ಶಾರದನಗರ ಸಮುದ್ರ ತೀರ ಪ್ರದೇಶದಲ್ಲಿ ಬಿಜೆಪಿ ಸಭೆ: ಉಡುಪಿ ಶಾಸಕರಿಂದ ಮಾರ್ಗದರ್ಶನ

ಉಪ್ಪಳ: ಮಂಜೇಶ್ವರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್‌ರ ಚುನಾವಣಾ ಪ್ರಚಾರದ ಅಂಗವಾಗಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಹನುಮಾನ್ ನಗರ ಹಾಗೂ ಶಾರದಾ ನಗರ ಸಮುದ್ರ ತೀರ ಪ್ರದೇಶದ ಬಿಜೆಪಿ ಸಭೆ ಶಾರದಾನಗರದ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಿನ್ನೆ ಸಭೆ ನಡೆಯಿತು. ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ನಾಡಿನ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕರೆ ನೀಡಿದರು. ಬಿಜೆಪಿ ಮುಖಂಡರಾದ ಕೆ.ಪಿ. ವಲ್ಸರಾಜ್, ವಿಜಯ ಕುಮಾರ್, ದಿನೇಶ್ ಚೆರುಗೋಳಿ, ಜಯಪ್ರಕಾಶ ಸುಳ್ಯ ಮೊದಲಾದವರು …

ಯುಡಿಎಫ್‌ನ ಒತ್ತಡದಿಂದ ಎಸ್‌ಡಿಪಿಐ ನಾಮಪತ್ರ ಹಿಂತೆಗೆದುಕೊಂಡಿದೆ-ಎಂ.ಎ. ಬೇಬಿ

ಕಾಸರಗೋಡು: ವಿಧಾನಸಭಾ ಚುನಾವಣೆಯಲ್ಲಿ  ಎಸ್‌ಡಿಪಿಐ ಯೊಂದಿಗೆ ಎಡರಂಗ ಯಾವುದೇ ರೀತಿಯ ಡೀಲ್ ಮಾಡಿಕೊಂಡಿಲ್ಲ ವೆಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಹೇಳಿದ್ದಾರೆ. ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ನಿನ್ನೆ ನಡೆದ ಮುಖಾಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್‌ನ ಒತ್ತಡಕ್ಕೆ ಮಣಿದು ಅಲ್ಲಿ ಎಸ್‌ಡಿಪಿಐ ಅಭ್ಯರ್ಥಿ ತನ್ನ ನಾಮಪತ್ರ ಹಿಂಪಡೆದುಕೊಂಡಿದೆ ಎಂದು ಎಂ.ಎ. ಬೇಬಿ ಇದೇ ಸಂದರ್ಭದಲ್ಲಿ ಆರೋಪಿಸಿದ್ದಾರೆ. ಎಸ್‌ಡಿಪಿಐ ಅದರ ನಿಲುವನ್ನು ಈಗಾಗಲೇ ಘೋಷಿಸಿದೆ. ಆದರೆ ಎಸ್‌ಡಿಪಿಐಯ ಮತ ಎಡರಂಗಕ್ಕೆ ಬೇಡವೆಂದು …

ಯುವತಿ, ಇಬ್ಬರು ಮಕ್ಕಳು ನಾಪತ್ತೆ

ಕಾಸರಗೋಡು: ಯುವತಿ ಹಾಗೂ ಇಬ್ಬರು ಮಕ್ಕಳು ನಾಪತ್ತೆಯಾದ ಬಗ್ಗೆ ದೂರಲಾಗಿದೆ. ನೆಲ್ಲಿಕುಂಜೆ ಬೀಚ್ ರೋಡ್‌ನ ಎನ್. ಯಮುನ ಎಂಬವರ ಪುತ್ರಿ ಶರಣ್ಯ (27) ಹಾಗೂ ಈಕೆಯ ಆರರ ಹರೆಯದ ಪುತ್ರ, ಎರಡರ ಹರೆಯದ ಪುತ್ರಿ ಎಂಬಿವರು ನಾಪತ್ತೆಯಾದ ವರಾಗಿದ್ದಾರೆ. ಶನಿವಾರ ಮಧ್ಯಾಹ್ನ ಕೋಟಿಕುಳದಲ್ಲಿರುವ ಪತಿಯ ಮನೆಗೆ ಹೋಗುವುದಾಗಿ ತಿಳಿಸಿ ಶರಣ್ಯ ಮಕ್ಕ ಳನ್ನು ಕರೆದುಕೊಂಡು ಮನೆಯಿಂದ ಹೋಗಿದ್ದು ಅನಂತರ ಅವರು ನಾಪತ್ತೆ ಯಾಗಿರುವುದಾಗಿ ತಾಯಿ ಕಾಸರ ಗೋಡು ನಗರ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕುಂಬಳೆ ಪೇಟೆಯಲ್ಲಿ ಕಟ್ಟಿ ನಿಂತ ಮಳೆನೀರು: ಬಸ್ ಪ್ರಯಾಣಿಕರಿಗೆ ಸಂಕಷ್ಟ

