ವಿಕಲಚೇತನ ಬಾಲಕಿಗೆ ಕಿರುಕುಳ:ಇನ್ನೋರ್ವ ಆರೋಪಿ ಸೆರೆ

ಕಾಸರಗೋಡು: ಪ್ರಾಯಪೂರ್ತಿ ಯಾಗದ ವಿಕಲಚೇತನಳಾದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಇನೋರ್ವ ಸೆರೆಗೀಡಾಗಿದ್ದಾನೆ. ಪಾಕಂ ಚೇರ್ಕಪ್ಪಾರ ಅಂಜಿಲ್ಲತ್ ನಿವಾಸಿ ಎ.ಜಿ. ಶಾಹಿದ್ (35) ಎಂಬಾ ತನನ್ನು ಬೇಕಲ ಪೊಲೀಸರು ಬಂಧಿಸಿ ದ್ದಾರೆ.ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಶಾಹಿದ್ ಸೆರೆಗೀಡಾಗುವು ದರೊಂದಿಗೆ  ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಬೇಕಲ ಪೊಲೀಸರು  ಸೆರೆ ಹಿಡಿದ ಆರೋಪಿಗಳ ಸಂಖ್ಯೆ ೫ಕ್ಕೇರಿದೆ.  ೧೬ರ ಹರೆಯದ ಬಾಲಕ ಸಹಿತ  ಮೂರು ಮಂದಿಯನ್ನು ಇತ್ತೀಚೆಗೆ  ಬಂಧಿಸಲಾಗಿತ್ತು.  ಕೋಟಿಕುಳಂ ರೈಲ್ವೇ ನಿಲ್ದಾಣ ಸಮೀಪದ ಸಾಲಿ …

ಮುಸ್ಲಿಂ ಲೀಗ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ರಹ್ಮಾನ್‌ರ ಸಹೋದರ ನಿಧನ

ಕುಂಬಳೆ: ಕುಂಬಳೆಯ ಮುಸ್ಲಿಂಲೀಗ್‌ನ ಸಕ್ರಿಯ ಕಾರ್ಯಕರ್ತ ಎರಿಯಾಲ್ ಬಾರ್ಕೋಡ್ ನಿವಾಸಿ ಅಲಿ (43) ಕುಸಿದು ಬಿದ್ದು ಮೃತಪಟ್ಟರು. ನಿನ್ನೆ ರಾತ್ರಿ 10.30ರ ವೇಳೆ ಮನೆಯಲ್ಲಿ ಕುಸಿದು ಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇಂದು ಮಧ್ಯಾಹ್ನ ತಳಂಗರೆ ಮಾಲೀಕ್ ದೀನಾರ್ ಜುಮಾ ಮಸೀದಿ ಅಂಗಣದಲ್ಲಿ ಅಂತ್ಯಕ್ರಿಯೆ ನಡೆಯಿತು. ಮುಸ್ಲಿಂ ಲೀಗ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ರಹ್ಮಾನ್‌ರ ಸಹೋದರನಾಗಿದ್ದಾರೆ. ದಿ| ಅಬ್ದುಲ್ಲ- ಆಯಿಷಾ ದಂಪತಿ ಪುತ್ರನಾಗಿದ್ದು, ಮೊನುದ್ದೀನ್ ಇನ್ನೋರ್ವ ಸಹೋದರನಾಗಿದ್ದಾರೆ.

