ನಜೀಬ್ ಕಲ್ಲಟ್ರನ ಮೊಬೈಲ್ ಫೋನ್, ಪಾಸ್‌ಪೋರ್ಟ್ ವಶ; ತನಿಖಾ ತಂಡ ಶೀಘ್ರಕಾಸರಗೋಡಿಗೆ

ಕೊಚ್ಚಿ: ಎರ್ನಾಕುಳಂ ಕೇಂದ್ರೀಕರಿಸಿ ನಡೆದ ಅವಯವ ವಂಚನೆ ಪ್ರಕರಣದ ತನಿಖೆಯನ್ನು ತನಿಖಾ ತಂಡ ಇನ್ನಷ್ಟು ತೀವ್ರಗೊಳಿಸಿದೆ. ತನಿಖೆಯಂಗವಾಗಿ ಪ್ರಕರಣದ ಸೂತ್ರಧಾರನಾದ ಕಾಸರಗೋಡು ಕಳನಾಡು ಚಳಿಯಂಗೋಡ್‌ನ ಮುಹಮ್ಮದ್ ನಜೀಬ್ ಕಲ್ಲಟ್ರ (53)ನ ಪಾಸ್‌ಪೋರ್ಟ್ ಹಾಗೂ ಮೊಬೈಲ್ ಫೋನ್‌ನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡಿದೆ. ಮೊಬೈಲ್ ಫೋನ್ ಪರಿಶೀಲಿಸಿದರೆ ಈತನೊಂದಿಗೆ ನಂಟು ಹೊಂದಿದವರನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆಯೆಂದು ತನಿಖಾ ತಂಡ ನಿರೀಕ್ಷೆ ಇರಿಸಿದೆ.  ಮೊಹಮ್ಮದ್ ನಜೀಬ್ ಕಲ್ಲಟ್ರನ ನೇತೃತ್ವದಲ್ಲಿ ಕೋಟ್ಯಂತರ ರೂಪಾಯಿಗಳ ವಂಚನೆ ನಡೆದಿದೆ ಯೆಂದೂ ವಂಚನೆಗೆ ಅಂತಾರಾಷ್ಟ್ರ ಮಟ್ಟದಲ್ಲಿ ಸಂಬಂಧವಿ …

ವಾಣಿನಗರ ನಿವಾಸಿ ಪೈವಳಿಕೆಯಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ಪೈವಳಿಕೆಯಲ್ಲಿರುವ ಸಹೋದರಿಯ ಮನೆಗೆ ತೆರಳಿದ್ದ ವಾಣಿನಗರ ಬಳಿಯ ಯುವಕ   ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಾಣಿನಗರ ಬಳಿಯ ಬೈಲಮೂಲೆ ನಿವಾಸಿ ದಿ| ನಾರಾಯಣ ನಾಯ್ಕರ ಪುತ್ರ ಬಾಲಕೃಷ್ಣ ನಾಯ್ಕ (40) ಮೃತಪಟ್ಟ ವ್ಯಕ್ತಿ.  ಬಾಲಕೃಷ್ಣ ನಾಯ್ಕ ನಿನ್ನೆ ಬೆಳಿಗ್ಗೆ ಪೈವಳಿಕೆಯ ಬೋಳಂಗಳದಲ್ಲಿರುವ ಸಹೋದರಿ ಸುನಿತಾರ ಮನೆಗೆ ತೆರಳಿದ್ದರು. ಮಧ್ಯಾಹ್ನ ಊಟದ ಬಳಿಕ ಮನೆ ಬಳಿಯ ಶೆಡ್‌ನಲ್ಲಿ  ವಿಶ್ರಾಂತಿ ಪಡೆಯುವುದಾಗಿ ತಿಳಿಸಿ  ಬಾಲಕೃಷ್ಣ ತೆರಳಿದ್ದರೆನ್ನಲಾಗಿದೆ. ಅಪರಾಹ್ನ ೩ ಗಂಟೆ ವೇಳೆ ಮನೆಯವರು ನೋಡಿದಾಗ ಅವರು ಅಲ್ಲಿರಲಿಲ್ಲ. ಇದರಿಂದ …

