ಯುವಕನನ್ನು ಅಪಹರಿಸಿ ಕೊಲೆಗೈದ ಪ್ರಕರಣ : ನೇಪಾಳಕ್ಕೆ ಪರಾರಿಯಾದ ಸೂತ್ರಧಾರ ಸೆರೆ

ಉಪ್ಪಳ: ಯುವಕನನ್ನು ಗಲ್ಫ್ ನಿಂದ ಊರಿಗೆ ಕರೆಸಿದ ಬಳಿಕ ಅಪಹರಿಸಿಕೊಂಡೊಯ್ದು ಮರಕ್ಕೆ ತೂಗುಹಾಕಿ ಕೊಲೆಗೈದ ಬಳಿಕ ಕಾರಿನಲ್ಲಿ ಕೊಂಡೊಯ್ದು ಆಸ್ಪತ್ರೆಯಲ್ಲಿ ಉಪೇಕ್ಷಿಸಿ ಪರಾರಿಯಾದ ಪಕರಣದ ಸೂತ್ರಧಾರ  ಪೊಲೀಸರ ಮುಂದೆ ಶರಣಾಗಿದ್ದಾನೆ. ಪೈವಳಿಕೆ ನಿವಾಸಿಯೂ ಉಪ್ಪಳದ ಫ್ಲಾಟ್‌ನಲ್ಲಿ ವಾಸಿಸುವ ಅಬೂಬಕರ್ ಸಿದ್ದಿಕ್ ಯಾನೆ ನೂರ್‌ಶ (೩೩) ಎಂಬಾತ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಈತನನ್ನು ಇನ್‌ಸ್ಪೆಕ್ಟರ್ ಕೆ. ರಾಜೀವ್ ಕುಮಾರ್ ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ಈತನಿಗೆ ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ. ಇದೇ ವೇಳೆ ನೂರ್‌ಶನನ್ನು ಕಸ್ಟಡಿಗೆ ತೆಗೆದು ಹೆಚ್ಚಿನ ತನಿಖೆಗೊಳಪಡಿಸಲಾಗು ವುದೆಂದು ಪೊಲೀಸರು ತಿಳಿಸಿದ್ದಾರೆ.

೨೦೨೨ ಜೂನ್ ೨೬ರಂದು ಪುತ್ತಿಗೆ ಮುಗುವಿನ ಅನಿವಾಸಿಯಾದ ಯುವಕ ಅಬೂಬಕರ್ ಸಿದ್ದಿಕ್‌ರನ್ನು ಅಪಹರಿಸಿ ಕೊಂಡೊಯ್ದು ಹಲ್ಲೆ ನಡೆಸಿ ಕೊಲೆಗೈದ ಪ್ರಕರಣದಲ್ಲಿ ಸೂತ್ರಧಾರನ ಪೈಕಿ ನೂರ್‌ಶ ಕೂಡಾ ಒಳಗೊಂಡಿದ್ದಾ ನೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಆರೋಪಿಯಾಗುವುದ ರೊಂದಿಗೆ ನೇಪಾಳಕ್ಕೆ ಪರಾರಿಯಾದ ನೂರ್‌ಶ ಕೆಲವು ದಿನಗಳ ಹಿಂದೆ ಮರಳಿ ಬಂದಿದ್ದನು. ಅನಂತರ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದನು. ನಿರೀಕ್ಷಣಾ ಜಾಮೀನು ನಿಷೇಧಿಸಿದ ನ್ಯಾಯಾಲಯ ಹತ್ತು ದಿನಗಳೊಳಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಶರಣಾಗಬೇಕೆಂದು ನಿರ್ದೇಶಿಸಿತ್ತು. ಹಣಕಾಸು  ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಯ ಹೆಸರಲ್ಲಿ ಒಂದು ವಾರ ಹಿಂದೆ ಗಲ್ಫ್‌ಗೆ ಹೋಗಿದ್ದ ಅಬೂಬಕರ್ ಸಿದ್ದಿಕ್‌ರನ್ನು ಊರಿಗೆ ಕರೆಸಿಕೊಳ್ಳಲಾಗಿತ್ತು. ಅನಂತರಕಾರಿನಲ್ಲಿ ಹತ್ತಿಸಿ ಕೊಂಡೊಯ್ದು ನಿರ್ಜನ  ಸ್ಥಳದಲ್ಲಿ ಪೈಶಾಚಿಕ ರೀತಿಯಲ್ಲಿ ಹಲ್ಲೆ ನಡೆಸಿ ತಲೆಕೆಳಗಾಗಿಸಿ ತೂಗುಹಾಕಿ ಕೊಲೆಗೈಯ್ಯಲಾಗಿದೆ. ಸಾವು ಸಂಭವಿಸಿ ತೆಂದು ಖಚಿತಗೊಂಡು ಬಳಿಕ  ಮೃತ ದೇಹವನ್ನು ಕಾರಿನಲ್ಲಿ ಕೊಂಡೊಯ್ದು ಬಂದ್ಯೋಡಿನ ಖಾಸಗಿ ಆಸ್ಪತ್ರೆಯಲ್ಲಿ ಉಪೇಕ್ಷಿಸಿ ತಂಡ ಪರಾರಿಯಾಗಿದೆ ಯೆಂದು ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

ಈ ಪ್ರಕರಣಧಲ್ಲಿ ಒಟ್ಟು ೧೯ ಆರೋಪಿಗಳಿದ್ದಾರೆ. ಈ ಪೈಕಿ ಈ ಹಿಂದೆ ೧೨ ಮಂದಿಯನ್ನು ಸೆರೆಹಿಡಿಯ ಲಾಗಿತ್ತು. ನೂರ್‌ಶನ ಬಂಧನದೊಂದಿಗೆ ಈ ಸಂಖ್ಯೆ ೧೩ಕ್ಕೇರಿತು. ಈಗ ತಲೆಮರೆಸಿಕೊಂಡಿ ರುವ ಆರು ಮಂದಿ ಆರೋಪಿಗಳನ್ನು  ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ನೂರ್‌ಶ ಈ ಹಿಂದೆ ಬಾಳಿಗ ಅಸೀಸ್ ಕೊಲೆ ಪ್ರಕರಣ ಹಾಗೂ ಇತರ ಹಲವು ಪ್ರಕರಣಗಳಲ್ಲೂ  ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page