ಮಗಳ ಮದುವೆ ಕಳೆದು ಮೂರನೇ ದಿನ ತಂದೆ ಹೃದಯಾಘಾತದಿಂದ ನಿಧನ

ಪೆರ್ಲ: ಮಗಳ ಮದುವೆ ಕಳೆದು ಮೂರನೇ ದಿನ ತಂದೆ ಹೃದಯಾಘಾತ ದಿಂದ ನಿಧನಹೊಂದಿದ ಘಟನೆ ನಡೆದಿದೆ. ಮೂಲತಃ ಮಣಿಯಂಪಾರೆ ಸರ್ವೆ ನಿವಾಸಿಯೂ ಪ್ರಸ್ತುತ ಉಕ್ಕಿನಡ್ಕ ಮಸೀದಿ ಬಳಿ ವಾಸಿಸುವಸಾದಿಕ್ ಸರ್ವೆ (55) ಎಂಬವರು ಮೃತಪಟ್ಟ ವ್ಯಕ್ತಿ.  ನಿನ್ನೆ ರಾತ್ರಿ ಊಟಮಾಡಿ ಮನೆಯವ ರೊಂದಿಗೆ ಮಾತನಾಡುತ್ತಾ ಕುಳಿತಿದ್ದಾಗ ಸಾದಿಕ್‌ರಿಗೆ ಎದೆನೋವು  ಅನುಭವ ಗೊಂಡಿತ್ತೆನ್ನಲಾಗಿದೆ.  ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಈ ತಿಂಗಳ ೩ರಂದು ಪುತ್ರಿ ಡಾ| ಸರ್ಫುನ್ನಿಸಾರ ಮದುವೆ ನಡೆದಿತ್ತು. ಇದರ ಬೆನ್ನಲ್ಲೇ ತಂದೆ ನಿಧನಹೊಂದಿರುವುದು …

ತಾಯಿಯೊಂದಿಗೆ ನಡೆದು ಹೋಗುತ್ತಿದ್ದ ಮಗು ಬೈಕ್ ಢಿಕ್ಕಿ ಹೊಡೆದು ಮೃತ್ಯು

ಕೊಚ್ಚಿ: ತಾಯಿಯೊಂದಿಗೆ ನಡೆದು ಹೋಗುತ್ತಿದ್ದ ೪ರ ಹರೆಯದ ಮಗು ಇಲೆಕ್ಟ್ರಿಕ್ ಬೈಕ್ ಢಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮುಳಂಕಾಡ್-  ಪೊನ್ನಾರಿಮಂಗಲ ಪಡನ್ನ ಎಂಬಲ್ಲಿನ ಧನೀಶ್ ಎಂಬವರ ಪುತ್ರಿ ಮೇಧ ಧನೀಶ್ ಮೃತಪಟ್ಟ ಮಗುವಾಗಿದೆ. ತಾಯಿ ಮಿಥುನ ಹಾಗೂ ನೆರೆಮನೆಯ ನಿವಾಸಿಯಾದ ರೇಖಾ ಎಂಬಿವರೊಂದಿಗೆ  ಮಗು ನಡೆದು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬಂದ ಇಲೆಕ್ಟ್ರಿಕ್ ಬೈಕ್ ಅವರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಗಾಯಗೊಂಡ ಮೇಧ,  ಮಿಥುನ ಹಾಗೂ  ರೇಖಾರನ್ನು ಆಸ್ಪತ್ರೆಗೆ ತಲುಪಿಸಲಾಯಿತು. ತಲೆಗೆ ಗಂಭೀರ ಗಾಯಗೊಂಡ …

