ದೇಶೀಯ ಅಧ್ಯಾಪಕ ಪರಿಷತ್ ಕುಂಬಳೆ ಉಪಜಿಲ್ಲಾ ಸಮಿತಿಯಿಂದ ವಿವೇಕಾನಂದ ಜಯಂತಿ ಆಚರಣೆ

ಮುಳ್ಳೇರಿಯ: ದೇಶೀಯ ಅಧ್ಯಾ ಪಕ ಪರಿಷತ್ ಕುಂಬಳೆ ಉಪಜಿಲ್ಲಾ ಸಮಿತಿ ವತಿಯಿಂದ ಸ್ವಾಮಿ ವಿವೇಕಾ ನಂದ ಜಯಂತಿ  ಆಚರಿಸಲಾಯಿತು. ಮವ್ವಾರ್ ಗೌರಿಯಡ್ಕ ಶ್ಯಾಮಲಾ ರವಿರಾಜ್‌ರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಜಿಲ್ಲಾ ಸಮಿತಿ ಅಧ್ಯಕ್ಷ ರಾಮಚಂದ್ರ ಕಾರಡ್ಕ ಅಧ್ಯಕ್ಷತೆ ವಹಿಸಿದರು. ವಿಷ್ಣು ಭಟ್ ಎಡಪ್ಪಾಡಿ ಉದ್ಘಾಟಿಸಿದರು. ರಾಜ್ಯ ಸಮಿತಿ ಉಪಾಧ್ಯಕ್ಷ ಪ್ರಭಾಕರ ಶುಭ ಕೋರಿದರು. ಪುಷ್ಪ, ರವಿರಾಜ್, ಪುರುಷೋತ್ತಮ ಕುಲಾಲ್ ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು. ಶ್ಯಾಮಲಾ ಕುಮಾರಿ ಸ್ವಾಗತಿಸಿ, ದಿನೇಶ್ ವಂದಿಸಿದರು.

ಗ್ರೈಂಡರ್‌ನಲ್ಲಿ ಶಾಲು ಸಿಲುಕಿ ಯುವತಿ ಮೃತ್ಯು

ಮಂಜೇಶ್ವರ: ಅಡುಗೆ ತಯಾರಿ ವೇಳೆ ಗ್ರೈಂಡರ್‌ಗೆ ಶಾಲು ಸಿಲುಕಿ ಯುವತಿ ಮೃತಪಟ್ಟ ದಾರುಣ ಘಟನೆ ವರ್ಕಾಡಿ ಬಳಿ ಸಂಭವಿಸಿದೆ. ವರ್ಕಾಡಿ ತೌಡುಗೋಳಿ ಮದಕ್ಕ ಕಲ್ಮಿಂಜದ ಅಬ್ದುಲ್ ಖಾದರ್ ಎಂಬವರ ಪತ್ನಿ  ಮೈಮೂನ (40) ಎಂಬವರು ಮೃತಪಟ್ಟ ದುರ್ದೈವಿಯಾ ಗಿದ್ದಾರೆ. ನಿನ್ನೆ ಬೆಳಿಗ್ಗೆ ಮನೆಯಲ್ಲಿ ಅಡುಗೆ ತಯಾರಿಸಲು ಗ್ರೈಂಡರ್‌ನಲ್ಲಿ ಹುಡಿಮಾಡುತ್ತಿದ್ದಂತೆ ಶಾಲು ಅದರಲ್ಲಿ ಸಿಲುಕಿತ್ತು. ಇದರಿಂದ ಗಂಭೀರ ಗಾಯ ಗೊಂಡ  ಮೈಮೂನರನ್ನು ಮನೆ ಯವರು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಕೂಡಲೇ  ಮಂಗ ಳೂರಿನ ಆಸ್ಪತ್ರೆಗೆ …

