ಯುವತಿ ನಾಪತ್ತೆ  ಯುವಕನ ಬಗ್ಗೆ ತನಿಖೆ

ಕಾಸರಗೋಡು:  ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ತೃಕರಿಪುರ, ಉಡುಮುಂದಲದಲ್ಲಿ 19ರ ಹರೆಯದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಕರಿಕ್ಕಡವ್ ನಿವಾಸಿ ಎಂ. ಸಮೀರರ ಪುತ್ರಿ ಜಾಸ್ಮೀನ (19) ನಾಪತ್ತೆಯಾಗಿದ್ದು ತಾಯಿ ನೀಡಿದ ದೂರಿನಂತೆ ಚಂದೇರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಅಪರಾಹ್ನ3.30ಕ್ಕೆ ಮನೆಯಿಂದ ಹೊರಹೋದ ಈಕೆ ಮರಳಿ ಬಂದಿಲ್ಲವೆಂದು,  ಸಜೀರ್ ಎಂಬ ವ್ಯಕ್ತಿಯ ಜೊತೆ ಹೋಗಿರಬೇಕೆಂದು ಶಂಕಿಸುತ್ತಿರುವುದಾಗಿಯೂ ದೂರಿನಲ್ಲಿ ಹೇಳಲಾಗಿದೆ. ಯುವತಿಯನ್ನು ಪತ್ತೆ ಹಚ್ಚುವುದಕ್ಕಾಗಿ ಸೈಬರ್ ಸೆಲ್‌ನ ಸಹಾಯ ಪಡೆಯಲಾಗಿದೆ. ಸಜೀರ್‌ನ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು …

ನಗರದಲ್ಲಿ ಉತ್ಸಾಹ ಸೃಷ್ಟಿಸಿ ಸಂಸದ ಶಾಫಿ ಪರಂಬಿಲ್

ಕಾಸರಗೋಡು: ಐಕ್ಯರಂಗದ ಕಾಸರಗೋಡು ವಿಧಾನಸಭಾ ಮಂಡಲ ಸಮಿತಿ ಚುನಾವಣೆ ಪ್ರಚಾರಾರ್ಥ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಾಫಿ ಪರಂಬಿಲ್ ಭಾಗವಹಿಸಿದರು. ನಿನ್ನೆ ರಾತ್ರಿ 8 ಗಂಟೆಗೆ ನಿಗದಿಪಡಿಸಿದ್ದ ಉದ್ಘಾಟನಾ ಕಾರ್ಯಕ್ರಮ ಮಧ್ಯರಾತ್ರಿ 12 ಗಂಟೆಗೆ ಆರಂಭಗೊಂಡಿದೆ. ತೃಕರಿಪುರದಲ್ಲಿ ನಡೆಸಿದ ರೋಡ್‌ಶೋ ವಿಳಂಬಗೊಂಡಿರುವುದೇ ಕಾರ್ಯಕ್ರಮ ದಲ್ಲಿ ಶಾಫಿ ಪರಂಬಿಲ್ ಭಾಗವಹಿಸಲು ತಡವಾಗಿರುವುದು. ಆದರೆ ಆ ಸಮಯದಲ್ಲೂ ಕಾರ್ಯಕರ್ತರು ಉತ್ಸಾಹಭರಿತಲಾಗಿ ಭಾಗವಹಿಸಿದರು. ಐಕ್ಯರಂಗದ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಕೂಡಾ ಕಾರ್ಯಕರ್ತರ ಉತ್ಸಾಹದಲ್ಲಿ ಪಾಲ್ಗೊಂಡರು. ಯುಡಿವೈಎಫ್ ಕಾಸರಗೋಡು ವಿಧಾನಸಭಾ ಮಂಡಲ ಅಧ್ಯಕ್ಷ ಸಿದ್ದಿಕ್ ಸಂತೋಷ್‌ನಗರ್ …

