್‌ರ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು ಖಾದರ್ ಕರಿಪ್ಪೊಡಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.  ಗಲ್ಫ್‌ನಲ್ಲಿ ನಡೆದ ಹಣ ವ್ಯವಹಾರಕ್ಕೆ ಸಂಬಂಧಿಸಿ ಅಬ್ದುಲ್ ಅಹದ್‌ರನ್ನು ಖಾದರ್ ಕರಿಪ್ಪೊಡಿ ಹಾಗೂ …

ಮನೆಗೆ ನುಗ್ಗಿ ಯುವತಿ, ಯುವಕನ ವೀಡಿಯೋ ಚಿತ್ರೀಕರಿಸಿ ಬೆದರಿಕೆ: ಇಬ್ಬರು ಆರೋಪಿಗಳ ಬಂಧನ

ಮಂಜೇಶ್ವರ: ರಾತ್ರಿ ಹೊತ್ತಿನಲ್ಲಿ  ಮನೆಗೆ ನುಗ್ಗಿ  ಯುವತಿ ಹಾಗೂ ಆಕೆಯ ಸ್ನೇಹಿತನ ವೀಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ  ಇಬ್ಬರು ಆರೋಪಿಗ ಳನ್ನು ಮಂಜೇಶ್ವರ ಪೊಲೀ ಸರು ಬಂಧಿಸಿದ್ದಾರೆ. ಮಂಜೇಶ್ವರ ನಿವಾಸಿ ಗಳಾದ ಸೆನೋಹರ್ (28), ಅನ್ವರ್ (46)  ಎಂಬಿವರು  ಬಂಧಿತ ಆರೋಪಿ ಗಳಾ ಗಿದ್ದಾರೆ.  ಜೂನ್ 23ರಂದು ರಾತ್ರಿ 10.30ಕ್ಕೆ  ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲ್ಲಿ ವಾಸಿಸುವ 27ರ ಹರೆಯದ ಯುವತಿಯ ಮನೆಗೆ ನುಗ್ಗಿದ ಆರೋಪಿಗಳು  ಯುವತಿ ಹಾಗೂ ಅಲ್ಲಿದ್ದ ಆಕೆಯ ಸ್ನೇಹಿತನ ವೀಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿರುವುದಾಗಿ …

ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನಲ್ಲಿ ಹಣಕಾಸು ವಂಚನೆ ನಡೆಸಿದ ಅಧ್ಯಾಪಕನ ಅಮಾನತು

ಕಾಸರಗೋಡು: ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಭಾರೀ ಆರ್ಥಿಕ ವಂಚನೆ ನಡೆಸಿದ ಪ್ರಭಾರ ಪ್ರಾಂಶುಪಾಲರಾಗಿದ್ದ  ಅನಿಲ್ ಕೆ ಎಂಬ ಅಧ್ಯಾಪಕನನ್ನು ಅಮಾನತು ಗೊಳಿಸಲಾಗಿದೆ. ಶಾಲಾ ಪಿಟಿಎ, ಮೊಗ್ರಾಲ್ ದೇಶೀಯವೇದಿ ಹಾಗೂ  ಫ್ರೆಂಡ್ಸ್ ಕ್ಲಬ್ ಸಂಘಟನೆ ಗಳು ನಿರಂತರವಾಗಿ ಈ ವಿಷಯಕ್ಕೆ ಸಂಬಂಧಿಸಿ ಸಂಬಂಧಪಟ್ಟ ವರಿಗೆ ದೂರು ಹಾಗೂ ಮನವಿಗಳನ್ನು ಸಲ್ಲಿಸಿದ್ದವು. ಜವಾಬ್ದಾರಿಯುತ ಸರಕಾರಿ  ಉದ್ಯೋಗಿಯೆಂಬ ನೆಲೆಯ ಲ್ಲಿ ಮಾದರಿಯುತವಾಗಿ ಕಾರ್ಯವೆಸಗಬೇಕಾದ ಅಧ್ಯಾಪಕನ ಭಾಗದಿಂದ ಉಂಟಾದ ಚಟುವಟಿಕೆಗಳು ಗಂಭೀರ ಆರ್ಥಿಕ ಅವ್ಯವಹಾರ, …

ಬಿಎಂಎಸ್ ಕುಂಬಳೆ ಪಂಚಾಯತ್ ಸಮ್ಮೇಳನ: ಪದಾಧಿಕಾರಿಗಳ ಆಯ್ಕೆ

ಕುಂಬಳೆ: ಬಿ.ಎಂ ಎಸ್ ಕುಂಬಳೆ ಪಂಚಾಯತ್ ಸಮ್ಮೇಳನ ಕುಂಬಳೆ ಜಯಮಾರುತಿ ವ್ಯಾಯಾಮ ಶಾಲೆಯಲ್ಲಿ ಜರಗಿತು. ಶಿವಾನಂದರಾವ್ ಅಧ್ಯಕ್ಷತೆ ವಹಿಸಿದರು. ಎನ್.ಜಿ.ಒ ಸಂಘ್ ಜಿಲ್ಲಾ ಅಧ್ಯಕ್ಷ ರಂಜಿತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಜತೆಕಾರ್ಯ ದರ್ಶಿ ದಿನೇಶ್ ಬಂಬ್ರಾಣ, ಶೋಭಾ ಬಾಲರಾಜ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಡಲ ಕಾರ್ಯವಾಹ ಜಿತೇಶ್ ನಾಯ್ಕಾಪು, ಬಿಜೆಪಿ ರಾಜ್ಯ ಸದಸ್ಯ ವಿ. ರವೀಂದ್ರನ್ ಶುಭಾಶಂಸನೆಗೈದರು. ಭೋಜರಾಜ ದಂಡೆಗೋಳಿ ವರದಿ ಮಂಡಿಸಿದರು. ಬಿಜೆಪಿ ಪಂಚಾಯತ್ ಸದಸ್ಯರಾದ ಕಾಂಚಾರ, ರಮೇಶ್ ಭಟ್, ಅಜಿತ್ ಕುಮಾರ್, …