ಕುಂಬ್ಡಾಜೆಯಲ್ಲಿ ಮಳೆಗಾಲಪೂರ್ವ ಸ್ವಚ್ಛತೆಗೆ ಚಾಲನೆ

ಬದಿಯಡ್ಕ: ಆರೋಗ್ಯ ಜಾಗೃತಿಯಂಗವಾಗಿ ಕುಂಬ್ಡಾಜೆ ಪಂಚಾಯತ್, ಕುಟುಂಬ ಆರೋಗ್ಯ ಕೇಂದ್ರದ ಜಂಟಿ ಆಶ್ರಯದಲ್ಲಿ ನಿನ್ನೆ ಮಾರ್ಪನಡ್ಕ ಪಾಂಚಜನ್ಯ ಸಭಾಂಗಣದಲ್ಲಿ ಆರೋಗ್ಯ ವಿಚಾರ ಸಂಕಿರಣ ಮತ್ತು ಪೇಟೆ ಶುಚೀಕರಣ ಕಾರ್ಯಕ್ರಮ ನಡೆಯಿತು.ಕುಂಬ್ಡಾಜೆ ಪಂ.ನ ೧೪ ವಾರ್ಡ್ ಗಳಲ್ಲಿ ೧೪ರವರೆಗೆ ವಾರ್ಡ್ ಮಟ್ಟ ದಲ್ಲಿ ಜನಪ್ರತಿನಿದಿsಗಳ ನೇತೃತ್ವದಲ್ಲಿ ಸ್ವಚ್ಛತಾ ಸಪ್ತಾಹವನ್ನು ಆಚರಿಸ ಲಾಗುವುದು. ಇದರಂಗವಾಗಿ ನಡೆದ ವಿಚಾರ ಸಂಕಿರಣ, ಸಭೆ ಮತ್ತು ಗುಂಪು ಚರ್ಚೆಯಲ್ಲಿ ೨೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.ಕುಂಬ್ಡಾಜೆ ಪಂ. ಆರೋಗ್ಯ ಮತ್ತು ಶಿಕ್ಷಣ ವ್ಯವಹಾರಗಳ ಸಮಿತಿ ಅಧ್ಯಕ್ಷೆ …

ಮುಸ್ಲಿಂಲೀಗ್‌ಗೆ ನಾಲ್ಕು ಸಚಿವ ಸ್ಥಾನ: ಪಟ್ಟಿ ಸಿದ್ಧ

ತಿರುವನಂತಪುರ: ಹತ್ತು ವರ್ಷದ ಬಳಿಕ ಕೇರಳದಲ್ಲಿ ಮತ್ತೆ ಅಧಿಕಾರಕ್ಕೇರಲಿರುವ ಯುಡಿಎಫ್ ಸರಕಾರದಲ್ಲಿ ಸಚಿವರಾಗುವ ಮುಸ್ಲಿಂ ಲೀಗ್‌ನ ನೇತಾರರಾದ ಯಾದಿಯನ್ನು ಮುಸ್ಲಿಂ ಲೀಗ್ ರಾಜ್ಯ ನೇತೃತ್ವ ಈಗಾಗಲೇ ತಯಾರಿಸಿದೆ. ಇದರಂತೆ ಮುಸ್ಲಿಂ ಲೀಗ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಕುಂಞಾಲಿಕುಟ್ಟಿ, ಪಿ.ಕೆ ಬಶೀರ್, ಎಂ.ಕೆ. ಶಾಜಿ ಮತ್ತು ಎನ್. ಶಂಸುದ್ದೀನ್ ಎಂಬವರ ಪಟ್ಟಿಯನ್ನು  ಸಚಿವ ಸ್ಥಾನಕ್ಕಾಗಿ ಮುಸ್ಲಿಂ ಲೀಗ್ ಸಿದ್ಧಪಡಿಸಿದೆ. ಯುಡಿಎಫ್ ಸಚಿವ ಸಂಪುಟದಲ್ಲಿ ಮುಸ್ಲಿಂ ಲೀಗ್‌ಗೆ ನಾಲ್ಕು ಸಚಿವ ಸ್ಥಾನ ನೀಡುವ ತೀರ್ಮಾನವನ್ನು ಯುಡಿಎಫ್ ಈಗಾಗಲೇ ಕೈಗೊಂಡಿದೆ. …