ಕುಂಬಳೆ: ಬೇಸಿಗೆಯ ಮಳೆ ಬಿಸಿಗೆ ಅಲ್ಪ ತಂಪು ಎರಚಿದ ಮಧ್ಯೆ ಕುಂಬಳೆಯಲ್ಲಿ ನೀರು ಕಟ್ಟಿ ನಿಂತು ಸಮಸ್ಯೆ ಸೃಷ್ಟಿಯಾಗಿದೆ. ಕುಂಬಳೆ ಪೇಟೆಯಲ್ಲಿ ಬದಿಯಡ್ಕ, ಮುಳ್ಳೇರಿಯ, ಪೇರಾಲ್ ಕಣ್ಣೂರು ಭಾಗಗಳಿಗೆ ತೆರಳುವ ಬಸ್ ತಂಗುದಾಣದ ಬಳಿಯಲ್ಲೇ ನೀರು ಕಟ್ಟಿ ನಿಂತ ಕಾರಣ ಬಸ್‌ನವರಿಗೆ ಜನರನ್ನು ಇಳಿಸಲು, ಹತ್ತಿಸಲು ಸಮಸ್ಯೆಯಾಯಿತು. ರಸ್ತೆ ನಿರ್ಮಾಣದ ವೇಳೆ ಕೈಗೊಂಡ ಅವೈಜ್ಞಾನಿಕ ಚರಂಡಿಯಿಂದಾಗಿ ಮಳೆ ನೀರು ಇಲ್ಲಿ ಕಟ್ಟಿ ನಿಲ್ಲುತ್ತಿರುವುದಾಗಿ ಸ್ಥಳೀಯರು ದೂರುತ್ತಾರೆ. ಒಂದು ಮಳೆಗೆ ಈ ರೀತಿ ಸಮಸ್ಯೆ ಉಂಟಾದರೆ ಮಳೆಗಾಲದಲ್ಲಿ ಇಲ್ಲಿನ …

ಕಾಸರಗೋಡು, ಮಂಜೇಶ್ವರದಲ್ಲಿ ಐಕ್ಯರಂಗಕ್ಕೆ ಸುಲಭ ಜಯ- ಚೆನ್ನಿತ್ತಲ

ಕಾಸರಗೋಡು: ಮಂಜೇಶ್ವರ, ಕಾಸರಗೋಡು ವಿಧಾನಸಭಾ ಮಂಡಲಗಳಲ್ಲಿ ಐಕ್ಯರಂಗದ ಅಭ್ಯರ್ಥಿಗಳು ಸುಲಭದಲ್ಲಿ ಜಯಗಳಿಸುವರೆಂದು ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ನುಡಿದರು. ಪ್ರೆಸ್‌ಕ್ಲಬ್‌ನ ಮೀಟ್ ದ ಪ್ರೆಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಎರಡು ಮಂಡಲಗಳಲ್ಲಿ ಐಕ್ಯರಂಗಕ್ಕೆ ಯಾವುದೇ ಆತಂಕವಿಲ್ಲ. ರಾಜ್ಯದಲ್ಲಿ ಐಕ್ಯರಂಗ 100ಕ್ಕೂ ಹೆಚ್ಚು ಸೀಟು ಗಳಿಸಿ ಅಧಿಕಾರಕ್ಕೇರಲಿದೆ. ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ- ಬಿಜೆಪಿ ಮಧ್ಯೆ ಡೀಲ್ ಇದೆ. 2021ರ ಚುನಾವಣೆಯಲ್ಲಿ 60 ಮಂಡಲಗಳಲ್ಲಿ ಈ ರೀತಿಯ ಡೀಲ್ ನಡೆಸಲಾಗಿತ್ತು ಎಂದು ಚೆನ್ನಿತ್ತಲ ಆರೋಪಿಸಿದರು. ಕಲ್ಲಟ್ರ ಮಾಹಿನ್ ಹಾಜಿ, …

ತ್ಯಾಜ್ಯ ಉಪೇಕ್ಷೆ ಉಪಟಳ: ಶಾಂತಿಪಳ್ಳ- ಭಾಸ್ಕರನಗರ ರಸ್ತೆ ಬದಿ ನವೋದಯ ಫ್ರೆಂಡ್ಸ್ ಕ್ಲಬ್‌ನಿಂದ ಸೋಲಾರ್ ಕ್ಯಾಮರಾ ಸ್ಥಾಪನೆ

