ಎಂ.ಎಲ್. ಅಶ್ವಿನಿ ಇಂದು ಬದಿಯಡ್ಕದಲ್ಲಿ ಮನೆಗಳಿಗೆ ಭೇಟಿ ನೀಡಿ ಮತ ಯಾಚನೆ

ಬದಿಯಡ್ಕ: ಕಾಸರಗೋಡು ಮಂಡಲದ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಇಂದು ಬದಿಯಡ್ಕ ಪಂಚಾಯತ್‌ನಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿಯ  ಸಕ್ರಿಯ ಕಾರ್ಯಕರ್ತನೂ, ಪಂ. ಮಾಜಿ ಉಪಾಧ್ಯಕ್ಷರಾದ ಗಣೇಶಾನಂದ ಆಳ್ವರ ಮನೆಗೆ  ಭೇಟಿ ನೀಡಿದ ಅಶ್ವಿನಿ ಅವ ರಿಂದ ಆಶೀರ್ವಾದ ಪಡೆದ ಬಳಿಕ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಆರಂಭಿಸಿ ದ್ದಾರೆ.  ಪಂಚಾಯತ್ ಅಧ್ಯಕ್ಷ ಡಿ. ಶಂಕರ, ಸೂರ್ಯಪ್ರಕಾಶ್ ಶೆಟ್ಟಿ, ಸುಕುಮಾರ ಕುದ್ರೆಪ್ಪಾಡಿ, ಮೋಹನ್ ದಾಸ್ ರೈ, ಮೋಹನ, ಸುರೇಶ್, ಮನ್ವಿತ್ ಎಂಬಿವರು ಅಭ್ಯರ್ಥಿಯೊಂದಿಗಿದ್ದರು.

 ಜಿಲ್ಲಾ ಸಹಕಾರಿ ಆಸ್ಪತ್ರೆಗಳಲ್ಲಿ ಇ.ವಿ ಚಾರ್ಜಿಂಗ್ ಸ್ಟೇಶನ್ ಉದ್ಘಾಟನೆಗೆ ಸಜ್ಜು

ಕುಂಬಳೆ: ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘದ ಆಶ್ರಯದಲ್ಲಿ  ಸೌರ ಶಕ್ತಿ ನಿರ್ಮಿತ ಇಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಶನ್ ಉದ್ಘಾಟನೆಗೆ ಸಿದ್ಧವಾಗಿದೆ. ಜಿಲ್ಲೆಯಲ್ಲಿ ಸಹಕಾರಿ ವಲಯದಲ್ಲಿ ಚಾರ್ಜಿಂಗ್ ಸ್ಟೇಶನ್ ಇದೇ ಪ್ರಥಮವಾಗಿದ್ದು,  ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘದ ಅಧೀನದಲ್ಲಿರುವ ಕುಂಬಳೆ, ಚೆಂಗಳ, ಮುಳ್ಳೇರಿಯ ಎಂಬ ಮೂರು ಆಸ್ಪತ್ರೆಗಳಲ್ಲೂ ಸೋಲಾರ್ ಇಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಶನ್ ಸ್ಥಾಪಿಸಲಾಗಿದೆ. ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ  35 ಕೆಡಬ್ಲ್ಯುಪಿ ವೇಗದ, 37 ಕೆಡಬ್ಲ್ಯುಡಿಸಿ ಚಾರ್ಜಿಂಗ್ ಯಂತ್ರಗಳಿದ್ದು, ಚೆಂಗಳದ ಆಸ್ಪತ್ರೆಯಲ್ಲಿ 115 ಕೆಡಬ್ಲ್ಯುಪಿ, 67 ಕೆಡಬ್ಲ್ಯುಡಿಸಿ …

