ಸಂಕದಡಿ ಟಿಪ್ಪರ್ ಲಾರಿ ಚಾಲಕ ಸಾವನ್ನಪ್ಪಿದ ಘಟನೆ : ಇನ್ನೂ ಮುಂದುವರಿಯುತ್ತಿರುವ ನಿಗೂಢತೆ

ಕಾಸರಗೋಡು: ಪೊಯಿನಾಚಿಗೆ ಸಮೀಪದ ಮಂಡಲಿಪಾರ ಞಾಣಿಕಡವು ರಸ್ತೆಯ ಸಂಕದ ಅಡಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಟಿಪ್ಪರ್ ಲಾರಿ ಚಾಲಕನ ಸಾವಿನ ಹಿಂದಿನ ನಿಗೂಢತೆ ಇನ್ನೂ ಮುಂದುವರಿಯುತ್ತಿದೆ. ಬೆಂಡಿಚ್ಚಾಲ್ ಮಂಡಲಿಪ್ಪಾರ ನಿವಾಸಿ ಅಬ್ದುಲ್ ಕಬೀರ್ (40) ಎಂಬವರು ಕಳೆದ ಮಂಗಳವಾರ ಸಂಕದ ಅಡಿ ಭಾಗದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಂದು ಅಲ್ಲೇ ಪಕ್ಕದ  ತೋಟದಿಂದ ತೆಂಗಿನಕಾಯಿ ಕೊಯ್ಯುತ್ತಿದ್ದ ವ್ಯಕ್ತಿ ಮೃತದೇಹವನ್ನು ಮೊದಲು ಕಂಡಿದ್ದರು. ಈ ಬಗ್ಗೆ ಮಾಹಿತಿ ಲಭಿಸಿದ ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಮಹಜರು ನಡೆಸಿದ …

ಅಪರಿಮಿತವಾಗಿ ನೋವು ನಿವಾರಕ ಮಾತ್ರೆ ಸೇವಿಸಿ ವ್ಯಕ್ತಿ ಮೃತ್ಯು

ಪೆರ್ಲ: ನೋವು ನಿವಾರಕ ಮಾತ್ರೆಗಳನ್ನು ಅಪರಿಮಿತವಾಗಿ ಸೇವಿಸಿ ತೀವ್ರ ಅಸ್ವಸ್ಥಗೊಂಡು ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಬಜಕೂಡ್ಲು ನಿವಾಸಿ ಮುಂಡಪ್ಪ ರೈ (59) ಮೃತಪಟ್ಟ ವ್ಯಕ್ತಿಯಾಗಿ ದ್ದಾರೆ. ಮಾನಸಿಕವಾಗಿ ಅಸ್ವಸ್ಥರಾಗಿದ್ದ ಇವರು ಚಿಕಿತ್ಸೆಯಲ್ಲಿದ್ದರೆನ್ನಲಾಗಿದೆ. ಈ ಮಧ್ಯೆ ಮೊನ್ನೆ ಅಪರಿಮಿತವಾಗಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾU ಲಿಲ್ಲ. ಮೃತರು ಪತ್ನಿ ಪದ್ಮಾವತಿ, ಮಕ್ಕಳಾದ ಸುಪ್ರೀತ, ಸುಜಿತ್ (ಗಲ್ಫ್), ಸಹೋದರ- ಸಹೋದರಿಯರಾದ ಶಾಂತರಾಂ ರೈ, …

ಕಾಡಮನೆ ಪ್ರಶಾಂತ್ ಭವನದಲ್ಲಿದ್ದ ವ್ಯಕ್ತಿ ಮೃತ್ಯು

ಬದಿಯಡ್ಕ:  ಒಂಭತ್ತು ವರ್ಷಗಳಿಂದ ಬದಿಯಡ್ಕ ಬಳಿಯ ಕಾಡಮನೆ ಪ್ರಶಾಂತ್ ಭವನ ಮಾನಸಿಕ ಚಿಕಿತ್ಸಾ ಕೇಂದ್ರದಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಮೃತಪಟ್ಟರು. ತಲಶ್ಶೇರಿ ಚಾಂಬಾಡ್ ವಲಿಯ ಪರಂ ಬತ್ತು ನಿವಾಸಿ ವಿ.ಪಿ. ಅಬ್ದುಲ್ ಅಸೀಸ್ (59) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇತ್ತೀಚೆಗೆ ಅಸೌಖ್ಯ ಬಾಧಿಸಿದ್ದ ಇವರನ್ನು ಕುಂ ಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿತ್ತು. ಮೃತರು ಪತ್ನಿ ಸಫಿಯ, ಇಬ್ಬರು ಮಕ್ಕಳು, ಸಹೋದರಿ ಸಹಿತ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಂಬಂಧಿಕರು ಆಗಮಿಸಿ ಮೃತದೇಹವನ್ನು ಊರಿಗೆ ಕೊಂಡೊಯ್ಯುತ್ತಿದ್ದಾರೆ.

