ಸರಕಾರಿ ಕಚೇರಿಗಳಲ್ಲಿ ಕಂಪ್ಯೂಟರೀಕರಣ ಕೊಯಿಪ್ಪಾಡಿ ಗ್ರಾಮ ಕಚೇರಿಯಲ್ಲಿ ಆರು ತಿಂಗಳಿಂದ ಕಂಪ್ಯೂಟರ್‌ಗಳು ಸ್ತಬ್ದ

ಕುಂಬಳೆ: ಸರಕಾರಿ ಕಚೇರಿಗಳಲ್ಲಿ  ನಡೆಸಿರುವ ಕಂಪ್ಯೂಟರೀಕರಣ ಕೆಲವೆಡೆ  ಜನರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.  ಇದರಿಂದ  ಹಲವು ಅಗತ್ಯಗಳಿಗೆ ಕಚೇರಿಗಳಿಗೆ ತಲುಪುವವರು  ಸಂದಿಗ್ಧತೆ ಎದುರಿಸುತ್ತಿ ದ್ದಾರೆ.  ಕೊಯಿಪ್ಪಾಡಿ ಗ್ರಾಮ ಕಚೇರಿಯಲ್ಲಿ  ಇಂತಹ ಸಮಸ್ಯೆ ಎದುರಾಗಿರುವುದಾಗಿ ದೂರಲಾಗಿದೆ.  ಇಲ್ಲಿನ ಕಂಪ್ಯೂಟರ್‌ಗಳು, ಪ್ರಿಂಟರ್ ಕಾರ್ಯಾಚರಿಸದೆ ಆರು ತಿಂಗಳಿಂದ ಸ್ಥಬ್ದಗೊಂಡಿದೆ. ಇಲ್ಲಿ ನಾಲ್ಕು ಕಂಪ್ಯೂಟರ್ ಗಳಿದ್ದು ಅವುಗಳು ಪದೇ ಪದೇ ಸ್ಥಬ್ದಗೊಳ್ಳುತ್ತಿರುವುದು   ಸಮಸ್ಯೆಯಾಗಿ ಪರಿಣಮಿಸಿದೆ. ಕಂಪ್ಯೂಟರ್ ಸ್ತಬ್ದಗೊಂಡಾಗ ನೌಕರರು ಅದನ್ನು ಪದೇ ಪದೇ  ಬಡಿದು ಸರಿಪಡಿಸುತ್ತಿರುವುದು ನಿತ್ಯ ಘಟನೆಯಾಗಿದೆ.  ಕಂಪ್ಯೂಟರ್ ಕಾರ್ಯಾಚರಿಸದಿರುವುದು ಕಚೇರಿಯ ನೌಕರರಿಗೆ …

ಔಷಧಿ ಅಂಗಡಿ ಮಾಲಕರಾಗಿದ್ದ ಅಬ್ದುಲ್ ಅಜೀಜ್ ನಿಧನ

ಬಾಯಾರು: ಇಲ್ಲಿನ ವಿಲ್ಲೇಜ್ ಕಚೇರಿ ಬಳಿ ವಾಸವಾಗಿರುವ ಆವಳ ಸಾಗು ನಿವಾಸಿ ದಿ| ಅಬ್ಬಾಸ್ ಹಾಜಿ- ದಿ| ಝುಲೈಕ ದಂಪತಿ ಪುತ್ರ ಈ ಹಿಂದೆ ಔಷಧಿ ಅಂಗಡಿ ಮಾಲಕರಾಗಿದ್ದ ಅಬ್ದುಲ್ ಅಜೀಜ್ ಸಾಗು (58) ನಿಧನ ಹೊಂದಿ ದರು. ಅಸೌಖ್ಯ ನಿಮಿತ್ತ ಚಿಕಿತ್ಸೆಯಲ್ಲಿದ್ದರು. ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಮುಮ್ರಾಜ್, ಮಕ್ಕಳಾದ ಜುಲೈಕತ್ ನೂರ, ಮುನಾವರ, ತನ್ವೀರ, ಮರಿಯಮ್ಮ, ಮೊಹ ಮ್ಮದ್ ಅಯಾನ್, ಸಹೋದರರಾದ ಮುಹಮ್ಮದ್, ಅಬ್ದುಲ್ ರಜಾಕ್, …

