ವಿಧಾನಸಭಾ ಚುನಾವಣೆ: ಜಿಲ್ಲೆಯಲ್ಲಿ ಶನಿವಾರ ಸಲ್ಲಿಸಿದ ಹದಿನಾರು ಅಭ್ಯರ್ಥಿಗಳು ಸೇರಿದಂತೆ ಒಟ್ಟು 29 ಮಂದಿಯಿಂದ ನಾಮಪತ್ರ ಸಲ್ಲಿಕೆ

ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ 16 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಮೊನ್ನೆವರೆಗೆ ನಾಮಪತ್ರ ಸಲ್ಲಿಸಿದವರ ಸಂಖ್ಯೆ 28ಕ್ಕೇರಿದೆ.  ಮಂಜೇಶ್ವರ ವಿಧಾನಸಭಾ ಮಂಡಲದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಸಿಪಿಎಂ ಅಭ್ಯರ್ಥಿ ಕೆ.ಆರ್. ಜಯಾನಂದ, ವಿಠಲ ರೈ ಎಂಬಿವರು 2 ಸೆಟ್ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಕೂಡಾ ಎರಡು ಸೆಟ್ ನಾಮಪತ್ರಗಳನ್ನು ಸಲ್ಲಿಸಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಅಬ್ದುಲ್ಲ ಕೆ ಎರಡು ಸೆಟ್  ನಾಮಪತ್ರ ಸಲ್ಲಿಸಿದ್ದಾರೆ. ಮಂಜೇಶ್ವರ ಮಂಡಲದಲ್ಲಿ 8 ಮಂದಿ ಈಗಾಗಲೇ ನಾಮಪತ್ರ …

ಕೆ. ಸುರೇಂದ್ರನ್‌ರಿಂದ ಮಂಜೇಶ್ವರ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ

ಉಪ್ಪಳ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಕೆ. ಸುರೇಂದ್ರನ್ ಶನಿವಾರ ಉಪ್ಪಳದಲ್ಲಿರುವ ಮಂಜೇಶ್ವರ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಉಪ್ಪಳ ಪೇಟೆಯಿಂದ ಬಿಜೆಪಿ ಮುಖಂಡರು, ಕಾರ್ಯಕರ್ತರ ಸಹಿತ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಸಿದ್ದಾರೆ.  ಈ ವೇಳೆ ಮಾತನಾಡಿದ ಅವರು ತಾಲೂಕು ಕಚೇರಿ ಖಾಸಗಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು ಅವ್ಯವಸ್ಥೆ ಯಿಂದ ಕೂಡಿದೆ.  ರಾಜ್ಯದಲ್ಲಿ ಅದಲಿ ಬದಲಿ ಸರಕಾರ ಆಡಳಿತ ನಡೆಸಿದರೂ ಯಾವ ರೀತಿಯ ಅಭಿವೃದ್ಧಿಯೂ ಉಂಟಾಗಿಲ್ಲ ಎಂಬುದಕ್ಕೆ ತಾಲೂಕು ಕಚೇರಿ ಉದಾಹರಣೆಯಾಗಿದೆ ಎಂದರು. ಈ …

ಮಂಜೇಶ್ವರದಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಸ್ಪರ್ಧಾಕಣಕ್ಕೆ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಒಕ್ಕೂಟಗಳಿಗೆ ತೀವ್ರ ಸವಾಲೊಡ್ಡಿ ಎಸ್‌ಡಿಪಿಐ ಅಭ್ಯರ್ಥಿ  ಸ್ಪರ್ಧಾಕಣದಲ್ಲಿದ್ದಾರೆ. ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯನಾದ ಕೆ.ಎಂ. ಅಶ್ರಫ್ ಸ್ಪರ್ಧಿಸಲಿದ್ದಾರೆಂದು ಜಿಲ್ಲಾಧ್ಯಕ್ಷ ಸಿ.ಎ. ಸವಾದ್ ತಿಳಿಸಿದ್ದಾರೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಎಸ್‌ಡಿಪಿಐ ಸ್ಪರ್ಧಿಸುತ್ತಿದೆ. ಯುಡಿಎಫ್ ಅಭ್ಯರ್ಥಿಯಾಗಿ  ಹಾಲಿ ಶಾಸಕ ಎಕೆಎಂ ಅಶ್ರಫ್, ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿಯ ಕೆ. ಸುರೇಂದ್ರನ್ ಹಾಗೂ ಎಲ್‌ಡಿಎಫ್ ಅಭ್ಯರ್ಥಿಯಾಗಿ ಸಿಪಿಎಂನ ಕೆ.ಆರ್. ಜಯಾನಂದ ಈ ಮಂಡಲದಲ್ಲಿ ಈಗಾಗಲೇ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.

ಸತತ ಪ್ರತಿನಿಧೀಕರಿಸುವ ಮುಸ್ಲಿಂಲೀಗ್ ಮಂಡಲವನ್ನು ಅಭಿವೃದ್ಧಿಗೊಳಿಸದೆ ವಂಚನೆ-ಎಂ.ಎಲ್. ಅಶ್ವಿನಿ

ಮುಳ್ಳೇರಿಯ: ಕಾಸರಗೋಡು ಮಂಡಲದಿಂದ ವಿಧಾನಸಭೆಗೆ ದಶಕ ಗಳಿಂದ ಸತತವಾಗಿ ಪ್ರತಿನಿಧೀಕರಿಸುವ  ಟ್ರಿಪ್ಪಲ್ ಎಂಜಿನ್ ಆಡಳಿತದಲ್ಲೂ ಅಭಿವೃದ್ಧಿ ಯೋಜನೆಗಳು ಜ್ಯಾರಿಯಾ ಗದೆ ಮುಸ್ಲಿಂ ಲೀಗ್ ಜನರನ್ನು ವಂಚಿ ಸುತ್ತಿದೆಯೆಂದು ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಆರೋಪಿಸಿದರು.  ಕಾರಡ್ಕ ಪಂಚಾಯತ್‌ನ ಬಿಜೆಪಿ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಆರೋಗ್ಯ, ಶಿಕ್ಷಣ, ಉದ್ಯೋಗ ವಲಯದ ಸಮಸ್ಯೆಗಳಿಗೆ ಪರಿಹಾರ ಕಾಣಲು, ಕುಡಿಯುವ ನೀರು, ರಸ್ತೆ ಸಹಿತದ ಮೂಲಭೂತ ಬೇಡಿಕೆಗಳನ್ನು ಈಡೇರಿ ಸಲು ಮುಸ್ಲಿಂ ಲೀಗ್‌ಗೆ ಹಾಗೂ  ಘಟಕ ಪಕ್ಷವಾದ ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ …

ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಉತ್ಸವ: ಕರಂದಕ್ಕಾಡ್‌ನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ  ವಾರ್ಷಿಕ ಉತ್ಸವದಂಗವಾಗಿ ಕರಂದಕ್ಕಾಡ್ ಬೆಡಿಕಟ್ಟೆ ಸೇವಾ ಸಮಿತಿ ವತಿಯಿಂದ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಕರಂದಕ್ಕಾಡ್ ಅಧ್ಯಕ್ಷತೆ ವಹಿಸಿದರು. ಈ ವೇಳೆ ಸಾಧಕರಾದ ಜಗಜೀವನ್ ರಾವ್, ರಾಜಶೇಖರ್, ಅಭಿಜ್ಞಾ ಹರೀಶ್, ಗಿರಿಧರ್ ಸಾಲ್ಯಾನ್, ರಾಮನ್, ಹರೀಶ್ ಕೆ.ಆರ್ ರನ್ನು ಗೌರವಿಸಲಾ ಯಿತು. ಕೋಶಾಧಿಕಾರಿ ಗಣೇಶ್ ಎ, ಕೇಶವ, ವೀರ ಹನುಮಾನ್ ಮಂದಿರದ ಅಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು. ರಾಧಾಕೃಷ್ಣ ಸೂರ್ಲು ನಿರೂಪಿಸಿ, ಹರೀಶ್ ಕೆ.ಆರ್ ಸ್ವಾಗತಿಸಿದರು. ಹರೀಶ್ …

ಕ್ಷಯಮುಕ್ತ ಚಟುವಟಿಕೆ ಬೆಳ್ಳೂರು ಪಂಚಾಯತ್‌ಗೆ ಚಿನ್ನದ ಪದಕ

ಬೆಳ್ಳೂರು: 2023ರಿಂದ ಜ್ಯಾರಿಗೆ ತಂದ ಕ್ಷಯಮುಕ್ತ ಚಟುವಟಿಕೆಗ ಳಿಗಾಗಿ ಪಂಚಾಯತ್‌ಗೆ ಚಿನ್ನದ ಪದಕ ಲಭಿಸಿದೆ.  ವಿಶ್ವ ಕ್ಷಯರೋಗ ದಿನವಾದ ನಾಳೆ ಜಿಲ್ಲಾಧಿಕಾರಿ ಈ ಪ್ರಶಸ್ತಿ ಪ್ರದಾನ ಮಾಡುವರು. 2023ರಲ್ಲಿ ‘ಬೆಳ್ಳೂರಿನಲ್ಲಿ ಸೂರ್ಯೋದಯ’ ಎಂಬ ಹೆಸರಲ್ಲಿ ಕ್ಷಯಮುಕ್ತ ಭಾರತ್ ಯೋಜನೆ ಆರಂಭಿಸಲಾಗಿತ್ತು.ಇದರಂಗವಾಗಿ ಆರೋಗ್ಯ ಪಡೆಯನ್ನು ರಚಿಸಿ ತರಬೇತಿ ನೀಡಲಾಗಿತ್ತು. ಇವರು ಹಾಗೂ ಆರೋಗ್ಯ ಕಾರ್ಯಕರ್ತರು ಪಂಚಾಯತ್  ವ್ಯಾಪ್ತಿಯ ಮನೆಗಳಿಗೆ ತೆರಳಿ  ರೋಗ ತಪಾಸಣೆಗಾಗಿ ಸಹಕರಿ ಸಿದ್ದರು. ಜಿಲ್ಲೆಯಲ್ಲಿ ಕ್ಷಯಮುಕ್ತ ಚಟುವಟಿಕೆಗಳನ್ನು ಆರಂಭಿಸಿದ ಪಂಚಾಯತ್‌ಗಳಲ್ಲಿ  ಪ್ರಥಮ ಪಂಚಾಯತ್  ಬೆಳ್ಳೂರಾಗಿದೆ. ಇದರ …

ಎಂಡಿಎಂಎ ಸಹಿತ ಮೂವರ ಬಂಧನ: ಓರ್ವ ಪರಾರಿ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಮಾದಕದ್ರವ್ಯವಾದ 1.26 ಗ್ರಾಂ ಎಂಡಿಎಂಎ ಸಹಿತ ಮೂವರನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಓರ್ವ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿ ದ್ದಾನೆ. ನೋರ್ತ್ ತೃಕರಿಪುರ ಮಿಲಿಯೇಟ್‌ನ ಎಂ.ಟಿ.ಪಿ. ಮರ್ಶಾದ್ (24), ಉದಿನೂರು ನಡಕ್ಕಾವಿನ ಮುಹಮ್ಮದ್ ಸಫ್ವಾನ್ (28) ಮತ್ತು ನೋರ್ತ್ ತೃಕರಿಪುರದ ಅಯಿಟ್ಟಿ ನಿವಾಸಿ ಮುಹಮ್ಮದ್ ಶಿಯಾಸ್ (31) ಬಂಧಿತರಾದ ಆರೋಪಿಗಳು. ವಲಿಯಪರಂಬದಲ್ಲಿ ರಾತ್ರಿ ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ಆ ದಾರಿಯಾಗಿ ಆರೋಪಿಗಳು ಬಂದ ಕಾರನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ ಎಂಡಿಎಂಎ ಪತ್ತೆಯಾಗಿದೆ …

ನಾಪತ್ತೆಯಾದ ಬಳಿಕ ಹೊಳೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಬಿಎಲ್‌ಒ ಮೃತ್ಯು

ಕಾಸರಗೋಡು: ಇಂದು ಬೆಳಿಗ್ಗೆ ಮನೆಯಿಂದ ನಾಪತ್ತೆಯಾಗಿ ಬಳಿಕ  ಮೊಗ್ರಾಲ್ ಕಡವತ್ ಹೊಳೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಬಿಎಲ್‌ಒ (ಬೂತ್ ಲೆವೆಲ್ ಆಫೀಸರ್) ಮೃತಪಟ್ಟ ಘಟನೆ ನಡೆದಿದೆ. ಮೊಗ್ರಾಲ್ ಪುತ್ತೂರು ನಿವಾಸಿ ಶಾಫಿ ಎಂಬವರ ಪುತ್ರನೂ ,   ಚೆರ್ಕಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕನಾದ ಸವಾದ್ (32) ಎಂಬವರು ಮೃತಪಟ್ಟ ವ್ಯಕ್ತಿ.  ಇವರು ಮೊಗ್ರಾಲ್ ಪುತ್ತೂರು ಒಂದನೇ ಬೂತ್‌ನ ಬಿಎಲ್‌ಒ ಆಗಿದ್ದರು. ಇಂದು ಬೆಳಿಗ್ಗೆ 7 ಗಂಟೆಗೆ ಸವಾದ್ ಮನೆಯಿಂದ ನಾಪತ್ತೆಯಾಗಿ ದ್ದರು. ಬಳಿಕ ಮನೆಯವರು ಹಾಗೂ …

ಯುವಕ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ: ಯುವಕನೋರ್ವ ಮನೆಯೊಳಗೆ ನೇಣುಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮಂಜೇಶ್ವರ ನ್ಯೂಮಜಲ್ ನಿವಾಸಿ ಉದ್ಯಾವರ ಮಾಡದಲ್ಲಿ ವ್ಯಾಪಾರಿಯಾಗಿರುವ ಮುಹಮ್ಮದ್ ಅಶ್ರಫ್‌ರ ಪುತ್ರ ಮುಹಮ್ಮದ್ ತಾಹ (22) ಮೃತಪಟ್ಟ ಯುವಕನಾಗಿದ್ದಾನೆ. ನಿನ್ನೆ ರಾತ್ರಿ 9.45ರ ವೇಳೆ ಈತ ಮನೆಯೊಳಗೆ ಬೆಡ್‌ರೂಂನಲ್ಲಿ ಫ್ಯಾನ್‌ಗೆ ನೇಣು ಬಿಗಿದು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಕೂಡಲೇ ಮಂಗಲ್ಪಾಡಿಯ ಆಸ್ಪತ್ರೆಗೆ ಈತನನ್ನು ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ನಿನ್ನೆ ಸಂಜೆ ತಂದೆ ಪೇಟೆಗೆ, ತಾಯಿ ಹಾಗೂ ಸಹೋದರಿಯರು ಉದ್ಯಾವರ ಮಾಡದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಈ …

ಬಸ್ ಕಂಡಕ್ಟರ್ ನಿಧನ

ಉಪ್ಪಳ: ಅಸೌಖ್ಯ ಬಾಧಿಸಿ ಮನೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಸ್ ಕಂಡಕ್ಟರ್ ಮೃತಪಟ್ಟರು.  ವರ್ಕಾಡಿ ಧರ್ಮನಗರ ನಿವಾಸಿ  ಬಾಬು ಪೂಜಾರಿ-ದಿ| ಕೃಷ್ಣಮ್ಮ ದಂಪತಿಯ  ಪುತ್ರ ಸುಕುಮಾರ (51) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.  ಇವರು ತಲಪ್ಪಾಡಿ-ಆನೆಕಲ್ಲು, ಉಪ್ಪಳ-ಕನ್ಯಾನ-ಬಾಯಾರು ರೂಟ್‌ನಲ್ಲಿ ಸಂಚರಿಸುವ  ದುರ್ಗಾಪ್ರಸಾದ್ ಬಸ್‌ನಲ್ಲಿ ಹಲವು ವರ್ಷಗಳಿಂದ ಕಂಡಕ್ಟರ್ ಆಗಿದ್ದರು. ಇತ್ತೀಚೆಗಿನಿಂದ ಇವರಿಗೆ ಅಸೌಖ್ಯ ಬಾಧಿಸಿದ್ದು, ಇದರಿಂದ ಮನೆಯಲ್ಲಿ  ಚಿಕಿತ್ಸೆಯಲ್ಲಿದ್ದರು. ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ಮೃತರು ಪತ್ನಿ ಯಶೋಧ, ಪುತ್ರಿ ಶಾನ್ವಿ, ಸಹೋದರಿಯರಾದ ಸುಜಾತ, ಅನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ …