ಹೃದಯಾಘಾತ: ಮಹಿಳೆ ನಿಧನ

ಉಪ್ಪಳ: ಹಲ್ಲಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ ಮಹಿಳೆಗೆ ಹೃದಯಾಘಾತ ಉಂಟಾಗಿ ನಿಧನ ಹೊಂದಿದ ಘಟನೆ ನಡೆದಿದೆ. ಉಪ್ಪಳ ಸಮೀಪದ ಕೋಡಿಬೈಲು ನಿಡುಮದಿ ನಿವಾಸಿ ದಿ| ಬೋಜರ ಪತ್ನಿ ಸಾವಿತ್ರಿ (55) ನಿಧನ ಹೊಂದಿದವರು. ನಿನ್ನೆ ಸಂಜೆ ಇವರು ಉಪ್ಪಳದ ಖಾಸಗಿ ಆಸ್ಪತ್ರೆಗೆ ಹಲ್ಲಿನ ಚಿಕಿತ್ಸೆಗೆಂದು ತೆರಳಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಉಂಟಾಗಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಿ ನಿಧನ ಹೊಂದಿದ್ದಾರೆ. ಮೃತರು ತಾಯಿ ಸುಶೀಲ, ಮಕ್ಕಳಾದ ರೂಪೇಶ್, ರೂಪಿಕ, ಅಳಿಯ ರಂಜಿತ್, ಸಹೋದರಿಯರಾದ ಚಂದ್ರಾ …

ಆಟವಾಡುತ್ತಿದ್ದ ಬಾಲಕನಿಗೆ ಸೂರ್ಯಾಘಾತ: ರಾಜ್ಯದ 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್: ಎರಡು ದಿನ ಕಟ್ಟೆಚ್ಚರ

ಕಾಸರಗೋಡು: ಮೈದಾನದಲ್ಲಿ ಫುಟ್ಬಾಲ್ ಆಡುತ್ತಿದ್ದ ಬಾಲಕ ಸೂರ್ಯಾಘಾತಕ್ಕೊಳಗಾಗಿ ಸುಟ್ಟು ಗಾಯಗೊಂಡ ಘಟನೆ ನಡೆದಿದೆ. ಹೊಸದುರ್ಗ ಇಟ್ಟುಮ್ಮಲ್‌ನ ರಹ್ಮಾನ್ ಪಾತ್ತೂರು-ಜುವೈರಿಯಾ ದಂಪತಿ ಪುತ್ರ ಮೊಹಮ್ಮದ್  ಜುಬೈರ್ (13) ಸೂರ್ಯಾಘಾತ ಕ್ಕೊಳಗಾದ ಬಾಲಕ. ಈತ ಸ್ನೇಹಿತ ರೊಂದಿಗೆ  ಸುಡು ಬಿಸಿಲಲ್ಲಿ ಫುಟ್ಬಾಲ್‌ಆಟವಾಡುತ್ತಿದ್ದ ವೇಳೆ ತಾಪಾಘಾತಕ್ಕೊಳಗಾಗಿದ್ದು ಆತನನ್ನು ಅಜಾನೂರು ಕುಟುಂಬ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ತಾಪಮಾನ ಮಟ್ಟ ಗರಿಷ್ಠ ಮಟ್ಟಕ್ಕೇರಿದ್ದು, ಇದರಿಂದ ಕಾಸರಗೋಡು ಸೇರಿದಂತೆ ರಾಜ್ಯದ 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ತಾಪಮಾನ …

ಒಂದೇ ಊರಿನ ಇಬ್ಬರು ವ್ಯಾಪಾರಿಗಳು ಒಂದೇ ದಿನ ನಿಧನ

ಮೊಗ್ರಾಲ್: ಒಂದೇ ಊರಿನಲ್ಲಿ ಜನಿಸಿ  ಇಬ್ಬರು ದೀರ್ಘ ಕಾಲ ಗೋವಾದಲ್ಲಿ ಹೋಟೆಲ್ ಗಳನ್ನು ನಡೆಸಿ ಅಲ್ಲಿಂದ ಸಮಾನ ಸಮಯದಲ್ಲಿ ಊರಿಗೆ ಹಿಂತಿರುಗಿ ವಿಶ್ರಾಂತಿ ಜೀವನ ನಡೆಸುತ್ತಿದ್ದ ಮಧ್ಯೆ ಒಂದೇ ದಿನ ನಿಧನ ಹೊಂದಿದ ಘಟನೆ ಸಂಭವಿಸಿದೆ. ಈ ನಿಧನ ಸ್ಥಳೀಯರಲ್ಲಿ ದುಃಖ ಹಾಗೂ ಮರಣದ ಆಕಸ್ಮಿಕತೆ  ವಿಸ್ಮಯ ಮೂಡಿಸಿದೆ. ಮೊಗ್ರಾಲ್ ನಾಂಗಿ ಹೌಸ್‌ನ ಮುಹಮ್ಮದ್ ಗೋವಾ (80) ನಿನ್ನೆ ನಿಧನ ಹೊಂದಿದ್ದರು. ಮಧ್ಯಾಹ್ನದ ವೇಳೆ ನಾಂಗಿ ರಸ್ತೆಯ ನಾಂಗಿ ಹೌಸ್‌ನ ಎನ್.ಎಂ. ಇಸ್ಮಾಯಿಲ್ (82) ಕೂಡಾ ನಿಧನ …