4 ವರ್ಷದ ಹಿಂದೆ ಕೃಷಿಕರಿಗೆ ವಿದ್ಯುತ್ ಸಂಪರ್ಕ ನೀಡಿರುವುದಕ್ಕೆ ದಾಖಲೆಗಳಿಲ್ಲವೆಂದು ತಿಳಿಸಿ ಈಗ 7೦,೦೦೦ ರೂ. ಪಾವತಿಗೆ ನೋಟೀಸು

ಕುಂಬಳೆ: ನಾಲ್ಕು ವರ್ಷದ ಹಿಂದೆ ಕೃಷಿಯ ಅಗತ್ಯಕ್ಕಾಗಿ ಕೆಎಸ್‌ಇಬಿ ನೀಡಿದ ವಿದ್ಯುತ್ ಸಂಪರ್ಕಕ್ಕೆ ಸಾಕಷ್ಟು ದಾಖಲೆಗಳನ್ನು ನೀಡಲಾಗಿಲ್ಲವೆಂದು ಈಗ ಸೀತಾಂಗೋಳಿ ಕೆಎಸ್‌ಇಬಿ ಸೆಕ್ಷನ್ ನೌಕರರು ಪತ್ತೆಹಚ್ಚಿದ್ದಾರೆ..! ಆದರೆ ಅದಕ್ಕೆ ಯಾವುದೇ ಬೇಸರ ಮಾಡಬೇಕಾ ಗಿಲ್ಲವೆಂದು ಕೆಎಸ್‌ಇಬಿ ತಿಳಿಸಿದ್ದು, ಪುತ್ತಿಗೆ ಕೃಷಿಭವನ ವ್ಯಾಪ್ತಿಯಲ್ಲಿ ಈ ರೀತಿಯಲ್ಲಿ ಸಂಪರ್ಕ ನೀಡಿದ 2೦೦ರಷ್ಟು ಕೃಷಿಕರು 7೦,೦೦೦ ರೂ. ಮೊತ್ತವನ್ನು ಪಾವತಿಸಿ ದರೆ ಸಾಕು ಎಂದು ಉಪದೇಶಿಸಿದೆ. ಪುತ್ತಿಗೆ ಕೃಷಿಭವನ ವ್ಯಾಪ್ತಿಯ 2೦೦ರಷ್ಟು ಕೃಷಿಕರಿಗೆ ಇದಕ್ಕಿರುವ ಬಿಲ್ಲನ್ನು ಕಳುಹಿಸಿಕೊಡ ಲಾಗಿದೆ. ನಿಶ್ಚಿತ ದಿನಾಂಕದೊಳಗೆ …

ಕೋಟೆಕಣಿ ಕೂಡುರಸ್ತೆಯಲ್ಲಿ ಸಾರಿಗೆ ಅಡಚಣೆ ನಿತ್ಯ ಘಟನೆ: ಪ್ರಯಾಣಿಕರಲ್ಲಿ ಆತಂಕ

ಕಾಸರಗೋಡು: ಕರಂದಕ್ಕಾಡ್-ಮಧೂರು ರಸ್ತೆಯಲ್ಲಿ ಸೂರ್ಲು ಬಳಿ ಕೋಟೆಕಣಿಯ ಕೂಡು ರಸ್ತೆಯಲ್ಲಿ ಸಾರಿಗೆ ಅಡಚಣೆ ಎದುರಾಗುತ್ತಿದ್ದು, ಇದು ಕೆಲವೊಮ್ಮೆ ಅಪಘಾತಗಳಿಗೂ ಕಾರಣವಾಗುತ್ತಿದೆ. ಮೀಪುಗುರಿಯಿಂದ ಕಾಸರಗೋಡು ನಗರಕ್ಕೆ ಸಾಗುವ ವಾಹನಗಳಿಗೆ ಕೋಟೆಕಣಿ ಜಂಕ್ಷನ್‌ನ ಎತ್ತರವಾದ ಈ ಪ್ರದೇಶವು ಸಣ್ಣಪುಟ್ಟ ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ಕೂಡು ರಸ್ತೆಗೆ ತಲುಪುವಷ್ಟರಲ್ಲಿ ವಾಹನಗಳು ದಿಢೀರ್ ನಿಲುಗಡೆಗೊಳಿಸಬೇಕಾಗುತ್ತಿದ್ದು ಈ ವೇಳೆ ಮುಂದಿರುವ ವಾಹಕ್ಕೆ ಹಿಂದಿನಿಂದ ಬರುವ ವಾಹನವು ಢಿಕ್ಕಿಯಾಗುವ ಸಾಧ್ಯತೆ ಹೆಚ್ಚಿದೆ. ಹೊಸ ಬಸ್ ನಿಲ್ದಾಣಕ್ಕೆ ಸಾಗುವ ಈ ಕೋಟೆಕಣಿ ರಸ್ತೆಯ ಅಭಿವೃದ್ಧಿ ಜೊತೆಗೆ ಈ …

