ಆರ್ಥಿಕ ವರ್ಷ ಕೊನೆಗೊಳ್ಳುವ ವೇಳೆ ಯೋಜನೆ ಪೂರ್ತಿಗೆ ಸಮಸ್ಯೆ: ಬದಿಯಡ್ಕ ಪಂಚಾಯತ್‌ನಿಂದ ಅಧಿಕಾರಿಗಳ ವರ್ಗಾವಣೆ ಮಾಡಬಾರದೆಂದು ಅಧ್ಯಕ್ಷರಿಂದ ಸಚಿವರಿಗೆ ಪತ್ರ

ಬದಿಯಡ್ಕ: ಆರ್ಥಿಕ ವರ್ಷ ಕೊನೆಗೊಳ್ಳುವ ಮಾರ್ಚ್ ತಿಂಗಳಲ್ಲಿ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಬದಿಯಡ್ಕ ಪಂಚಾಯತ್‌ನಲ್ಲಿ ಸಮಸ್ಯೆ ಸೃಷ್ಟಿಗೆ ಯತ್ನಿಸುತ್ತಿದೆ ಎಂದು ಪಂಚಾಯತ್ ಅಧ್ಯಕ್ಷ ಶಂಕರ ಡಿ. ದೂರಿದ್ದಾರೆ. ಈ ಬಗ್ಗೆ ಸ್ಥಳೀಯಾಡಳಿತ ಇಲಾಖೆ ಸಚಿವರಿಗೆ ಪತ್ರ ಬರೆದ ಅವರು ಮಾರ್ಚ್ ತಿಂಗಳು ಕೊನೆಗೊಳ್ಳುವ ಮೊದಲು ಪಂಚಾಯತ್ ಕಚೇರಿಯಿಂದ ಯಾವುದೇ ಅಧಿಕಾರಿಯನ್ನು ವರ್ಗಾಯಿಸಬಾರದೆಂದು ಒತ್ತಾಯಿಸಿದ್ದಾರೆ. ಪಂಚಾಯತ್‌ನಲ್ಲಿ ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿದ್ದ ವೇಳೆ ಕಚೇರಿಯಲ್ಲಿ ೧೦ರಷ್ಟು ಹುದ್ದೆಗಳು ಖಾಲಿಯಾಗಿತ್ತು. ಪಂಚಾಯತ್ ಆಡಳಿತ ನಿರಂತರ ಒತ್ತಾಯದ ಮೇರೆಗೆ …

ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ವಾರ್ಷಿಕ ಮಹೋತ್ಸವ ಆರಂಭ

ಮಲ್ಲ: ಮಲ್ಲ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದಲ್ಲಿ   ವಾರ್ಷಿಕ ಮಹೋತ್ಸವಕ್ಕೆ ನಿನ್ನೆ ರಾತ್ರಿ ಧ್ವಜಾರೋಹಣ ನಡೆಸಲಾಯಿತು. ತಂತ್ರಿ ಎಂ. ರಾಧೇಶ್ಯಾಂ ಭಟ್ ಧ್ವಜಾರೋಹಣ ನಡೆಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ಸತ್ಯನಾರಾಯಣ ಭಟ್ ಸಹಿತ ಹಲವರು ಉಪಸ್ಥಿತರಿದ್ದರು. ಇಂದು ಬೆಳಿಗ್ಗೆ ಶ್ರೀ ಭೂತಬಲಿ, ತುಲಾಭಾರ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ರಾತ್ರಿ ೯ಕ್ಕೆ ಶ್ರೀ ಭೂತಬಲಿ, ಪಾಲಕಿಸೇವೆ, ನೃತ್ಯ ನಡೆಯಲಿರುವುದು.  ವಾರ್ಷಿಕ ಮಹೋತ್ಸವ ಮಾರ್ಚ್ 5ರಂದು ಬೆಳಿಗ್ಗೆ ಶ್ರೀ ಧೂಮಾವತಿ ದೈವದ ನೇಮದೊಂದಿಗೆ ಸಮಾಪ್ತಿಗೊಳ್ಳಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ …

ಜಿಲ್ಲೆಯಲ್ಲಿ 3 ಹೊಸ ಕೈಗಾರಿಕಾ ಪಾರ್ಕ್‌ಗಳಿಗೆ ಅನುಮತಿ

ಕಾಸರಗೋಡು: ಜಿಲ್ಲೆಯಲ್ಲಿ ನೂತನ ಮೂರು ಖಾಸಗಿ ಕೈಗಾರಿಕಾ ಪಾರ್ಕ್‌ಗಳಿಗೆ ರಾಜ್ಯ ಸರಕಾರ ಅನುಮತಿ ನೀಡಿದೆ. ಇದರೊಂದಿಗೆ ಈ ಮೊದಲು ಅನುಮತಿ ಲಭಿಸಿದ ಪಾರ್ಕ್‌ಗಳು ಸಹಿತ ಜಿಲ್ಲೆಯಲ್ಲಿ ಖಾಸಗಿ ಕೈಗಾರಿಕಾ ಪಾರ್ಕ್‌ಗಳ ಸಂಖ್ಯೆ ಆರು ಆಗಿ ಹೆಚ್ಚಳಗೊಂಡಿದೆ. ಕೈಗಾರಿಕಾ ಅಗತ್ಯಗಳಿಗೆ ಹೆಚ್ಚು ಭೂಮಿ ಲಭ್ಯಗೊಳಿಸುವುದಕ್ಕಾಗಿ ರಾಜ್ಯ ಸರಕಾರ ಆವಿಷ್ಕರಿಸಿದ ಯೋಜನೆಯಾಗಿದೆ ಖಾಸಗಿ ಕೈಗಾರಿಕಾ ಪಾರ್ಕ್ ಯೋಜನೆ. ಕನಿಷ್ಠ 10 ಎಕ್ರೆ ಭೂಮಿ ಸ್ವಂತವಾಗಿ ಇರುವ ಖಾಸಗಿ ವ್ಯಕ್ತಿಗಳಿಗೆ, ಗ್ರೂಪ್‌ಗಳಿಗೆ, ಕಂಪೆನಿಗಳಿಗೆ ಕೈಗಾರಿಕಾ ಪಾರ್ಕ್ ಸ್ಥಾಪಿಸುವುದಕ್ಕೆ 3 ಕೋಟಿ ರೂ.ವರೆಗೆ …

ದಿನೇಶ್ ಬೀಡಿ ನೌಕರೆಗೆ ಬೀಳ್ಕೊಡುಗೆ 

ಬದಿಯಡ್ಕ: ದಿನೇಶ್ ಬೀಡಿ ಕಂಪೆನಿಯ ಬದಿಯಡ್ಕ ಶಾಖೆಯಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಓಮನ ಅವರಿಗೆ ಬೀಳ್ಕೊಡುಗೆ ನೀಡಲಾಯಿತು. ದಿನೇಶ್ ಬೀಡಿ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಖೆಯ ಕಾರ್ಯದರ್ಶಿ ಶ್ರೀಜ ಅವರು ಕಾಲುದೀಪ ನೀಡಿ ಓಮನರನ್ನು ಸನ್ಮಾನಿಸಿದರು. ನೌಕರರಾದ  ಚಂದ್ರನ್, ಸರೋಜಿನಿ ಸ್ಮರಣಿಕೆ ನೀಡಿ, ಶಾಲು ಹೊದಿಸಿ ಗೌರವಿಸಿದರು. ಓಮನ ೧೯೮೬ರಲ್ಲಿ  ದಿನೇಶ್ ಬೀಡಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು.  ಇವರು ಬದಿಯಡ್ಕದಲ್ಲಿ ಪತ್ರಿಕೆ ವಿತರಣೆ ನಡೆಸುವ  ಬಾಲಕೃಷ್ಣರ ಪತ್ನಿಯಾಗಿದ್ದಾರೆ. ವಿನೋದ್, ಚಿತ್ರ ಎಂಬಿವರು ಮಕ್ಕಳಾಗಿದ್ದಾರೆ.

ಐಲ ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಸಂಘದ ಬೆಳ್ಳಿಹಬ್ಬ ಆಚರಣೆ

ಉಪ್ಪಳ: ಐಲ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಧಾರ್ಮಿಕ, ಸಾಂಸ್ಕೃತಿಕ, ಸೇವೆ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಿಂದ ತೊಡಗಿಸಿಕೊಂ ಡಿದ್ದ ಶ್ರೀ ದುರ್ಗಾ ಪರಮೇಶ್ವರೀ ಮಹಿಳಾ ಸಂಘದ ಬೆಳ್ಳಿಹಬ್ಬ ಇತ್ತೀಚೆಗೆ ಐಲ ಕ್ಷೇತ್ರ ಪರಿಸರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಭಾ ಕಾರ್ಯ ಕ್ರಮ ಗಳಿಂದೊಡಗೂಡಿ ನೆರವೇರಿತು. ಐಲ ಕ್ಷೇತ್ರದಲ್ಲಿ ಬೆಳಿಗ್ಗೆ ಗಣಹೋಮ, ಶ್ರೀ ದುರ್ಗಾ ಪರಮೇಶ್ವರೀ ಮಹಿಳಾ ಸಂಘದಿಂದ, ಕುಕ್ಕಾಡಿ ಶ್ರೀ ಭಗವತೀ ಮಹಿಳಾ ಸಂಘದ ಸದಸ್ಯೆಯರಿಂದ ಭಜನೆ ಸೇವೆ ನಡೆಯಿತು. ವೇದ ಮೂರ್ತಿ …