ಕುಂಬಳೆಯಲ್ಲಿ ಎನ್‌ಡಿಎ ಶಕ್ತಿ ಪ್ರದರ್ಶಿಸಿದ ರೋಡ್ ಶೋ

ಕುಂಬಳೆ: ಎನ್‌ಡಿಎ ಮಂಜೇಶ್ವರ ವಿಧಾನಸಭಾ ಮಂಡಲ ಅಭ್ಯರ್ಥಿ ಕೆ. ಸುರೇಂದ್ರನ್ ಹಾಗೂ ತಿರುವನಂತಪುರ ಮೇಯರ್ ವಿ.ವಿ. ರಾಜೇಶ್ ನೇತೃತ್ವ ನೀಡಿದ ರೋಡ್ ಶೋದಲ್ಲಿ  ಹಲವಾರು ಕಾರ್ಯಕರ್ತರು ಭಾಗವಹಿಸಿ ಎನ್‌ಡಿಎ ಬಲಪ್ರದರ್ಶನಕ್ಕೆ ಸಾಕ್ಷಿಯಾಯಿತು. ಕುಂಬಳೆ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಪರಿಸರದಿಂದ ಆರಂಭಗೊಂಡ ರೋಡ್ ಶೋ ಪೇಟೆ ಸುತ್ತಿ ಟ್ಯಾಕ್ಸಿ ಸ್ಟ್ಯಾಂಡ್ ಪರಿಸರದಲ್ಲಿ ಸಮಾಪ್ತಿಗೊಂ ಡಿತು. ಮಂಜೇಶ್ವರದಲ್ಲಿ ಕೆ. ಸುರೇಂದ್ರನ್ ಜಯಗಳಿಸಿದರೆ ಬಹಳ ಅಭಿವೃದ್ಧಿ ಉಂಟಾಗಲಿದೆಯೆಂದು, ಕೇಂದ್ರ ಸರಕಾರದ ಯೋಜನೆಗಳನ್ನು ಗರಿಷ್ಠವಾಗಿ  ಮಂಡಲಕ್ಕೆ ತಲುಪುವುದಾಗಿ ತಿರುವನಂತಪುರದ ಮೇಯರ್ ವಿ.ವಿ. ರಾಜೇಶ್ …

ಹಾನಿಗೊಂಡು ರಸ್ತೆಯಲ್ಲಿ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಸ್ಕೂಟರ್ ಢಿಕ್ಕಿ: ಸವಾರನಿಗೆ ಗಂಭೀರ

ಕಾಸರಗೋಡು: ಹಾನಿಗೊಂಡು ರಸ್ತೆಯಲ್ಲಿ ಸಿಲುಕಿಕೊಂಡ ಲಾರಿಯ ಹಿಂಭಾಗಕ್ಕೆ ಸ್ಕೂಟರ್ ಢಿಕ್ಕಿ ಹೊಡೆದು ಯುವಕನಿಗೆ ಗಂಭೀರ ಗಾಯವುಂಟಾ ಗಿದೆ. ಯುವಕನನ್ನು ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ ೫ ಗಂಟೆ ವೇಳೆ ಕಾಸರಗೋಡು-ಕಾಞಂಗಾಡ್ ಕೆಎಸ್‌ಟಿಪಿ ರಸ್ತೆಯ  ಪಳ್ಳಿಕ್ಕೆರೆಯಲ್ಲಿ ಅಪಘಾತ ಸಂಭವಿಸಿದೆ. ಮಂಗಳೂರು ಭಾಗಕ್ಕೆ ಲಾರಿ  ಸಂಚರಿಸುತ್ತಿತ್ತು. ಪಳ್ಳಿಕ್ಕೆರೆಗೆ ತಲುಪಿದಾಗ  ಹಾನಿಗೊಂಡು ರಸ್ತೆ ಮಧ್ಯೆ ನಿಂತಿತು. ಬಳಿಕ ಚಾಲಕ ಹಾಗೂ ಕ್ಲೀನರ್ ಸೇರಿ ದುರಸ್ತಿ ನಡೆಸುತ್ತಿದ್ದ ಮಧ್ಯೆ ತಲುಪಿದ ಸ್ಕೂಟರ್ ಲಾರಿಗೆ ಢಿಕ್ಕಿ ಹೊಡೆದಿದೆ. ಲಾರಿಯ ಹಿಂಭಾಗಕ್ಕೆ ಢಿಕ್ಕಿ …

ಟಿಪ್ಪರ್ ಲಾರಿ ಹಿಂಬದಿಗೆ ಬೈಕ್ ಢಿಕ್ಕಿ: ಯುವಕನ ಸಾವಿನಿಂದ ಶೋಕಸಾಗರ

ಉಪ್ಪಳ: ವಾಹನ ಅಪಘಾತದಲ್ಲಿ ಹೋಟೆಲ್ ನೌಕರನಾದ ಯುವಕ ಮೃತಪಟ್ಟ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಉಪ್ಪಳ ನಯಾಬಜಾರ್ ಬಳಿಯ ಯು.ಕೆ. ಫ್ಲಾಟ್‌ನಲ್ಲಿ ವಾಸಿಸುವ ಐಮಾನುಲ್ಲ (19) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಐಮಾನುಲ್ಲ  ಹೊಸಂಗಡಿಯಲ್ಲಿ ಹೋಟೆಲ್ ನೌಕರನಾಗಿದ್ದರು. ನಿನ್ನೆ ಮಧ್ಯಾಹ್ನ  1 ಗಂಟೆ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ  ವಾಮಂಜೂರು ಸೇತುವೆ ಬಳಿ ಸರ್ವೀಸ್ ರಸ್ತೆಯ ದ್ವಾರದಲ್ಲಿ ಅಪಘಾತವುಂಟಾಗಿದೆ. ಐಮಾನುಲ್ಲ ಚಲಾಯಿಸುತ್ತಿದ್ದ ಬೈಕ್ ಟಿಪ್ಪರ್ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಟಿಪ್ಪರ್ ಲಾರಿ ಹೊಸಂಗಡಿಯಿಂದ ಉಪ್ಪಳ ಭಾಗಕ್ಕೆ …

