ರತ್ನಾಕರ ಮಲ್ಲಮೂಲೆಗೆ ಕೇರಳ ಸರಕಾರದ ವನಮಿತ್ರ ಪ್ರಶಸ್ತಿ ಪ್ರದಾನ

ತಿರುವನಂತಪುರ: ಮಳೆಕೊಯ್ಲು, ಜಲಮರುಪೂರಣ ಹಾಗೂ ಸೌರಯೋಜನೆಯ ಮೂಲಕ ಬರಡು ನೆಲದಲ್ಲಿ ಹಸುರು ಕ್ರಾಂತಿಯನ್ನುAಟು ಮಾಡಿ ತನ್ನ ಯೋಜನೆಗಳೆಲ್ಲವನ್ನೂ ಸಾಮಾಜಿಕ ಜಾಗೃತಿಗೆ ಮೀಸಲಿಟ್ಟು ಗಮನ ಸೆಳೆದಿರುವ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆಗೆ ವನಮಿತ್ರ ಪ್ರಶಸ್ತಿಯನ್ನು ಕೇರಳ ಸರ್ಕಾರದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಸಚಿವ ಶಿಬು ಬೇಬಿ ಜೋನ್ ನೀಡಿ ಅಭಿನಂದಿಸಿದರು.ವಿಶ್ವ ಪರಿಸರದಿನದ ಭಾಗವಾಗಿ ಕೇರಳ ಸರಕಾರದ ಅರಣ್ಯ ಇಲಾಖೆಯವರು ತಿರುವನಂತಪುರದ ನಂದವನದಲ್ಲಿ ಆಯೋಜಿಸಿದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಸಿ.ಪಿ ಜೋನ್ …

ಜನರಲ್ ಆಸ್ಪತ್ರೆಯ ನೂತನ ಕಟ್ಟಡ 7 ವರ್ಷದಿಂದ ನಿಧಾನಗತಿಯಲ್ಲಿ: ಶೀಘ್ರ ಉದ್ಘಾಟಿಸಲು ಸಚಿವರಿಗೆ ಮನವಿ

ಕಾಸರಗೋಡು: ಸಾವಿರಾರು ಮಂದಿ ದಿನಂಪ್ರತಿ ಚಿಕಿತ್ಸೆಗಾಗಿ ತಲುಪುವ ಕಾಸರಗೋಡು ಜನರಲ್ ಆಸ್ಪತ್ರೆಯ ಎಂಟು ಮಹಡಿಯ ಆಸ್ಪತ್ರೆ ಕಟ್ಟಡ ನಿರ್ಮಾಣ ಪೂರ್ತಿಗೊಂಡು ಏಳು ವರ್ಷ ಕಳೆದರೂ ಪೂರ್ತಿಯಾಗದೆ ಆಮೆಗತಿಯಲ್ಲಿ ಸಾಗುತ್ತಿದೆ. ಆರೋಗ್ಯ ರಂಗದಲ್ಲಿ ಜಿಲ್ಲೆ ಎದುರಿಸುತ್ತಿರುವ ಹಿಂದುಳಿದಾವಸ್ಥೆ ಮಧ್ಯೆ ಕಟ್ಟಡ ನಿರ್ಮಾಣದ ವಿಳಂಬ ಇನ್ನಷ್ಟು ಸಮಸ್ಯೆ ಸೃಷ್ಟಿಸುತ್ತಿದೆ ಎಂದು ವಿವರಿಸಿ ನೂತನ ಆರೋಗ್ಯ ಸಚಿವ ಕೆ. ಮುರಳೀಧರನ್‌ರಿಗೆ ಸೇವಾದಳ ರಾಜ್ಯಾಧ್ಯಕ್ಷ ರಮೇಶನ್ ಕರುವಾಚೇರಿ ಮನವಿ ನೀಡಿದ್ದಾರೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಕಟ್ಟಡದ …