ಯುವಕ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಯುವಕನೋರ್ವ ಮನೆಯೊಳಗೆ ನೇಣುಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಪಿಲಾಂಕಟ್ಟೆ ಉಬ್ರಂಗಳದ ದಿ| ರಘುರಾಮ ಎಂಬವರ ಪುತ್ರ ಚಂದ್ರಶೇಖರ (30) ಮೃತಪಟ್ಟ ಯುವಕ. ಬದಿಯಡ್ಕದಲ್ಲಿ ವೆಲ್ಡಿಂಗ್ ಕೆಲಸ ನಡೆಸುವ ಸಹೋದರ ಚಂದ್ರಕಾಂತ ಹಾಗೂ ಚಂದ್ರಶೇಖರ ಮಾತ್ರವೇ ಮನೆಯಲ್ಲಿ ವಾಸಿಸುತ್ತಿದ್ದರು. ಚಂದ್ರಕಾಂತ ಕೆಲಸ ಮುಗಿಸಿ ನಿನ್ನೆ ರಾತ್ರಿ 7.30ರ ವೇಳೆ ಮನೆಗೆ ತಲುಪಿದಾಗ  ಚಂದ್ರಶೇಖರ  ಅಡುಗೆ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ.  ಕೂಡಲೇ ಅವರನ್ನು     ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಚಂದ್ರಶೇಖರ ಟೈಲ್ಸ್ ಕೆಲಸ ನಡೆಸುತ್ತಿ …

ನಾಪತ್ತೆಯಾದ ಐಟಿಐ ವಿದ್ಯಾರ್ಥಿನಿ ಪ್ರಿಯತಮನನ್ನು ಮದುವೆಯಾಗಿ ದಾಂಪತ್ಯಕ್ಕೆ

ಕುಂಬಳೆ: ಐಟಿಐಗೆ ಹೋದ ಬಳಿಕ ನಾಪತ್ತೆಯಾದ ವಿದ್ಯಾರ್ಥಿನಿ ಹಾಗೂ ಪ್ರಿಯತಮ ಪರಶ್ಶಿನಿಕಡವು ಕ್ಷೇತ್ರದಲ್ಲಿ ಮದುವೆಯಾಗಿ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.  ನೀರ್ಚಾಲು ಮೆಣಸಿನಪಾರೆಯ ಪುಷ್ಪಲತಾ ಎಂಬವರ ಪುತ್ರಿ ಕೆ. ಯಜ್ಞಶ್ರೀ (20) ಹಾಗೂ ಕಾಸರಗೋಡು ನೆಲ್ಲಿಕುಂಜೆ ಓವರ್‌ಬ್ರಿಡ್ಸ್ ಸಮೀಪದ ಹಿತೇಶ್ ನಿನ್ನೆ ಮದುವೆಯಾಗಿದ್ದಾರೆ. ಈ ಇಬ್ಬರು ಇಂದು ಠಾಣೆಯಲ್ಲಿ ಹಾಜರಾಗುವುದಾಗಿ ತಿಳಿಸಿದ್ದಾರೆಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಸೀತಾಂಗೋಳಿ ಐಟಿಐಯ ವಿದ್ಯಾರ್ಥಿನಿಯಾದ ಯಜ್ಞಶ್ರೀ ಎಂದಿನಂತೆ ನಿನ್ನೆ ಬೆಳಿಗ್ಗೆ ಕಾಲೇಜಿಗೆ ತೆರಳಿದ್ದಳು. ಆದರೆ ತರಗತಿಗೆ ಹಾಜರಾಗದೆ ಕುಂಬಳೆ ರೈಲು ನಿಲ್ದಾಣಕ್ಕೆ ತಲುಪಿ ಕಣ್ಣೂರು …