ಮಲತ್ಯಾಜ್ಯ ತಂದು ಹೊಳೆಗೆ: ಪೊಸೋಟು ಹೊಳೆಯ ನೀರು ಮಲಿನ; ಆರೋಗ್ಯ ಸಮಸ್ಯೆ ಭೀತಿ

ಮಂಜೇಶ್ವರ: ಪೊಸೋಟು ಹೊಳೆ ಕಸದ ತೊಟ್ಟಿಯಾಗಿ ಮಾರ್ಪಡುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಆತಂಕ ಮೂಡಿಸಿದೆ. ಜನಸಂದಣಿ ಇಲ್ಲದ ಸಮಯ ನೋಡಿ ಸೆಪ್ಟಿಕ್ ಟ್ಯಾಂಕ್‌ಗಳಿAದ ಸಂಗ್ರಹಿಸಿದ ತ್ಯಾಜ್ಯವನ್ನು ಟ್ಯಾಂಕರ್‌ಗಳ ಮೂಲಕ ತಂದು ನೇರವಾಗಿ ಹೊಳೆಗೆ ಸುರಿಯಲಾಗುತ್ತಿದೆ ಎಂಬ ಗಂಭೀರ ದೂರುಗಳು ಕೇಳಿಬಂದಿವೆ.ಕೇವಲ ಮಲತ್ಯಾಜ್ಯ ಮಾತ್ರವಲ್ಲದೆ, ಕೋಳಿ ಮತ್ತು ದನದ ಮಾಂಸ ತ್ಯಾಜ್ಯಗಳನ್ನು ಕೂಡ ಇಲ್ಲಿ ಎಸೆಯಲಾಗುತ್ತಿದೆ. ಇದರಿಂದಾಗಿ ಇಡೀ ಪರಿಸರ ದುರ್ನಾತದಿಂದ ಕೂಡಿದ್ದು, ಈ ಭಾಗದ ಸುಮಾರು 60ಕ್ಕೂ ಹೆಚ್ಚು ಕುಟುಂಬಗಳು ಸಾಂಕ್ರಾಮಿಕ ರೋಗ ಭೀತಿಯನ್ನು ಎದುರಿಸುತ್ತಿದ್ದಾರೆ. …

ವಿದ್ಯುನ್ಮಾನ ಮತಯಂತ್ರಗಳಿಗೆ ಇನ್ನು ಕಲೆಕ್ಟ್ರೇಟ್‌ನ ಭದ್ರತಾ ಕೊಠಡಿಯಲ್ಲಿ ನಿದ್ದೆ

ಕಾಸರಗೋಡು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಮತದಾನಕ್ಕಾಗಿ ಉಪ ಯೋಗಿಸಿದ ವಿದ್ಯುನ್ಮಾನ ಮತಯಂತ್ರ ಗಳನ್ನು ಕಲೆಕ್ಟ್ರೇಟ್‌ನ ಭದ್ರತಾ ಕೊಠಡಿಗೆ ತಲುಪಿಸಲಾಗಿದೆ. ಮೇ 4ರಂದು ನಡೆದ ಮತ ಎಣಿಕೆಯ ಬಳಿಕ ವಿವಿಧ ಮತ ಎಣಿಕೆ ಕೇಂದ್ರಗಳಿಂದ ಪೊಲೀಸರ ಬಿಗು ಕಾವಲಿನೊಂದಿಗೆ ಕಲೆಕ್ಟ್ರೇಟ್‌ನ ಭದ್ರತಾ ಕೊಠಡಿಗೆ ಈ ಯಂತ್ರಗಳನ್ನು ತಲುಪಿಸ ಲಾಯಿತು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇವಿಎಂಗಳು ಕಲೆಕ್ಟ್ರೇಟ್‌ನ ವೇರ್ ಹೌಸ್‌ನಲ್ಲಿ ಸ್ವೀಕರಿಸಿ ತೆಗೆದಿರಿಸಲಾ ಯಿತು. ಎಲ್ಲಾ ಮಂಡಲಗಳ ಮತಯಂ ತ್ರಗಳು ಸೇರಿ ಒಟ್ಟು 1126 ಬ್ಯಾಲೆಟ್ ಯೂನಿಟ್‌ಗಳು, 1136 …

ವಾಣಿಜ್ಯ ಅಡುಗೆ ಅನಿಲ ಬೆಲೆ ಹೆಚ್ಚಳ: ಕುಂಬಳೆಯಲ್ಲಿ ಕೆಎಚ್‌ಆರ್‌ಎಯಿಂದ ಪಂಜಿನ ಮೆರವಣಿಗೆ

ಕುಂಬಳೆ: ವಾಣಿಜ್ಯ ಅಗತ್ಯ ಗಳಿಗಾಗಿರುವ ಗ್ಯಾಸ್ ಸಿಲಿಂಡರ್‌ನ ಬೆಲೆ ಹೆಚ್ಚಿಸಿದ ಕೇಂದ್ರ ಸರಕಾರದ ನಿಲುವನ್ನು ಪ್ರತಿಭಟಿಸಿ ಕೇರಳ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ಕುಂಬಳೆ ಯೂನಿಟ್ ಘಟಕ ಕುಂಬಳೆಯಲ್ಲಿ ಪಂಜಿನ ಮೆರವಣಿಗೆ ನಡೆಸಿತು. ಈ ವೇಳೆ ಮಾತನಾಡಿದ ಕೆಎಚ್‌ಆರ್‌ಎ ಜಿಲ್ಲಾ ಕಾರ್ಯದರ್ಶಿ ಬಿಜು ಚುಳ್ಳಿಕ್ಕರ ಸಿಲಿಂಡರ್‌ನ ಅಪರಿಮಿತ ಬೆಲೆ ಹೆಚ್ಚಳದಿಂದ ಹೋಟೆಲ್ ಆಹಾರ ಪದಾರ್ಥಗಳಿಗೆ ಬೆಲೆ ಹೆಚ್ಚಿಸಬೇಕಾದ ಸನ್ನಿವೇಶವಿದೆ ಎಂದು ಕೇಂದ್ರ ಸರಕಾರದ ಈ ನಿಲುವನ್ನು ಪ್ರತಿಭಟಿಸಿ ಹೋಟೆಲ್‌ಗಳನ್ನು ಮುಚ್ಚುವಂತಹ ಪ್ರತಿಭಟನೆಗಳನ್ನು ನಡೆಸಲಾಗುವುದೆಂದು ತಿಳಿಸಿದರು. ಪಂಜಿನ ಮೆರವಣಿಗೆಯನ್ನು …