ಕುಂಬಳೆ: ಶಾಂತಿಪಳ್ಳದಿಂದ ಭಾಸ್ಕರನಗರ ವರೆಗಿರುವ ರಸ್ತೆ ಬದಿಯಲ್ಲಿ ತ್ಯಾಜ್ಯ ತಂದೆಸೆಯುವವರು ಇನ್ನು ಜಾಗ್ರತೆ ವಹಿಸದಿದ್ದರೆ ಸಮಸ್ಯೆಯಾಗಲಿದೆ. ರಸ್ತೆ ಬದಿಯಲ್ಲಿ ತ್ಯಾಜ್ಯವನ್ನು ಉಪೇಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ನವೋದಯ ಫ್ರೆಂಡ್ಸ್ ಕ್ಲಬ್ ಈ ಪರಿಸರದಲ್ಲಿ ಸೋಲಾರ್ ಕ್ಯಾಮರಾ ಸ್ಥಾಪಿಸಿದೆ. ಶಾಂತಿಪಳ್ಳದಿಂದ ಭಾಸ್ಕರನಗರ ವರೆಗಿರುವ ರಸ್ತೆ ಬದಿ ಕ್ಲಬ್ ಕ್ಯಾಮರಾ ಸ್ಥಾಪಿಸಿದ್ದು, ತ್ಯಾಜ್ಯ ತಂದೆಸೆಯುವವರು ಇದರಲ್ಲಿ ಸಿಕ್ಕಿ ಬೀಳುವ ಸಾಧ್ಯತೆ ಇದೆ. ರಸ್ತೆ ಬದಿಯನ್ನು ಕ್ಲಬ್‌ನವರು ಇತ್ತೀಚೆಗೆ ಶುಚಿಗೊಳಿಸಿದ್ದರು. ಅಲ್ಲದೆ ಎರಡು ಬಾರಿ ತ್ಯಾಜ್ಯ ತಂದೆಸೆಯುವವರನ್ನು ಸೆರೆ ಹಿಡಿದು ದಂಡ ವಸೂಲಿ ಮಾಡಲಾಗಿತ್ತು. …

ಬಿಸಿಲ ಬೇಗೆಯನ್ನು ಗಣನೆಗೆ ತೆಗೆಯದೆ ಅಭ್ಯರ್ಥಿಗಳ ಬಿರುಸಿನ ಮತಯಾಚನೆ

ಕಾಸರಗೋಡು: ಬಿರು ಬೇಸಿಗೆಯ ಬಿಸಿಲ ತಾಪವನ್ನು ಗಣನೆಗೆ ತೆಗೆಯದೆ ಅಭ್ಯರ್ಥಿಗಳು ಓಡಾಟದಲ್ಲಿ ನಿರತರಾಗಿದ್ದಾರೆ. ಎಂಡೋಸಲ್ಫಾನ್ ದುರಂತ ಮಳೆ ಸುರಿದ ಬದಿಯಡ್ಕ ಪಂಚಾಯತ್‌ನಲ್ಲಿ ಕಾಸರಗೋಡು ಮಂಡಲ ಐಕ್ಯರಂಗದ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಹಾಜಿ ಪ್ರಚಾರ ನಡೆಸಿದರು. ಕವಿ ಕಯ್ಯಾರ ಕಿಂಞಣ್ಣ ರೈಯವರ ಮನೆ, ಮಾನ್ಯ ಜೆಎಸ್‌ಬಿಎಸ್ ಶಾಲೆ, ಅಲ್ಲಿನ ಕೊರಗತನಿಯ ಸ್ಥಾನ ಸಹಿತ ಹಲವಾರು ಪ್ರಮುಖ ಕೇಂದ್ರಗಳನ್ನು ಅವರು ಸಂದರ್ಶಿಸಿ ಬದಿಯಡ್ಕ ಪೇಟೆಯ ಮಸೀದಿಯಲ್ಲಿ ಜುಮುಅ ನಿರ್ವಹಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು, ಮಾಹಿನ್ ಕೇಳೋಟ್, ಅನಸ್ ಎದ್ರುತೋಡು, ಶ್ಯಾಮ್ …

ಕನಿಲ ಶ್ರೀ ಭಗವತೀ ಕ್ಷೇತ್ರ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಜೇಶ್ವರ: ಕನಿಲ ಶ್ರೀ ಭಗವತೀ ಕ್ಷೇತ್ರ  ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಉದ್ಯಮಿ ಲಂಚುಲಾಲ್ ಬಿಡುಗಡೆಗೊಳಿಸಿದರು. ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಕಡಪ್ಪರ, ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್ ಕೆ.ಜೆ, ಕೋಶಾಧಿಕಾರಿ ಲಕ್ಷ್ಮಣ ಸಾಲಿಯಾನ್, ಕ್ಷೇತ್ರದ ಅಧ್ಯಕ್ಷ ವಿಶ್ವನಾಥ ಕುದ್ರು, ಪ್ರಧಾನ ಕಾರ್ಯದರ್ಶಿ ದೇವದಾಸ್ ವರ್ಕಾಡಿ, ಕೋಶಾಧಿಕಾರಿ ವಿಜಯ ಕನಿಲ, ಕ್ಷೇತ್ರದ ಆಚಾರಪಟ್ಟವರು, ಗುರಿಕ್ಕಾರರು ಉಪಸ್ಥಿತರಿದ್ದರು.