ಕಾಸರಗೋಡಿಗೆ ನೂತನ ಜಿಲ್ಲಾಧಿಕಾರಿ ನೇಮಕ

ಕಾಸರಗೋಡು: ಕಾಸರಗೋಡು ಜಿಲ್ಲಾಧಿಕಾರಿ ಕೆ. ಇಂಭಶೇಖರ್‌ರನ್ನು ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ. ಇವರ ಬದಲಿಗೆ ಕಾಸರಗೋಡು ಜಿಲ್ಲಾಧಿಕಾರಿಯಾಗಿ ತೃಶೂರು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್‌ರನ್ನು ನೇಮಿಸಲಾಗಿದೆ. ರಾಜ್ಯದ ಅತ್ಯುತ್ತಮ ಜಿಲ್ಲಾಧಿಕಾರಿಗಿರುವ ಪ್ರಶಸ್ತಿಯನ್ನು ಗಳಿಸಿರುವ ಅರ್ಜುನ್ ಪಾಂಡ್ಯನ್ ಇಡುಕ್ಕಿ ನಿವಾಸಿಯಾಗಿದ್ದಾರೆ.  ತೋಟ ವಲಯದ  ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅರ್ಜುನ್ ಪಾಂಡ್ಯನ್ 2017 ರಲ್ಲಿ ಸಿವಿಲ್ ಸರ್ವೀಸ್‌ಗೆ  ತಲುಪಿದ್ದರು. ಇದೇ ವೇಳೆ ತೃಶೂರು   ಜಿಲ್ಲಾಧಿಕಾರಿಯಾಗಿ ಟೂರಿಸಂ ಡೈರೆಕ್ಟರ್ ಶಿಖಾ ಸುರೇಂದ್ರನ್‌ರನ್ನು ನೇಮಿಸಲಾಗಿದೆ.

ಆರ್‌ಎಸ್‌ಎಸ್ ಮುಖಂಡ ನಿಧನ

ಬದಿಯಡ್ಕ: ಹಿರಿಯ ಕೃಷಿಕ, ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಮೀಸೆಬೈಲು ರಾಮ ಭಟ್ ಕೆ.ಎಂ.(92) ಇಂದು ಮುಂಜಾನೆ ನಿಧನ ಹೊಂದಿದರು. ಇವರು ಬಿಜೆಪಿಯಿಂದ ಈ ಹಿಂದೆ ಬದಿಯಡ್ಕ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.  ಇವರ ಪತ್ನಿ ವೆಂಕಟೇಶ್ವರಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಸುಬ್ರಹ್ಮಣ್ಯ ಶರ್ಮ ಎಂ.ಆರ್, ಸುಲೋಚನ, ರಾಜೇಶ್ವರಿ, ಉಷಾ, ಸೊಸೆ ವೀಣಾ, ಅಳಿಯಂದಿರಾದ ಸುಬ್ರಹ್ಮಣ್ಯ ಭಟ್ ಪುಳು, ಗಣಪತಿ ಕಿನಿಲಕೋಡಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪೆರಿಯ ಬಜಾರ್‌ನಲ್ಲಿ 3 ಗೂಡಂಗಡಿಗಳಿಗೆ ಕಿಚ್ಚು: ದುಷ್ಕರ್ಮಿಗಳು ತಲುಪಿದ್ದು ಬೈಕ್‌ನಲ್ಲೆಂಬ ಶಂಕೆ

ಕಾಸರಗೋಡು: ಪೆರಿಯ ಬಜಾರ್‌ನಲ್ಲಿ ಮೂರು ಗೂಡಂಗಡಿಗಳಿಗೆ ಕಿಚ್ಚಿರಿಸಲಾಗಿದೆ. ಪೆರಿಯ ಪೆಟ್ರೋಲ್ ಬಂಕ್ ಸಮೀಪದ ಮುಹಮ್ಮದ್ ಕುಂಞಿ, ನವೋದಯ ಶಾಲೆ ಸಮೀಪದ ಮುಹಮ್ಮದ್ ಕುಂಞಿ, ನವೋದಯ ನಗರ ಎಮಿನ್ ಶಾಲೆಯ ಸಮೀಪದ ಜಬ್ಬಾರ್ ಎಂಬಿವರ ಅಂಗಡಿಗಳಿಗೆ ಕಿಚ್ಚಿರಿಸಲಾಗಿದೆ. ಈ ಮೂರು ಅಂಗಡಿಗಳು ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಾಗಿ ವಿಭಿನ್ನ ಸ್ಥಳಗಳಲ್ಲಿದೆ. ಮಾಹಿತಿ ತಿಳಿದು ಬೇಕಲ ಪೊಲೀಸರು ಹಾಗೂ ಕಾಞಂಗಾಡ್‌ನಿಂದ ಅಗ್ನಿಶಾಮಕ ದಳ ತಲುಪಿ ಬೆಂಕಿ ನಂದಿಸಿದೆ. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಅಧಿಕಾರಿ ಗಣೇಶ್, ಇ. ಶಿಜು, ಎ. …