ಪೈವಳಿಕೆ ಪಂಚಾಯತ್ ವಸತಿ ಯೋಜನೆ: ಸಿಪಿಎಂ ನಡೆಸಿದ ಮಾರ್ಚ್ ಕಪಟ ನಾಟಕ-ಯುಡಿಎಫ್

ಪೈವಳಿಕೆ: ಪಂಚಾಯತ್‌ನ ಲೈಫ್ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಹಣ ಪಾವತಿಸಲಾಗಿಲ್ಲ ಎಂಬ ಕಾರಣಕ್ಕೆ ಸಿಪಿಎಂ ನಡೆಸಿದ ಮಾರ್ಚ್ ಹಾಗೂ ಧರಣಿ ಕಪಟ ನಾಟಕವೆಂದು ಪೈವಳಿಕೆ ಪಂಚಾಯತ್ ಯುಡಿಎಫ್ ಸಮಿತಿ ಅಧ್ಯಕ್ಷ ವಸಂತ ಕುಮಾರ್, ಸಂಚಾಲಕ ಝಡ್.ಎ. ಕಯ್ಯಾರ್ ಆರೋಪಿಸಿದ್ದಾರೆ.  ತಮ್ಮದೇ ಸರಕಾರದ ವಿರುದ್ಧ ಸಿಪಿಎಂ ಮುಷ್ಕರ ನಡೆಸಿದಂತಾಗಿದೆ ಇದು ಎಂದು ಯುಡಿಎಫ್ ಮುಖಂಡರು ತಿಳಿಸಿದ್ದಾರೆ. ಲೈಫ್ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಆರ್ಥಿಕ ಸಹಾಯ ಒದಗಿಸಲು ಹಿಂದಿನ ಆಡಳಿತ ಸಮಿತಿಗೆ ಸಾಧ್ಯವಾಗದ ಕಾರಣ ರಾಜ್ಯ ಸರಕಾರ …

ಅನಾಥ ವೃದ್ಧೆಗೆ ನೆರಳಾದ ಪಿಂಕ್ ಪೊಲೀಸ್

ಕಾಸರಗೋಡು: ಅನಾಥರಂತಿದ್ದ ವೃದ್ದೆಗೆ ಕಾಸರಗೋಡು ಪಿಂಕ್ ಪೊಲೀಸರು ಆಶ್ರಯ ನೀಡಿದ್ದಾರೆ. ಪಾರೆಕಟ್ಟೆ ಭಾಗದಲ್ಲಿ ಸ್ಥಳೀಯರ ನೆರವಿನೊಂದಿಗೆ ಜೀವಿಸುತ್ತಿದ್ದ ೭೫ ವರ್ಷದ ವಾರಿಜ ಎಂಬ ವೃದ್ಧೆಯನ್ನು ಪಿಂಕ್ ಪೊಲೀಸರು ಸುರಕ್ಷಿತ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ವಾರಿಜರ ದಯನೀಯ ಸ್ಥಿತಿ ಗಮನಕ್ಕೆ ಬಂದ ಪಿಂಕ್ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಅವರಿಗೆ ಅಗತ್ಯದ ವೈದ್ಯ ಸಹಾಯ ಲಭ್ಯಗೊಳಿಸಿದ್ದಾರೆ. ಬಳಿಕ ಎಎಸ್‌ಐ ಶಾರದ, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಗೀತ, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ರೇಷ್ಮ, ರಮ್ಯ ಎಂಬಿವರು ಅಧಿಕಾರಿಗಳೊಂದಿಗೆ ಮಾತನಾಡಿ ವಾರಿಜರನ್ನು …