ಕೃಷಿಕೆ ನಿಧನ

ಪೈವಳಿಕೆ: ಖ್ಯಾತ ಯಕ್ಷಗಾನ ಕಲಾವಿದರಾಗಿದ್ದ ದಿ| ಕರುವೋಳು ದೇರಣ್ಣ ಶೆಟ್ಟಿಯವರ ಪತ್ನಿ ರಾಧಮ್ಮ (86) ನಿಧನ ಹೊಂದಿದರು. ಕೃಷಿಕೆಯಾ ಗಿದ್ದರು. ಮೃತರು ಮಕ್ಕಳಾದ ಯಶೋಧ, ವಿಶಾಲಾಕ್ಷಿ, ಸುಮತಿ, ದಿನೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಪೈವಳಿಕೆ ಸಿಪಿಎಂ ಲೋಕಲ್ ಸಮಿತಿ, ಶಿರಂತಡ್ಕ ಕಾಡೂರು ಕುರುಡಪದವು ಬ್ರಾಂಚ್ ಸಮಿತಿ, ಕಿಸಾನ್ ಸಭಾ, ಸಿಐಟಿಯು, ಮಹಿಳಾ ಅಸೋಸಿಯೇಶನ್, ಡಿವೈಎಫ್‌ಐ ಘಟಕಗಳು, ಲಕ್ಕಿ ಸ್ಟಾರ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಗೋಳಿಕಟ್ಟೆ ಸಂತಾಪ ಸೂಚಿಸಿದೆ. ಮೃತರ …

ರಾಜ್ಯಕ್ಕೆ ತಲುಪಿದ ಶೃಂಗೇರಿಶ್ರೀಗಳಿಗೆ ಸ್ವರ್ಗದಲ್ಲಿ ಗಾರ್ಡ್ ಆಫ್ ಆನರ್

ಪೆರ್ಲ: ಶೃಂಗೇರಿ ಮಠದ ಕಿರಿಯ ಮಠಾಧೀಶ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಏಳು ದಿನಗಳ ಕೇರಳ ಭೇಟಿಗಾಗಿ ನಿನ್ನೆ ಸಂಜೆ ಪುತ್ತೂರು ಪಾಣಾಜೆ ಮೂಲಕ ಗಡಿ ಭಾಗವಾದ ಸ್ವರ್ಗಕ್ಕೆ ಆಗಮಿಸಿದಾಗ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿ ಡಿಜಿಪಿ ರಾವಡ ಆಜಾದ್ ಚಂದ್ರಶೇಖರ್‌ರ ನೇತೃತ್ವದಲ್ಲಿ ರಾಜ್ಯ ಸರಕಾರದ ಪರವಾಗಿ ಗಾರ್ಡ್ ಆಫ್ ಆನರ್ ನೀಡಿ ಗೌರವಿಸಲಾಯಿತು. ಡಿಐಜಿ ಯತೀಶ್ಚಂದ್ರ ಐಪಿಎಸ್ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು ಸ್ವರ್ಗಕ್ಕೆ ತಲುಪಿದ್ದರು. ಕಜಂಪಾಡಿ ಸುಬ್ರಹ್ಮಣ್ಯ ಭಟ್, ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನದ ಅರ್ಚಕ …

ಅಸೌಖ್ಯ: ನಿಧನ

ಪೆರ್ಲ: ಸ್ವರ್ಗ ಕೊಡೆಂಕೀರಿ ನಿವಾಸಿ ನಾರಾಯಣ (೫೨) ನಿಧನ ಹೊಂದಿದರು. ಅಸೌಖ್ಯ ತಗಲಿ ಕಳೆದ ನಾಲ್ಕು ತಿಂಗಳಿಂದ ಕಾಸರಗೋಡು ಹಾಗೂ ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ನಿನ್ನೆ ಮನೆಯಲ್ಲಿ ನಿಧನ ಸಂಭವಿಸಿದೆ. ಕೂಲಿ ಕಾರ್ಮಿಕನಾಗಿದ್ದರು. ಮೃತರು ಪತ್ನಿ ಸುಮಿತ್ರ, ಮಕ್ಕಳಾದ ಮಮತ, ಮಹೇಶ್, ಚೈತ್ರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲೇ ಸುವೇಂದು ಅಧಿಕಾರಿಯ ಹತ್ಯೆಗೆ ಸ್ಕೆಚ್: ಯತ್ನ ವಿಫಲಗೊಂಡಾಗ ಗುಂಡಿಕ್ಕಿ ಆಪ್ತನ ಕೊಲೆ

