ಜಲಪಾತ ವೀಕ್ಷಿಸಲು ತಲುಪಿದ ವಿದ್ಯಾರ್ಥಿನಿಯರಿಗೆ ಕಿರುಕುಳ: ಮಂಜೇಶ್ವರದ ಮೂವರು ಯುವಕರು ಬೆಳ್ತಂಗಡಿಯಲ್ಲಿ ಸೆರೆ

ಕಾಸರಗೋಡು: ಕರ್ನಾಟಕದ ಬೆಳ್ತಂಗಡಿ ಸಮೀಪ ದಿಡುಪೆಯಲ್ಲಿ ಜಲ ಪಾತ ವೀಕ್ಷಿಸಲು ತಲುಪಿದ ವಿದ್ಯಾರ್ಥಿ ನಿಯರೊಂದಿಗೆ ಅನುಚಿತವಾಗಿ ವರ್ತಿಸಿ ಅವರಿಗೆ ಕಿರುಕುಳ ನೀಡಿದ ಮೂವರು ಯುವಕರನ್ನು ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.  ಮಂಜೇಶ್ವರ ನಿವಾಸಿಗಳೆಂದು ಹೇಳಲಾದ ಅಬ್ದುಲ್ ಖಾದರ್ ಅಲ್ತಾಫ್ (36), ಫೈಸಲ್‌ಆದಿಲ್ (27), ಉಸ್ಮಾನ್ ಸಲೀಂ (18) ಎಂಬಿವರು ಬಂಧಿತ ಆರೋಪಿಗಳಾಗಿದಾರೆಂದು ಬೆಳ್ತಂಗಡಿ ಪೊಲೀಸರು ತಿಳಿಸಿದ್ದಾರೆ.  ಮಂಗಳೂರಿನ ಕಾಲೇಜು ವಿದ್ಯಾರ್ಥಿ ನಿಯರಾದ ಮೂವರು ಯುವತಿಯರು ಮೂವರು ಯುವಕರೊಂದಿಗೆ ಜಲಪಾತ ವೀಕ್ಷಿಸಲು ತೆರಳಿದ್ದರು.  ಈ ಮಧ್ಯೆ ಅಲ್ಲಿಗೆ ತಲುಪಿದ …

ಹಾಡಹಗಲೇ ಮನೆಗೆ ನುಗ್ಗಿ ಗೃಹಿಣಿಗೆ ಅತ್ಯಾಚಾರ ಕುಂಬಳೆ ಜವುಳಿ ಅಂಗಡಿ ನೌಕರನ ವಿರುದ್ಧ ಕೇಸು

ಕುಂಬಳೆ:  ಬಟ್ಟೆಬರೆ ಖರೀದಿಸಲು ತಲುಪಿದ ಸಂದರ್ಭದಲ್ಲಿ ಪರಿಚಯ ಗೊಂಡ 42ರ ಹರೆಯದ ಗೃಹಿಣಿಯನ್ನು ಹಾಡಹಗಲೇ ಮನೆಗೆ ನುಗ್ಗಿ  ಅತ್ಯಾಚಾರ ನಡೆಸಿರುವುದಾಗಿ ದೂರಲಾಗಿದೆ.  ಕುಂ ಬಳೆಯ  ಜವುಳಿ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಅಗಿರುವ ಕಳತ್ತೂರು ಜುಮಾ ಮಸೀದಿ  ರಸ್ತೆ ನಿವಾಸಿಯಾದ ಸಹದ್ (26) ಎಂಬಾತನ ವಿರುದ್ಧ ಕುಂಬಳೆ ಪೊಲೀಸರು ಅತ್ಯಾಚಾರ ಸಂಬಂಧ ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಸೆರೆಹಿಡಿಯಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಬಟ್ಟೆಬರೆಗಳನ್ನು ಖರೀದಿಸಲು ತಲುಪಿದ ಸಂದರ್ಭದಲ್ಲಿ 42ರ ಹರೆಯದ ಗೃಹಿಣಿಯನ್ನು ಸಹದ್ ಪರಿಚಯಗೊಂಡಿದ್ದನು. ಅನಂತರ ಆಕೆಯೊಂದಿಗೆ ಸ್ನೇಹ …

