ಮಂಜೇಶ್ವರದ ವಿವಿಧೆಡೆ ಕರ್ನಾಟಕ ಬಿಜೆಪಿ ಮುಖಂಡರಿಂದ ಮತ ಯಾಚನೆ

ಉಪ್ಪಳ: ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಕಾವು ಬಿರುಸುಗೊಂಡಿರುವAತೆ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ ಸುರೇಂದ್ರನ್‌ರ ಪರ ಪ್ರಚಾರಾರ್ಥವಾಗಿ ಕರ್ನಾಟಕದ ಬಿಜೆಪಿ ಮುಖಂಡರು ಮಂಜೇಶ್ವರ ಮಂಡಲದಲ್ಲಿ ನಿನ್ನೆ ವಿವಿಧೆಡೆ ಮತಯಾಚನೆ ನಡೆಸಿದರು. ಮಂಗಲ್ಪಾಡಿಯ ಹೇರೂರಿನಲ್ಲಿ, ಪೈವಳಿಕೆ ಪಂಚಾಯತ್‌ನ ತಾಳ್ತಾಜೆ ಪರಿಶಿಷ್ಟ ವರ್ಗದ ಕಾಲನಿಗೆ ಬಿಜೆಪಿ ಕಾರ್ಯಕರ್ತರ ಜೊತೆ ಕರ್ನಾಟಕ ಮಾಜಿ ಸಚಿವ ಅಂಗಾರ ಭೇಟಿ ಮಾಡಿ ಮತಯಾಚನೆ ನಡೆಸಿದರು. ಈ ವೇಳೆ ಪಂಚಾಯತ್ ಸದಸ್ಯ ರಾಮ ಏದಾರ್, ಗಣೇಶ ಚೇರಾಲು, ಕಾರ್ಯಕರ್ತರು ಉಪಸ್ಥಿತ …

ಐಕ್ಯರಂಗ ಪೈವಳಿಕೆ ಪಂಚಾಯತ್ ಚುನಾವಣಾ ಸಮಾವೇಶ

ಪೈವಳಿಕೆ: ವಿಧಾನಸಭಾ ಚುನಾ ವಣೆಯಲ್ಲಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಐಕ್ಯ ಪ್ರಜಾಪ್ರಭುತ್ವ ರಂಗದ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್‌ರ ವಿಜಯಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ದುಡಿಯಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯ ಸೋಮ ಶೇಖರ ಜೆ.ಎಸ್. ಹೇಳಿದರು. ಪೈವಳಿಕೆ ಪಂ. ಯು.ಡಿ. ಎಫ್. ಚುನಾವಣಾ ಸಮಾವೇಶ ಉದ್ಘಾ ಟಿಸಿ ಅವರು ಮಾತನಾಡಿದರು. ಯು.ಡಿ.ಎಫ್. ಪಂ. ಸಮಿತಿ ಚೆಯರ್‌ಮ್ಯಾನ್ ವಸಂತ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಯು.ಡಿ.ಎಫ್. ಕ್ಷೇತ್ರ ಸಂಚಾಲಕ ಆಸೀಸ್ ಮರಿಕ್ಕೆ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಡಿ.ಎಂ ಕೆ ಮೊಹಮ್ಮದ್, ಲಕ್ಷ್ಮಣ …

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ 32 ಮಂದಿ ಸ್ಪರ್ಧಾಕಣದಲ್ಲಿ

ಕಾಸರಗೋಡು: ವಿಧಾನಸಭಾ ಚುನಾವಣೆಯ ಜಿಲ್ಲೆಯ 5 ಮಂಡಲಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆ ೩೨ಕ್ಕೆ ಸೀಮಿತಗೊಂಡಿದೆ. ನಿನ್ನೆ ನಾಮಪತ್ರ ಹಿಂತೆಗೆಯಲು ಕೊನೆಯ ದಿನವಾಗಿದ್ದು, ಆ ಬಳಿಕ ಸ್ಪರ್ಧಾಕಣದಲ್ಲಿ 32 ಮಂದಿ ಉಳಿದುಕೊಂಡಿದ್ದಾರೆ. ಅತ್ಯಂತ ಹೆಚ್ಚು ಮಂದಿ ಸ್ಪರ್ಧಾಕಣದಲ್ಲಿ ಇರುವುದು ಮಂಜೇಶ್ವರ ಮಂಡಲದಲ್ಲಾಗಿದೆ. ಇಲ್ಲಿ 11 ಮಂದಿ ಸ್ಪರ್ಧಾಳುಗಳಿದ್ದರೆ, ಕಾಞಂಗಾಡ್ ಮಂಡಲದಲ್ಲಿ ಅತ್ಯಂತ ಕಡಿಮೆ (4) ಸ್ಪರ್ಧಾಳುಗಳಿದ್ದಾರೆ. ಮಂಜೇಶ್ವರದಲ್ಲಿ ಮೂರು ಮಂದಿ ನಾಮಪತ್ರ ಹಿಂತೆಗೆದಿದ್ದಾರೆ. ಎಸ್‌ಡಿಪಿಐಯ ಅಭ್ಯರ್ಥಿ ಕೆ.ಎಂ. ಅಶ್ರಫ್, ಸ್ವತಂತ್ರ ಅಭ್ಯರ್ಥಿಗಳಾದ ಮುಹಮ್ಮದ್ ರಫೀಕ್, ಎನ್. ಕೇಶವ ನಾಯಕ್ …