ಕಾರು ಸ್ಕೂಟರ್‌ಗೆ ಢಿಕ್ಕಿ: ಮೋಟಾರ್ ವಾಹನ ಇಲಾಖೆ ಅಧಿಕಾರಿ ಮೃತ್ಯು

ತಿರುವನಂತಪುರ: ಕಾರು ಸ್ಕೂಟರ್‌ಗೆ ಢಿಕ್ಕಿ ಹೊಡೆದು ಮೋಟಾರ್ ವಾಹನ ಇಲಾಖೆ ಅಧಿಕಾರಿ ಮೃತಪಟ್ಟರು. ಕಲ್ಲಿಯೂರ್ ಪೆರಿಂಙಮಲ ಸಾಫಲ್ಯ ನಿವಾಸಿ ಎಸ್. ಮಧು (42) ಮೃತಪಟ್ಟವರು. ವಳುದಕ್ಕಾಡ್ ಟ್ರಾನ್ಸ್‌ಪೋರ್ಟ್ ಕಮಿಷನರೇಟ್‌ನ ನೌಕರನಾಗಿದ್ದಾರೆ. ವಿಳಿಂಞ ಭಾಗದಿಂದ ಬಾಲರಾಮಪುರ ಭಾಗಕ್ಕೆ ತೆರಳುತ್ತಿದ್ದ ಕಾರು ಮುಂಭಾಗದಿಂದ ಬಂದ ಸ್ಕೂಟರ್‌ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಢಿಕ್ಕಿಯ ಆಘಾತಕ್ಕೆ ರಸ್ತೆಗೆ ಬಿದ್ದ ಮಧು ಅವರ ತಲೆಗೆ ಹಾಗೂ ಇತರ ಭಾಗಗಳಿಗೆ ಗಂಭೀರ ಗಾಯವುಂಟಾಗಿತ್ತು. ಕೂಡಲೇ ಆಂಬುಲೆನ್ಸ್‌ನಲ್ಲಿ ಕೊಂಡೊಯ್ದು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. …

ಅಲ್ಟ್ರಾ ವಯಲೆಟ್ ರಶ್ಮಿ: ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಕರೆ

ಕಾಸರಗೋಡು: ಸತತವಾಗಿ ಹೆಚ್ಚು ಸಮಯ ಅಲ್ಟ್ರಾವಯಲೆಟ್ ಕಿರಣಗಳು ದೇಹಕ್ಕೆ ತಗಲುವುದು ಸೂರ್ಯಾಘಾತ ಹಾಗೂ ಚರ್ಮ ರೋಗಗಳಿಗೆ, ನೇತ್ರ ರೋಗಗಳಿಗೆ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದೆಂದು ಮುನ್ನೆಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರು ಸುರಕ್ಷಾ ಮುನ್ನೆಚ್ಚರಿ ಕೆಗಳನ್ನು ಸ್ವೀಕರಿಸಬೇಕಾಗಿದೆ. ಬೆಳಿಗ್ಗೆ 10ರಿಂದ ಸಂಜೆ 3 ಗಂಟೆವರೆಗಿನ ಸಮಯಗಳಲ್ಲಿ ಗರಿಷ್ಠ ಅಲ್ಟ್ರಾ ವಯಲೆಟ್ ಕಿರಣಗಳು ದಾಖಲಾಗುತ್ತಿದ್ದು, ಈ ಸಮಯಗಳಲ್ಲಿ ಹೆಚ್ಚು ಹೊತ್ತು ದೇಹಕ್ಕೆ ನೇರವಾಗಿ ಸೂರ್ಯಪ್ರಕಾಶ ಸ್ಪರ್ಶಿಸುವುದನ್ನು ಹೊರತುಪಡಿಸಬೇಕು. ಹೊರಗೆ ಕೆಲಸ ಮಾಡುವವರು, ಸಮುದ್ರದಲ್ಲಿ,  ಒಳನಾಡು ಮೀನುಗಾರಿಕೆಗಳಲ್ಲಿ ಏರ್ಪಟ್ಟಿರುವ ಮೀನು ಕಾರ್ಮಿಕರು, …