ಶೇಂದಿ ಕಾರ್ಮಿಕ ಅಸೌಖ್ಯಬಾಧಿಸಿ  ನಿಧನ

ಮುಳ್ಳೇರಿಯ: ಅಸೌಖ್ಯ ಬಾಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ  ಬೆಳ್ಳೂರು ಬಜ ನಿವಾಸಿ  ಬಾಲಚಂದ್ರ (47) ಮೃತಪಟ್ಟರ. ಇತ್ತೀಚೆಗೆ ಇವರನ್ನು ಚೆಂಗಳದ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ಶೇಂದಿ ಕಾರ್ಮಿಕನಾ ಗಿದ್ದರು. ದಿವಂಗತ ಅಪ್ಪಕುಂಞಿ-ಮಾಧವಿ ದಂಪತಿ ಪುತ್ರನಾದ ಮೃತರು ಪತ್ನಿ ಪುಷ್ಪಾ,ಮಕ್ಕಳಾದ ಅನುಷಾ, ತೃಶಾನ್, ಸಹೋದರ-ಸಹೋದರಿ ಯರಾದ  ಕೃಷ್ಣ, ನಾರಾಯಣ, ಉದಯ, ಯಶೋಧ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಏಳನೇ ತರಗತಿ ವಿದ್ಯಾರ್ಥಿ ಕ್ವಾರ್ಟರ್ಸ್‌ನೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ಏಳನೇ ತರಗತಿ ವಿದ್ಯಾರ್ಥಿ ಕ್ವಾರ್ಟರ್ಸ್‌ನೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬೆದ್ರಂಪಳ್ಳದಲ್ಲಿ ವಾಸಿಸುವ ಪ್ರಕಾಶನ್-ಸುನಿತಾ ದಂಪತಿಯ ಪುತ್ರ ಶ್ರೀಹರಿ (12) ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ. ಪ್ರಕಾಶನ್ ಹಾಗೂ ಕುಟುಂಬ ಪತ್ತನಂತಿಟ್ಟ ಅಡೂರು ನಿವಾಸಿಗಳಾ ಗಿದ್ದಾರೆ.  ಬೆದ್ರಂಪಳ್ಳದ ಅಬ್ದುಲ್ಲ ಕುಂಞಿ ಎಂಬವರ ರಬ್ಬರ್ ತೋಟ ದಲ್ಲಿ ಪ್ರಕಾಶನ್ ಹಾಗೂ ಪತ್ನಿ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿದ್ದಾರೆ.  ಶ್ರೀಹರಿಯ ಹೊರತು  ಪ್ರೀತು, ನಿಹಾರಿಕ ಎಂಬೀ ಮತ್ತಿಬ್ಬರು ಮಕ್ಕಳು ಈ ದಂಪತಿಗಿದ್ದಾರೆ. ನಿನ್ನೆ ಮಧ್ಯಾಹ್ನ ತಂದೆ-ತಾಯಿ ಸಾಮಗ್ರಿ ತರಲೆಂದು ಅಂಗಡಿಗೆ ಹೋಗುವ ವೇಳೆ …

ಅಂಗಳದಲ್ಲಿದ್ದ 1 ವರ್ಷದ ಮಗುವಿಗೆ ಬೀದಿ ನಾಯಿ ಕಚ್ಚಿ ಮುಖಕ್ಕೆ ಗಾಯ

ಉಪ್ಪಳ: ಅಂಗಳದಲ್ಲಿದ್ದ ಒಂದು ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿ ಗಾಯಗೊಳಿಸಿದ ಘಟನೆ ನಡೆದಿದೆ. ಜೋಡುಕಲ್ಲು ಕಲ್ಪಣೆ ನಿವಾಸಿ ಗುರುಪ್ರಸಾದ್ ಆಚಾರ್ಯ-ತುಳಸಿ ದಂಪತಿಯ ಮಗು ಋತ್‌ರಾಜ್ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.ಶನಿವಾರ ಮಧ್ಯಾಹ್ನ ತಾಯಿ ಬಟ್ಟೆ ಒಗೆದು ಒಣಗಿಸಲು ಹಾಕುತ್ತಿದ್ದ ವೇಳೆ ಮಗು ಅಲ್ಲಿತ್ತು. ಈ ವೇಳೆ ರಸ್ತೆಯಿಂದ ನಾಯಿ ಅಂಗಳಕ್ಕೆ ತಲುಪಿ ಮಗುವಿನ ಮೇಲೆ ಹಾರಿ ಮುಖಕ್ಕೆ ಕಚ್ಚಿ ಗಂಭೀರ ಗಾಯಗೊಳಿಸಿದೆ. ಕೂಡಲೇ ತಾಯಿ ನಾಯಿಯನ್ನು ಓಡಿಸಿದ್ದಾರೆ. ಮುಖಕ್ಕೆ ಗಂಭೀರ ಗಾಯಗೊಂಡ ಮಗುವನ್ನು ಮಂಗಲ್ಪಾಡಿ …