20 ವರ್ಷದಿಂದ ದುರಸ್ತಿ ಕಾರ್ಯ ನಡೆಯದ ನೀರ್ಚಾಲು-ಮುಗು:ರಸ್ತೆ ಶೋಚನಿಯಾವಸ್ಥೆ ವಿರುದ್ಧ ಸ್ಥಳೀಯರ ರೋಷ

ನೀರ್ಚಾಲು: ಸಾಯಿಮಂದಿರ ಮುಗುರಸ್ತೆ ಹಾಗೂ ಉರ್ಲಿತ್ತಡ್ಕ ಬೇಳ ರಸ್ತೆಯು ಶೋಚನೀಯಾವಸ್ಥೆಯಲಿದೆ ಎಂದು ನಾಗರಿಕರು ದೂರುತ್ತಿದ್ದಾರೆ. 20 ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆ ಈ ರಸ್ತೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಆದರೆ ಯಾವುದೇ ಅಭಿವೃದ್ಧಿ ಕಾರ್ಯ ನಡೆಸದಿರುವುದರಿಂದ ರಸ್ತೆಯು ಸಂಚಾರಕ್ಕೆ ಅಯೋಗ್ಯವಾಗಿದೆ. ಇತ್ತೀಚೆಗೆ ಜಲಪ್ರಾಧಿಕಾರ ರಸ್ತೆಯ ಎರಡೂ ಬದಿಗಳಲ್ಲಿ ಪೈಪ್ ಅಳವಡಿಸಲು ಹೊಂಡಗಳನ್ನು ತೋಡಿ ಅದನ್ನು ಸಮರ್ಪಕವಾದ ರೀತಿಯಲ್ಲಿ ಮುಚ್ಚದಿರುವುದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಇನ್ನು ಮಳೆಗಾಲ ಪ್ರಾರಂಭವಾದಲ್ಲಿ ಈ ರಸ್ತೆ ಮೂಲಕ ಸಂಚಾರ ದುಸ್ತರವಾಗಲಿದೆ.20 ವರ್ಷಗಳಿಂದ ಯಾವುದೇ …

ಪಚ್ಲಂಪಾರೆ ಎಸ್‌ಸಿ ಉನ್ನತಿಯ ಸ್ಮಶಾನ ಅಭಿವೃದ್ಧಿಗೆ ಒತ್ತಾಯ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಪಚ್ಲಂಪಾರೆ ಎಸ್.ಸಿ ಉನ್ನತಿಯಲ್ಲಿರುವ ಸ್ಮಶಾನ ಶೋಚನೀ ಯÁವಸ್ಥೆಯಲ್ಲಿದ್ದು, ಅಭಿವೃದ್ದಿ ಗೊಳಿಸಲು ನಿವಾಸಿಗಳು ಒತ್ತಾ ಯಿಸಿದ್ದಾರೆ. ಸ್ಮಶಾನದಲ್ಲಿ ಮೃತದೇಹ ಸುಡುವ ಶೆಡ್ಡ್ ಹಾಗೂ ಹೊರ ಭಾಗÀ ಅಳವಡಿಸಿದ ತಗಡ್ ಶೀಟ್ ತುಕ್ಕು ಹಿಡಿದು ಹಾನಿಗೀಡಾಗಿದ್ದು, ಮಳೆಗಾಲದಲ್ಲಿ ಸಮಸ್ಯೆಗೆ ಕಾರಣ ವಾಗಿದೆ. ಅಲ್ಲದೆ ನೀರಿನ ವ್ಯವಸ್ಥೆ, ಬೆಳಕಿನ ವ್ಯವಸ್ಥೆಯಿಲ್ಲದಿರುವು ದರಿಂದ ರಾತ್ರಿ ಹೊತ್ತಲ್ಲಿ ಪರದಾ ಡಬೇಕಾಗಿದೆ. ಹಲವು ವರ್ಷ ಗಳಿಂದಲೂ ಅಭಿವೃದ್ದಿ ಬಗ್ಗೆ ಪಂ ಚಾಯತ್ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದರೂ ಇದು ವರೆಗೂ ದುರಸ್ತಿಕಾರ್ಯದ ಬಗ್ಗೆ ಕ್ರಮಯಿಲ್ಲ …