ಸಂತಡ್ಕ ಶ್ರೀ ಅರಸು ಸಂಕಲ ಮಾಡದಲ್ಲಿ ರುದ್ರಯಾಗ, ಗಿರಿಜಾ ಕಲ್ಯಾಣೋತ್ಸವ ಇಂದಿನಿಂದ

ಉಪ್ಪಳ: ಸಂತಡ್ಕ ಮಾಡದ ಶ್ರೀ ಅರಸು ಸಂಕಲ ದೈವ ಕ್ಷೇತ್ರದಲ್ಲಿ ಶ್ರೀ ರುದ್ರಯಾಗ ಹಾಗೂ ಗಿರಿಜಾ ಕಲ್ಯಾಣೋತ್ಸವ ಮತ್ತು ನೂತನ ಭೋಜನ ಶಾಲೆಯ ಉದ್ಘಾಟನಾ ಸಮಾರಂಭ ಬ್ರಹ್ಮಶ್ರೀ ವೇದಮೂರ್ತಿ ಪರಕಜೆ ಅನಂತನಾರಾಯಣ ಭಟ್‌ರ ನೇತೃತ್ವದಲ್ಲಿ ಇಂದು ಮತ್ತು ನಾಳೆ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇಂದು ಸಂಜೆ 4ಕ್ಕೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ರುದ್ರಯಾಗ ಮತ್ತು ಶ್ರೀ ಗಿರಿಜಾ ಕಲ್ಯಾಣದಲ್ಲಿ ಪೂಜಿಸಲ್ಪಡುವ ಶ್ರೀ ದೇವರ ವಿಗ್ರಹದ ಭವ್ಯ ಶೋಭಾಯಾತ್ರೆ ಮೆರವಣಿಗೆಯೊಂದಿಗೆ ಉತ್ಸವಕ್ಕೆ ಚಾಲನೆ …

ಅಕ್ರಮ ಹಣ ವರ್ಗಾವಣೆ ಪ್ರಕರಣ: ಅಪೀಲು ತಿರಸ್ಕೃತ; ತನಿಖೆ ಮುಂದುವರಿಸುವಂತೆ ಹೈಕೋರ್ಟ್ ನಿರ್ದೇಶ

ಕೊಚ್ಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎನ್‌ಫೋರ್ಸ್‌ಮೆಂಟ್ ತನಿಖೆ ಮುಂದುವರಿಸಬಹುದೆಂದು ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿದೆ.  ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅಪೀಲು ಸಲ್ಲಿಸಲು ಎರಡು ವಾರಗಳ ಸಮಯ ನೀಡಬೇಕೆಂಬ ಸಿಎಂಆರ್‌ಎಲ್ ಕಂಪೆನಿಯ ನ್ಯಾಯವಾದಿಯ ಬೇಡಿಕೆಯನ್ನೂ ಹೈಕೋರ್ಟ್ ತಿರಸ್ಕರಿಸಿದೆ. ಈ ತೀರ್ಪಿನೊಂದಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ ರಾಜ್ಯದ ರಾಜಕೀಯದಲ್ಲಿ ಮತ್ತೆ ಚರ್ಚೆಯಾಗಲಿದೆ.  ಇ.ಡಿ ತನಿಖೆ ನಡೆಸಬಹುದೆಂದು ಹೈಕೋರ್ಟ್‌ನ ಏಕ ಸದಸ್ಯ ಪೀಠ ಈ ಮೊದಲು ತೀರ್ಪು ನೀಡಿತ್ತು. ಇದರ ಆಧಾರದಲ್ಲಿ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ …

ಸಿಡಿಲು ಆಘಾತ: ನಾಯ್ಕಾಪಿನಲ್ಲಿ ಎರಡು ಮನೆಗಳಿಗೆ ವ್ಯಾಪಕ ಹಾನಿ

ಕುಂಬಳೆ: ನಿನ್ನೆ ರಾತ್ರಿ  11 ಗಂಟೆ ವೇಳೆ ಸಂಭವಿಸಿದ  ಸಿಡಿಲಿನ ಆಘಾತದಿಂದ ಎರಡು ಮನೆಗಳಿಗೆ ಹಾನಿಯುಂಟಾ ಗಿದೆ. ನಾಯ್ಕಾಪು ರಾಮೇಶ್ವರನಗರದ ಶಕುಂತಲ, ಯಮುನ ಎಂಬಿವರ ಮನೆಗಳಿಗೆ ಸಿಡಿಲಿನ ಆಘಾತವುಂ ಟಾಗಿದೆ.  ಮನೆಗಳ ವಿದ್ಯುತ್ ಮೈನ್‌ಸ್ವಿಚ್, ಫ್ಯಾನ್ ಸಹಿತ ವಿದ್ಯುತ್ ಉಪಕರಣಗಳು ಹಾನಿಗೀಡಾಗಿವೆ.  ಗೋಡೆ ಬಿರುಕುಬಿಟ್ಟಿದೆ. ಶಕುಂತಲರ ಮನೆಯಲ್ಲಿ ಘಟನೆ ವೇಳೆ ಮಕ್ಕಳ ಸಹಿತ ಐದು ಮಂದಿ, ಯಮುನರ ಮನೆಯಲ್ಲಿ ಮೂರು ಮಂದಿ ಇದ್ದರು.  ಶಬ್ದ ಕೇಳಿ ಇವರು ಮನೆಯಿಂದ ಹೊರಗೆ ಓಡಿದುದರಿಂದ ಅಪಾಯ ದಿಂದ ಪಾರಾಗಿದ್ದಾರೆ. ಪಂಚಾಯತ್ …