ಮಧೂರು ಕ್ಷೇತ್ರ ಜಾತ್ರೆ :ಸುಡುಮದ್ದು ಪ್ರದರ್ಶನ ಇಂದು

ಮಧೂರು: ಇಲ್ಲಿನ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾಮ ಹೋತ್ಸವದಂಗವಾಗಿ ಇಂದು ಬೆಳಿಗ್ಗೆ ಉತ್ಸವಬಲಿ, ದೀಪೋತ್ಸವ, ದರ್ಶನಬಲಿ ನಡೆಯಿತು. ಮಧ್ಯಾಹ್ನ 12ಕ್ಕೆ ತುಲಾ ಭಾರಸೇವೆ, 12.30  ಮಹಾಪೂಜೆ, ಸಂಜೆ 5ಕ್ಕೆ ತಾಯಂಬಕ, ದೀಪಾರಾ ಧನೆ, ರಾತ್ರಿ 7ಕ್ಕೆ ಉತ್ಸವಬಲಿ, ಉಳಿಯ ತ್ತಡ್ಕ ದಲ್ಲಿರುವ ಮೂಲಸ್ಥಾನಕ್ಕೆ ದೇವರ ಶೋಭಾಯಾತ್ರೆ ತೆರಳಲಿದೆ. ಈ ವೇಳೆ ಕಾಸರಗೋಡು ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯವರಿಂದ ತಾಲೀಮು ಪ್ರದರ್ಶನವಿರುವುದು. 8.3೦ಕ್ಕೆ ಉಳಿಯತ್ತಡ್ಕ ಮೂಲಸ್ಥಾನ ದಲ್ಲಿ ಕಟ್ಟೆಪೂಜೆ, 10ಕ್ಕೆ ಬೆಡಿಕಟ್ಟೆಯಲ್ಲಿ ಪೂಜೆ, ಅನಂತರ ಸುಡುಮದ್ದು …

ಜೋಡುಕಲ್ಲು ರಸ್ತೆ ಬದಿ ಒಣಗಿದ ಮರದಿಂದ ಅಪಾಯ ಭೀತಿ: ತೆರವಿಗೆ ಆಗ್ರಹ

ಉಪ್ಪಳ: ಕೈಕಂಬ-ಬಾಯಾರು ರಸ್ತೆಯ ಜೋಡುಕಲ್ಲು ಎಂಬಲ್ಲಿ ಒಣಗಿದ ಮರಗಳು ಯಾವುದೇ ಕ್ಷಣ ಧರಾಶಾಯಿಯಾಗುವ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ. ಈ ರಸ್ತೆ ಅಭಿವೃದ್ದಿಗೊಳಿಸುವ ವೇಳೆ ಗುತ್ತಿಗೆದಾರ ಅಪಾಯದ ಸ್ಥಿತಿಯ ಲ್ಲಿರುವ ಮರಗಳನ್ನು ತೆರೆವುಗೊಳಿಸಿ ದ್ದರು. ಅದರೆ ಒಣಗಿದ ಈ ಮರವನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಅಪಾಯ ಸಾz್ಯÀsತೆಯಿದೆ. ಈ ಪರಿಸರ ದಲ್ಲಿ ಪ್ರಮುಖ ವಿದ್ಯುತ್ ತಂತಿಹೊA ದಿರುವ ಕಂಬಗಳಿದ್ದು, ಮರ ಮುರಿದು ತಂತಿ ಮೇಲೆ ಬಿದ್ದಲ್ಲಿ ಹಲವಾರು ಕಂಬಗಳು ರಸ್ತೆಗೆ ಮುರಿದು ಬೀಳಬಹುದಾಗಿದೆ. ದಿನನಿತ್ಯ ನೂರಾ ರು ವಾಹನಗಳು ಸಂಚರಿಸುತ್ತಿದೆ. …