ಐಲ ಕ್ಷೇತ್ರ ವಿಷು ಜಾತ್ರೆ: ಬೆಡಿ ಉತ್ಸವ ನಾಳೆ

ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿಷು ಜಾತ್ರಾ ಮಹೋತ್ಸವ ಆರಂಭಗೊAಡು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕöÈತಿಕ ಕಾರ್ಯಕ್ರಮಗಳು ದಿನನಿತ್ಯ ನಡೆಯುತ್ತಿದೆ. ಇಂದು ನಡುದೀಪೋತ್ಸವದ ಪ್ರಯುಕ್ತ ರಾತ್ರಿ 7.45ರಿಂದ ಮಹಾ ತಿರುವಾದಿರಕಳಿ, 8ರಿಂದ ಮಾಗಣೆ ಕೂಟ, ಪಲ್ಲಕ್ಕಿ ಉತ್ಸವ ಸಹಿತ ಬಲಿ ಉತ್ಸವ, ನಡು ದೀಪೋತ್ಸವ, ನಾಳೆ ಪೂರ್ವಾಹ್ನ 7ರಿಂದ ವಿವಿಧ ವೈದಿಕ ಕಾರ್ಯಕ್ರಮ, ರಾತ್ರಿ 7.45ರಿಂದ ಬಲಿ ಉತ್ಸವ, ಕೆರೆದೀಪೋತ್ಸವ, 9.30ರಿಂದ ಐಲ ಕ್ಷೇತ್ರದ ಮೈದಾನದಲ್ಲಿ ವಿರಾಟ್ ನೃತ್ಯ ಭಜನಾ ಸಂಭ್ರಮ, 10.30ರಿಂದ ಕಟ್ಟೆ ಪೂಜೆ, …

ಇಸ್ಲಾಂ ಧಾರ್ಮಿಕ ಸೌಹಾರ್ದತೆ, ಸಹಬಾಳ್ವೆ ಬೋಧಿಸಿದೆ- ಜಿಫ್ರಿ ಮುತ್ತುಕೋಯ ತಂಙಳ್

ಪೆರ್ಲ: ಅಡ್ಕಸ್ಥಳದಲ್ಲಿ ಮಶೂರ್ ವಲಿಯುಲ್ಲಾಹಿ ದರ್ಗಾ ಶರೀಫ್‌ನ ನವೀಕೃತ ಕಟ್ಟಡವನ್ನು ಸಮಸ್ತ ಕೇರಳ ಜಮ್‌ಇಯತ್ತುಲ್ ಉಲಮದ ಅಧ್ಯಕ್ಷ ಸಯ್ಯಿದುಲ್ ಉಲಮ ಜಿಫ್ರಿ ಮುತ್ತು ಕೋಯ ತಂಙಳ್ ಉದ್ಘಾಟಿಸಿದರು. ಅವರು ಮಾತನಾಡಿ ಧಾರ್ಮಿಕ ಸೌಹಾರ್ದತೆಯಿಂದ, ಸಹಬಾಳ್ವೆಯಿಂದ ಸರ್ವ ಧರ್ಮಿಯರೊಂದಿಗೆ ವರ್ತಿಸಬೇಕು ಎಂದು ಕರೆ ನೀಡಿದರು. ಮಹಾತ್ಮರನ್ನು ಗೌರವಿಸಬೇಕೆಂದು ಇಸ್ಲಾಂ ನಮಗೆ ಕಲಿಸಿಕೊಟ್ಟಿದೆ. ಅವರ ಬದುಕು, ತ್ಯಾಗ, ಸಂದೇಶಗಳನ್ನು ಎಲ್ಲರಿಗೂ ತಲುಪಿಸುವುದು ಉರೂಸ್ ಕಾರ್ಯಕ್ರಮದ ಆಯೋಜನೆಯಲ್ಲಿ ರುವ ಉದ್ದೇಶವೆಂದು ಅವರು ನುಡಿದರು. ಜಮಾಯತ್ ಸಮಿತಿ ಗೌರವಾ ಧ್ಯಕ್ಷ ಮೀರ್ ಜಾಹಿದ್ …

ಬೆಳೇರಿಯಲ್ಲಿ ಭತ್ತದ ತಳಿ ಸಂರಕ್ಷಣಾ, ಸಂಶೋಧನಾ ಕೇಂದ್ರ ಸ್ಥಾಪನೆಗೆ ನಿರ್ಧಾರ: ಟ್ರಸ್ಟ್ ರಚನೆಗೆ ನಿರ್ಣಯ