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಿಣರಾಯಿ ವಿಜಯನ್

ತಿರುವನಂತಪುರ: ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಎಡರಂಗ ಹೀನಾಯವಾಗಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ವಿಶೇಷ ಧೂತರೋರ್ವರ ಮೂಲಕ ಪಿಣರಾಯಿ ವಿಜಯನ್ ರಾಜ್ಯಪಾಲ  ರಾಜೇಂದ್ರ ಅರ್ಲೇಕರ್‌ರಿಗೆ ಕಳುಹಿಸಿಕೊಟ್ಟಿದ್ದು ಅದನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಮಾತ್ರವಲ್ಲ  ನೂತನ ಸರಕಾರ ರಚನೆಯಾಗುವ ತನಕ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ  ಪಿಣರಾಯಿ ವಿಜಯನ್‌ರಿಗೆ ರಾಜ್ಯಪಾಲರು ನಿರ್ದೇಶ ನೀಡಿದ್ದಾರೆ.

ಸಿನಿಮಾ ನಟ ಸಂತೋಷ್ ಕೆ. ನಾಯರ್ ವಾಹನ ಅಪಘಾತದಲ್ಲಿ ಮೃತ್ಯು

ಪತ್ತನಂತಿಟ್ಟ: ಸಿನಿಮಾ ಸೀರಿಯಲ್ ನಟ ಸಂತೋಷ್ ಕೆ. ನಾಯರ್ (66) ವಾಹನ ಅಪಘಾತದಲ್ಲಿ ಮೃತಪಟ್ಟರು. ಎಂ.ಸಿ.ರಸ್ತೆಯಲ್ಲಿ ಇಂದು ಬೆಳಿಗ್ಗೆ ಅಪಘಾತ ಸಂಭವಿಸಿದೆ. ಸಂತೋಷ್ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಎದುರಿನಿಂದ ಆಗಮಿಸುತ್ತಿದ್ದ ಪಾರ್ಸಲ್ ಲಾರಿಗೆ ಢಿಕ್ಕಿ ಹೊಡೆದಿದೆ. ಕೂಡಲೇ ಅಡೂರಿನ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಚಿಕಿತ್ಸೆ ಮಧ್ಯೆ ಮೃತಪಟ್ಟರು. ಕಾರಿನಲ್ಲಿ ಜೊತೆಗಿದ್ದ ಪತ್ನಿ ಶುಭಶ್ರೀ, ಪಾರ್ಸಲ್ ಲಾರಿ ಚಾಲಕ ಸುಧೀಶ್ ಎಂಬಿವರಿಗೂ ಗಾಯಗಳುಂ ಟಾಗಿದ್ದು ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಸಂತೋಷ್‌ರ ಕೊನೆಯ ಸಿನಿಮಾವಾಗಿದೆ …

ಬಿಜೆಪಿ ಕಾರ್ಯಕರ್ತನನ್ನು ತಡೆದು ನಿಲ್ಲಿಸಿ ಹಲ್ಲೆ: 10 ಮಂದಿ ವಿರುದ್ಧ ಕೇಸು

ಕಾಸರಗೋಡು:  ಬಿಜೆಪಿ ಕಾರ್ಯಕರ್ತನನ್ನು ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿಯೂ, ಬಿಯರ್ ಬಾಟ್ಲಿಯಿಂದ ಹೊಡೆದು ಬೈಕ್‌ಗೆ ಹಾನಿ ಉಂಟುಮಾಡಿರುವುದಾಗಿ ದೂರಲಾಗಿದೆ. ಪೂಚಕ್ಕಾಡ್ ಪುದಿಯಪುರದ ಪಿ. ಹರೀಶ್ ಕುಮಾರ್ (36)ರ ಮೇಲೆ  ಹಲ್ಲೆಗೈಯ್ಯಲಾಗಿದೆ. ಈ ಘಟನೆಗೆ ಸಂಬಂಧಿಸಿ ಮುಕ್ಕೋಡ್‌ನ ಅಬ್ದುಲ್ ರಹ್ಮಾನ್, ವಾಜಿದ್, ಮೊಯ್ನು, ರಫೀಕ್ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಆರು ಮಂದಿ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ಸಂಜೆ 5 ಗಂಟೆ ವೇಳೆ ಘಟನೆ ನಡೆದಿದೆ. ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ಹರೀಶ್ ಕುಮಾರ್‌ರನ್ನು ಪೂಚಕ್ಕಾಡ್‌ನಲ್ಲಿ ತಂಡ ತಡೆದು …