ಕೊಲ್ಕತ್ತ: ಪಶ್ಚಿಮಬಂಗಾಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಂದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಭಯಾನಕ ರಕ್ತಪಾತದ ಅಧ್ಯಾಯ ಆರಂಭಗೊಂಡಿದೆ. ಕಾನೂನು ಮತ್ತು ಸುವ್ಯವಸ್ಥೆ ಕುಸಿದಿರುವ ಈ ಸಮಯದಲ್ಲಿ, ಶನಿವಾರದಂದು ಪಶ್ಚಿಮಬಂಗಾಳದ ಹೊಸ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸುವ ಮೊದಲೇ ಅವರನ್ನು ಹತ್ಯೆಗೈಯ್ಯಲು ದಾಳಿಕೋರರು ಸ್ಕೆಚ್ ಹಾಕಿದ್ದು ಅದು ವಿಫಲಗೊಂಡಾಗ ಅವರ ಆಪ್ತನನ್ನೇ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ. ಈ ಘಟನೆ ರಾಜ್ಯದ ರಾಜಕೀಯ ವಾತಾವರಣವನ್ನು ಇನ್ನಷ್ಟು ಕದಡಿಸುವಂತೆ ಮಾಡಿದೆ. ನಿಯುಕ್ತ ಮುಖ್ಯಮಂತ್ರಿ ಸುವೇಂದು ಅಧಿಕಾರಿಯ ಆಪ್ತ …

ಮುಖ್ಯಮಂತ್ರಿಯ ಆಯ್ಕೆ: ಘಟಕಪಕ್ಷ ನೇತಾರರೊಂದಿಗೂ ಚರ್ಚೆಗೆ ಎಐಸಿಸಿ ನಿರೀಕ್ಷಕರು

ತಿರುವನಂತಪುರ: ಮುಖ್ಯಮಂತ್ರಿ ಯನ್ನು ನಿರ್ಣಯಿಸಲಿರುವ ಕ್ರಮದಂಗವಾಗಿ ರಾಜ್ಯಕ್ಕೆ ಆಗಮಿಸಿದ ಎಐಸಿಸಿ ನಿರೀಕ್ಷಕರು ಕಾಂಗ್ರೆಸ್‌ನ ಹಿರಿಯ ನೇತಾರರರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಕೆ. ಸುಧಾಕರನ್, ವಿ.ಎಂ. ಸುಧೀರನ್, ಕೊಡಿಕುನ್ನಿಲ್ ಸುರೇಶ್ ಸಹಿತ ಪ್ರಮುಖ ನೇತಾರರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ.  ಇನ್ನಷ್ಟು ನೇತಾರರನ್ನು ತಿರುವನಂತಪುರಕ್ಕೆ ಕರೆಸಲಾಗಿದೆ.  ಇದೇ ವೇಳೆ ಯುಡಿಎಫ್‌ನ ಘಟಕ ಪಕ್ಷಗಳ ನೇತಾರರೊಂದಿಗೂ ಅಭಿಪ್ರಾ ಯ ಕೇಳಲು  ಎಐಸಿಸಿ ನಿರೀಕ್ಷಕರು ತೀರ್ಮಾನಿಸಿದ್ದಾರೆ. ಇಂದು ಸಂಜೆ 4.30ಕ್ಕೆ  ಘಟಕ ಪಕ್ಷಗಳ ನೇತಾರ ರೊಂದಿಗೆ ಚರ್ಚೆ ನಡೆಯಲಿದೆ. ಇದಕ್ಕಾಗಿ ಲೀಗ್ ನೇತಾರರ ಸಹಿತ …