ಯುವಕ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ಏಕಾಂಗಿಯಾಗಿ ವಾಸಿಸುತ್ತಿದ್ದ ಯುವಕ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಮಣಿಯಂಪಾರೆ ಬಳಿಯ ಮಂಜೊಟ್ಟಿ ಎಂಬಲ್ಲಿನ ದಿ| ದೇವಣ್ಣ ನಾಯ್ಕ್-ಲಲಿತ ದಂಪತಿಯ ಪುತ್ರ ಪ್ರವೀಣ (41) ಮೃತಪಟ್ಟ ವ್ಯಕ್ತಿ. ಕೂಲಿ ಕಾರ್ಮಿಕನಾದ ಇವರು ಅವಿವಾಹಿತನಾಗಿದ್ದಾರೆ. ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಇವರಿಗೆ ಸಹೋದರಿ ನಿನ್ನೆ ಬೆಳಿಗ್ಗಿನಿಂದ ಹಲವು ಬಾರಿ ಫೋನ್ ಕರೆ ಮಾಡಿದರೂ ಫೋನೆತ್ತಲಿಲ್ಲ ವೆನ್ನಲಾಗಿದೆ. ಈ ಹಿನ್ನೆಲೆಯಲ್ಲ್ಲಿ ನಿನ್ನೆ ಸಂಜೆ ಮನೆಗೆ ಬಂದು ನೋಡಿದಾಗ ಪ್ರವೀಣ ಮೃತಪಟ್ಟ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾರೆ. ಈ ಬಗ್ಗೆ ಲಭಿಸಿದ ಮಾಹಿತಿಯಂತೆ ಬದಿಯಡ್ಕ …

ಮಹಿಳೆಯರಿಗೆ ಉಚಿತ ಪ್ರಯಾಣ ಕೆಎಸ್‌ಆರ್‌ಟಿಸಿ ಆರ್ಡಿನರಿ ಬಸ್‌ಗಳಲ್ಲಿ  ಮಾತ್ರ

ತಿರುವನಂತಪುರ:  ಯುಡಿಎಫ್ ಸರಕಾರದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಭರವಸೆಗಳಲ್ಲೊಂದಾದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯವನ್ನು ಕೆಎಸ್‌ಆರ್‌ಟಿಸಿಯ ಆರ್ಡಿನರಿ ಬಸ್‌ಗಳಲ್ಲಿ ಮಾತ್ರವಾಗಿ ಸೀಮಿತಗೊಳಿಸಲು ಸರಕಾರ ಮುಂದಾ ಗಿದೆ.  ರಾಜ್ಯ ಸಚಿವ ಸಂಪುಟದ ಮುಂದಿನ ಸಭೆಯಲ್ಲಿ  ಈ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಫಾಸ್ಟ್ ಪ್ಯಾಸೆಂಜರ್ ಮತ್ತು ಅದಕ್ಕಿಂತ ಮೇಲ್ಪಟ್ಟ ಶ್ರೇಣಿಯ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಪ್ರಾಯೋಗಿಕವಲ್ಲವೆಂದು ಈ ಬಗ್ಗೆ  ಅಧ್ಯಯನ ನಡೆಸಿದ ಕೆಎಸ್‌ಆರ್‌ಟಿಸಿ ತಜ್ಞರ ಸಮಿತಿ ಸರಕಾರಕ್ಕೆ ತಿಳಿಸಿದೆ. ರಾಜ್ಯದ ಹೆಚ್ಚಿನ …

ಕಾಸರಗೋಡಿನಲ್ಲಿ ವಿಶ್ವ ಪರಿಸರದಿನಾಚರಣೆ

ಕಾಸರಗೋಡು: ವಿಶ್ವ ಪರಿಸರದಿನದಂಗವಾಗಿ ಸೋಶ್ಯಲ್ ಪೊಲೀಸಿಂಗ್ ಡಿವಿಶನ್, ಎಸ್‌ಪಿಸಿ ಕಾಸರಗೋಡು, ಶ್ರೀ ಕುರುಂಬಾ  ಭಗವತೀ ಕ್ಷೇತ್ರ ಕಡಪ್ಪುರ ಎಂಬಿವುಗಳ ಸಂಯುಕ್ತಾಶ್ರಯ ದಲ್ಲಿ ಇಂದು ಬೆಳಿಗ್ಗೆ ಕಾಸರ ಗೋಡು ಕಡಪ್ಪುರದಲ್ಲಿ ಗಿಡ ನೆಟ್ಟು ಶುಚೀಕರಣ ನಡೆಸಲಾಯಿತು. ಭೂಮಿಯನ್ನು ರಕ್ಷಿಸಿ ಎಂಬ ಸಂದೇಶದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಎಚ್‌ಎಸ್‌ನ  ಸ್ಟುಡೆಂಟ್ ಪೊಲೀಸ್, ನಾಯಮ್ಮಾರ್ ಮೂಲೆ ಟಿಐಎಚ್‌ಎಸ್‌ಎಸ್, ತಳಂಗರೆ ಜಿಎಂವಿಎಚ್ ಎಸ್‌ಎಸ್‌ನ 1975 ಬ್ಯಾಚ್  ಸಹಕಾರ ನೀಡಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ ಗಿಡ ನೆಟ್ಟು ಕಾರ್ಯಕ್ರಮ …