ಪಡಿಪ್ಪರೆ ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರ ತೆರವು

ಬದಿಯಡ್ಕ: ಕುಂಬಳೆ ಮುಳ್ಳೇ ರಿಯ ಕೆಎಸ್‌ಟಿಪಿ ರಸ್ತೆಯ ಬದಿ ಯಡ್ಕ-ನೀರ್ಚಾಲು ಸಮೀಪದ ಪಡಿಪ್ಪರೆ ಎಂಬಲ್ಲಿ ರಸ್ತೆಗೆ ವಾಲಿ ಕೊಂಡಿರುವ ತೆಂಗಿನಮರವೊAದು ಅಪಾಯಕಾರಿಯಾಗಿ ಪರಿಣಮಿಸಿದ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿ ಸಲಾಯಿತು.ಬದಿಯಡ್ಕ ಪಂ. ನೀರ್ಚಾಲು ವಾರ್ಡು ವ್ಯಾಪ್ತಿಯ ಕನ್ನೆಪ್ಪಾಡಿ ಪಡಿಪ್ಪರೆ ಎಂಬಲ್ಲಿ ರಸ್ತೆಯ ಬದಿ ತೆಂಗಿನ ಮರವೊಂದು ರಸ್ತೆಗೆ ವಾಲಿಕೊಂಡಿತ್ತು. ತಿರುವಿನ ಸ್ಥಳವಾಗಿರುವುದರಿಂದ ವಾಹನಗಳು ಸಂಚರಿಸುವ ವೇಳೆ ಈ ತೆಂಗಿನ ಮರ ವಾಹನಗಳಿಗೆ ತಾಗಿ ಕೊಳ್ಳುತ್ತಿತ್ತು. ಅದನ್ನು ತಪ್ಪಿಸುವುದಕ್ಕಾಗಿ ವಾಹನ ಚಾಲಕರು ಬಲಭಾಗದಲ್ಲಿ ಸಂಚರಿಸುತ್ತಿದ್ದರು. ಅದರಿಂದಾಗಿ ಎದುರಿನಿಂದ ಬರುವ ವಾಹನಕ್ಕೆ …

ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಟೋರಸ್ ಲಾರಿಗೆ ಇನ್ನೊಂದು ಲಾರಿ ಢಿಕ್ಕಿ; ಒಂದೂವರೆ ಗಂಟೆ ಕಾರ್ಯಾಚರಣೆ ಮೂಲಕ ಕ್ಯಾಬಿನ್‌ನಲ್ಲಿ ಸಿಲುಕಿಕೊಂಡಿದ್ದ ಕ್ಲೀನರ್‌ನನ್ನು ರಕ್ಷಿಸಿದ ಅಗ್ನಿಶಾಮಕ ದಳ

ಕಾಸರಗೋಡು: ನಗರದ ಕರಂದಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ  ಟೋರಸ್ ಲಾರಿಯ ಹಿಂಬದಿಗೆ ಇನ್ನೊಂದು ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ಹಿನ್ನೆಲೆಯಲ್ಲಿ ಒಂದೂವರೆ ಗಂಟೆ ಕಾಲ ಕ್ಯಾಬಿನ್‌ನಲ್ಲಿ ಸಿಲುಕಿದ ಲಾರಿ ಕ್ಲೀನರ್‌ನನ್ನು ಅಗ್ನಿಶಾಮಕದಳ ಹಾಗೂ ನಾಗರಿಕರು ಸೇರಿ ಸಾಹಸಿಕ ವಾಗಿ ರಕ್ಷಿಸಿದ್ದಾರೆ. ಪಶ್ಚಿಮಬಂಗಾಲ ನಿವಾಸಿಯಾದ ಸ್ವರೂಪ್ ಮೋದಿ (೨೮) ಎಂಬವರನ್ನು ರಕ್ಷಿಸಲಾಗಿದೆ. ನಿನ್ನೆ ರಾತ್ರಿ ೧೨ ಗಂಟೆ ವೇಳೆ ಅಗ್ನಿಶಾಮಕದಳ ಕಚೇರಿಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಟೋರಸ್ ಲಾರಿಯ …

ಕಾರಿನಲ್ಲಿ ಸಾಗಿಸುತ್ತಿದ್ದ 1200 ಲೀಟರ್ ಸ್ಪಿರಿಟ್ ವಶ: ಮಂಜೇಶ್ವರ ನಿವಾಸಿ ಸಹಿತ ಇಬ್ಬರ ಸೆರೆ

ಕಾಸರಗೋಡು: ನೀಲೇಶ್ವರದಲ್ಲಿ ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ ಭಾರೀ ಪ್ರಮಾಣದ ಸ್ಪಿರಿಟ್ ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಇನ್ನೋವಾ ಕಾರಿನಲ್ಲಿ ಸಾಗಿಸುತ್ತಿದ್ದ 1200 ಲೀಟರ್ ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ತೃಶೂರು ಎಡಕಳಿಯೂರ್ ಪುನ್ನಯೂರ್ ಸೌತ್‌ನ ಅರಕ್‌ಪರಂ ಬಿಲ್ ಹೌಸ್‌ನ ಎ.ಎಚ್. ಅನ್ಸಿಫ್ (40), ಮಂಜೇಶ್ವರ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಸಮೀಪದ ಭೂಮಿಕಾ ನಿಲಯದ ಎ.ಆರ್. ಗಿರೀಶ್ (39) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಎಸ್.ಐ. ಜಿ. ವಿಷ್ಣು ಅವರ ನೇತೃತ್ವದಲ್ಲಿ ಇಂದು ಮುಂಜಾನೆ 1 …