ಮುಖ್ಯಮಂತ್ರಿ ಯಾರು? ಹಿರಿಯ ನೇತಾರರು ಪಾಲ್ಗೊಂಡ ಚರ್ಚೆ ದಿಲ್ಲಿಯಲ್ಲಿ ಆರಂಭ

ನವದೆಹಲಿ: ಕೇರಳದ ನೂತನ ಮುಖ್ಯಮಂತ್ರಿ ಯಾರು ಎಂಬುದನ್ನು ತೀರ್ಮಾನಿಸಲು ಕಾಂಗ್ರೆಸ್ ಹೈಕಮಾಂಡ್ ಕರೆದ ವಿಸ್ತೃತ ಚರ್ಚೆ ದಿಲ್ಲಿಯಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಕಾಂಗ್ರೆಸ್‌ನ ಕೇರಳ ಘಟಕದ ಮಾಜಿ ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾ ಅಧ್ಯಕ್ಷರನ್ನು ಮಾತ್ರವೇ ಇಂದಿನ ಈ ಚರ್ಚೆಗೆ ಆಹ್ವಾನಿಸಲಾಗಿದೆ. ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಮುಖ್ಯಮಂತ್ರಿ ಯಾರು ಎಂಬ ಅಂತಿಮ ತೀರ್ಮಾನಕ್ಕೆ ಹೈಕಮಾಂಡ್ ಬಂದ ಬಳಿಕ ವಿದ್ಯುಕ್ತವಾಗಿ ಘೋಷಿಸಲಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಲ್ತುದಿಯಲ್ಲಿ ನಿಂತಿರುವ ಕಾಂಗ್ರೆಸ್ ನೇತಾರರಾದ ವಿ.ಡಿ. ಸತೀಶನ್, ರಮೇಶ್ ಚೆನ್ನಿತ್ತಲ ಮತ್ತು ಕೆ.ಸಿ. ವೇಣುಗೋಪಾಲ್‌ರೊಂದಿಗೆ …

ಕುಂಟಂಗೇರಡ್ಕದ ಯುವತಿ ಮೃತದೇಹ ಮದುವೆ ನಿಶ್ಚಿತಾರ್ಥ ನಡೆದ ಯುವಕನ ಸಮಾಧಿ ಸಮೀಪದಲ್ಲೇ ಅಂತ್ಯಸಂಸ್ಕಾರ

ಕುಂಬಳೆ:  ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಕಿದೂರು ಕುಂಟಂಗೇರಡ್ಕದ ಯುವತಿಯ ಮೃತದೇಹವನ್ನು ತಮಿಳುನಾಡಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಕಿದೂರು ಕುಂಟಂಗೇರಡ್ಕದ ಬಿ. ಜಯಾನಂದರ ಪುತ್ರಿ ಪ್ರಫುಲ್ಲ (26)ರ ಮೃತದೇಹವನ್ನು ನಿನ್ನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಳ್ಳಿಯೂರು ಎಂಬಲ್ಲಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ತಮಿಳುನಾಡು ನಿವಾಸಿಯಾದ ಬ್ಯಾಂಕ್ ನೌಕರ ಮಣಿ ಎಂಬವರ ಸಮಾಧಿಯ ಸಮೀಪದಲ್ಲೇ ಪ್ರಫುಲ್ಲರ ಅಂತ್ಯಸಂಸ್ಕಾರ ನಡೆಸಲಾಗಿದೆ.  ಮಣಿ ಹಾಗೂ ಪ್ರಫುಲ್ಲರ ಮದುವೆ ನಿಶ್ಚಿತಾರ್ಥ ನಾಲ್ಕು ತಿಂಗಳ ಹಿಂದೆ ನಡೆಸಲಾಗಿತ್ತು. ಅನಂತರ ಒಂದು ತಿಂಗಳ ಹಿಂದೆ ಸಂಭವಿಸಿದ …

ಗೂಡಂಗಡಿಗೆ ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ 

ಕಾಸರಗೋಡು: ಏಳು ವರ್ಷದ ಪುತ್ರಿಯನ್ನು ಕರೆದುಕೊಂಡು ಗೂಡಂಗಡಿಗೆ ಕೆಲಸಕ್ಕೆಂದು ತೆರಳಿದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಬೇಕಲ ಬೀಚ್ ರಸ್ತೆಯ ರಮಣಿ ನಿಲಯ ನಿವಾಸಿ ಎಸ್. ಪ್ರದೀಪ್‌ರ ಪತ್ನಿ ಬೇಬಿ (40), ಏಳು ವರ್ಷದ ಪುತ್ರಿ ಎಂಬಿವರು ನಾಪತ್ತೆಯಾದವರು. ಆದಿತ್ಯವಾರ ಬೆಳಿಗ್ಗೆ ಬೇಬಿ ಪುತ್ರಿಯನ್ನು ಕರೆದುಕೊಂಡು ಮನೆಯಿಂದ ಹೊರಟಿದ್ದರೆನ್ನಲಾಗಿದೆ. ಸಂಜೆಯಾದರೂ ಹಿಂತಿರುಗಲಿಲ್ಲ. ಈ ಹಿನ್ನೆಲೆಯಲ್ಲಿ ಪತಿ ಬೇಕಲ ಪೊಲೀಸರಿಗೆ ದೂರು ನೀಡಿದ್ದಾರೆ. ಬೇಬಿ ತಳಿಪರಂಬ ನಿವಾಸಿಯಾದ ಬೈಜು ಎಂಬಾತನ ಜೊತೆ ತೆರಳಿ ರುವುದಾಗಿ ಶಂಕಿಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. …

ವಿವಾಹ ಭರವಸೆ ನೀಡಿ ಯುವತಿಯ ಎಂಟೂವರೆ ಲಕ್ಷ ರೂ. ವಶಪಡಿಸಿದ ಬಳಿಕ ಮಾನಭಂಗ: ಯುವಕನ ವಿರುದ್ಧ ಕೇಸು

ಕಾಸರಗೋಡು: ಮ್ಯಾಟ್ರಿಮೋನಿ ಸೈಟ್‌ನಲ್ಲಿ ಪರಿಚಯಗೊಂಡ ಯುವತಿಯನ್ನು ಮಾನಭಂಗಗೈದಿರುವುದಾಗಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 32ರ ಹರೆಯದ ಯುವತಿ ನೀಡಿದ ದೂರಿನಂತೆ ವಡಗರ ನಿವಾಸಿಯಾದ ಮುಹಮ್ಮದ್ ಶಮ್ಮಾಸ್ ಎಂಬಾತನ ವಿರುದ್ಧ ಕಾಸರಗೋಡು ಮಹಿಳಾ ಪೊಲೀಸ್ ಕೇಸು ದಾಖಲಿಸಿದೆ. ಮ್ಯಾಟ್ರಿಮೋನಿ ಸೈಟ್ ಮೂಲಕ ಯುವತಿ ಹಾಗೂ ಮುಹಮ್ಮದ್ ಶಮ್ಮಾಸ್ ಪರಿಚಯಗೊಂಡಿದ್ದರು. ಬಳಿಕ ಯುವತಿಗೆ ವಿವಾಹ ಭರವಸೆ ನೀಡಿ ಎಂಟೂವರೆ ಲಕ್ಷದಷ್ಟು ರೂ.ವನ್ನು ವಸೂಲು ಮಾಡಿ ಮಾನಭಂಗಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಶಮ್ಮಾಸ್ …