ಬೆಳ್ಳೂರು: ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅವರ ೬೫೦ಕ್ಕೂ ಅಧಿಕ ಭತ್ತದ ತಳಿಗಳನ್ನು ಸಂರಕ್ಷಿಸಿ ಉಳಿಸಲು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ. ವಿಷು ದಿನದಂದು ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಪ್ರಾರ್ಥನೆ, ಪೂಜೆ ಸಲ್ಲಿಸಿ ಈ ಯೋಜನೆ ಸಾಕಾರಕ್ಕೆ ಅಡಿಯಿಡಲಾಗಿದೆ. ಸತ್ಯನಾರಾಯಣ ಬೆಳೇರಿಯವರ ತಳಿಗಳ ಸಂರಕ್ಷಣೆಗೆ ಸ್ಥಳ ಇಲ್ಲದಿರುವುದು, ವಿವಿಧ ಕಡೆಗಳಿಂದ ಇವರನ್ನು ಹುಡುಕಾಡಿ ಬರುತ್ತಿರುವ ವಿಜ್ಞಾನಿ, ಸಂಶೋಧಕರು, ವಿದ್ಯಾರ್ಥಿಗಳಿಗೆ ಇಲ್ಲಿ ಸೂಕ್ತ ಸೌಲಭ್ಯ ಇಲ್ಲದಿರುವುದೇ ಅಧ್ಯಯನ ಕೇಂದ್ರ ಸ್ಥಾಪನೆಗೆ ಯೋಜನೆ ಹಮ್ಮಿಕೊಳ್ಳಲು ಕಾರಣವಾಗಿದೆ. ಈ …

ಪೆರಡಾಲ ಕ್ಷೇತ್ರ ಬ್ರಹ್ಮಕಲಶೋತ್ಸವ ನಾಳೆಯಿಂದ: ವಾಹನ ಪ್ರಚಾರಕ್ಕೆ ಚಾಲನೆ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ನಾಳೆ ಆರಂಭ ವಾಗಲಿದೆ. ಇದರ ಪ್ರಚಾರದಂಗವಾಗಿ ವಾಹನ ಪ್ರಚಾರಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಅವರು ಧ್ವಜ ಹಸ್ತಾಂತರಿಸಿ ಶುಭಕೋರಿದರು. ಅರ್ಚಕ ವೇದಮೂರ್ತಿ ಶಿವರಾಮ ಭಟ್ ಪೆರಡಾಲ ಪ್ರಾರ್ಥನೆ ಸಲ್ಲಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲ, ಕಾರ್ಯ ದರ್ಶಿ ನಿರಂಜನ ರೈ ಪೆರಡಾಲ, ಕೋಶಾಧಿಕಾರಿ ಸೂರ್ಯನಾರಾಯಣ ಬಿ., ಹಸಿರುವಾಣಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ, ಪ್ರಚಾರ ಸಮಿತಿಯ ಡಾ. ಶ್ರೀಶಕುಮಾರ ಪಂಜಿತ್ತಡ್ಕ, …

ಬೆಲೆಯಿದೆ ಆದರೆ ಫಸಲಿಲ್ಲ: ಗೇರು ಕೃಷಿಕರ ನಿರೀಕ್ಷೆ ಹುಸಿ

ಕಾಸರಗೋಡು: ತೀವ್ರ ಬಿಸಿಲಿನ ಹಿನ್ನೆಲೆಯಲ್ಲಿ ಗೇರು ಮರದಲ್ಲಿ ಹೂವು ಹಾಗೂ ಕಾಯಿಗಳು ಕರಟಿ ಹೋಗುವ ಸ್ಥಿತಿ ಉಂಟಾಗಿದೆ. ಬೆಲೆಯಿದ್ದರೂ ಉತ್ಪಾದನೆ ಇಲ್ಲದ ಕಾರಣ ಗೇರು ಕೃಷಿಕರ ಸಂಕಷ್ಟ ತಪ್ಪುವುದಿಲ್ಲ. ಜಿಲ್ಲೆಯಲ್ಲಿ  ಬೇಸಿಗೆ ತೀವ್ರಗೊಂಡ ಹಿನ್ನೆಲೆಯಲ್ಲಿ ಹೂವು ಹಾಗೂ ಕಾಯಿ ಒಣಗಿ ನಾಶವಾಗಿರುವುದರೊಂದಿಗೆ ಗೇರುಬೀಜ ಕೃಷಿಕರ ಈ ಸೀಸನ್‌ನ ನಿರೀಕ್ಷೆಗಳೆಲ್ಲಾ ಕರಟಿಹೋಗಿದೆ. ಈ ವರ್ಷದ ಸೀಸನ್‌ನ ಆರಂಭದಲ್ಲಿ ಕಿಲೋಗೆ 145 ರೂ. ಆಗಿತ್ತು ಗೇರು ಬೀಜದ ಗ್ರಾಮೀಣ ಮಾರುಕಟ್ಟೆಗಳ ಚಿಲ್ಲರೆ ಮಾರಾಟ ಬೆಲೆ. ಆದರೆ ಜನವರಿ ಕೊನೆಯಾಗುವಾಗ ಬೆಲೆ …