ಅಸೌಖ್ಯ: ಯುವತಿ ಮೃತ್ಯು 

ಬೆಳ್ಳೂರು: ಅಡ್ವಳ ಕಾನ ನಿವಾಸಿ ಅಡ್ವಳಬೀಡು ಪುಷ್ಪಾ ಕುಮಾರಿ (45) ನಿನ್ನೆ ನಿಧನಹೊಂದಿದರು. ಕಜಮುಂಡ ಬಾಲಕೃಷ್ಣ ಬಲ್ಲಾಳ್-ಸುಶೀಲಮ್ಮ ದಂಪತಿ ಪುತ್ರಿಯಾಗಿದ್ದಾರೆ. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಇವರ ಪತಿ ಮಧುಸೂದನ ಬಲ್ಲಾಳ್ ಈ ಹಿಂದೆ ನಿಧನಹೊಂದಿದ್ದಾರೆ. ಮೃತರು ತಂದೆ, ತಾಯಿ, ಮಕ್ಕಳಾದ ನಿಶಾಂತ್, ನಿತೇಶ್, ಸಹೋದರರಾದ ಎ.ಬಿ. ಬಾಲ ಗೋಪಾಲ ಬಲ್ಲಾಳ್, ಎ.ಬಿ. ದಿವಾಕರ ಬಲ್ಲಾಳ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮದ್ಯದಮಲಿನಲ್ಲಿ ಚಲಾಯಿಸಿದ ಕಾರು ಬೈಕ್‌ಗೆ ಢಿಕ್ಕಿ ಹೊಡೆದು ಯುವಕ ಮೃತ್ಯು: ಕಾರು ಚಾಲಕನ ವಿರುದ್ಧ ನರಹತ್ಯಾ ಪ್ರಕರಣ ದಾಖಲು

ಕಾಸರಗೋಡು: ಕಾರು ಢಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ದಾರುಣ ಘಟನೆ ಚಿತ್ತಾರಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಮಲಪ್ಪುರಂ ಒಳುಕ್ಕೂರು ಪಲಿತ್ತಲ ಎಂಬಲ್ಲಿನ ಶಂಕರನ್‌ರ ಪುತ್ರ ಪಿ. ಅಖಿಲೇಶ್ (38)  ಮೃತಪಟ್ಟ ವ್ಯಕ್ತಿ.  ಘಟನೆಗೆ ಸಂಬಂಧಿಸಿ ಕಾರು ಚಲಾಯಿಸಿದ ಕಾಞಂಗಾಡ್ ಅಲಾಮಿಪಳ್ಳಿಯ ಎಚ್. ಉಲ್ಲಾಸ್ ಎಂಬಾತನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ ೧೧.೩೦ರ ವೇಳೆ ಕಾಸರಗೋಡು ಭಾಗದಿಂದ ಅಪರಿಮಿತ ವೇಗದಲ್ಲಿ ಬಂದ ಕಾರು ಅಖಿಲೇಶ್ ಚಲಾಯಿಸುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಗಂಭೀರಗಾ ಯಗೊಂಡ ಅಖಿಲೇಶ್‌ರನ್ನು ಸ್ಥಳೀಯರು …

ಕಚೇರಿ ಮುಂದೆ ನಿಲುಗಡೆಗೊಳಿಸಲಾದ ಲಾರಿ ಕಳವು

ಕುಂಬಳೆ: ಕಚೇರಿಯ ಮುಂದೆ ನಿಲುಗಡೆಗೊಳಿಸಲಾಗಿದ್ದ ಲಾರಿ ಕಳವಿಗೀಡಾದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಮಂಗಲ್ಪಾಡಿ ಅಡ್ಕ ಶಮೀಮಾ ಮಂಜಿಲ್‌ನ ಝಕರಿಯಾ ಎಂ. ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಾರ್ಚ್ 21ರಂದು ರಾತ್ರಿ 11.30 ಮತ್ತು 22ರಂದು ಬೆಳಿಗ್ಗೆ 8.30ರ ಮಧ್ಯೆ ಈ ಲಾರಿಯನ್ನು ಕಳವುಗೈಯ್ಯಲಾಗಿದೆ. 15 ಲಕ್ಷ ರೂ. ಮೌಲ್ಯದ ಈ ಲಾರಿಯನ್ನು ನಾನು ಅಡ್ಕದ ಝಡ್.ಎಂ.ಎಸ್ ಫಿಶ್ ಸರ್ವೀಸ್ ಕಚೇರಿಯ ಎದುರುಗಡೆ ನಿಲುಗಡೆಗೊಳಿಸಿದ್ದೆ. …