ಎಸ್‌ಪಿನಗರ- ಹಿದಾಯತ್‌ನಗರ ರಸ್ತೆ ನವೀಕರಣೆ: ಧೂಳಿನ ಸಮಸ್ಯೆಗೆ ಪರಿಹಾರ ಡಾಮರೀಕರಣಕ್ಕೆ ಚಾಲನೆ

ವಿದ್ಯಾನಗರ: ಊರಿನಲ್ಲಿ ಉಂಟಾಗಿರುವ ಧೂಳಿನ ಸಮಸ್ಯೆಗೆ ಮೋಕ್ಷ ಉಂಟಾಯಿತು. ಎಸ್‌ಪಿನಗರ- ಹಿದಾಯತ್‌ನಗರ- ಕೋಪ ರಸ್ತೆ ಡಾಮರೀಕರಣ ಆರಂಭಗೊಂಡಿತು. ನವೀಕರಣೆಗಾಗಿ ಅಗೆದು ಹಾಕಿದ್ದ ರಸ್ತೆಯ ಕಾಮಗಾರಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಧೂಳಿನ ಸಮಸ್ಯೆಯಿಂದ ಜನರಿಗೆ  ತೊಂದರೆಯಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯೂ ಪ್ರಕಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಈಗ ಡಾಮರೀಕರಣದ ಕೆಲಸ ಆರಂಭಿಸಲಾಗಿದೆ. ವಾಹನಗಳು ಸಾಗುವಾಗ ಏಳುವ ಕಗ್ಗಲ್ಲಿನ ಹುಡಿಯ ಸಮಸ್ಯೆ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ವಾಸಿಸುತ್ತಿದ್ದವರಿಗೆ ಶ್ವಾಸ ಸಮಸ್ಯೆ, ಕಣ್ಣಿನ ಸಮಸ್ಯೆ, ರೋಗಾಣುಬಾಧೆ ಮೊದಲಾದ ಹಲವಾರು ಆರೋಗ್ಯ ಸಮಸ್ಯೆಗಳು ಕಂಡು …

ಗೋವಾದಲ್ಲಿ ವಾಹನ ಅಪಘಾತ: ನೀರ್ಚಾಲಿನ ಎಂಬಿಎ ವಿದ್ಯಾರ್ಥಿ ಮೃತ್ಯು

ನೀರ್ಚಾಲು: ಗೋವಾದಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ನೀರ್ಚಾಲು ಬಳಿಯ ಮಲ್ಲಡ್ಕ ನಿವಾಸಿ ವಿದ್ಯಾರ್ಥಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮಲ್ಲಡ್ಕ ನಿವಾಸಿ ನಿವೃತ್ತ ಶಿಕ್ಷಕ ವೀರೇಶ್ವರ ಕರ್ಮಲ್ಕರ್ ಎಂಬವರ ಪುತ್ರ ಪ್ರಜ್ವಲ್ ಕರ್ಮಲ್ಕರ್ (೨೬) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಗೋವಾದಲ್ಲಿ ಎಂಬಿಎ ವಿದ್ಯಾರ್ಥಿಯಾಗಿದ್ದರು. ಕಳೆದ ಸೋಮವಾರ ಇವರು ಚಲಾಯಿಸಿದ ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ತಂದೆ, ತಾಯಿ ಅನ್ನಪೂರ್ಣೇಶ್ವರಿ (ಶಿಕ್ಷಕಿ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಹೊಯ್ಗೆ ಮಾಫಿಯಾಗಳ ವಿರುದ್ಧ ಕಾಪಾ ಪ್ರಕಾರ ಕೇಸು ದಾಖಲಿಸಿ ಗಡಿಪಾರು -ಪೊಲೀಸ್ ಮುನ್ನೆಚ್ಚರಿಕೆ

ಕುಂಬಳೆ:  ಹೊಯ್ಗೆ ಸಾಗಾಟ ಮಾಫಿಯಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ಮುನ್ನಚ್ಚರಿಕೆ ನೀಡಿದ್ದಾರೆ. ಇದರಂತೆ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುವವರನ್ನು ಸೆರೆಹಿಡಿದು ಅವರ ವಿರುದ್ಧ ಕಳವು ಹಾಗೂ ಕಾಪಾ ಪ್ರಕರಣ ದಾಖಲಿಸಿ ಗಡಿಪಾರು ನಡೆಸಲಾಗುವುದು. ಗಡಿಪಾರು ಉಲ್ಲಂಘಿಸಿದಲ್ಲಿ  ಎರಡು ವರ್ಷ ವರೆಗೆ ಜೈಲು ಶಿಕ್ಷೆ ಲಭಿಸಬಹುದಾದ ಆರೋಪ ಹೊರಿಸಿ ಕೇಸು ದಾಖಲಿಸಲಾಗುವುದೆಂದು  ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ಬೈಜು ಕೆ ಥೋಮಸ್, ಎಸ್‌ಐಗಳಾದ ಕೆ. ಸನಿತ್, ಅನಂತಕೃಷ್ಣನ್ ಆರ್ ಮೆನೋನ್ ತಿಳಿಸಿದ್ದಾರೆ. ಹೊಳೆಗಳಿಂದ  ಅನಧಿಕೃತವಾಗಿ ಹೊಯ್ಗೆ …

ಬಿರು ಬೇಸಿಗೆಯಲ್ಲೂ ಸಮೃದ್ಧ ಜಲವಿರುವ ಕಾಡಾಯಿಕುಳಂ ಸಂರಕ್ಷಣೆಗೆ ಅಧಿಕೃತರಿಂದ ನಿರಾಸಕ್ತಿ

ಕಾಸರಗೋಡು: ಬಿರು ಬೇಸಿಗೆಯಲ್ಲೂ ಮೊಗ್ರಾಲ್ನ ಕಾಡಾಯಿಕುಳಂ ಜಲಸಮೃದ್ಧಿ ಯಲ್ಲಿದೆ. ಕೊಳವನ್ನು ಅಧಿಕೃತರು ಕೈ ಬಿಟ್ಟ ಕಾರಣ ಇದರ ನೀರಿನಲ್ಲಿ ಈಗ ಹಾವಸೆ ಹಾಗೂ ಸಸ್ಯಗಳು ಬೆಳೆದು ಕಾಡು ಆವರಿಸಿಕೊಂಡಿದೆ. ಮೊಗ್ರಾಲ್ ಶಾಲೆ ಬಳಿಯ ಜಲಸಮೃದ್ಧವಾದ ಕಾಡಾಯಿಕುಳಂ ನಾಶವಾಗುತ್ತಿದೆ. ಕಳೆದ ಮೂರು ದಶಕಗಳ ಮಧ್ಯೆ ಈ ಕೊಳವನ್ನು ಸಂರಕ್ಷಿಸಲು ಜಿಲ್ಲಾ ಪಂಚಾಯತ್ ಹಲವಾರು ಯೋಜನೆಗಳನ್ನು ಆವಿಷ್ಕರಿಸಿತ್ತು. ಅದರಲ್ಲಿ ಕೆಲವು ಯೋಜನೆಯಲ್ಲಿಯೇ ಕೊನೆಗೊಂಡಿತ್ತು. ಕೆಲವು ಆರಂಭಗೊಂಡರೂ ಮುಂದುವರಿ ಯಲಿಲ್ಲ. ಕಳೆದ ವರ್ಷ ಜಿಲ್ಲಾ ಪಂಚಾಯತ್ ಕಿರು ನೀರಾವರಿ ಇಲಾಖೆ ಅಧಿಕಾರಿಗಳನ್ನು …

ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದು ಕಂದಕಕ್ಕೆ ಮಗುಚಿಬಿದ್ದ ವ್ಯಾನ್: ಚಾಲಕನನ್ನು ಅಪಾಯದಿಂದ ರಕ್ಷಿಸಿದ ನಾಗರಿಕರು 