ಮುಂಜಾನೆ ನಡೆದ ಭೀಕರ ಘಟನೆ: ಯುವಕನನ್ನು ಕಡಿದು ಬರ್ಬರ ಕೊಲೆ; ಕೊಲೆಗಾರರಿಗಾಗಿ ತನಿಖೆ ತೀವ್ರ

ತಲಪಾಡಿ: ಬೈಕ್‌ನ್ನು ತಡೆದು ನಿಲ್ಲಿಸಿ ಯುವಕನನ್ನು ತಂಡವೊಂದು ಇರಿದು ಕೊಲೆಗೈದ ಘಟನೆ ತೊಕ್ಕೊಟ್ಟುನಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಮೂಲತಃ ಕುದ್ರೋಳಿ ನಿವಾಸಿ ಹಾಗೂ ಕಳೆದ ಹಲವಾರು ವರ್ಷಗಳಿಂದ ತಲಪಾಡಿ ಬಳಿಯ ಉಚ್ಚಿಲ ಅಜ್ಜಿನಡ್ಕ ಮುಳ್ಳುಗುಡ್ಡೆಯಲ್ಲಿ ವಾಸವಾಗಿರು ಆರೀಫ್ ಹುಸೈನ್ ಯಾನೆ ಟ್ಯಾಬ್ಲೆಟ್ ಆರೀಫ್ (42)ನನ್ನು ಬರ್ಬರವಾಗಿ ಕೊಲೆಗೈಯ್ಯಲಾಗಿದೆ. ಮಂಗಳೂರಿನ ಧಕ್ಕೆಯಲ್ಲಿ ಮೀನು ವ್ಯಾಪಾರಿಯಾಗಿರುವ ಆರೀಫ್ ಹುಸೈನ್ ಇಂದು ಮುಂಜಾನೆ ಬೈಕ್‌ನಲ್ಲಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ತೊಕ್ಕೊಟ್ಟು ಫ್ಲೈಓವರ್‌ಗೆ ತಲುಪಿದಾಗ ಕಾರಿನಲ್ಲಿ ತಲುಪಿದ ತಂಡವೊಂದು ಬೈಕನ್ನು …

ಹಳದಿ ಕಾಮಾಲೆ: ನೆಲ್ಕಳ ನಿವಾಸಿ ನಿಧನ

ಕಾಸರಗೋಡು: ವಿದ್ಯಾನಗರ ನೆಲ್ಕಳ ಶ್ರೀ ಅಯ್ಯಪ್ಪ ಭಜನಾ ಮಂದಿರ ಸಮೀಪದ ಸೆಕೆಂಡ್ ಕ್ರಾಸ್ ರಸ್ತೆಯ ನಿವಾಸಿ ಕೆ.ಜಿ. ಪ್ರಸಾದ್ ಕುಮಾರ್ (52) ನಿಧನ ಹೊಂದಿ ದರು. ಹಳದಿ ಕಾಮಾಲೆ ಹಿನ್ನೆಲೆ ಯಲ್ಲಿ ಕಳೆದ ಒಂದು ವಾರದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಲ್ಲಿದ್ದರು. ನಿನ್ನೆ ಸಂಜೆ ನಿಧನ ಸಂಭ ವಿಸಿದೆ. ದಿ| ಗೋಪಾಲಕೃಷ್ಣನ್- ಸಬಿತ ದಂಪತಿ ಪುತ್ರನಾಗಿದ್ದಾರೆ. ಮೃತರು ತಾಯಿ, ಸಹೋದರರಾದ ಜೋಗೀಂದ್ರನಾಥ್, ಹೇಮಚಂ ದ್ರನ್, ಶಿವಪ್ರಕಾಶ್, ಸಹೋದರಿ ಜಯಶ್ರೀ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಇನ್ನು ಅಬ್ಬರದ ಪ್ರಚಾರ ದಿನಗಳು: ಜಿಲ್ಲೆಯಲ್ಲಿ 32 ಮಂದಿ ಸೇರಿದಂತೆ ರಾಜ್ಯದಲ್ಲಿ 890 ಅಭ್ಯರ್ಥಿಗಳು