ಪಯ್ಯನ್ನೂರು ಆಸ್ಪತ್ರೆ ತ್ಯಾಜ್ಯ ಅನಂತಪುರದಲ್ಲಿ:  ಎಸೆದವರಿಂದಲೇ ಹೆಕ್ಕಿಸಿದ ಪಂ. ಸದಸ್ಯ, ನಾಗರಿಕರು

ಕುಂಬಳೆ:  ಕಾಸರಗೋಡಿನ ತ್ಯಾಜ್ಯಗಳನ್ನು ಎಲ್ಲಿ ಎಸೆಯಬೇಕು, ಸಂಸ್ಕರಿಸಬೇಕು ಎಂದು ತಿಳಿಯದೆ ಸಮಸ್ಯೆಗೀಡಾಗಿರುವಾಗ ದೂರದ ಪಯ್ಯನ್ನೂರಿನ ಆಸ್ಪತ್ರೆಯೊಂದರ ತ್ಯಾಜ್ಯಗಳು ಅನಂತಪುರದಲ್ಲಿ ಎಸೆದಿರುವುದು ಪತ್ತೆಯಾಗಿದೆ. ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ಕ್ಷೇತ್ರಕ್ಕಿರುವ ರಸ್ತೆಯಲ್ಲಿ ದೊಡ್ಡ ಪ್ಲಾಸ್ಟಿಕ್ ಚೀಲಗಳಲ್ಲಿ ತ್ಯಾಜ್ಯ ಕಂಡುಬಂದಿತ್ತು. ಇದು ಗಮನಕ್ಕೆ ಬಂದ ಪುತ್ತಿಗೆ ಪಂಚಾಯತ್‌ನ ಹನ್ನೊಂದನೇ ವಾರ್ಡ್ ಸದಸ್ಯ ಸತೀಶ್ ಪಂಚಾಯತ್‌ನ ನೌಕರರನ್ನು ಸ್ಥಳಕ್ಕೆ ತಲುಪಿಸಿ ಗೋಣಿ ತೆರೆದು ನೋಡಿದಾಗ ಅದರಲ್ಲಿ ಪಯ್ಯನ್ನೂರಿನ ಬಿ.ಕೆ.ಎಂ. ಆಸ್ಪತ್ರೆಯ ರಶೀದಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಅಧಿಕಾರಿಗಳೊಂದಿಗೆ ವಿಚಾರಿಸಿದಾಗ ಅಲ್ಲಿಂದ …

70.175 ಗ್ರಾಂ ಎಂಡಿಎಂಎ ಸಹಿತ ಓರ್ವ ಸೆರೆ

ಕಾಸರಗೋಡು: ಭಾರೀ ಪ್ರಮಾಣದ ಎಂಡಿಎಂಎ ಮಾದಕ ವಸ್ತು ಕೈವಶವಿರಿಸಿಕೊಂಡಿದ್ದ ವ್ಯಕ್ತಿಯನ್ನು ಕಾಸರಗೋಡು ಅಬಕಾರಿ ಸ್ಪೆಶಲ್ ಸ್ಕ್ವಾಡ್ ಬಂಧಿಸಿದೆ. ಉಪ್ಪಳ ರೈಲ್ವೇ ನಿಲ್ದಾಣ ರಸ್ತೆಯ ಶಹಬಾಸ್ ಮಂಜಿಲ್‌ನ ಹಸೈನಾರ್ ವಿ. (42) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ಈತನ ಕೈಯಿಂದ 70.175 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಎಕ್ಸೈಸ್ ಇನ್‌ಸ್ಪೆಕ್ಟರ್ ವಿಷ್ಣುಪ್ರಕಾಶ್ ನೇತೃತ್ವದ ತಂಡ ಕಾಸರಗೋಡು ಅಡ್ಕತ್ತಬೈಲ್‌ನಲ್ಲಿ ನಡೆಸಿದ ಕಾರ್ಯಾ ಚರಣೆ ವೇಳೆ ಹಸೈನಾರ್‌ನ ಕೈಯಿಂದ ಎಂಡಿಎಂಎ ವಶಪಡಿಸಲಾಗಿದೆ. ಅಸಿಸ್ಟೆಂಟ್ ಎಕ್ಸೈಸ್‌ಇನ್‌ಸ್ಪೆಕ್ಟರ್ ಸಿ.ಕೆ.ಇ. ಸುರೇಶ್, ಪ್ರಿವೆಂಟೀವ್ ಆಫೀಸರ್ ಕೆ.ವಿ. ರಂಜಿತ್, ಅತುಲ್ …