ಟ್ರಾಫಿಕ್ ರೆಗ್ಯುಲೇಟರಿ ಸಮಿತಿ ತೀರ್ಮಾನ ಕುಂಬಳೆಯಲ್ಲಿ ಜ್ಯಾರಿಯಾಗಲಿಲ್ಲ: ಮರ್ಚೆಂಟ್ಸ್ ಯೂತ್ ವಿಂಗ್ ಪ್ರತಿಭಟನೆಗೆ

ಕುಂಬಳೆ: ಟ್ರಾಫಿಕ್ ರೆಗ್ಯುಲೇಟರಿ ಸಮಿತಿಯ ತೀರ್ಮಾನಗಳು ಕುಂಬಳೆ ಯಲ್ಲಿ ಜ್ಯಾರಿಯಾಗದಿರುವುದಕ್ಕೆ ಮರ್ಚೆಂಟ್ ಯೂತ್ ವಿಂಗ್ ಪ್ರತಿಭಟಿಸಿದೆ. ಬಸ್ ಪ್ರಯಾಣಿಕರಿಗೆ, ವ್ಯಾಪಾರಿಗಳಿಗೆ ಸಂಕಷ್ಟ ತರುವ ಪರಿಷ್ಕಾರವನ್ನು ಪುನರ್ ಪರಿಶೀಲಿ ಸಬೇಕೆಂಬ ಕುಂಬಳೆ ಪಂಚಾಯತ್ ಆಡಳಿತ ಸಮಿತಿ ತೀರ್ಮಾನ ಕೂಡಾ ಜ್ಯಾರಿಯಾಗದಿ ರುವುದರಲ್ಲಿ ಸಭೆ ರೋಷಗೊಂಡಿದೆ. ಪೇರಾಲ್ ಕಣ್ಣೂರು, ಸೀತಾಂಗೋಳಿ, ಪೆರ್ಲ, ಸುಳ್ಯ, ಬದಿಯಡ್ಕ, ಮುಳ್ಳೇರಿಯ ಭಾಗಗಳಿಗೆ ತೆರಳುವ ಬಸ್‌ಗಳು ಪ್ರಯಾಣಿಕರ ಸೌಕರ್ಯಾರ್ಥ ಕುಂಬಳೆಯ ಮುರಿದು ತೆಗೆದ ಹಳೆಯ ಬಸ್ ನಿಲ್ದಾಣದಲ್ಲಿ ೫ ನಿಮಿಷ ನಿಲುಗಡೆ ಮಾಡಬೇಕೆಂದು ಪಂಚಾಯತ್ ಆಡಳಿತ …

ರಿಪ್ಪರ್ ಚಂದ್ರನ್‌ಗೆ ಗಲ್ಲು ಶಿಕ್ಷೆ ಲಭಿಸಿದ ಪ್ರಕರಣ: ನೇರ ಸಾಕ್ಷಿಯಾದ ವಾಮಂಜೂರು ನಿವಾಸಿ ಮನೆಯೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ: ಇಡೀ ನಾಡನ್ನೇ ಬೆಚ್ಚಿ ಬೀಳಿಸಿದ ಕುಖ್ಯಾತ ದರೋಡೆಕೋರ ರಿಪ್ಪರ್ ಚಂದ್ರನ್‌ಗೆ ಗಲ್ಲು ಶಿಕ್ಷೆ ಲಭಿಸಿದ ಪ್ರಕರಣದಲ್ಲಿ ನೇರ ಸಾಕ್ಷಿಯಾಗಿದ್ದ ವ್ಯಕ್ತಿ ಮನೆಯೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಂಜೇಶ್ವರ ವಾಮಂಜೂರು ಚೆಕ್‌ಪೋಸ್ಟ್ ಶ್ರೀ ಶಾಸ್ತಾವೇಶ್ವರ ಕ್ಷೇತ್ರ ಸಮೀಪದ ಶ್ರೀ ಶಾಸ್ತಾ ನಿಲಯದ ಬಾಲಚಂದ್ರ (53) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ಇವರು ಫೋನ್ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿರುವ ಸಹೋದರಿ ಶಶಿಕಲ ನಿನ್ನೆ ಸಂಜೆ  ಮನೆಗೆ ತಲುಪಿ ನೋಡಿದಾಗ ಮೃತದೇಹ ಕಂಡು ಬಂದಿದೆ. ಮನೆಯ …