ಕಳನಾಡಿನಲ್ಲಿ ಮಧೂರು ನಿವಾಸಿಗಳಾದ ಇಬ್ಬರಿಗೆ ಆಕ್ರಮಣ: ಕೇಸು ದಾಖಲು

ಕಾಸರಗೋಡು: ಕಳನಾಡು ಖತ್ತರ್ ಸ್ಪೋರ್ಟ್ಸ್ ಫುಟ್ಬಾಲ್ ಟರ್ಫ್‌ನಲ್ಲಿ ಇಬ್ಬರು ಯುವಕರಿಗೆ ಆಕ್ರಮಣ ನಡೆಸಿರುವುದಾಗಿ ದೂರಲಾಗಿದೆ. ಚೆಟ್ಟುಂಗುಳಿ ಕ್ವಾರ್ಟ ರ್ಸ್‌ನ ಕೆ.ಎಂ. ಅಫ್ಸಲ್ (27), ಮಧೂರು ನಿವಾಸಿ ಹನೀಫ (25) ಎಂಬಿವರಿಗೆ ಆಕ್ರಮಿಸ ಲಾಗಿದೆ ಎಂದು ದೂರಲಾಗಿದೆ. ಸೋಮವಾರ ಮಧ್ಯಾಹ್ನ ಘಟನೆ ನಡೆದಿದೆ. ಕೆ.ಎಂ. ಅಫ್ಸಲ್ ಹಾಗೂ ಫುಟ್ಬಾಲ್ ತಂಡದ ಮೆನೇಜರ್ ಹನೀಫ್‌ರಿಗೆ ಆಕ್ರಮಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಳನಾಡು ಕೀಯೂರಿನ ಸಾದಿಕ್, ಅಂದಾಯಿ, ಸನ, ಅಫ್ರೀದ್, ತಬ್ಶೀರ್, ಪಚ್ಚು, ಉವೈಸ್, ಆಶಿಂ, ಮಾಹಿನ್ ಎಂಬಿವರ ವಿರುದ್ಧ  ಕೇಸು …

ಶಬರಿಮಲೆ ಚಿನ್ನ ಕಳವು ಪ್ರಕರಣ ಹೊಸ ತಿರುವಿನತ್ತ: ಹಳೆ ಧ್ವಜಸ್ತಂಭ ಬದಲಾಯಿಸಿದ ಬಗ್ಗೆ ತನಿಖೆ, ವಾಜೀವಾಹನ ತಂತ್ರಿ ನಿವಾಸದಲ್ಲಿ ಪತ್ತೆ

ಶಬರಿಮಲೆ:  ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ತನಿಖೆ ಒಂದೆಡೆ ತೀವ್ರಗತಿಯಲ್ಲಿ  ಸಾಗುತ್ತಿರುವ ವೇಳೆಯಲ್ಲಿ ಇದೇ ದೇಗುಲದ ಹಳೆ ಧ್ವಜ ಸ್ತಂಭ ಬದಲಿಸುವ ವೇಳೆ ಅದರಲ್ಲಿದ್ದ ಚಿನ್ನ ಲೇಪಿತ ಪಂಚಲೋಹ ವಿಗ್ರಹದ  ವಾಜೀವಾಹನ ಮತ್ತು ಇತರ ಮೂರ್ತಿಗಳ ಬಗ್ಗೆಯೂ ವಿಶೇಷ ತನಿಖಾ ತಂಡ ಇನ್ನೊಂದೆಡೆ ತನಿಖೆ ಆರಂಭಿಸಿದ್ದು, ಇದು ಶಬರಿಮಲೆ ಪ್ರಕರಣಕ್ಕೆ  ಹೊಸ ತಿರುವು ಲಭಿಸಿದೆ.  ಶಬರಿಮಲೆ ದೇಗುಲದ ಹಳೆ ಧ್ವಜಸ್ತಂಭವನ್ನು ಪ್ರಯಾರ್ ಗೋಪಾಲಕೃಷ್ಣ ಅಧ್ಯಕ್ಷರಾಗಿದ್ದ ದೇವಸ್ವಂ  ಮಂಡಳಿಯ ನೇತೃತ್ವದಲ್ಲಿ 2017ರಲ್ಲಿ ಬದಲಾಯಿಸಿ ಹೊಸ ಧ್ವಜಸ್ತಂಭ ಸ್ಥಾಪಿಸಲಾಗಿತ್ತು.  …

ಲೈಂಗಿಕ ಕಿರುಕುಳ: ಶಾಸಕ ರಾಹುಲ್ ಮೂರು ದಿನಗಳ ತನಕ ಎಸ್‌ಐಟಿ ವಶಕ್ಕೆ; ಎರಡು ಫೋನ್ ಪತ್ತೆ; ಪ್ರತಿಭಟನೆಗಾರರಿಂದ ಮೊಟ್ಟೆ ಎಸೆತ