ನಿವೃತ್ತ ಸೇಲ್ ಟ್ಯಾಕ್ಸ್ ಆಫೀಸರ್ ವಿಶ್ವನಾಥ ಎ ನಿಧನ

ಕಾಸರಗೋಡು: ಕಾಸರಗೋಡು ಕರಂದಕ್ಕಾಡ್ ಉಮಾ ನರ್ಸಿಂಗ್ ಹೋಂ ರಸ್ತೆ ಬಳಿಯ ವಿವೇಕ್ ವಿಹಾರದ  ದಿವಂಗತರಾದ ಶಂಕರ ಸುವರ್ಣ-ಯಮುನ ದಂಪತಿ ಪುತ್ರ ನಿವೃತ್ತ ಸೇಲ್ಸ್ ಟ್ಯಾಕ್ಸ್ ಅಧಿಕಾರಿ  ವಿಶ್ವನಾಥ ಎ (73) ನಿನ್ನೆ ನಿಧನ ಹೊಂ ದಿದರು. ಇವರು ಈ ಹಿಂದೆ ಕನ್ನಿ ಹಿತ್ತಿಲು ಮಲರಾಯ ಧೂಮಾವತಿ ದೈವಸ್ಥಾನದ  ಅಧ್ಯಕ್ಷರಾಗಿದ್ದರು. ಮೃತರು  ಪತ್ನಿ ವೇದಾವತಿ, ಮಕ್ಕಳಾದ ವಿವೇಕ್ (ಇಂಜಿನಿಯರ್ ರಷ್ಯಾ), ವಿಜೇತ, ಅಳಿಯ ಸುಬಿತ್ (ಇಬ್ಬರು ಇಂಜಿನಿಯರ್ ಬೆಂಗಳೂರು), ಸಹೋದರ-ಸಹೋದರಿ ಯರಾದ ಲಕ್ಷ್ಮೀಶ, ಅಜಿತ್ ಕುಮಾರ್, ಪ್ರೇಮಾಜಿತ್, ಚಂದ್ರಕಾಂತ, …

ದುಬಾಯಿ ಸೆಕ್ಸ್ ರ‍್ಯಾಕೆಟ್ ದಂಧೆಗೆ ಕೇರಳದಿಂದ ಯುವತಿಯರನ್ನು ತಲುಪಿಸುತ್ತಿದ್ದ ಮುಖ್ಯ ಸೂತ್ರಧಾರ ಬಂಧನ

ಕೊಚ್ಚಿ: ಕೇರಳದಿಂದ ಯುವತಿ ಯರನ್ನು ಫ್ಯಾಶನ್ ಶೋ ಹೆಸರಲ್ಲಿ ದುಬಾಯಿಗೆ ತಲುಪಿಸಿ ಬಳಿಕ ಅವರನ್ನು ವೇಶ್ಯಾಟಿಕೆ ಜಾಲಕ್ಕೆ ಹಸ್ತಾಂತರಿಸುವ ತಂಡದ ಮುಖ್ಯ ಸೂತ್ರಧಾರನನ್ನು ಕೊಚ್ಚಿ ಸಿಟಿ ಪೊಲೀಸರು ಬಂಧಿಸಿದ್ದಾರೆ. ಎರ್ನಾಕುಳಂ ಕೇಂದ್ರೀಕರಿಸಿ  ಯುವತಿಯರನ್ನು  ದುಬಾಯಿಗೆ ಕರೆದೊಯ್ಯಲು ನೇತೃತ್ವ ನೀಡಿರುವ ಆಲಪ್ಪುಳ ಮಾವೇಲಿಕ್ಕರ ಚಾರುಮ್ಮೂಡ್ ನಿವಾಸಿ ಶ್ರೀಕುಮಾ ರ್ ಯಾನೆ ಬಿಲಾಲ್ (42) ಬಂಧಿತ ಆರೋಪಿಯಾಗಿದ್ದಾನೆ. ಎರ್ನಾಕುಳಂ ಅಸಿಸ್ಟೆಂಟ್ ಸಿಟಿ ಪೊಲೀಸ್ ಕಮಿಶನರ್ ಕೆ.ಜಿ. ಸುರೇಶ್ ನೇತೃತ್ವದಲ್ಲಿ ನಿನ್ನೆ ಸಂಜೆ ಈತನನ್ನು ಬಂಧಿಸಲಾಗಿದೆ.  ದುಬಾಯಿಯಲ್ಲಿ ಸೆಕ್ಸ್ ರ‍್ಯಾಕೆಟ್‌ನಿಂದ ಪಾರಾಗಿ   …

