ವಿಧಾನಸಭೆಯ ಸ್ಪೀಕರ್ ಆಗಿ ತಿರುವಂಜೂರ್ ರಾಧಾಕೃಷ್ಣನ್ ಆಯ್ಕೆ

ತಿರುವನಂತಪುರ: ಹದಿನಾರನೇ ಕೇರಳ ವಿಧಾನಸಭೆಯ ಸ್ಪೀಕರ್ ಆಗಿ ಕಾಂಗ್ರೆಸ್‌ನ ಹಿರಿಯ ನಾಯಕರೂ, ಮಾಜಿ ಗೃಹ ಸಚಿವರೂ ಆಗಿರುವ ತಿರುವಂಜೂರು ರಾಧಾಕೃಷ್ಣನ್ ವಿದ್ಯುಕ್ತವಾಗಿ ಆರಿಸಲ್ಪಟ್ಟಿದ್ದಾರೆ. ಹಂಗಾಮಿ ವಿಧಾನಸಭಾ ಅಧ್ಯಕ್ಷ ಜಿ. ಸುಧಾಕರನ್‌ರ ಅಧ್ಯಕ್ಷತೆಯಲ್ಲಿ ಹೊಸ ವಿಧಾನಸಭಾ ಸ್ಪೀಕರ್ ಸ್ಥಾನಕ್ಕಾಗಿ ವಿಧಾನಸಭೆಯಲ್ಲಿ ಇಂದು ಬೆಳಿಗ್ಗೆ ನಡೆದ ಚುನಾವಣೆಯಲ್ಲಿ ವಿಧಾನಸಭೆಯ ಒಟ್ಟು 140 ಸದಸ್ಯರಲ್ಲಿ ಯುಡಿಎಫ್ ಉಮೇದ್ವಾರ ತಿರುವಂಜೂರು ರಾಧಾಕೃಷ್ಣನ್‌ರಿಗೆ 101 ಮತಗಳು ಲಭಿಸಿ ಅವರು ಸ್ಪೀಕರ್ ಆಗಿ ಆಯ್ಕೆಗೊಂಡರು.  ಸ್ಪೀಕರ್ ಸ್ಥಾನಕ್ಕಾಗಿ ಸ್ಪರ್ಧಿಸಿದ್ದ ಎಡರಂಗದ ಎ.ಸಿ. ಮೊಯ್ದೀನ್‌ರಿಗೆ 35 ಮತ್ತು …

16ರ ಬಾಲಕನಿಗೆ ಕಿರುಕುಳ: 36ರ ಯುವತಿ ಸೆರೆ

ಕಾಸರಗೋಡು:  ಪ್ರಾಯಪೂರ್ತಿಯಾಗದ ಬಾಲಕನಿಗೆ ಕಿರುಕುಳ ನೀಡಿದ ಆರೋಪದಂತೆ ಯುವತಿ ವಿರುದ್ಧ ಮೇಲ್ಪರಂಬ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 16ರ ಹರೆಯದ  ಬಾಲಕ ನೀಡಿದ ದೂರಿನಂತೆ  36ರ ಹರೆಯದ ಯುವತಿ ವಿರುದ್ಧ ಕೇಸು ದಾಖಲಿಸಲಾಗಿದೆ. ದೂರುಗಾರನಿಗೆ ಈಗ 19 ವರ್ಷ ಪ್ರಾಯವಿದೆ.ತನಗೆ 16 ವರ್ಷಪ್ರಾಯವಿದ್ದಾಗ ಆಟೋದಲ್ಲಿ ಹಾಗೂ ಯುವತಿಯ ಬೆಡ್‌ರೂಂನಲ್ಲಿ  ಕಿರುಕುಳ ನೀಡಿರು ವುದಾಗಿ  ದೂರಿನಲ್ಲಿ ತಿಳಿಸಲಾಗಿದೆ. 2024 ಎಪ್ರಿಲ್ ತಿಂಗಳಲ್ಲಿ ತಿರೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗಲೂ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. …