ಅಂಗಮಾಲಿಯಲ್ಲಿ ವಾಹನ ಅಪಘಾತ:ನೆಲ್ಲಿಕಟ್ಟೆಯ ಯುವತಿ ಸಾವು: ಸ್ನೇಹಿತನಿಗೆ ಗಾಯ

ಕಾಸರಗೋಡು: ಎರ್ನಾಕುಳಂ  ಸಮೀಪದ ಅಂಗಮಾಲಿಯಲ್ಲಿ ಬೈಕ್‌ಗೆ ಕಾರು ಢಿಕ್ಕಿ ಹೊಡೆದು ನೆಲ್ಲಿಕಟ್ಟೆ ನಿವಾಸಿಯಾದ ಯುವತಿ ಸಾವನ್ನಪ್ಪಿದ ಘಟನೆಯಿಂದ ನಾಡಿನಲ್ಲಿ ಶೋಕ ಸಾಗರ ಸೃಷ್ಟಿಯಾಗಿದೆ.     ನೆಲ್ಲಿಕಟ್ಟೆ ಬಳಿಯ  ನಿವಾಸಿ ದಿ| ಮುಹಮ್ಮದ್‌ರ ಪುತ್ರಿ ಇಷಾನಾ ಇಸ್ಮತ್ (21) ಸಾವನ್ನಪ್ಪಿದ ಯುವತಿ. ಕಾಸರಗೋಡು ನಗರದ ಖಾಸಗಿ ಆಸ್ಪತ್ರೆಯೊಂದರ ಸಿಬ್ಬಂದಿ ಯಾದ ಇಷಾನಾ ಇಸ್ಮತ್ ಉತ್ತಮ ಉದ್ಯೋಗ ಅರಸಿ  ಎರ್ನಾಕುಳಂಗೆ ತೆರಳಿದ್ದಳು ಎಂದು ಹೇಳಲಾಗುತ್ತಿದೆ.  ನಿನ್ನೆ ಮುಂಜಾನೆ ಈಕೆ ಸ್ನೇಹಿತನಾದ ಕಾಸರಗೋಡು ನಿವಾಸಿ ಸರ್ಫಾತ್‌ನ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತವುಂಟಾಗಿದೆ.  ಬೈಕ್  …

ಮನೆಯಿಂದ 45 ಪವನ್ ಚಿನ್ನ ಕಳವು : ಕೃತ್ಯದಲ್ಲಿ ಕುಖ್ಯಾತ ಕ್ರಿಮಿನಲ್ ತಂಡ ಶಂಕೆ ; ಚಿನ್ನ ಕಂಡಾಗ ಮಿಠಾಯಿ ಗಂಟು ಮರೆತು ಹೋದ ಕಳ್ಳರು

ಕಾಸರಗೋಡು: ಬೇಕಲ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಪಳ್ಳಿಕ್ಕೆರೆ, ಪೂಚಕ್ಕಾಡ್ ಅನಿವಾಸಿಯ ಮನೆಯಿಂದ 45 ಪವನ್ ಚಿನ್ನಾಭರಣ ಹಾಗೂ ೫೦,೦೦೦ ರೂ. ಕಳವುಗೈದ ಪ್ರಕರಣದಲ್ಲಿ ಪ್ರತ್ಯೇಕ ಪೊಲೀಸ್ ತಂಡ ತನಿಖೆ ತೀವ್ರಗೊಳಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸ್ಕ್ವಾಡ್‌ನ ಸಹಾಯದೊಂದಿಗೆ ಬೇಕಲ ಡಿವೈಎಸ್‌ಪಿಯವರ ನೇತತ್ವದಲ್ಲಿರುವ ತನಿಖಾ ತಂಡ ತನಿಖೆ ನಡೆಸುತ್ತಿದೆ. ಪೂಚಕ್ಕಾಡ್ ಅರಯಾಲ್ತರದಲ್ಲಿ ಅನಿವಾಸಿಯಾದ ಅಬ್ದುಲ್ ಮಜೀದ್‌ರ ಮನೆಯಿಂದ ಇತ್ತೀಚೆಗೆ ಕಳವು ನಡೆಸಲಾಗಿತ್ತು. ಮನೆಯ ಮುಂಭಾಗದ ಬಾಗಿಲು ಹಾನಿಗೊಳಿಸಿ ಒಳಗೆ ನುಗ್ಗಿದ ಕಳ್ಳರು ಕಪಾಟನ್ನು ಮುರಿದು ಆಭರಣ ಹಾಗೂ ನಗದು …