ಮಿತಿಮೀರಿದ ಬೀದಿನಾಯಿಗಳ ಕಾಟ : ಶಾಲೆ ಮಕ್ಕಳ ಸಂಚಾರಕ್ಕೂ ಭೀತಿ

ಉಪ್ಪಳ: ಬೀದಿ ನಾಯಿಗಳ ಕಾಟ ಮಿತಿಮೀರಿರುವುದಾಗಿ ಸ್ಥಳೀಯರು ದೂರಿದ್ದಾರೆ. ಉಪ್ಪಳ ಪೇಟೆ ಹಾಗೂ ಒಳ ಪ್ರದೇಶದಲ್ಲಿ ದಿನನಿತ್ಯ ಬೀದಿ ನಾಯಿಗಳು ಹಿಂಡುಹಿಂಡಾಗಿ ಅಲೆದಾಡುತ್ತಿದ್ದು, ಸಾರ್ವಜನಿಕರಿಗೆ ಭೀತಿಯೊಡ್ಡುತ್ತಿವೆ. ಪತ್ವಾಡಿ ರಸ್ತೆಯ ಮಜಲು ಎಂಬಲ್ಲಿ ಹಲವಾರು ದಿನಗಳಿಂದ 15ರಷ್ಟು ಬೀದಿನಾಯಿಗಳು ಸವಾರಿ ನಡೆಸುತ್ತಿವೆ. ಈ ಪರಿಸರದಲ್ಲಿ ದಿನನಿತ್ಯ ಶಾಲಾ, ಕಾಲೇಜು, ಮದ್ರಸಗಳಿಗೆ ಮಕ್ಕಳು ಸಹಿತ ಹಲವಾರು ಮಂದಿ ನಡೆದುಕೊಂಡು ಹೋಗುತ್ತಿದ್ದಾರೆ. ಅಲ್ಲದೆ ವಾಹನ ಸವಾರರನ್ನು ಕೂಡಾ ಇವು ಬೆನ್ನಟ್ಟುತ್ತಿವೆ. ಈ ಪರಿಸರದ ರಸ್ತೆ ಬದಿಯಲ್ಲಿ ರಾತ್ರಿ ಹೊತ್ತು ತ್ಯಾಜ್ಯಗಳನ್ನು ತಂದೆಸೆಯುತ್ತಿದ್ದು, …

ದಂತ ವಿದ್ಯಾರ್ಥಿ ನಿತಿನ್‌ರಾಜ್ ಆತ್ಮಹತ್ಯೆ ಪ್ರಧಾನ ಆರೋಪಿ ಡಾ| ಎಂ.ಕೆ. ರಾಮ್ ಸೆರೆ

ಕಣ್ಣೂರು: ಅಂಜರಕಂಡಿ ಮೆಡಿಕಲ್ ಕಾಲೇಜಿನಲ್ಲಿ ದಂತ ವಿದ್ಯಾರ್ಥಿಯಾಗಿದ್ದ ನಿತಿನ್‌ರಾಜ್ ಆತ್ಮಹತ್ಯೆಗೈದ ಪ್ರಕರಣದಲ್ಲಿನ ಪ್ರಧಾನ ಆರೋಪಿಯಾದ ಡಾ. ಎಂ.ಕೆ. ರಾಮ್ ಸೆರೆಯಾಗಿದ್ದಾನೆ.  ಕೊಡಗಿನ ರಹಸ್ಯ ಕೇಂದ್ರದಿಂದ ಈತನನ್ನು ಬಂಧಿಸ ಲಾಗಿದೆ. ಕ್ರೈಮ್ ಬ್ರಾಂಚ್ ತಂಡ ಡಾ| ರಾಮ್‌ನನ್ನು ಸೆರೆ ಹಿಡಿದಿದ್ದು ಕಣ್ಣೂರಿಗೆ ತಲುಪಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕ್ರೈಮ್ ಬ್ರಾಂಚ್ ತಂಡ ತಲುಪಿದ ಮಾಹಿತಿ ಲಭಿಸಿದ ಕೂಡಲೇ ಪಾರಾಗಲು ಯತ್ನಿಸಿದ ಆರೋಪಿ ಯನ್ನು ಸಾಹಸಿಕವಾಗಿ ಸೆರೆ ಹಿಡಿಯಲಾಗಿದೆ. ಡಾಕ್ಟರ್ ಆಂಧ್ರ ಪ್ರದೇಶದ ರಹಸ್ಯ ಕೇಂದ್ರದಲ್ಲಿರುವುದಾಗಿ ಕ್ರೈಮ್ ಬ್ರಾಂಚ್‌ಗೆ ಈ ಮೊದಲು …

ಕನ್ನೆಪ್ಪಾಡಿಯಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ: ಪ್ರಯಾಣಿಕರ ಬಹುಕಾಲದ ಕನಸು ನನಸಿನತ್ತ