ಪಳ್ಳತ್ತಡ್ಕದ ವ್ಯಾಪಾರಿ ನಿಧನ

ಬದಿಯಡ್ಕ: ಪಳ್ಳತ್ತಡ್ಕದಲ್ಲಿ ಹಲವು ವರ್ಷಗಳಿಂದ ವ್ಯಾಪಾರಿ ಯಾಗಿರುವ ಅಬ್ದುಲ್ ಶರೀಫ್ (54) ನಿಧನ ಹೊಂದಿದರು. ಅಸೌಖ್ಯ ತಗಲಿ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಇಂದು ಮುಂಜಾನೆ ನಿಧನ ಸಂಭವಿಸಿದೆ. ದಿ| ಕುಂಞಾಲಿಯವರ ಪುತ್ರನಾಗಿರುವ ಇವರು ಅವಿವಾಹಿತನಾಗಿದ್ದಾರೆ. ಮೃತರು ತಾಯಿ ಆಯಿಷಾ, ಸಹೋದರ ಬಶೀರ್, ಸಹೋ ದರಿಯರಾದ ಫೌಸಿಯಾ, ಸುಬೈದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕ್ಲಿನಿಕ್‌ಗೆ ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ-ದೂರು

ಕುಂಬಳೆ: ಡೆಂಟಲ್ ಕ್ಲಿನಿಕ್‌ನಲ್ಲಿ ಕೆಲಸಕ್ಕೆಂದು ಹೋದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಇಚ್ಲಂಪಾಡಿ ಕೊಡ್ಯಮ್ಮೆ ಕೋಟೆಕಾರ್‌ನ ವಂದನ (21) ಎಂಬಾಕೆ ನಾಪತ್ತೆಯಾಗಿದ್ದಾ ಳೆನ್ನಲಾಗಿದೆ. ಈ ಬಗ್ಗೆ ಸಹೋದರ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಂಗಳವಾರ ಬೆಳಿಗ್ಗೆ 7.45ರ ವೇಳೆ ಎಂದಿನಂತೆ ಕಾಸರಗೋಡು ಅಣಂಗೂರಿನ ಡೆಂಟಲ್ ಕ್ಲಿನಿಕ್‌ಗೆ ವಂದನ ಕೆಲಸಕ್ಕೆಂದು  ತಿಳಿಸಿ ಹೋಗಿದ್ದು, ಅನಂತರ ಮರಳಿ ಬಂದಿಲ್ಲವೆಂದು ಸಹೋದರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮರಳಿ ಬರುವಳೆಂದು ಭಾವಿಸಿ ದೂರು ನೀಡಲು ತಡ ಮಾಡಿರುವು ದಾಗಿಯೂ …

ಬೀಗ ಜಡಿದ ಮನೆಯಿಂದ ಐದೂವರೆ ಪವನ್ ಚಿನ್ನಾಭರಣ, 40 ಸಾವಿರ ರೂ. ಕಳವು: ತನಿಖೆ ಆರಂಭ

ಹೊಸದುರ್ಗ: ಬೀಗ ಜಡಿದ ಮನೆಗೆ ನುಗ್ಗಿದ ಕಳ್ಳರು ಐದೂವರೆ ಪವನ್ ಚಿನ್ನಾಭರಣ ಹಾಗೂ 4೦,೦೦೦ ರೂಪಾಯಿಗಳನ್ನು ದೋಚಿದ ಘಟನೆಗೆ ಸಂಬಂಧಿಸಿ ನೀಲೇಶ್ವರ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.   ಕರಿಂದಳ ಕಾಲಿಚ್ಚಾಮರ ಮೀರ್ಕಾನಂತಟ್ಟ್‌ನ ಕೃಷಿಕ ಇರಟ್ಟ ಮುಂಡಕ್ಕಲ್ ಜೋರ್ಜ್ ಸೆಬಾಸ್ಟಿಯನ್ ಎಂಬವರ ಮನೆಯಿಂದ ನಗ-ನಗದು ಕಳವಿಗೀಡಾಗಿದೆ.  ಸೋಮವಾರ ಸಂಜೆ ೪ರಿಂದ ಮಂಗಳವಾರ ಬೆಳಿಗ್ಗೆ ೬.೩೦ರ ಮಧ್ಯೆ ಕಳವು ನಡೆದಿರು ವುದಾಗಿ ಸಂಶಯಿಸಲಾಗುತ್ತಿದೆ. ಮನೆಯವರು ಬಾಗಿಲು ಮುಚ್ಚಿ ಮಗಳ ಚಿಕಿತ್ಸೆಗಾಗಿ ಆಲುವಾದ ಆಸ್ಪತ್ರೆಗೆ ತೆರಳಿದ್ದರು. ಮಂಗಳವಾರ ಬೆಳಿಗ್ಗೆ  ಮನೆಯ ಬಾಗಿಲು ತೆರೆದಿಟ್ಟಿರುವುದನ್ನು …