 ತಿರುವಲ್ಲ: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಮೂರನೇ ಪ್ರಕರಣಕ್ಕೆ ಸಂಬಂಧಿಸಿ  ವಿಶೇಷ ತನಿಖಾ ತಂಡದಿಂದ ಬಂಧಿತರಾಗಿ ನ್ಯಾಯಾಂಗ ಬಂಧನಕ್ಕೊಳಗಾದ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್‌ನನ್ನು ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ತಿರುವೆಲ್ಲಾ ಮೆಜಿಸ್ಟ್ರೇಟ್ ನ್ಯಾಯಾಲಯ ಮೂರು ದಿನಗಳ ತನಕ ಎಸ್‌ಐಟಿಯ ವಶಕ್ಕೆ ಬಿಟ್ಟುಕೊಟ್ಟಿದೆ. ಇದರಂತೆ ಯುವತಿಗೆ ಲೈಂಗಿಕ ಕಿರುಕುಳ ನೀಡಲಾಗಿರುವ ಹೋಟೆಲ್ ಎಂದು ಹೇಳಲಾಗುತ್ತಿರುವ ಪಾಲಕ್ಕಾಡ್ ಕೆಪಿಎಂ ರೆಸಿಡೆನ್ಸಿ ಹೋಟೆಲ್ ಕೊಠಡಿಗೆ ರಾಹುಲ್ ನನ್ನು ಎಸ್‌ಐಟಿ ಸಾಗಿಸಿ ಅಗತ್ಯದ ಮಾಹಿತಿ ಸಂಗ್ರಹಿಸತೊಡಗಿದೆ. ಮಾತ್ರವಲ್ಲದೆ ರಾಹುಲ್‌ನ ಎರಡು ಮೊಬೈಲ್ …

ಆಟೋ ಚಾಲಕ ನಿಧನ

ಮುಳ್ಳೇರಿಯ: ಹಿರಿಯ ಆಟೋ ಚಾಲಕ, ಮುಳ್ಳೇರಿಯ ಗಜಾನನ ನಗರದ ಜತ್ತಪ್ಪ ಶೆಟ್ಟಿ (65)ಯವರು ನಿಧನ ಹೊಂದಿದರು. ಈ ಮೊದಲು ಟೆಂಪೋ ಚಾಲಕನಾಗಿ ದುಡಿಯುತ್ತಿದ್ದರು.  ಬಿಎಂಎಸ್ ಕಾರ್ಯಕರ್ತನೂ ಆಗಿದ್ದರು. ಅಲ್ಪಕಾಲದಿಂದ ಅಸೌಖ್ಯ ಬಾಧಿಸಿದ್ದ ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರು ಪತ್ನಿ ಶಾರದ, ಮಕ್ಕಳಾದ ರಕ್ಷಿತ, ರಶ್ಮಿತ, ಯುವರಾಜ್, ಆಶಾಲತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಉದ್ಯೋಗ ನೀಡುವುದಾಗಿ ನಂಬಿಸಿ 3,50,000 ರೂ. ಪಡೆದು ವಂಚನೆ ಆರೋಪ: ಇಬ್ಬರ ವಿರುದ್ಧ ಕೇಸು

ಬದಿಯಡ್ಕ: ಉದ್ಯೋಗ ಕೊಡಿಸು ವುದಾಗಿ ನಂಬಿಸಿ 3,5೦,೦೦೦ ರೂ.ವನ್ನು ಮುಂಗಡವಾಗಿ ಪಡೆದು ನಂತರ ಆ ಉದ್ಯೋಗವನ್ನಾಗಲೀ, ನೀಡಿದ ಹಣವನ್ನಾಗಲೀ ಹಿಂತಿರುಗಿಸದೆ ವಂಚನೆ ಗೈದಿರುವುದಾಗಿ ಆರೋಪಿಸಿ ಯುವಕ ನೀಡಿದ ದೂರಿನಂತೆ ಇಬ್ಬರ ವಿರುದ್ಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಗು ಪಳ್ಳ ಹೌಸಿನ ಜೋಯಲ್ ಡಿಸೋಜಾ (22) ಎಂಬ ಯುವಕ ನೀಡಿದ ದೂರಿನಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಪ್ರತೀಶ್ ಸಿ. ಸೋಮನ್ ಮತ್ತು  ನೋರ್ತ್ ದೆಹಲಿಯ ಸೋಮ್ ಪ್ರಕಾಶ್ ಎಂಬಿಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. …

ಪೆರ್ಲದಲ್ಲಿ ವ್ಯಾಪಾರಿಯಾಗಿದ್ದ ಕೃಷ್ಣ ಪೈ ನಿಧನ

ಪೆರ್ಲ: ಪೇಟೆಯಲ್ಲಿ ಹಲವಾರು ವರ್ಷಗಳ ಕಾಲ ಹಾರ್ಡ್‌ವೇರ್ ಅಂಗಡಿ ನಡೆಸುತ್ತಿದ್ದ ಪೆರ್ಲ ನಿವಾಸಿ  ಕೃಷ್ಣ ಪೈ ಬಜಕೂಡ್ಲು (68) ನಿಧನ ಹೊಂದಿದರು. ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಪೆರ್ಲ ಘಟಕದ ಅಧ್ಯಕ್ಷರಾಗಿದ್ದರು. ಇವರ ಪತ್ನಿ ಮಮತ ಪೈ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ದೇವಾ ನಂದ, ಜಯದೇವ, ಆದಿತ್ಯ, ಸೊಸೆ ಯಂದಿರಾದ ಆಬಾ, ರಾಧಿಕ, ಸಹೋದರಿ ವಿದ್ಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ನಿಧನದ ಶೋಕಾರ್ಥ ನಿನ್ನೆ ಪೆರ್ಲ ಪೇಟೆಯಲ್ಲಿ ಬೆಳಿಗ್ಗೆ 10 …