ಬದಿಯಡ್ಕ: ಕನ್ನೆಪ್ಪಾಡಿ ಜಂಕ್ಷನ್‌ನಿಂದ ಮುಂಡಿತ್ತಡ್ಕ ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ಬಸ್‌ಗಾಗಿ ಕಾಯಲು ಸರಿಯಾದ ನಿಲ್ದಾಣವಿಲ್ಲದೆ ಮಳೆ, ಬಿಸಿಲಿಗೆ ರಸ್ತೆ ಬದಿಯಲ್ಲೇ ಅಂಗಡಿ ಮುಂಭಾಗದಲ್ಲಿ ಕಾಯಬೇಕಾದ ಅನಿವಾರ್ಯತೆ ಇದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರು ಇದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲೊಂದು ಬಸ್ ತಂಗುದಾಣ ನಿರ್ಮಿಸಬೇಕೆಂಬ ಸ್ಥಳೀಯರ ಬೇಡಿಕೆಗೆ ವರ್ಷಗಳ ಹಳಮೆ ಇದೆ. ಈ ಹಿನ್ನೆಲೆಯಲ್ಲಿ ಕನ್ನೆಪ್ಪಾಡಿಯಲ್ಲಿ ನೂತನ ಬಸ್ ತಂಗುದಾಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬದಿಯಡ್ಕ ಪಂಚಾಯತ್ ಆಡಳಿತ ಮಂಡಳಿ ಸ್ಥಳ …

ಮಧೂರು ಶ್ರೀ ಕಾಳಿಕಾಂಬಾ ಮಠ ಸಹಿತ ವಿವಿಧ ಕ್ಷೇತ್ರಗಳಿಗೆ ಸಂಕಲ್ಪ ಯಾತ್ರೆ ನಡೆಸಿದ ಆನೆಗುಂದಿ ಜಗದ್ಗುರು

ಕಾಸರಗೋಡು: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರ 22ನೇ ವರ್ಷದ ಪರಾಭವ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆ ಜುಲೈ 29ರಿಂದ ಸೆ. 26ರ ವರೆಗೆ ಪಡುಕುತ್ಯಾರಿನ ಶ್ರೀ ಮಠದಲ್ಲಿ ನಡೆಯಲಿದ್ದು ಇದರಂಗವಾಗಿ   ಚಾತುರ್ಮಾಸ್ಯ ವ್ರತ ಸಂಕಲ್ಪ ಯಾತ್ರೆ ನಡೆಯಿತು. ಜೂನ್ 18ರಂದು ಆರಂಭಗೊಂಡ ಯಾತ್ರೆಯಂಗವಾಗಿ  ಸ್ವಾಮೀಜಿ ಯವರು ಬಂಗ್ರಮಂಜೇ ಶ್ವರದ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನ, ಆರಿಕ್ಕಾಡಿಯ ಕಾಳ ಶ್ರೀ ಕಾಳಿಕಾಂಬಾ ದೇವಸ್ಥಾನ ಹಾಗೂ ಕಾಞಂಗಾಡ್‌ನ ಅಜಾನೂರು ಶ್ರೀಮದ್ ಪರಶಿವ …

ಮಾಜಿ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಸಂಸ್ಮರಣೆ, ರಕ್ತದಾನ ಶಿಬಿರ

ಮಂಜೇಶ್ವರ : ಮಾಜಿ ಮುಖ್ಯಮಂತ್ರಿ ದಿ| ಉಮ್ಮನ್ ಚಾಂಡಿಯವರ ತೃತೀಯ ವಾರ್ಷಿಕ ಸಂಸ್ಮರಣೆ ಹಾಗೂ ರಕ್ತದಾನ ಶಿಬಿರ ಮಜೀರ್ ಪಳ್ಳದಲ್ಲಿ ಜರಗಿತು. ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಜರಗಿದ ಕಾರ್ಯಕ್ರಮವನ್ನು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಸೋಮಪ್ಪ ಉದ್ಘಾಟಿಸಿದರು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಾಮೋದರ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಪ್ರಾಸ್ತಾವಿಕ ಭಾಷಣಗೈದು ಸ್ವಾಗತಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡಪ ಮುಖ್ಯ ಅತಿಥಿಯÁಗಿ ಭಾಗವಹಿಸಿದ್ದರು. ಮಂಜೇಶ್ವರ …