ಸೋಶ್ಯಲ್ ಮೀಡಿಯಾ ಇನ್‌ಫ್ಲುವನ್ಸರ್ ಚಿನ್ನುಪಾಪು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ: ಅಭಿಮಾನಿಗಳಲ್ಲಿ ಮಡುಗಟ್ಟಿದ ದುಃಖ ; ಪೊಲೀಸ್ ತನಿಖೆ ಆರಂಭ

ಕಾಸರಗೋಡು: ಸೋಶ್ಯಲ್ ಮೀಡಿಯಾ ಇನ್‌ಫ್ಲುವೆನ್ಸರ್ ಆಗಿದ್ದ ಚಿನ್ನು ಪಾಪು ಯಾನೆ ಕೆ. ರೇಷ್ಮ (25)ರ ಅಕಾಲಿಕ ಅಗಲುವಿಕೆ ಯಿಂದ ಆಕೆಯ ಸಂಬಂಧಿಕರು, ಅಭಿಮಾನಿ ಗಳು ಹಾಗೂ ಹಿಂಬಾಲಕರಲ್ಲಿ ತೀವ್ರ ಶೋಕಸಾಗರ ಸೃಷ್ಟಿಯಾಗಿದೆ. ನಿನ್ನೆ ಮಧ್ಯಾಹ್ನ 2 ಗಂಟೆ ವೇಳೆ ಕಾಸರಗೋಡು ಆಜಾದ್‌ನಗರದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ಚಿನ್ನುಪಾಪು ಯಾನೆ ರೇಷ್ಮ ನೇಣುಬಿಗಿದು ಸಾವಿ ಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಾಡಿಗೆ ಮನೆಯ ಬಾಗಿಲು ತೆರೆದಿಟ್ಟ ಸ್ಥಿತಿಯಲ್ಲಿತ್ತೆಂದು ಹೇಳಲಾಗುತ್ತಿದೆ. ಇದೇ ವೇಳೆ ರೇಷ್ಮಾರ ಸ್ನೇಹಿತ ಮಧೂರು ನಿವಾಸಿ ಸಂದೇಶ್ ತಲುಪಿ ಆಕೆಯನ್ನು …

ಯುವತಿಗೆ ಚುಂಬಿಸಲೆತ್ನ:ಯುವಕ ಸೆರೆ

ಮಂಜೇಶ್ವರ: ಯುವತಿಯ ಹೆಗಲಿಗೆ ಕೈಯಿರಿಸಿ ಚುಂಬಿಸಲೆತ್ನಿಸಿದ ಆರೋಪದಂತೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕುಂಜ ತ್ತೂರು ಜಲಾಲಿಯ ಮಸೀದಿ ಸಮೀ ಪದ ಸಣ್ಣಡ್ಕ ಹೌಸ್‌ನ  ಸುನಿಲ್ ಕುಮಾರ್ (38) ಎಂಬಾತನನ್ನು ಮಂ ಜೇಶ್ವರ ಎಸ್.ಐ ವೈಷ್ಣವ್ ರಾಮಚಂದ್ರನ್ ಸೆರೆಹಿಡಿದಿದ್ದಾರೆ. ಜನವರಿ 26 ಹಾಗೂ  ಫೆಬ್ರವರಿ ೮ರಂದು  ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ.  ಕುಂಜತ್ತೂರು ಮಾಸ್ಕೋ ಹಾಲ್ ಸಮೀಪದ ಬಸ್ ನಿಲ್ದಾಣದಲ್ಲಿ ಜನವರಿ ೨೬ರಂದು ಮೊದಲ ಘಟನೆ ನಡೆದಿದೆ.  ಈತ ಯುವತಿಯ ಕೈಹಿಡಿದು ಚುಂಬಿಸಲೆತ್ನಿ ಸಿರುವುದಾಗಿ ದೂರಲಾಗಿದೆ. ಎರಡನೇ ಘಟನೆ …