ವಿಧಾನಸಭೆಯ ಸ್ಪೀಕರ್ ಆಗಿ ತಿರುವಂಜೂರ್ ರಾಧಾಕೃಷ್ಣನ್ ಆಯ್ಕೆ

ತಿರುವನಂತಪುರ: ಹದಿನಾರನೇ ಕೇರಳ ವಿಧಾನಸಭೆಯ ಸ್ಪೀಕರ್ ಆಗಿ ಕಾಂಗ್ರೆಸ್‌ನ ಹಿರಿಯ ನಾಯಕರೂ, ಮಾಜಿ ಗೃಹ ಸಚಿವರೂ ಆಗಿರುವ ತಿರುವಂಜೂರು ರಾಧಾಕೃಷ್ಣನ್ ವಿದ್ಯುಕ್ತವಾಗಿ ಆರಿಸಲ್ಪಟ್ಟಿದ್ದಾರೆ. ಹಂಗಾಮಿ ವಿಧಾನಸಭಾ ಅಧ್ಯಕ್ಷ ಜಿ. ಸುಧಾಕರನ್‌ರ ಅಧ್ಯಕ್ಷತೆಯಲ್ಲಿ ಹೊಸ ವಿಧಾನಸಭಾ ಸ್ಪೀಕರ್ ಸ್ಥಾನಕ್ಕಾಗಿ ವಿಧಾನಸಭೆಯಲ್ಲಿ ಇಂದು ಬೆಳಿಗ್ಗೆ ನಡೆದ ಚುನಾವಣೆಯಲ್ಲಿ ವಿಧಾನಸಭೆಯ ಒಟ್ಟು 140 ಸದಸ್ಯರಲ್ಲಿ ಯುಡಿಎಫ್ ಉಮೇದ್ವಾರ ತಿರುವಂಜೂರು ರಾಧಾಕೃಷ್ಣನ್‌ರಿಗೆ 101 ಮತಗಳು ಲಭಿಸಿ ಅವರು ಸ್ಪೀಕರ್ ಆಗಿ ಆಯ್ಕೆಗೊಂಡರು.  ಸ್ಪೀಕರ್ ಸ್ಥಾನಕ್ಕಾಗಿ ಸ್ಪರ್ಧಿಸಿದ್ದ ಎಡರಂಗದ ಎ.ಸಿ. ಮೊಯ್ದೀನ್‌ರಿಗೆ 35 ಮತ್ತು …

16ರ ಬಾಲಕನಿಗೆ ಕಿರುಕುಳ: 36ರ ಯುವತಿ ಸೆರೆ

ಕಾಸರಗೋಡು:  ಪ್ರಾಯಪೂರ್ತಿಯಾಗದ ಬಾಲಕನಿಗೆ ಕಿರುಕುಳ ನೀಡಿದ ಆರೋಪದಂತೆ ಯುವತಿ ವಿರುದ್ಧ ಮೇಲ್ಪರಂಬ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 16ರ ಹರೆಯದ  ಬಾಲಕ ನೀಡಿದ ದೂರಿನಂತೆ  36ರ ಹರೆಯದ ಯುವತಿ ವಿರುದ್ಧ ಕೇಸು ದಾಖಲಿಸಲಾಗಿದೆ. ದೂರುಗಾರನಿಗೆ ಈಗ 19 ವರ್ಷ ಪ್ರಾಯವಿದೆ.ತನಗೆ 16 ವರ್ಷಪ್ರಾಯವಿದ್ದಾಗ ಆಟೋದಲ್ಲಿ ಹಾಗೂ ಯುವತಿಯ ಬೆಡ್‌ರೂಂನಲ್ಲಿ  ಕಿರುಕುಳ ನೀಡಿರು ವುದಾಗಿ  ದೂರಿನಲ್ಲಿ ತಿಳಿಸಲಾಗಿದೆ. 2024 ಎಪ್ರಿಲ್ ತಿಂಗಳಲ್ಲಿ ತಿರೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗಲೂ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. …