ಮುಸ್ಲಿಂಲೀಗ್ ಸದಸ್ಯೆಯ ಮತ: ಪೈವಳಿಕೆಯಲ್ಲಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬಿಜೆಪಿಗೆ

ಪೈವಳಿಕೆ: ಪಂಚಾಯತ್‌ನಲ್ಲಿ ಮುಸ್ಲಿಂಲೀಗ್ ಸದಸ್ಯೆಯ ಬೆಂಬಲದೊಂದಿಗೆ ಬಿಜೆಪಿ ಜಯಗಳಿಸಿದೆ. ಸ್ಥಾಯಿ ಸಮಿತಿ ಅಧ್ಯಕ್ಷ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಸದಸ್ಯೆ ಬಿಜೆಪಿಗೆ ಮತ ನೀಡಿದರು. ಲೀಗ್‌ನ ಮತ ಲಭಿಸಿದ ಹಿನ್ನೆಲೆಯಲ್ಲಿ ಆರೋಗ್ಯ- ಶಿಕ್ಷಣ ಸ್ಥಾಯಿ ಸಮಿತಿಯ ಚೆಯರ್ ಪರ್ಸನ್ ಆಗಿ ಬಿಜೆಪಿಯ ಸುಮನ ಜಿ. ಭಟ್ ಆಯ್ಕೆಯಾದರು. ಸಿಪಿಎಂನ ದಿನೇಶ್ವರಿ ನಾಗೇಶ್‌ರನ್ನು ಸುಮನ ಜಿ. ಭಟ್ ಸೋಲಿಸಿದ್ದಾರೆ. ಮುಸ್ಲಿಂ ಲೀಗ್‌ನ ಸದಸ್ಯೆ ಮೈಮೂನತುಲ್ ಮಿಸ್ರಿಯ ಬಿಜೆಪಿ ಸದಸ್ಯೆ ಸುಮನ ಜಿ. ಭಟ್‌ಗೆ ಮತ ನೀಡಿದ್ದಾರೆ. ಇದರಿಂದ ಸುಮನ ಭಟ್ …

ಬಿ.ಎಂ.ಎಸ್ ನೇತಾರ ನ್ಯಾ. ಸುಹಾಸ್ ಕೊಲೆ ಪ್ರಕರಣ: ಸ್ಪೆಷಲ್ ಪ್ರೋಸಿಕ್ಯೂಟರ್ ಆಗಿ ನ್ಯಾ. ಪಿ. ಪ್ರೇಮರಾಜನ್ ನೇಮಕ

ಕಾಸರಗೋಡು: ಕಾಸರಗೋಡು ನಗರದಲ್ಲಿ ೨೦೦೮ರಲ್ಲಿ   ನಡೆದ ಮತೀಯ ಗಲಭೆಯಲ್ಲಿ ಬಿಎಂಎಸ್‌ನ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷರಾಗಿದ್ದ ಕಾಸರಗೋಡು ತಾಲೂಕು ಕಚೇರಿ ಪರಿಸರ ನಿವಾಸಿ ನ್ಯಾಯವಾದಿ ಪಿ. ಸುಹಾಸ್ (38)ರನ್ನು ಕೊಲೆಗೈದ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಪ್ರೋಸಿಕ್ಯೂಷನ್ ಪರ ವಾದಿಸಲು ನ್ಯಾಯವಾದಿ  ತಲಶ್ಶೇರಿಯ ಪಿ. ಪ್ರೇಮರಾಜನ್ ರನ್ನು ಸರಕಾರ ಸ್ಪೆಷಲ್ ಪ್ರೋಸಿಕ್ಯೂಟರನ್ನಾಗಿ ನೇಮಿಸಿದೆ. ಈ ಹಿಂದೆ ಬಿಜೆಪಿ ನೇತಾರ ನ್ಯಾಯವಾದಿ ಪಿ.ಎಸ್. ಶ್ರೀಧರನ್ ಪಿಳ್ಳೆಯವರನ್ನು ಈ ಪ್ರಕರಣದ  ಪರ ವಾದಿಸಲು ಸ್ಪೆಷಲ್ ಪ್ರೋಸಿಕ್ಯೂ ಟರನ್ನಾಗಿ ನೇಮಿಸಲಾಗಿತ್ತು. ಬಳಿಕ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಲ್ಪಟ್ಟ …