ಗೋಸಾಡ ಕ್ಷೇತ್ರದಲ್ಲಿ ಚಂಡಿಕಾಯಾಗ ಆಮಂತ್ರಣ ಪತ್ರಿಕೆ ಬಿಡುಗಡೆ

ಗೋಸಾಡ: ಗೋಸಾಡ ಶ್ರೀ ಮಹಿಷಮರ್ದಿನಿ ಕ್ಷೇತ್ರದಲ್ಲಿ ಮೇ 5, 6ರಂದು ಜರಗಲಿರುವ ಚಂಡಿಕಾಯಾಗ ಹಾಗೂ ವಿಶೇಷ ಮೂಡಪ್ಪಸೇವೆಯ ಆಮಂತ್ರಣ ಪತ್ರಿಕೆಯನ್ನು ನಿನ್ನೆ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು. ಕ್ಷೇತ್ರ ಸೇವಾ ಸಮಿತಿ ಉಪಾಧ್ಯಕ್ಷ ಪ್ರಭಾಕರ ರೈ ಮಠದಮೂಲೆ ಅಧ್ಯಕ್ಷತೆ ವಹಿಸಿದರು. ಉದ್ಯಮಿ ನಿತ್ಯಾನಂದ ಶೆಣೈ, ನಿವೃತ್ತ ಜಿಲ್ಲಾ ಮೆಡಿಕಲ್ ಆಫೀಸರ್ ರಾಮಚಂದ್ರ ಮಾರ್ಪನಡ್ಕ, ಉದ್ಯಮಿ ಶಂಕರನಾರಾ ಯಣ ಮಯ್ಯ, ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ ಪಾವೂರು, ಸೇವಾ ಸಮಿತಿ ಉಪಾಧ್ಯಕ್ಷ ಪ್ರಸಾದ ಮಣಿಯಾಣಿ ಗೋಸಾಡ, ಅರ್ಚಕ ರಾಘವೇಂದ್ರ ಚಡಗ, ಜನಜಾಗೃತಿ ವೇದಿಕೆ …

ಮಂಜೇಶ್ವರ ಐಕ್ಯರಂಗದ ಅಭ್ಯರ್ಥಿಯ ದ್ವಿತೀಯ ಹಂತದ ಪ್ರಚಾರ

ಮಂಜೇಶ್ವರ: ಐಕ್ಯರಂಗದ ಅಭ್ಯರ್ಥಿ ಎಕೆಎಂ ಅಶ್ರಫ್‌ರ ಚುನಾವಣಾ ಪ್ರಚಾರ ದ್ವಿತೀಯ ಹಂತ ಪೂರ್ತಿಗೊಳಿಸಿದೆ. ಮಂಜೇಶ್ವರ ಪಂಚಾಯತ್ ಐಕ್ಯರಂಗ ಸಮಾವೇಶಗಳು ಪೂರ್ತಿಗೊಂಡಿತು. ಸಮಾವೇಶವನ್ನು ಕರ್ನಾಟಕ ಕ್ಯಾಶ್ಯೂ ಬೋರ್ಡ್ ಅಧ್ಯಕ್ಷೆ ಮಮತಾ ಗಟ್ಟಿ ಉದ್ಘಾಟಿಸಿದರು. ಐಕ್ಯರಂಗದ ಪಂಚಾಯತ್ ಸಮಿತಿ ಅಧ್ಯಕ್ಷ ಅಸೀಸ್ ಹಾಜಿ ಅಧ್ಯಕ್ಷತೆ ವಹಿಸಿದರು. ಸಂಚಾಲಕ ಹನೀಫ್ ಪಡಿಂಞ್ಞಾರ್ ಸ್ವಾಗತಿಸಿದರು. ಮಂಜುನಾಥ ಆಳ್ವ, ಅಸೀಸ್ ಮರಿಕ್ಕೆ, ಸೋಮಶೇಖರ ಜೆ.ಎಸ್, ಡಿಎಂಕೆ ಮೊಹಮ್ಮದ್, ಲಕ್ಷ್ಮಣ ಪ್ರಭು, ಟಿ.ಎ. ಮೂಸಾ, ಎಂ. ಅಬ್ಬಾಸ್, ಎ.ಕೆ. ಆರಿಫ್, ಸೈಫುಲ್ಲಾ ತಂಙಳ್, ಹರ್ಷಾದ್ ವರ್ಕಾಡಿ,  …