ಕಾಸರಗೋಡು: ಕೇರಳ ವಿಧಾನ ಸಭೆಗೆ ಎಪ್ರಿಲ್ 9ರಂದು ನಡೆಯಲಿರುವ ಚುನಾವಣೆಗೆ ಸಲ್ಲಿಸಿರುವ ನಾಮಪತ್ರ ಗಳನ್ನು ಹಿಂಪಡೆಯುವ ಪ್ರಕ್ರಿಯೆಗಳು ನಿನ್ನೆ ಪೂರ್ಣಗೊಂಡಿರುವಂತೆಯೇ ಅಂತಿಮ ಚುನಾವಣಾ ಕಣದಲ್ಲಿ  ಕಾಸರ ಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 32 ಅಭ್ಯರ್ಥಿಗಳಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಒಟ್ಟು 140 ವಿಧಾನಸಭಾ  ಕ್ಷೇತ್ರದಲ್ಲಿ 890 ಮಂದಿ ಉಳಿದುಕೊಂಡಿದ್ದಾರೆ. ಈಬಾರಿ ಒಟ್ಟು 1254 ಮಂದಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರಗಳ ಸೂಕ್ಷ್ಮ ಪರಿಶೀಲನೆ ಬಳಿಕ ರಾಜ್ಯದಲ್ಲಿ ೯೮೫ ಮಂದಿ ಅಭ್ಯರ್ಥಿಗಳು ಉಳಿದುಕೊಂಡಿದ್ದರು. ಇದರಲ್ಲಿ 95 ಮಂದಿ ನಿನ್ನೆ …

ಯುದ್ದದ ನಡುವೆ ದರ ಏರಿಕೆಗೆ ಬ್ರೇಕ್ ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರ ಸರಕಾರ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಭಣಿಸಿರುವ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಭೀತಿಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಛಾ ತೈಲ ದರ ಏರಿಕೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ರಾಷ್ಟ್ರೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಕ್ಕೇರದಂತೆ ತಡೆಯಲು ಕೇಂದ್ರ ಸರಕಾರ ಮಹತ್ತರ ಕ್ರಮ ಕೈಗೊಂಡಿದ್ದು ಇದರಂತೆ ಪೆಟ್ರೋಲ್ ಮತ್ತು ಡೀಸೆಲ್ ಇತ್ಯಾದಿ ಇಂಧನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (ಎಸ್‌ಎಇಡಿ)ವನ್ನು ಕಡಿತಗೊಳಿಸಿದೆ. ಜಾಗತಿಕವಾಗಿ  ತೈಲ ಪೂರೈಕೆ ಯಲ್ಲಿ  ವ್ಯತ್ಯಯ ಉಂಟಾಗುವ ಆತಂಕವಿದ್ದರೂ ಇಂಧನಗಳ ಸುಂಕ ಕಡಿತಗೊಳಿಸಿದ ಕೇಂದ್ರ ಸರಕಾರದ …

ಕಾಸರಗೋಡಿಗೆ ಕಾರಿನಲ್ಲಿ ಸಾಗಿಸುತ್ತಿದ್ದ 285 ಲೀಟರ್ ಕರ್ನಾಟಕ ಮದ್ಯ ವಶ: ಸಾಗಾಟಗಾರ ಪರಾರಿ

ಕಾಸರಗೋಡು: ಕಾಸರಗೋಡು ಭಾಗಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ 285.12 ಲೀಟರ್ ಕರ್ನಾಟಕ ಮದ್ಯವನ್ನು  ಅಬಕಾರಿ ಅಧಿಕಾರಿಗಳು ವಶಪಡಿಸಿ ಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಕಾರಿನಲ್ಲಿದ್ದ ವ್ಯಕ್ತಿ ಓಡಿ ಪರಾರಿಯಾ ಗಿದ್ದಾನೆ. ಆತನ ಪತ್ತೆಗಾಗಿ  ತನಿಖೆ ತೀವ್ರ ಗೊಳಿಸಲಾಗಿದೆ.  ಇಲೆಕ್ಷನ್ ಸ್ಪೆಷಲ್ ಡ್ರೈವ್‌ನಂಗವಾಗಿ ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್‌ನ ಎಕ್ಸೈಸ್ ಪ್ರಿವೆಂಟೀವ್ ಆಫೀಸರು ರಂಜಿತ್ ಕೆ.ವಿನೇತೃತ್ವದ ತಂಡ ನಿನ್ನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆಸಿದ ಕಾರ್ಯಾಚರಣೆ ವೇಳ ಮದ್ಯ ಸಾಗಾಟ ಪತ್ತೆಯಾಗಿದೆ. ಕುಂಬಳೆ ಭಾಗದಿಂದ ಬಂದ ಕಾರನ್ನು ಅಬಕಾರಿ ಅಧಿಕಾರಿಗಳು ತಡೆದು ನಿಲ್ಲಿಸಿದ್ದು, …