ಶವರ್ಮ ನೀಡಲು ವಿಳಂಬ: ಪ್ರಶ್ನಿಸಿದ ವ್ಯಕ್ತಿಗೆ ತಂಡದಿಂದ ಹಲ್ಲೆ

ಕಾಸರಗೋಡು: ಶವರ್ಮ ಪಾರ್ಸಲ್ ನೀಡಲು ತಡವಾದುದನ್ನು ಪ್ರಶ್ನಿಸಿದ ವ್ಯಕ್ತಿಗೆ ತಂಡ ಹಲ್ಲೆಗೈದುದಾಗಿ ದೂರಲಾಗಿದೆ. ಈ ಸಂಬಂಧ ಆರು ಮಂದಿ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕೋಳಿಯಡ್ಕ ಅಣಿಂಞ ಹೌಸ್‌ನ ಕೆ.ಕೆ. ಅಬ್ದುಲ್ಲ (61)ರಿಗೆ ತಂಡ ಹಲ್ಲೆಗೈದಿದೆ. ನಿನ್ನೆ ರಾತ್ರಿ ದೇಳಿ ಜಂಕ್ಷನ್‌ನ ಹೋಟೆಲ್‌ವೊಂದರಲ್ಲಿ ಘಟನೆ ನಡೆದಿದೆ. ಶವರ್ಮಾ ಪಾರ್ಸಲ್ ನೀಡಲು ತಡವಾದುದನ್ನು ಪ್ರಶ್ನಿಸಿದಾಗ ಆರು ಮಂದಿ ತಂಡ ಹಲ್ಲೆಗೈದುದಾಗಿ ಅಬ್ದುಲ್ಲ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮೇಲ್ಪರಂಬ ಎಸ್.ಐ. ಕೆ. ವೇಲಾಯುಧನ್ ನೇತೃತ್ವದ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದರು.

RELATED NEWS

You cannot copy contents of this page