ಶಬರಿಮಲೆ: ಇನ್ನೊಂದು ಅವ್ಯವಹಾರ ಪತ್ತೆ: ಧ್ವಜಸ್ತಂಭ ನಿರ್ಮಾಣಕ್ಕೆ ಕಾಯ್ದೆ ಉಲ್ಲಂಘಿಸಿ ಚಿನ್ನ ಸ್ವೀಕಾರ ; ಮಾಜಿ ಆಯುಕ್ತರ ಕೊರಳಿಗೆ ಉರುಳು

ಶಬರಿಮಲೆ: ಶಬರಿಮಲೆ ಚಿನ್ನ ಕಳವು ಪ್ರಕರಣದ ತನಿಖೆ ಒಂದೆಡೆ ಭರದಿಂದ ಸಾಗುತ್ತಿರುವಂತೆಯೇ ಇದರ ಜತೆಗೆ ಹೊಸ ಹೊಸ ಅವ್ಯವಹಾರಗಳು ಒಂದರ ಹಿಂದೆ ಒಂದು ಎಂಬಂತೆ ಹೊರಬರತೊಡಗಿದೆ. ಶಬರಿಮಲೆ ದೇಗುಲದ ಧ್ವಜಸ್ತಂಭ ನಿರ್ಮಾಣಕ್ಕಾಗಿ ಚಿನ್ನ ಸ್ವೀಕರಿಸಿದ ವಿಷಯದಲ್ಲಿ ಮಾಜಿ ಅಡ್ವಕೇಟ್ ಕಮಿಷನರ್ ಎ.ಎಸ್.ಪಿ ಕುರುಪ್ ಗಂಭೀರವಾದ ರೀತಿಯ ಕಾಯ್ದೆ ಉಲ್ಲಂಘನೆ ನಡೆಸಿದ್ದಾರೆಂದು ಈ ಬಗ್ಗೆ ದೇವಸ್ವಂ ವಿಜಿಲೆನ್ಸ್ ವಿಭಾಗ ತನಿಖೆ ನಡೆಸಿ ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ. ಧ್ವಜಸ್ತಂಭ ನಿರ್ಮಾಣಕ್ಕಾಗಿ ಭಕ್ತರಿಂದ ಚಿನ್ನವನ್ನು ಕಾಣಿಕೆ ರೂಪದಲ್ಲಿ ಪಡೆಯುವ ಹೊಣೆಗಾರಿಕೆಯನ್ನು …

ಮಗಳ ಮನೆಯಲ್ಲಿ ಗೃಹಿಣಿ ಬೆಂಕಿ ಸುಟ್ಟು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಮಗಳ ಮನೆಗೆ ಬಂದಿದ್ದ ಗೃಹಿಣಿ ಬಾತ್‌ರೂಂನೊಳಗೆ ಬೆಂಕಿ ಸುಟ್ಟು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಾಸರಗೋಡು ಸೂರ್ಲು ನಿವಾಸಿ ಕುನ್ನಿಲ್ ಮುಹಮ್ಮದ್‌ರ ಪುತ್ರಿಯಾದ ಆಸ್ಮ (53) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಸೀತಾಂಗೋಳಿ ಮುಕಾರಿಕಂಡದಲ್ಲಿರುವ ಪುತ್ರಿ ಶಂಸೀನರ ಮನೆಗೆ ನಾಲ್ಕು ದಿನಗಳ ಹಿಂದೆ ಬಂದಿದ್ದರೆನ್ನಲಾಗಿದೆ. ನಿನ್ನೆ ಅಪರಾಹ್ನ 3 ಗಂಟೆಗೆ ಇವರು ಮನೆಯ ಮೇಲಿನ ಮಹಡಿಯಲ್ಲಿರುವ ಬಾತ್‌ರೂಂನೊಳಗೆ ಬೆಂಕಿ ಸುಟ್ಟು ಸಾವಿಗೀಡಾದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆಂದು ಹೇಳಲಾಗುತ್ತಿದೆ. ಆಸ್ಮರಿಗೆ ಅಲ್ಪ ಪ್ರಮಾಣದಲ್ಲಿ ಅಸ್ವಸ್ಥತೆ ಇತ್ತೆಂದು ಹೇಳಲಾಗುತ್ತಿದೆ. ಇದರಿಂದ ಪೆಟ್ರೋಲ್ …