ಸಮುದ್ರದಲ್ಲಿ ನಾಪತ್ತೆಯಾದ ಯುವಕನ ಪತ್ತೆಗಾಗಿ ಶೋಧ ಮುಂದುವರಿಕೆ

ಉಪ್ಪಳ: ಸಮುದ್ರ ವೀಕ್ಷಿಸಲು ತಲುಪಿದ ವೇಳೆ ಬಲವಾದ ಅಲೆಯಲ್ಲಿ ಸಿಲುಕಿ ನಾಪತ್ತೆಯಾದ ಯುವಕನ ಪತ್ತೆಗಾಗಿ ಶೋಧ ಮುಂದುವರಿಯುತ್ತಿದೆ.  ಮಂಜೇಶ್ವರ ಚೌಕಿ ನಿವಾಸಿ ಉಮರುಲ್ ಫಾರೂಕ್ ಎಂಬವರ ಪುತ್ರ ಮೊಹಮ್ಮದ್ ಸೈನುಲ್ ಆಬಿದ್ (18) ಎಂಬಾತನಿಗಾಗಿ ಶೋಧ ನಡೆಯುತ್ತಿದೆ. ಮೊಹಮ್ಮದ್ ಸೈನುಲ್ ಆಬಿದ್ ತಾಯಿ ಹಾಗೂ ಕುಟುಂಬ ಸಮೇತ ನಿನ್ನೆ ಸಂಜೆ ಕುಂಡುಕೊಳಕೆ ಬೀಚ್‌ಗೆ ಬಂದಿದ್ದರು. ಸಮುದ್ರ ಬದಿಯಲ್ಲಿ ನಿಂತಿದ್ದ   ಮೊಹಮ್ಮದ್ ಸೈನುಲ್ ಆಬಿದ್ ಹಾಗೂ ಈತನ ಸಹೋದರಿ ಅಲೆಯಲ್ಲಿ ಸಿಲುಕಿದ್ದು, ಈ ವೇಳೆ ಜತೆಗಿದ್ದವರ ಬೊಬ್ಬೆ ಕೇಳಿ …

ಡಿವೈಎಫ್‌ಐ ಕಾರ್ಯಕರ್ತನಿಗೆ ಬಿಯರ್ ಬಾಟ್ಲಿಯಿಂದ ಹಲ್ಲೆ

ಕುಂಬಳೆ: ಕೊಪಾಡಿ ಕಡಪ್ಪುರದಲ್ಲಿ ಡಿವೈಎಫ್‌ಐ ಕಾರ್ಯಕರ್ತನಿಗೆ ಬಿಯರ್ ಬಾಟ್ಲಿಯಿಂದ ತಲೆಗೆ ಹೊಡೆದು ಗಾಯಗೊಳಿಸಿದ ಘಟನೆ ನಡೆದಿದೆ. ಗಾಯಗೊಂಡ ಕೊಯಿಪ್ಪಾಡಿಯ ನಿಸಾಮ್ (28)ರನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ  ಘಟನೆ ನಡೆದಿದೆ. ಬಿಜೆಪಿ ಕಾರ್ಯಕರ್ತ ಸಜನ್ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ನಾಲ್ಕು ಮಂದಿ ಸೇರಿ ಹಲ್ಲೆಗೈದಿರುವುದಾಗಿ ನಿಸಾಮ್ ಆರೋಪಿಸಿದ್ದಾರೆ. ರಾಜಕೀಯ ಚರ್ಚೆ ವೇಳೆ ಘರ್ಷಣೆ ನಡೆದಿರುವುದಾಗಿ ಹೇಳಲಾಗುತ್ತಿದೆ.

ಮನೆಯೊಳಗೆ ಮಹಿಳೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಕಳತ್ತೂರಿನಲ್ಲಿ ಮಹಿಳೆಯೊಬ್ಬರು ಮನೆಯೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಳತ್ತೂರು ಅಮೆರಿಕ ರೋಡ್‌ನ ಅಬೂಬಕ್ಕರ್ ಎಂಬವರ ಪತ್ನಿ ಆಮಿನ (70) ಮೃತಪಟ್ಟವರಾಗಿದ್ದಾರೆ.   ಸಿಮೆಂಟ್‌ನ ಶೀಟ್ ಹೊದಿಸಿದ ಪುಟ್ಟ ಮನೆಯಲ್ಲಿ ಆಮಿನ ವಾಸಿಸುತ್ತಿದ್ದರು. ನಿನ್ನೆ ಬೆಳಿಗ್ಗೆ ಮನೆಯೊಳಗಿನಿಂದ ದುರ್ನಾತ ಬೀರುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು  ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ತಲುಪಿ ಪರಿಶೀಲಿಸಿದಾಗ ಮೃತದೇಹ ಮನೆಯೊಳಗೆ ಮಂಚದಲ್ಲಿ ಮಲಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ನಾಲ್ಕು ದಿನಗಳ ಹಿಂದೆ ಸಾವು ಸಂಭವಿಸಿರಬಹುದೆಂದು ಅಂದಾಜಿಸಲಾ ಗುತ್ತಿದೆ. ಮನೆಯ ಮುಂಭಾಗ ಹಾಗೂ …