ಕಾರುಗಳನ್ನು ಬಾಡಿಗೆಗೆ ಪಡೆದು ಮಾಲಕರಿಗೆ ತಿಳಿಯದೆ ಮಾರಾಟ: ಆರೋಪಿ ಸೆರೆ

ಕಾಸರಗೋಡು: ಕಾರುಗಳನ್ನು ಬಾಡಿಗೆಗೆ ಪಡೆದು ನಂತರ ಅದರ ಮಾಲಕರಿಗೆ ತಿಳಿಯದಂತೆ  ಮಾರಾಟ  ಮಾಡುವ ಜಾಲದ ಆರೋಪಿಯನ್ನು ವಿದ್ಯಾನಗರ ಠಾಣೆ ಇನ್‌ಸ್ಪೆಕ್ಟರ್ ಎಂ.ಪಿ.ವಿನೀಶ್ ಕುಮಾರ್ ಮತ್ತು ಎಸ್‌ಐ ಅನೂಪ್  ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಆವಿಕ್ಕೆರೆ  ಬಿ.ಎಂ.ಜೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಶಂಸುದ್ದೀನ್ ಮೊಹಮ್ಮದ್(45) ಬಂಧಿತ ಆರೋಪಿ. ಇತ್ತೀಚೆಗೆ  ಮುಟ್ಟತ್ತೋಡಿ ಎರ್ದುಂಕಡವು ಆಯಿಶಾ ಮಂಜಿಲ್‌ನ ಫಾತಿಮತ್ ಸೆರೀನಾ ಎಂಬವರ ಎರಡು ಕಾರು ಮತ್ತು ಮಹೀಂದ್ರ ಜೀಪನ್ನು ಬಾಡಿಗೆಗೆ ಪಡೆದುಕೊಂಡು ನಂತರ ಅವುಗಳನ್ನು ಅದರ ಮಾಲಕರಿಗೆ ತಿಳಿಯದೆ ಇತರರಿಗೆ ಮಾರಾಟ ಮಾಡಿ …

ಕೂಲಿ ಕಾರ್ಮಿಕ ನಿಧನ

ಪೈವಳಿಕೆ: ಚಿಪ್ಪಾರು ಶಾಲೆ ಬಳಿಯ ನಿವಾಸಿ ನಾರಾಯಣ ಸಿ. ಮೂಲ್ಯ (73) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕೂಲಿ ಕಾರ್ಮಿಕನಾಗಿದ್ದರು. ಇವರ ಪತ್ನಿ ಚಂದ್ರಾವತಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ರೋಹಿಣಿ, ಮಮತಾ, ಜಯಶ್ರೀ, ಅಳಿಯಂದಿರಾದ ಸೀತಾರಾಮ, ಶೇಖರ, ಜಗದೀಶ, ಸಹೋದರ ಚಂದಪ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಕೃಷ್ಣ, ಸಹೋದರಿ ಕಮಲ ಈ ಹಿಂದೆ ನಿಧನರಾಗಿದ್ದಾರೆ. ಬ್ಲೋಕ್ ಪಂಚಾಯತ್ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, …

ಹೃದಯಾಘಾತ: ನಿಧನ

ನೀರ್ಚಾಲು: ಬೇಳ ನಿವಾಸಿ ರಾಘವ (58) ನಿಧನ ಹೊಂದಿದರು. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕುಂಬಳೆಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ಸುಜಾತ, ಮಕ್ಕಳಾದ ಹರೀಶ್, ರೋಹಿತ್ (ಇಬ್ಬರೂ ಕೊಲ್ಲಿಯಲ್ಲಿ), ಚೈತ್ರ, ಸಹೋದರರಾದ ಕೃಷ್ಣ ಪಳ್ಳತ್ತಡ್ಕ, ರಾಮಚಂದ್ರ ಪಳ್ಳತ್ತಡ್ಕ, ಸಹೋದರಿಯರಾದ ದೇವಕಿ, ಸುಶೀಲ, ಬೇಬಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ದೇಶವನ್ನು ಬೆಚ್ಚಿ ಬೀಳಿಸಿದ ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ

ಕಾಸರಗೋಡು: ದೇಶದ ಜನತೆಯನ್ನು ಬೆಚ್ಚಿಬೀಳಿಸಿದ ಮಂಗಳೂರು ವಿಮಾನ ದುರಂತ ಸಂಭವಿಸಿ ಇಂದಿಗೆ 16 ವರ್ಷಗಳಾ ಯಿತು. 2010 ಮೇ ೨೨ರಂದು ಬೆಳಿಗ್ಗೆ 6.30 ಕ್ಕೆ ಸಂಭವಿಸಿದ ವಿಮಾನ ದುರಂತದಲ್ಲಿ ಆರು ಮಂದಿ ನೌಕರರು ಸಹಿತ 158 ಮಂದಿ  ಮೃತಪಟ್ಟಿದ್ದರು. ಈ ಪೈಕಿ ೫೨ ಮಂದಿ ಕೇರಳೀಯರಾ ಗಿದ್ದಾರೆ. ಇವರಲ್ಲೂ ಬಹುಪಾಲು ಮಂದಿ ಕಾಸರಗೋಡು ಜಿಲ್ಲೆಯವರಾಗಿದ್ದಾರೆ.  ದುಬಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 152 ಮಂದಿ ಪ್ರಯಾಣಿಕರ ಸಹಿತ  ಸಂಚರಿಸಿದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿತ್ತು. ರನ್‌ವೇಯ ನಿರ್ಧಿಷ್ಟ  ಸ್ಥಾನದಿಂದ …

ಅನಂತಪುರ ಉದ್ದಿಮೆ ವಲಯದಲ್ಲಿ ವಾಯು ಮಲಿನೀಕರಣ ಕೋಳಿತ್ಯಾಜ್ಯ ಫ್ಯಾಕ್ಟರಿ ಮುಚ್ಚುಗಡೆಗೊಳಿಸಲು ಪಂಚಾಯತ್ ನಿರ್ದೇಶ

ಕೋಳಿತ್ಯಾಜ್ಯ ಫ್ಯಾಕ್ಟರಿ ಮುಚ್ಚುಗಡೆಗೊಳಿಸಲು ಪಂಚಾಯತ್ ನಿಕುಂಬಳೆ: ಅನಂತಪುರ ಉದ್ದಿಮೆ ವಲಯದ  ಕೋಳಿ ತ್ಯಾಜ್ಯ ಫ್ಯಾಕ್ಟರಿ ಯಿಂದ ಉಂಟಾಗುವ ವಾಯು ಮಲಿ ನೀಕರಣ ಹಾಗೂ ದುರ್ನಾತ ತೀವ್ರ ಗೊಂಡ ಹಿನ್ನೆಲೆಯಲ್ಲಿ ಫ್ಯಾಕ್ಟರಿಯನ್ನು ಮುಚ್ಚುಗಡೆಗೊಳಿಸಲು ಪುತ್ತಿಗೆ ಗ್ರಾಮ ಪಂಚಾಯತ್ ನಿರ್ದೇಶಿಸಿದೆ. ಫ್ಯಾಕ್ಟರಿ ಯಿಂದ ಉಂಟಾಗುವ ಅಸಹನೀಯ ದುರ್ನಾತದಿಂದ  ನೌಕರರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಉಸಿರಾಟ ತೊಂದರೆ, ವಾಂತಿ ಸಹಿತ  ಸಾಂಕ್ರಾಮಿಕ  ರೋಗಕ್ಕೆ ಕಾರಣವಾಗುವ ಹಿನ್ನೆಲೆಯಲ್ಲಿ ಫ್ಯಾಕ್ಟರಿಯ ಚಟು ವಟಿಕೆಗಳನ್ನು ನಿಲುಗಡೆಗೊಳಿಸುವಂತೆ  ಅದರ ಮಾಲಕರಿಗೆ  ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ. ಫ್ಯಾಕ್ಟರಿಯಿಂದ ಉಂಟಾಗುವ …

ಅಂತಾರಾಜ್ಯ ಸರಕಾರಿ ಬಸ್‌ಗಳಲ್ಲೂ ಉಚಿತ  ಪ್ರಯಾಣಕ್ಕೆ ಅವಕಾಶ ನೀಡಲು ಮಣಿಕಂಠ ರೈ ಆಗ್ರಹ

ಕುಂಬಳೆ: ಕೇರಳ ಸರಕಾರ ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದು, ಆದರೆ ಇದರಿಂದ ಕಾಸರಗೋಡು ಜಿಲ್ಲೆಯ ಜನರು ವಂಚಿತರಾಗÀಲು ಸಾಧ್ಯತೆ ಇದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ ತಿಳಿಸಿದ್ದಾರೆ. ಅಂತಾರಾಜ್ಯ ಪ್ರಯಾಣದ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲದಿರುವುದು ಇದಕ್ಕೆ ಕಾರಣ. ಆದ್ದರಿಂದ ಕಾಸರಗೋಡು ಜಿಲ್ಲೆ ಭಾಗದ ಜನರಿಗೆ ಅನುಕೂಲವಾಗು ವಂತೆ, ಅವರು ಹೆಚ್ಚು ಬಳಸುವ ಕಾಸರಗೋಡು – ಮಂಗಳೂರು ನಡುವಿನ ಬಸ್‌ಗಳಲ್ಲಿ ಕನಿಷ್ಠ ಗಡಿಭಾಗದವರೆಗಾದರೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು …

ಕಾಸರಗೋಡಿನ ರೈಲ್ವೇ ಪ್ರಯಾಣಿಕರ ಸಂಕಷ್ಟ ಪರಿಹರಿಸಲು ಜಿಲ್ಲಾಡಳಿತದ ಮಾಸ್ಟರ್‌ಪ್ಲಾನ್

ಕಾಸರಗೋಡು: ಕಾಸರಗೋಡಿ ನವರ ರೈಲ್ವೇ ಪ್ರಯಾಣ ಸಮಸ್ಯೆ ಪರಿಹ ರಿಸುವುದಕ್ಕೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ರೈಲ್ವೇಗೆ ಸಮಗ್ರ ನಿರ್ದೇಶ ಅಡಕವಾದ ವರದಿಯನ್ನು ಹಸ್ತಾಂತರಿಸಿ ದ್ದಾರೆ. ಕಣ್ಣೂರು, ಮಂಗಳೂರು ಸೆಂ ಟ್ರಲ್, ಮಂಗಳೂರು ಜಂಕ್ಷನ್ ಎಂಬೆ ಡೆಗಳಲ್ಲಿ ಸಂಚಾರ ಕೊನೆಗೊಳಿಸುವ ಪ್ರಧಾನ ರೈಲುಗಳನ್ನು ಕಾಸರಗೋಡಿಗೂ ಮುಂದುವರಿಸಬೇಕೆಂದು, ನಿಲುಗಡೆ ಗೊಳಿಸಿದ ಪ್ಯಾಸೆಂಜರ್ ಸರ್ವೀಸ್ ಗಳನ್ನು ಪುನರಾರಂಭಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಪತ್ರ ರವಾನಿಸಿದ್ದಾರೆ. ಪಾಲಕ್ಕಾಡ್ ಡಿವಿಶನಲ್ ರೈಲ್ವೇ ಮೆನೇಜರ್ ಮಧುಕರ್ ರಾವತ್‌ರಿಗೆ ಕಳುಹಿಸಿದ ಪತ್ರದಲ್ಲಿ ಕಾಸರಗೋಡು ಜಿಲ್ಲೆ ಎದುರಿಸುವ ತೀವ್ರ ಪ್ರಯಾಣ …

ಅಂಗಡಿಗೆ ನುಗ್ಗಿ ವ್ಯಾಪಾರಿಗೆ ಹಲ್ಲೆ: ಮೂವರ ವಿರುದ್ಧ ಕೇಸು ದಾಖಲು

ಬದಿಯಡ್ಕ: ಅಂಗಡಿಗೆ ನುಗ್ಗಿ ವ್ಯಾಪಾರಿಗೆ ಹಲ್ಲೆ ನಡೆಸಿ 65,000 ರೂ. ನಷ್ಟಗೊಳಿಸಿದ ದೂರಿನಂತೆ ಮೂವರ ವಿರುದ್ದ ಬದಿಯಡ್ಕ ಪೊಲೀ ಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ದ.ಕ. ಜಿಲ್ಲೆಯ ಪುತ್ತೂರು ಬೆಟ್ಟಂ ಪಾಡಿ ಕುಟ್ಟತ್ತನ ಹೌಸ್‌ನ ಮೊಹ ಮ್ಮದ್ ಅಶ್ರಫ್ ಕೆ.ಎಂ  ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಗಣೇಶನ್, ಅವಿನಾಶ್ ಮತ್ತು ಇನ್ನೋರ್ವ ಸೇರಿದಂತೆ ಮೂರು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರುಗಾರ ವಹಮ್ಮದ್ ಅಶ್ರಫ್ ಪೆರ್ಲದಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಮೇ 19ರಂದು …