ವ್ಯಾಪಾರಿ ನಿಧನ

ಕಾಸರಗೋಡು: ಟ್ರಾಫಿಕ್ ಸರ್ಕಲ್ ಬಳಿ ಹಲವಾರು ವರ್ಷಗಳಿಂದ ಶಾನ್ ಸ್ಟಾಲ್ ನಡೆಸುತ್ತಿದ್ದ ಕುಂಬಳೆ ಬದರಿಯ ನಗರ ನಿವಾಸಿ ಸೈನುದ್ದೀನ್ ಎಂ.ಎ. (58) ನಿಧನ ಹೊಂದಿದರು. ನಾಲ್ಕು ವರ್ಷದಿಂದ ರೈಲ್ವೇ ನಿಲ್ದಾಣ ರಸ್ತೆಯ ಎಸ್‌ಬಿಐ ಬ್ಯಾಂಕ್ ಬಳಿ ಜಮ್ ಜಮ್ ಸ್ಟೋರ್ ನಡೆಸುತ್ತಿದ್ದರು. ೧೪ ವರ್ಷ ‘ಕಾರವಲ್’ ಏಜೆಂಟ್ ಆಗಿದ್ದರು. ಮೃತರು ಪತ್ನಿ ನಬೀಸ, ಮಕ್ಕಳಾದ ಅಬ್ದುಲ್ ರಹ್ಮಾನ್  ಸಾಬಿತ್, ಮುಹಮ್ಮದ್ ಯಾಫಿಸ್, ಸವಾದ್, ಸಹೋದರ- ಸಹೋದರಿಯಾದ ಸುಲೈಮಾನ್, ನಬೀಸ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಆಟೋ ಚಾಲಕ ಪಂಚಾಯತ್ ಕಚೇರಿಯ ಮೆಟ್ಟಿಲಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಕಲ್ಲಿಕೋಟೆ: ಆಟೋ ಚಾಲಕರೊಬ್ಬರು ಪಂಚಾಯತ್ ಕಚೇರಿಯ ಮೇಲಿನ ಮಹಡಿಗೆ ತೆರಳುವ ಮೆಟ್ಟಿಲಿನಲ್ಲಿ ನೇಣುಬಿಗಿದು ಸಾವಿಗೀಡಾದ ಘಟನೆ ನಡೆದಿದೆ. ತಾಮರಶ್ಶೇರಿ ನಿವಾಸಿ ಮುರಳೀ ಧರನ್ (56) ಮೃತಪಟ್ಟ ವ್ಯಕ್ತಿ. ಪಂಚಾಯತ್ ಕಚೇರಿಯ ಸಮೀಪದಲ್ಲೇ ಇರುವ ಆಟೋ ಸ್ಟ್ಯಾಂಡ್‌ನಲ್ಲಿ ಮುರಳೀಧರನ್‌ರ ರಿಕ್ಷಾ ನಿಲ್ಲಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಟೋ ರಿಕ್ಷಾದ ಸಾಲ ಮರುಪಾವತಿ ಮೊಟಕು ಗೊಂಡ ಹಿನ್ನೆಲೆಯಲ್ಲಿ ಮುರಳೀಧರನ್ ಭಾರೀ ಚಿಂತೆಯಲ್ಲಿದ್ದರೆಂದು ಸ್ನೇಹಿತರು ತಿಳಿಸಿದ್ದಾರೆ. ಸಾಲ ಮೊಟಕುಗೊಂಡಿ ರುವುದರಿಂದ  ಫಿನಾನ್ಸ್‌ನ ನೌಕರರು ಮುರಳೀಧರನ್‌ರನ್ನು ಹುಡುಕಿಕೊಂಡು ಇತ್ತೀಚೆಗೆ ಆಟೋ ಸ್ಟ್ಯಾಂಡ್‌ಗೆ ತಲುಪಿದ್ದರು.  ಹಣ …