ಜಿಲ್ಲೆಯ ಮೂರು  ಆರ್.ಟಿ.ಒ ಕಚೇರಿಗಳಿಗೆ ವಿಜಿಲೆನ್ಸ್ ದಾಳಿ: ನಗದು ವಶ, ಅವ್ಯವಹಾರ ಪತ್ತೆ

ಕಾಸರಗೋಡು: ರಾಜ್ಯ ಮೋಟಾರು ವಾಹನ ಇಲಾಖೆ  ಜಿಲ್ಲೆಯ ಮೂರು ಆರ್‌ಟಿಒ ಕಚೇರಿಗಳಿಗೆ ವಿಜಿಲೆನ್ಸ್ ತಂಡ  ಏಕಕಾಲದಲ್ಲಿ  ದಾಳಿ  ನಡೆಸಿದೆ. ಕಾಸರಗೋಡು ವಿಜಿಲೆನ್ಸ್ ಆಂಡ್ ಆಂಟಿ ಕರಪ್ಶನ್ ಬ್ಯೂರೋದ ಡಿವೈಎಸ್ಪಿ ಉಣ್ಣಿಕೃಷ್ಣನ್ ನೇತೃತ್ವದ ತಂಡಗಳು ಈ ದಾಳಿ ನಡೆಸಿವೆ. ಈ ದಾಳಿಯಲ್ಲಿ ಕಾಸರಗೋಡು ಆರ್‌ಟಿಒ ಕಚೇರಿಯ ಆವರಣದ  ಹೂವಿನ ಕುಂಡದಲ್ಲಿ ಬಚ್ಚಿಡಲಾಗಿದ್ದ 17,150 ರೂ.ವನ್ನು ವಿಜಿಲೆನ್ಸ್ ತಂಡ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ. ಕಾಸರಗೋಡು ಮಾತ್ರವಲ್ಲ ಹೊಸದುರ್ಗ ಮತ್ತು ವೆಳ್ಳರಿಕುಂಡು ಆರ್‌ಟಿಒ ಕಚೇರಿಗಳಿಗೂ ವಿಜಿಲೆನ್ಸ್ ದಾಳಿ ಮತ್ತು ಪರಿಶೀಲನೆ ನಡೆಸಿದ್ದು, …

ವೈದ್ಯಶಾಲೆಗೆ ನುಗ್ಗಿ ಮಾಲಕನಿಗೆ ಹಲ್ಲೆ: 3ಮಂದಿ ವಿರುದ್ಧ ಕೇಸು

ಉಪ್ಪಳ: ಆಯುರ್ವೇದ ಮದ್ದಿನಂಗಡಿಗೆ ನುಗ್ಗಿ ಅದರ ಮಾಲಕನಿಗೆ ಹಲ್ಲೆಗೈದ ಆರೋಪದಂತೆ ಮೂರು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಉಪ್ಪಳ ರೈಲ್ವೇ ನಿಲ್ದಾಣ ಸಮೀಪ ಕಾರ್ಯಾಚರಿಸುವ ಧನ್ವಂತರಿ ವೈದ್ಯಶಾಲೆಯ ಮಾಲಕ ಕಯ್ಯಾರು ಕುಂಡಚ್ಚಕಟ್ಟೆಯ ಬೀಡು ನಿವಾಸಿ ರವಿಚಂದ್ರ ಕೆ. ನೀಡಿದ ದೂರಿನಂತೆ ಉಪ್ಪಳ ನಿವಾಸಿ ಸವಾದ್ ಸೇರಿದಂತೆ 3 ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೊನ್ನೆ ಮಧ್ಯಾಹ್ನ ರವಿಚಂದ್ರರ ವೈದ್ಯಶಾಲೆ ಸಮೀಪ ನಿಲ್ಲಿಸಿದ್ದ ಅವರ ಕಾರಿನ ಸಮೀಪದಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಆರೋಪಿಗಳ …