ಶ್ರೀ ವಾಣಿಯ ಗಾಣಿಗ ಮಹಿಳಾ ಭಜನಾ ಮಂಡಳಿ ವಾರ್ಷಿಕೋತ್ಸವ

ಪೆರ್ಲ:  ಶ್ರೀ ವಾಣಿಯ ಗಾಣಿಗ ಮಹಿಳಾ ಭಜನಾ ಮಂಡಳಿ ಮಂಗಳೂರು ಇದರ ೫ನೇ ವಾರ್ಷಿಕೋತ್ಸವ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಜರಗಿತು. ಈ ವೇಳೆ ವಿಶೇಷ ಪೂಜೆ, ಭಜನಾ ಗುರುಗಳಾದ ರಾಮಕೃಷ್ಣ ಕಾಟುಕುಕ್ಕೆಯವರಿಗೆ ಗುರುವಂದನೆ ನಡೆಯಿತು.  ಇದೇ ವೇಳೆ ಭಜನಾ ತಂಡದ ಹಿರಿಯ ಸದಸ್ಯೆ ಅನಿತಾ ಟೀಚರ್‌ರನ್ನು ಸನ್ಮಾನಿಸಲಾಯಿತು. ಕಾಟುಕುಕ್ಕೆ ಕ್ಷೇತ್ರದ ಶ್ರೀ ಸುಬ್ರಹ್ಮಣ್ಯೇಶ್ವರ ಮಹಿಳಾ ಭಜನಾ ಮಂಡಳಿ ಹಾಗೂ  ವನಿತಾ ಭಜನಾ ಮಂಡಳಿ ಸದಸ್ಯೆಯರಿಂದ ಭಜನೆ ಜರಗಿತು. ಮೃದಂಗದಲ್ಲಿ ತೇಜಸ್, ಹಾರ್ಮೋನಿಯಂನಲ್ಲಿ ಮನೋಜ್ ಸಹಕರಿಸಿದರು. ಅನಿತಾ, …

ನಿಲ್ಲಿಸಿದ್ದ ಲಾರಿ ಕಳವುಗೈದ ಇಬ್ಬರ ಬಂಧನ

ಕುಂಬಳೆ: ಬಂದ್ಯೋಡು ಬಳಿಯ ಅಡ್ಕದಿಂದ ಲಾರಿಯನ್ನು ಕಳವುಗೈದ ಪ್ರಕರಣದ ಆರೋಪಿ ಗಳನ್ನು ಗಂಟೆಗಳೊಳಗೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಕಳವಿಗೀಡಾದ ಲಾರಿಯನ್ನು ಸೀತಾಂಗೋಳಿ ಬಳಿಯಿಂದ ಪತ್ತೆಹಚ್ಚಲಾಗಿದೆ.  ಕೊಡ್ಯಮ್ಮೆ ಇಚ್ಲಂಪಾಡಿ ಮುಳಿಯಡ್ಕ ನಿವಾಸಿ ಅಬ್ದುಲ್ಲ ಎ.ಪಿ. (32), ಎಡನಾಡು ಮುಕಾರಿಖಂಡದ ಮೊಹಮ್ಮದ್ ರಿಸ್ವಾನ್ (27) ಎಂಬಿವರನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್, ಎಸ್‌ಐ ಸನಿತ್ ಎಂಬಿವರು ಬಂಧಿಸಿದ್ದಾರೆ. ಅಡ್ಕ ಝಡ್‌ಎಂಎಸ್ ಫಿಶ್ ಸರ್ವೀಸ್ ಕಚೇರಿಯ ಮುಂಭಾಗ ದಲ್ಲಿ  ಲಾರಿಯನ್ನು ಮಾರ್ಚ್ 21ರಂದು ರಾತ್ರಿ ನಿಲ್ಲಿಸಲಾಗಿತ್ತು. 22ರಂದು ಬೆಳಿಗ್ಗೆ …

ಬಸ್ ಪ್ರಯಾಣ ವೇಳೆ ಹೃದಯಾಘಾತ: ಚಿಗುರುಪಾದೆ ನಿವಾಸಿ ನಿಧನ

ಮಂಜೇಶ್ವರ: ಬಸ್ ಪ್ರಯಾಣ ವೇಳೆ ಹೃದಯಾಘಾತ ಉಂಟಾಗಿ ವ್ಯಕ್ತಿಯೋರ್ವರು ನಿಧನ ಹೊಂದಿದ ಘಟನೆ ನಡೆದಿದೆ. ಚೇವಾರು ನಿವಾಸಿ, ಚಿಗುರುಪಾದೆ ಬಾಡಿಗೆ ಕ್ವಾಟರ್ಸ್ನಲ್ಲಿ ವಾಸವಾಗಿರುವ ಮೊಹಮ್ಮದ್ (65) ಎಂಬವರು ನಿಧನ ಹೊಂದಿದ್ದಾರೆ. ನಿನ್ನೆ ಮಧ್ಯಾಹ್ನ ಇವರು ಉಪ್ಪಳದಿಂದ ಖಾಸಗಿ ಬಸ್‌ನಲ್ಲಿ ಹೊಸಂಗಡಿಗೆ ಪ್ರಯಾಣಿ ಸುತ್ತಿರುವ ವೇಳೆ ಹೃದಯಾಘಾತ ಉಂಟಾಗಿತ್ತೆನ್ನಲಾಗಿದೆ. ಕೂಡಲೇ ಇತರ ಪ್ರಯಾಣಿಕರನ್ನು ಇಳಿಸಿ ಬಸ್ ಸಿಬ್ಬಂದಿಗಳು ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ವೈದ್ಯರು ತಪಾಸಣೆ ನಡೆಸಿದಾಗ ನಿಧನ ಹೊಂದಿದ್ದರು. ಮೃತರು ಪತ್ನಿ ಕದೀಜಮ್ಮ, ಮಕ್ಕಳಾದ ಅಬ್ದುಲ್ …

ಕಬಡ್ಡಿ ಸ್ಥಳದಲ್ಲಿ ಹೊಡೆದಾಟ ತಡೆಯಲು ಯತ್ನಿಸಿದ ದ್ವೇಷ : ಯುವಕರನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಎಂಟು ಮಂದಿ ಬಂಧನ

ಮುಳ್ಳೇರಿಯ: ಕಬಡ್ಡಿ ಆಟದ ಸ್ಥಳದಲ್ಲಿ ನಡೆದ ಹೊಡೆದಾಟವನ್ನು ತಡೆಯಲು ಯತ್ನಿಸಿದ ದ್ವೇಷದಿಂದ ಯುವಕರ ಮೇಲೆ ಹಲ್ಲೆ ನಡೆಸಿ ಕೊಲೆಗೈಯ್ಯಲು ಪ್ರಯತ್ನಿಸಲಾಯಿತೆಂಬ ಪ್ರಕರಣದಲ್ಲಿ ಎಂಟು ಮಂದಿ ಆರೋಪಿಗಳನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಆದೂರು ಬರ್ತಕುನ್ನು ಹೌಸ್‌ನ ಸಿ.ಆರ್. ತಾಜುದ್ದೀನ್ (36), ಅಬ್ದುಲ್ ಸತ್ತಾರ್ (30), ಸಿ.ಎ. ನಗರದ ಅಬ್ಬಾಸ್ ಫೈಸಲ್ ಎ.ಪಿ (32), ಮುಹಮ್ಮದ್ ಸುರಕ್ಕಾತ ವೈ.ಎಂ. (35), ಆದೂರು ಬಣ್ಣಾಂತಬಾಡಿಯ ಬಿ. ಮುಹಮ್ಮದ್ ರಫೀಕ್ (32), ಆದೂರು ಮುಕ್ಕೂರು ಹೌಸ್‌ನ ಆಶಿಕ್ (29), ಕುಂಟಾರು ಮಞಂಪಾರೆ ಹೌಸ್‌ನ …

ತಂದೆಯನ್ನು ಕೊಲೆಗೈದ ಪ್ರಕರಣ: ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ತಲೆಮರೆಸಿಕೊಂಡ ಆರೋಪಿ ಸೆರೆ

ಮುಳ್ಳೇರಿಯ: ತಂದೆಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಅಡೂರಿಗೆ ಸಮೀಪದ ಪಾಂಡಿ ವಳ್ಳಿರಿಕಯ ನಿವಾಸಿ ನರೇಂದ್ರ ಪ್ರಸಾದ್ (28) ಬಂಧಿತ ಆರೋಪಿ. 2022 ಎಪ್ರಿಲ್ 5ರಂದು ತಂದೆ ಬಾಲಕೃಷ್ಣ ನಾಯ್ಕರನ್ನು ಹೊಡೆದು ಕೊಲೆಗೈದ ಆರೋಪದಂತೆ ನರೇಂದ್ರ ಪ್ರಸಾದ್‌ನನ್ನು ಪೊಲೀಸರು ಬಂಧಿಸಿದ್ದರು. ನಂತರ ನ್ಯಾಯಾಂಗ ಬಂಧನಕ್ಕೊಳಗಾದ ಆರೋಪಿಗೆ ಆ ಬಳಿಕ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆ ಬಳಿಕ ಆತ ತಲೆಮರೆಸಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಈ …

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೇರಳದಲ್ಲಿ 210 ಮಂಡಲಗಳು

ನವದೆಹಲಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೇರಳದಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 210ಕ್ಕೇರಲಿದೆ. ಪ್ರಸ್ತುತ 140 ಮಂಡಲಗಳಿವೆ. 2029ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಪ್ರಸ್ತುತ ಇರುವ 20ರಿಂದ 30ಕ್ಕೇರಲಿದೆ. ಇದರೊಂದಿಗೆ ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ 543ರಿಂದ 816ಕ್ಕೇರಲಿದೆ. ದೇಶದಲ್ಲಿ ಮಹಿಳೆಯರಿಗೆ ಕಾನೂನು ನಿರ್ಮಾಣ ಸಭೆಗಳಲ್ಲಿ ಮೂರರಲ್ಲೊಂದು ಪ್ರಾತಿನಿಧ್ಯ ಖಚಿತಪಡಿಸುವ ಅಂಗವಾಗಿ 2023ರಲ್ಲಿ ನಾರಿವಂದನ್ ನಿಯಮವನ್ನು ಪಾರ್ಲಿಮೆಂಟ್ ಮಂಜೂರು ಮಾಡಿತ್ತು. 2029ರ ಲೋಕಸಭಾ ಚುನಾವಣೆಯಲ್ಲಿ 2026ರ ಜನಗಣತಿ ಅನುಸರಿಸಿ ಮಹಿಳಾ ಮೀಸಲಾತಿ ಜ್ಯಾರಿಗೊಳಿಸಬೇಕು ಎಂದು …

ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪಾಕ್ ಪರ ಬೇಹುಗಾರಿಕೆ ನಡೆಸುತ್ತಿದ್ದ ಸೂತ್ರಧಾರ ಸೇರಿ 22 ಮಂದಿ ಸೆರೆ

ನವದೆಹಲಿ: ಭಾರತದಲ್ಲಿ ಸರಣಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನಿ ಪರ ಬೇಹುಗಾರಿಕೆ ನಡೆಸುತ್ತಿದ್ದ ಜಾಲದ ಸೂತ್ರಧಾರ ಸೇರಿದಂತೆ 22 ಮಂದಿಯನ್ನು  ಉತ್ತರಪ್ರದೇಶದ ಘಾಸಿಯಾಬಾದ್ ನಿಂದ ಪೊಲೀಸರು ಬಂಧಿಸಿದ್ದಾರೆ.  ಇದರ ಹೊರತಾಗಿ ಇತರ ೮ ಮಂದಿ ಈಗ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  ಬೇಹುಗಾರಿಕೆ ತಂಡದ ಪ್ರಧಾನ ಸೂತ್ರ ಧಾರನಲ್ಲೋರ್ವನಾಗಿರುವ ನೌಶಾದ್ ಅಲಿ (ಲಾಲು) ಎಂಬಾತನನ್ನು ಫರೀದಾಬಾದ್‌ನಿಂದ ಬಂಧಿಸಲಾಗಿದೆ. ಈತ ಫರೀದಾಬಾದ್‌ನ ಪೆಟ್ರೋಲ್ ಬಂಕ್ ಸಮೀಪ ಚಕ್ರಗಳಿಗೆ ಪಂಕ್ಚರ್ ಲಗತ್ತಿಸುವ ಅಂಗಡಿಯಲ್ಲಿ ಕಾರ್ಮಿಕನ ಸೋಗಿನಲ್ಲಿ ತಲೆಮರೆಸಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆಧುನಿಕ …

ಬಿಜೆಪಿ ಕಲ್ಲಿಕೋಟೆ ವಲಯ ಪ್ರಭಾರಿಯಾಗಿ ಕೆ. ಶ್ರೀಕಾಂತ್ ನೇಮಕ

ಕಾಸರಗೋಡು: ಕಣ್ಣೂರು, ಕಲ್ಲಿಕೋಟೆ ಜಿಲ್ಲೆಗಳು ಒಳಗೊಳ್ಳುವ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಚುಕ್ಕಾಣಿ ಹಿಡಿಯಲು ಬಿಜೆಪಿ ರಾಜ್ಯ ನಾಯಕತ್ವ ಕಲ್ಲಿಕೋಟೆ ವಲಯ ಅಧ್ಯಕ್ಷರಾದ ಕೆ. ಶ್ರೀಕಾಂತ್‌ರನ್ನು ವಲಯ ಪ್ರಭಾರಿಯಾಗಿ ನೇಮಿಸಿದೆ. ಈ ಹಿಂದೆ ಈ ಹೊಣೆಗಾರಿಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ಗೋಪಾಲಕೃಷ್ಣನ್‌ರಿಗಾಗಿತ್ತು. ಮಂಜೇಶ್ವರ  ಸಹಿತ ವಿವಿಧ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಚಟುವಟಿಕೆಗಳ ಮೇಲ್ನೋಟ ಇನ್ನು ಶ್ರೀಕಾಂತ್‌ರಿಗಾಗಿದೆ.

ಯುಡಿಎಫ್ ತೊರೆದು ಬಿಜೆಪಿಗೆ ಸೇರಿದವರಿಗೆ ಸ್ವಾಗತ

ಮಂಜೇಶ್ವರ: ಯುಡಿಎಫ್ ಮುಖಂಡ, ಮಂಜೇಶ್ವರ ಪಂಚಾಯತ್ ಮಾಜಿ ಸದಸ್ಯನಾಗಿದ್ದ ರಾಘವ ಮಂಜೇಶ್ವರ ಹಾಗೂ  ಪೈವಳಿಕೆ ನಿವಾಸಿ ಅಬ್ದುಲ್ ಸಮದ್ ಬಿಜೆಪಿ ಸದಸ್ಯತನ ಸ್ವೀಕರಿಸಿದ್ದಾರೆ. ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಇವರಿಗೆ ಬಿಜೆಪಿ ಸದಸ್ಯತನ ನೀಡಿ ಪಕ್ಷಕ್ಕೆ ಸ್ವಾಗತಿಸಿದರು. ಈ ವೇಳೆ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಮುಖಂಡರಾದ ನವೀನ್‌ರಾಜ್, ಯಾದವ ಬಡಾಜೆ, ಸುರೇಶ್ ಮಂಜೇಶ್ವರ, ಸಲೀಂ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 47 ನಾಮಪತ್ರ ಸಲ್ಲಿಕೆ: ಸೂಕ್ಷ್ಮ ತಪಾಸಣೆ ಇಂದು; ಹಿಂತೆಗೆಯಲು ಕೊನೆಯ ದಿನಾಂಕ 26

ಕಾಸರಗೋಡು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲಿರುವ ಸಮಯ ನಿನ್ನೆ ಕೊನೆಗೊಂಡಾಗ ಜಿಲ್ಲೆಯಲ್ಲಿ 47 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಇದರ ಸೂಕ್ಷ್ಮ ಪರಿಶೀಲನೆ ಇಂದು ನಡೆಯಲಿದೆ. ಈ ತಿಂಗಳ 26ರವರೆಗೆ ನಾಮಪತ್ರ ಹಿಂತೆಗೆಯಲು ಅವಕಾಶ ನೀಡಲಾಗಿದೆ. ಮಂಜೇಶ್ವರ ವಿಧಾನಸಭಾ ಮಂಡಲದಲ್ಲಿ  ನಾಮಪತ್ರ ಸಲ್ಲಿಸ ಲಿರುವ ಕೊನೆಯ ದಿನಾಂಕವಾದ ನಿನ್ನೆ ಮುಸ್ಲಿಂ ಲೀಗ್‌ನ ಅಭ್ಯರ್ಥಿ ಎಕೆಎಂ ಅಶ್ರಫ್ ಮೂರು ಸೆಟ್, ಎ.ಕೆ. ಆರಿಫ್ ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ.  ಇವರಲ್ಲದೆ  ಎಸ್‌ಡಿಪಿಐಯ ಕೆ.ಎಂ. ಅಶ್ರಫ್, ಬಿಎಸ್‌ಪಿಯ ಸಂಜೀವ, ಸ್ವತಂತ್ರ ಅಭ್ಯರ್ಥಿಗಳಾಗಿ …