ಕೊಂಡೆವೂರಿನಲ್ಲಿ ಉಚಿತ ಪಿಎಸ್ಸಿ ಮಾಹಿತಿ ಶಿಬಿರ
ಉಪ್ಪಳ: ಸರ್ಕಾರಿ ಉದ್ಯೋಗದ ಕನಸು ಹೊತ್ತ ಯುವಜನರಿಗೆ ಮಾರ್ಗ ದರ್ಶನ ನೀಡುವ ಉದ್ದೇಶದಿಂದ ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೆ ವೂರು ಇವರ ಆಯೋಜನೆಯಲ್ಲಿ ಪಿ.ಎಸ್.ಸಿ ಉಚಿತ ಮಾಹಿತಿ ಶಿಬಿರ ಉದ್ಘಾಟನೆಗೊಂಡಿತು. ಅವೇಕ್ ಕಾಸರಗೋಡು ಸಂಸ್ಥೆಯ ಸಹಯೋಗದೊಂದಿಗೆ ನಡೆಯುತ್ತಿರುವ ಈ ಉಚಿತ ತರಬೇತಿ ಶಿಬಿರಕ್ಕೆ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಚಾಲನೆ ನೀಡಿದರು. ಶಿಬಿರವು ಪ್ರತಿ ಭಾನುವಾರ ಬೆಳಗ್ಗೆ ೧೦ ರಿಂದ – ಮಧ್ಯಾಹ್ನ ೧ ಗಂಟೆಯವರೆಗೆ ಶ್ರೀ ಸದ್ಗುರು ನಿತ್ಯಾನಂದ ವಿದ್ಯಾಪೀಠದಲ್ಲಿ ಜರುಗುವುದು. ಶ್ರೀ ಯೋಗಾನಂದ ಸರಸ್ವತಿ …