ಕಾರುಗಳನ್ನು ಬಾಡಿಗೆಗೆ ಪಡೆದು ಮಾಲಕರಿಗೆ ತಿಳಿಯದೆ ಮಾರಾಟ: ಆರೋಪಿ ಸೆರೆ

ಕಾಸರಗೋಡು: ಕಾರುಗಳನ್ನು ಬಾಡಿಗೆಗೆ ಪಡೆದು ನಂತರ ಅದರ ಮಾಲಕರಿಗೆ ತಿಳಿಯದಂತೆ  ಮಾರಾಟ  ಮಾಡುವ ಜಾಲದ ಆರೋಪಿಯನ್ನು ವಿದ್ಯಾನಗರ ಠಾಣೆ ಇನ್‌ಸ್ಪೆಕ್ಟರ್ ಎಂ.ಪಿ.ವಿನೀಶ್ ಕುಮಾರ್ ಮತ್ತು ಎಸ್‌ಐ ಅನೂಪ್  ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಆವಿಕ್ಕೆರೆ  ಬಿ.ಎಂ.ಜೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಶಂಸುದ್ದೀನ್ ಮೊಹಮ್ಮದ್(45) ಬಂಧಿತ ಆರೋಪಿ. ಇತ್ತೀಚೆಗೆ  ಮುಟ್ಟತ್ತೋಡಿ ಎರ್ದುಂಕಡವು ಆಯಿಶಾ ಮಂಜಿಲ್‌ನ ಫಾತಿಮತ್ ಸೆರೀನಾ ಎಂಬವರ ಎರಡು ಕಾರು ಮತ್ತು ಮಹೀಂದ್ರ ಜೀಪನ್ನು ಬಾಡಿಗೆಗೆ ಪಡೆದುಕೊಂಡು ನಂತರ ಅವುಗಳನ್ನು ಅದರ ಮಾಲಕರಿಗೆ ತಿಳಿಯದೆ ಇತರರಿಗೆ ಮಾರಾಟ ಮಾಡಿ …

ಕೂಲಿ ಕಾರ್ಮಿಕ ನಿಧನ

ಪೈವಳಿಕೆ: ಚಿಪ್ಪಾರು ಶಾಲೆ ಬಳಿಯ ನಿವಾಸಿ ನಾರಾಯಣ ಸಿ. ಮೂಲ್ಯ (73) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕೂಲಿ ಕಾರ್ಮಿಕನಾಗಿದ್ದರು. ಇವರ ಪತ್ನಿ ಚಂದ್ರಾವತಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ರೋಹಿಣಿ, ಮಮತಾ, ಜಯಶ್ರೀ, ಅಳಿಯಂದಿರಾದ ಸೀತಾರಾಮ, ಶೇಖರ, ಜಗದೀಶ, ಸಹೋದರ ಚಂದಪ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಕೃಷ್ಣ, ಸಹೋದರಿ ಕಮಲ ಈ ಹಿಂದೆ ನಿಧನರಾಗಿದ್ದಾರೆ. ಬ್ಲೋಕ್ ಪಂಚಾಯತ್ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, …

ಹೃದಯಾಘಾತ: ನಿಧನ

ನೀರ್ಚಾಲು: ಬೇಳ ನಿವಾಸಿ ರಾಘವ (58) ನಿಧನ ಹೊಂದಿದರು. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕುಂಬಳೆಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ಸುಜಾತ, ಮಕ್ಕಳಾದ ಹರೀಶ್, ರೋಹಿತ್ (ಇಬ್ಬರೂ ಕೊಲ್ಲಿಯಲ್ಲಿ), ಚೈತ್ರ, ಸಹೋದರರಾದ ಕೃಷ್ಣ ಪಳ್ಳತ್ತಡ್ಕ, ರಾಮಚಂದ್ರ ಪಳ್ಳತ್ತಡ್ಕ, ಸಹೋದರಿಯರಾದ ದೇವಕಿ, ಸುಶೀಲ, ಬೇಬಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ದೇಶವನ್ನು ಬೆಚ್ಚಿ ಬೀಳಿಸಿದ ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ

ಕಾಸರಗೋಡು: ದೇಶದ ಜನತೆಯನ್ನು ಬೆಚ್ಚಿಬೀಳಿಸಿದ ಮಂಗಳೂರು ವಿಮಾನ ದುರಂತ ಸಂಭವಿಸಿ ಇಂದಿಗೆ 16 ವರ್ಷಗಳಾ ಯಿತು. 2010 ಮೇ ೨೨ರಂದು ಬೆಳಿಗ್ಗೆ 6.30 ಕ್ಕೆ ಸಂಭವಿಸಿದ ವಿಮಾನ ದುರಂತದಲ್ಲಿ ಆರು ಮಂದಿ ನೌಕರರು ಸಹಿತ 158 ಮಂದಿ  ಮೃತಪಟ್ಟಿದ್ದರು. ಈ ಪೈಕಿ ೫೨ ಮಂದಿ ಕೇರಳೀಯರಾ ಗಿದ್ದಾರೆ. ಇವರಲ್ಲೂ ಬಹುಪಾಲು ಮಂದಿ ಕಾಸರಗೋಡು ಜಿಲ್ಲೆಯವರಾಗಿದ್ದಾರೆ.  ದುಬಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 152 ಮಂದಿ ಪ್ರಯಾಣಿಕರ ಸಹಿತ  ಸಂಚರಿಸಿದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿತ್ತು. ರನ್‌ವೇಯ ನಿರ್ಧಿಷ್ಟ  ಸ್ಥಾನದಿಂದ …