ಕೊಚ್ಚಿ ಬಂದರಿಗೆ ಬಂದ ಹಡಗಿನಲ್ಲಿ ‘ಐ ಲವ್ ಯೂ ಪಾಕಿಸ್ತಾನ್’ ಬರಹ ಪತ್ತೆ: ಸಮಗ್ರ ತನಿಖೆ ಆರಂಭ

ಕೊಚ್ಚಿ: ಕೊಚ್ಚಿ ಶಿಪ್ ಯಾರ್ಡ್‌ಗೆ ದುರಸ್ತಿ ಕೆಲಸಕ್ಕಾಗಿ ಬಂದ ಸರಕು ಹಡಗಿನಲ್ಲಿ ಐ ಲವ್ ಯೂ ಪಾಕಿಸ್ತಾನ್ ಎಂಬ ಬರಹ ಪತ್ತೆಯಾಗಿದ್ದು, ಆ ಬಗ್ಗೆ ಕೊಚ್ಚಿ ಸಿಟಿ ಪೊಲೀಸರು ಮತ್ತು ಕೇಂದ್ರ ಗುಪ್ತಚರ ವಿಭಾಗ ಸಮಗ್ರ ತನಿಖೆ ಆರಂಭಿಸಿದೆ. ಈ ಹಡಗಿನ ಕುರಿತಾದ ಪೂರ್ಣ ಮಾಹಿತಿ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಸಂಗ್ರಹಿಸಿ ಇನ್ನೊಂದೆಡೆ ಸಮಾನಾಂತರ ತನಿಖೆ ನಡೆಸುತ್ತಿದ್ದಾರ. ಈ ಹಡಗಿನ ಖಾಯಂ ಹಾಗೂ ತಾತ್ಕಾಲಿಕ ಸಿಬ್ಬಂದಿಗಳು, ಅದರ ಗುತ್ತಿಗೆದಾರರು ಹಾಗೂ ಹಡಗು ಸಂಸ್ಥೆಯ ಮಾಲಕರ ಹೇಳಿಕೆಗಳನ್ನು …

ಉಪ್ಪಳ ಗ್ರಾಮ ಕಚೇರಿಗೆ ವಿಜಿಲೆನ್ಸ್ ದಾಳಿ: ಭೂಮಿ ತೆರಿಗೆ ಪಾವತಿಗೆ ತಲುಪಿದ ವ್ಯಕ್ತಿಯಿಂದ 5000 ರೂ. ಲಂಚ ಪಡೆಯುತ್ತಿದ್ದ ನೌಕರನ ಬಂಧನ

ಉಪ್ಪಳ: 5000 ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಕಚೇರಿ ನೌಕರನನ್ನು ವಿಜಿಲೆನ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಕೋಡಿಬೈಲು ನಿವಾಸಿಯೂ ಉಪ್ಪಳ ಗ್ರೂಪ್ ವಿಲ್ಲೇಜ್ ಆಫೀಸ್‌ನ ಕಾಶ್ವಲ್ ಸ್ವೀಪರ್ ಆಗಿರುವ ಕೆ. ಶಿವಪ್ರಸಾದ್ (42) ಸೆರೆಗೀಡಾದ ವ್ಯಕ್ತಿ.  ಈತನನ್ನು ಕಾಸರಗೋಡು ವಿಜಿಲೆನ್ಸ್ ಆಂಡ್ ಆಂಟಿ ಕರಪ್ಶನ್ ಬ್ಯೂರೋ ಡಿವೈಎಸ್ಪಿ ಉಣ್ಣಿಕೃಷ್ಣನ್ ಹಾಗೂ ತಂಡ ಬಂಧಿಸಿದೆ. ನಿನ್ನೆ ಬೆಳಿಗ್ಗೆ ಉಪ್ಪಳ ಗ್ರಾಮ ಕಚೇರಿಯಲ್ಲಿ ವಿಜಿಲೆನ್ಸ್ ತಪಾಸಣೆ ನಡೆಸಿದೆ. ಕ್ಷೇತ್ರವೊಂದಕ್ಕೆ ಭಕ್ತರೊಬ್ಬರು ಉಚಿತವಾಗಿ ನೀಡಿದ ಭೂಮಿಯ ತೆರಿಗೆ ಕಮಿಟಿ ಹೆಸರಲ್ಲಿ ಪಾವತಿಸಲು …

ಎಡಿಎಂ ಆಗಿ ಉದಯಕುಮಾರ್ ಪೆರ್ಲ ಅಧಿಕಾರ ಸ್ವೀಕಾರ

ಕಾಸರಗೋಡು: ಜಿಲ್ಲಾ ಹೆಚ್ಚುವರಿ ದಂಡನಾ ಧಿಕಾರಿ (ಎಡಿಎಂ)ಯಾಗಿ ಉದಯಕುಮಾರ್ ಪೆರ್ಲ ಶ್ರುತಿ ಕೆ.ವಿ ಅವರಿಂದ ಅಧಿಕಾರ ಸ್ವೀಕರಿಸಿದರು. 1997ರಲ್ಲಿ ಕಾಸರಗೋಡು ಭೂಸ್ವಾಧೀನ ಕಚೇರಿಯಲ್ಲಿ ಎಲ್.ಡಿ. ಕ್ಲರ್ಕ್ ಆಗಿ ಸರಕಾರಿ ಸೇವೆಗೆ ಸೇರ್ಪಡೆಯಾ ದರು. ಬಳಿಕ ಕಾಸರಗೋಡು ತಾಲೂಕು ಕಚೇರಿಯಲ್ಲಿ ಸೀನಿಯರ್ ಕ್ಲರ್ಕ್ ಆಗಿ ಕಾರ್ಯನಿರ್ವಹಿಸಿದರು. 2006ರಲ್ಲಿ ಭಡ್ತಿ ಹೊಂದಿ ಗ್ರಾಮಾಧಿಕಾರಿಯಾಗಿ ಶೇಣಿ, ಆದೂರು, ಬದಿಯಡ್ಕ, ಕುಂಬ್ಡಾಜೆ ಹಾಗೂ ಬೇಳ ಗ್ರಾಮಗಳಲ್ಲಿ ಗ್ರಾಮಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.2014ರಲ್ಲಿ ಮತ್ತೊಮ್ಮೆ ಭಡ್ತಿ ಹೊಂದಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜೂನಿಯರ್ ಸೂಪರಿಂಟೆAಡೆAಟ್ ಆಗಿ …

ಏದಾರ್ ಎಸ್‌ಸಿ ಉನ್ನತಿಯಲ್ಲಿ ಅಯ್ಯಂಗಾಳಿ ಸ್ಮೃತಿ ದಿನಾಚರಣೆ

ಪೈವಳಿಕೆ: ಅಯ್ಯಂಗಾಳಿ ಸಂಸ್ಮರಣೆ ಅಂಗವಾಗಿ ಪೈವಳಿಕೆ ಪಂಚಾಯತ್ ಎಸ್ ಸಿ ಮೋರ್ಚಾ ಸಮಿತಿಯಿಂದ ಏದಾರ್ ಎಸ್‌ಸಿ ಉನ್ನತಿಯಲ್ಲಿ ಸ್ಮೃತಿ ದಿನಾಚರಿಸಲಾಯಿತು. ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ ಕಯ್ಯಾರ್, ಬಿಜೆಪಿ ಪೈವಳಿಕೆ ಪಂಚಾಯತ್ ಅಧ್ಯಕ್ಷ ಸತ್ಯ ಶಂಕರ ಭಟ್ ಮಲಿವ್ ಅಧ್ಯಕ್ಷತೆ ವಹಿಸಿದರು. ಎಸ್ ಸಿ ಮೋರ್ಚಾ ಮಂಡಲ ಅಧ್ಯಕ್ಷ ರಾಮ ಏದಾರ್, ಮಂಡಲ ಕಾರ್ಯದರ್ಶಿ ರಮೇಶ್ ಎ.ಎಸ್, ಜಿಲ್ಲಾ ಕಾರ್ಯದರ್ಶಿ ಸಂದೇಶ್ ಪೆರ್ವೋಡಿ, ಕೃಷ್ಣರಾಜ್ ಅಟ್ಟೆಗೋಳಿ ಮಾತನಾಡಿದರು. ಅಯ್ಯಂಗಾಳಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. …

ರವಿ ನಾಯ್ಕಾಪುರಿಗೆ ನಿರೂಪಣಾ ಕೌಸ್ತುಭ ಪ್ರಶಸ್ತಿ: ಮುಂಬೈಯಲ್ಲಿ 28ರಂದು ಪ್ರದಾನ

ಕಾಸರಗೋಡು: ನಿರೂಪಣಾ ಕ್ಷೇತ್ರದ ಸಾಧನೆ, ಸಾಮರ್ಥ್ಯವನ್ನು ಪರಿಗಣಿಸಿ ಮುಂಬೈ ಅಂಧೇರಿ ಕರ್ನಾಟಕ ಸಂಘ ನಿರೂಪಕ, ಸಂಘಟಕ ರವಿ ನಾಯ್ಕಾಪು ಅವರಿಗೆ ನಿರೂಪಣಾ ಕೌಸ್ತುಭ ಪ್ರಶಸ್ತಿ ಘೋಷಿಸಿದೆ. ಈ ತಿಂಗಳ 28ರಂದು ಮುಂಬೈ ಕುರ್ಲಾ ಬಂಟರ ಭವನದಲ್ಲಿ ಜರಗಲಿರುವ  ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಘದ ಸಂಸ್ಥಾಪಕ ಕೃಷ್ಣ ಬಿ. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕನ್ನಡ ಕಾರ್ಯಕ್ರಮಗಳ ನಿರೂಪಕರಾಗಿ, ಪತ್ರಕರ್ತ, ಸಂಘಟಕರಾಗಿರುವ ಇವರು ಐದು ಪುಸ್ತಕಗಳನ್ನು ರಚಿಸಿದ್ದಾರೆ. ಪತ್ರಿಕಾ ದೃಶ್ಯ ಮಾಧ್ಯಮಗಳಲ್ಲೂ, …

ನಾಡೋಜ ಕಯ್ಯಾರ ಕಿಂಞಣ್ಣರೈ ಜನ್ಮದಿನಾಚರಣೆ, ಪ್ರಶಸ್ತಿ ಪ್ರದಾನ 21ರಂದು

ಪೈವಳಿಕೆ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಸಹಯೋಗದಲ್ಲಿ ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈ ಜನ್ಮ ದಿನಾಚರಣೆ, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಈ ತಿಂಗಳ 21ರಂದು ಬೆಳಿಗ್ಗೆ ೯ರಿಂದ ಕಯ್ಯಾರು ಕೊಕ್ಕಚಾಲು ಕಾಮಿಲ್ ಶಾಲಾ ವಠಾರ ದಲ್ಲಿ ನಡೆಯಲಿದೆ. ಇದೇ ವೇಳೆ ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಟಿಎಸ್ …

ಕೆವಿವಿಇಎಸ್ ಜಿಲ್ಲಾ ಕೌನ್ಸಿಲ್ ಸಭೆ: ಪದಾಧಿಕಾರಿಗಳ ಆಯ್ಕೆ

ಕಾಸರಗೋಡು: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾ ಕೌನ್ಸಿಲ್ ಸಭೆ ಕಾಸರಗೋಡು ನಗರಸಭಾ ಕಾನ್ಫರೆನ್ಸ್ ಸಭಾಂಗಣದಲ್ಲಿ ಜರಗಿತು.  ಸಮಿತಿಯ ಜಿಲ್ಲಾ ಅಧ್ಯಕ್ಷ ಕೆ. ಅಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದು, ರಾಜ್ಯಾಧ್ಯಕ್ಷ ರಾಜು ಅಪ್ಸರ ಉದ್ಘಾಟಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಸ್ಯ ಮೇಚೇರಿ ಪ್ರಧಾನ ಭಾಷಣ ಮಾಡಿದರು. ರಾಜ್ಯ ಕೋಶಾಧಿಕಾರಿ ಎಸ್. ದೇವರಾಜನ್, ರಾಜ್ಯ ಉಪಾಧ್ಯಕ್ಷ ಎಂ.ಕೆ. ಥೋಮಸ್ ಕುಟ್ಟಿ, ರಾಜ್ಯ ಕಾರ್ಯದರ್ಶಿಗಳಾದ ವೈ. ವಿಜಯನ್, ವಿ. ಸಬಿಲ್‌ರಾಜ್, ಪಾಲಕ್ಕಾಡ್ ಜಿಲ್ಲಾ ಕಾರ್ಯದರ್ಶಿ ಕೆ.ಎ. ಹಮೀದ್, ಕೊಲ್ಲಂ …

ಬಿಜೆಪಿ ಕೇರಳ ರಾಜಕೀಯದ ಬದಲಿ ಶಕ್ತಿ- ಎಂ.ಎಲ್. ಅಶ್ವಿನಿ

ಕುಂಬಳೆ: ಎಲ್ಲಾ ಸಂದರ್ಭಗಳಲ್ಲೂ ಜೊತೆಗೂಡಿ ಬಿಜೆಪಿಯನ್ನು ಸೋಲಿಸಬಹುದೆಂದು, ಭ್ರಷ್ಟಾಚಾರ ಪ್ರಶ್ನಿಸಲ್ಪಡಲಿಕ್ಕಿಲ್ಲವೆಂದು ತಿಳಿದುಕೊಂಡ ಎಡ-ಬಲ ಒಕ್ಕೂಟಗಳ ಧೋರಣೆ ಈ ವಿಧಾನಸಭಾ ಚುನಾವಣೆಯೊಂದಿಗೆ ಇಲ್ಲದಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ಕಚೇರಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮೂವರು ಬಿಜೆಪಿ ಪ್ರತಿನಿಧಿಗಳನ್ನು ರಾಜ್ಯ ವಿಧಾನಸಭೆಗೆ ಆಯ್ಕೆ ಮಾಡಿರುವುದರ ಮೂಲಕ ಬಿಜೆಪಿ ಕಾರ್ಯಕರ್ತರ ನಿರೀಕ್ಷೆ ಹಾಗೂ ಹೊಣೆಗಾರಿಕೆ ಹೆಚ್ಚಿದೆ. ರಾಜ್ಯದಲ್ಲಿ ಎಡ-ಬಲ ಒಕ್ಕೂಟ ಗಳಿಗಿರುವ ಬದಲಾಗಿ ಬಿಜೆಪಿಯನ್ನು ಜನರು ಕಂಡುಕೊಂಡಿರುವುದಾಗಿಯೂ ಈ …

ಸುಬ್ರಾಯ ಗಟ್ಟಿ ನಿಧನ

ಮೊಗ್ರಾಲ್‌ಪುತ್ತೂರು: ಕಲ್ಲಂಗೈ ಬಳ್ಳೂರು ನಿವಾಸಿ ಸುಬ್ರಾಯ ಗಟ್ಟಿ (82) ನಿಧನ ಹೊಂದಿದರು. ಇವರು ಕೃಷಿಕನಾಗಿದ್ದರು. ಮೃತರು ಪತ್ನಿ ಗಿರಿಜ, ಮಕ್ಕಳಾದ ಸುಮಲತ, ಸುಜಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಸಹೋದರರಾದ ನಾರಾಯಣ, ಸೀನ, ಸಹೋದರಿ ಕಮಲ ಎಂಬಿವರು ಈ ಹಿಂದೆ ನಿಧನರಾಗಿದ್ದಾರೆ. 

ಅವಯವ ಅವ್ಯವಹಾರ ಪ್ರಕರಣ: ಮುಖ್ಯ ಸೂತ್ರಧಾರ ನಜೀಬ್‌ನ ಕಾಸರಗೋಡಿನ ಮನೆ ಸಹಿತ ರಾಜ್ಯದ ವಿವಿಧೆಡೆ ಇ.ಡಿ. ದಾಳಿ

ಕಾಸರಗೋಡು: ಕೇರಳವನ್ನು ಕೇಂದ್ರವನ್ನಾಗಿಸಿ ನಡೆಸುತ್ತಿರುವ ಅಕ್ರಮ ಅವಯವ ಅವ್ಯವಹಾರ ದಂಧೆಯ ಪ್ರಧಾನ ಸೂತ್ರಧಾರ ಕಾಸರಗೋಡು  ಮುಹಮ್ಮದ್ ನಜೀಬ್ ಕಲ್ಲಟ್ರನ  ಕಳನಾಡಿನಲ್ಲಿ ರುವ ಮನೆ ಸಹಿತ  ರಾಜ್ಯದ ವಿವಿಧೆಡೆಗಳಲ್ಲಿ  ಇಂದು ಇ.ಡಿ ದಾಳಿ ನಡೆಸುತ್ತಿದೆ.   ಎರ್ನಾಕುಳಂ, ಕೊಲ್ಲಂನ ಕೆಲವು ಆಸ್ಪತ್ರೆಗಳು ಹಾಗೂ ವ್ಯವಹಾರದ ಕೇಂದ್ರಗಳಲ್ಲಿ ಇಂದು ಬೆಳಿಗ್ಗಿನಿಂದ ಏಕ ಕಾಲದಲ್ಲಿ ಇ.ಡಿ ದಾಳಿ ನಡೆಸಿ ತಪಾಸಣೆ ಆರಂಭಿಸಿದೆ. ಇದೊಂದು ಅಂತಾರಾಷ್ಟ್ರೀಯ ಅವಯವ ಸಾಗಾಟ ದಂಧೆಯಾಗಿದೆ ಯೆಂದು ಇ.ಡಿ ನಡೆಸಿದ ತನಿಖೆ ಯಲ್ಲಿ ತಿಳಿದುಬಂದಿರುವುದಾಗಿ ವರದಿಯಾಗಿದೆ. ಅವಯವ ದಾನಕ್ಕಾಗಿ ಮುಂದಾಗುವವರಿಗೆ …