ಬದಿಯಡ್ಕ: ನಿಯಂತ್ರಣ ತಪ್ಪಿದ ಓಮ್ನಿ ವ್ಯಾನ್ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಬಳಿಕ 12 ಅಡಿ ಆಳದ ಕಂದಕಕ್ಕೆ ಮಗುಚಿಬಿದ್ದಿದೆ.  ದೀರ್ಘ ಹೊತ್ತು ವ್ಯಾನ್‌ನಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ನಾಗರಿಕರು ಅತೀ ಸಾಹಸಿಕವಾಗಿ  ರಕ್ಷಿಸಿದ್ದಾರೆ. ಬದಿಯಡ್ಕ ವಿದ್ಯಾಗಿರಿ ಬಜದ ಸತ್ಯನಾರಾಯಣ ಭಟ್ (70)  ಎಂಬವರನ್ನು ನಾಗರಿಕರು ರಕ್ಷಿಸಿದ್ದಾರೆ. ಬಳಿಕ  ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ 7 ಗಂಟೆ ವೇಳೆ  ವಿದ್ಯಾಗಿರಿ ನವಕಾನ ಎಂಬಲ್ಲಿ ಅಪಘಾತವುಂಟಾ ಗಿದೆ.   ಶುಗರ್ ತಪಾಸಣೆಗಾಗಿ ಸತ್ಯನಾರಾ ಯಣ ಭಟ್   …

ಹೊಳೆಯಿಂದ ಅನಧಿಕೃತ ಹೊಯ್ಗೆ ಸಾಗಾಟ ವಿರುದ್ಧ ಕಠಿಣ ಕ್ರಮ: ಪಾಚಾಣಿಯಿಂದ ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿ ವಶ; ಇಬ್ಬರ ಬಂಧನ; ಕಳವು ಪ್ರಕರಣ ದಾಖಲು

ಕುಂಬಳೆ: ಹೊಳೆಯಿಂದ ಅನಧಿಕೃತವಾಗಿ ಸಂಗ್ರಹಿಸಿದ ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಲಾರಿಯ ಚಾಲಕ ಚೇಪಿನಡ್ಕ ಮದೀನ ಮಂಜಿಲ್‌ನ ಮೊಯ್ದೀನ್ ಕುಂಞಿ (32) ಹಾಗೂ ಮಾಲಕ ವಳಯಂನ ಕಬೀರ್ (44) ಎಂಬಿವರನ್ನು ಬಂಧಿಸಲಾಗಿದೆ. ಈ ಪೈಕಿ ಮೊಯ್ದೀನ್ ಕುಂಞಯನ್ನು ನ್ಯಾಯಾಲಯಕ್ಕೆ ಹಾಜರುಪಡಿ ಸಿದ್ದು, ಈ ವೇಳೆ ಈತನಿಗೆ ರಿಮಾಂಡ್ ವಿಧಿಸಲಾಗಿದೆ. ಕಬೀರ್‌ನನ್ನು ಇಂದು  ನ್ಯಾಯಾ ಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ಮುಗುರೋಡ್ ಪಾಚಾಣಿಯ ಹೊಳೆ ಯಿಂದ ಅನಧಿಕೃತವಾಗಿ ಸಂಗ್ರಹಿಸಿದ …

ಮದ್ಯದಮಲಿನಲ್ಲಿ ಚಲಾಯಿಸಿದ ಕಾರು ನಿಲ್ಲಿಸಿದ್ದ ಸ್ಕೂಟರ್‌ಗೆ ಢಿಕ್ಕಿ: ಸವಾರ ಸಹಿತ ಮೂವರಿಗೆ ಗಾಯ

ಉಪ್ಪಳ: ಮದ್ಯದಮಲಿನಲ್ಲಿ ಚಲಾಯಿಸಿದ ಕಾರು ನಿಯಂತ್ರಣ ತಪ್ಪಿ ನಿಲ್ಲಿಸಿದ್ದ  ಸ್ಕೂಟರ್‌ಗೆ ಢಿಕ್ಕಿ ಹೊಡೆದಿದ್ದು, ಇದರಿಂದ ಸವಾರ ಸಹಿತ ಮೂರು ಮಂದಿ ಗಾಯಗೊಂಡ ಘಟನೆ ನಿನ್ನೆ ರಾತ್ರಿ ಮಜಿಬೈಲು ಜಂಕ್ಷನ್‌ನಲ್ಲಿ ನಡೆದಿದೆ.  ಮಜಿಬೈಲು ನಿವಾಸಿಗಳಾದ ದಯಾನಂದ (37), ಕೃಷ್ಣ ಕುಮಾರ್ (29), ಸುಧಾಕರ (51) ಎಂಬವರು ಗಾಯಗೊಂಡಿದ್ದಾರೆ. ಈ ಪೈಕಿ ದಯಾನಂದರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮತ್ತಿಬ್ಬರು ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಕಾರು ಚಾಲಕನಾದ ಶಿರಂತಡ್ಕ ಚಿಪ್ಪಾರು ಅಮ್ಮೇರಿಯ ಶಹಾದ್ ಬಿ (40) ಎಂಬಾತನನ್ನು ಮಂಜೇಶ್ವರ …