ನಿವೃತ್ತ ಮುಖ್ಯೋಪಾಧ್ಯಾಯರ ಮನೆಯಿಂದ ಚಿನ್ನಾಭರಣ ಕಳವು

ಕುಂಬಳೆ: ಓಣಂ ಆಚರಣೆಗಾಗಿ ಊರಿಗೆ ತೆರಳಿದ್ದ ನಿವೃತ್ತ ಮುಖ್ಯೋ ಪಾಧ್ಯಾಯರ ಮನೆಗೆ  ಕಳ್ಳರು ನುಗ್ಗಿ ಚಿನ್ನಾಭರಣ ದೋಚಿದ ಘಟನೆ ನಡೆದಿದೆ. ಕುಂಬಳೆ ಕೃಷ್ಣನಗರದಲ್ಲಿ ವಾಸಿಸುವ ಕೊಡ್ಯಮ್ಮೆ ಜಿಎಚ್ ಎಸ್‌ಎಸ್‌ನ ನಿವೃತ್ತ ಮುಖ್ಯೋಪಾ ಧ್ಯಾಯ ಥೋಮಸ್  ಟಿ.ಜೆ ಅವರ ಮನೆಯಿಂದ  ಕಳವು ನಡೆದಿದೆ. ಮನೆಯ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕೊಠಡಿಯೊಳಗೆ ಕಪಾಟಿನಿಂದ ಮುಕ್ಕಾಲುಪವನ್‌ನ ಬೆಂಡೋಲೆ ಹಾಗೂ ಅರ್ಧ ಪವನ್‌ನ ಉಂಗುರ ದೋಚಿದ್ದಾರೆ.  ಥೋಮಸ್ ಟಿ.ಜೆ ಹಾಗೂ ಪತ್ನಿ  ಸೋಫಿಯಮ್ಮ ( ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ …

ಆಟೋ ರಿಕ್ಷಾಕ್ಕೆ ಕಾರು ಢಿಕ್ಕಿ: ಆಟೋ ರಿಕ್ಷಾ ಚಾಲಕನಿಗೆ ಗಂಭೀರ

ಬದಿಯಡ್ಕ: ಆಟೋ ರಿಕ್ಷಾಕ್ಕೆ ಕಾರು  ಢಿಕ್ಕಿ ಹೊಡೆದು ಆಟೋ ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ನಾರಂಪಾಡಿ ಪಳ್ಳ ನಿವಾಸಿ ಅನೀಶ್ (22) ಎಂಬವರು ಗಾಯಗೊಂಡಿದ್ದು, ಇವರನ್ನು ಚೆಂಗಳದ ಖಾಸಗಿ ಆಸ್ಪತ್ರೆಯಲ್ಲಿ  ದಾಖಲಿಸಲಾಗಿದೆ. ನಿನ್ನೆ ರಾತ್ರಿ 7.30ರ ವೇಳೆ ನಾರಂಪಾಡಿ ಬಳಿಯ ನೆಲ್ಯಡ್ಕ ಎಂಬಲ್ಲಿ ಅಪಘಾತ ಸಂಭವಿಸಿದೆ. ಕರುವಲ್ತಡ್ಕ ಭಾಗದಿಂದ ಬಂದ ಕಾರು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆಯೆಂದು ಹೇಳಲಾಗುತ್ತಿದೆ.

ಬೈಕ್ ಢಿಕ್ಕಿ ಹೊಡೆದು ಕಾಂಗ್ರೆಸ್ ನೇತಾರ ಮೃತ್ಯು

ಕಾಸರಗೋಡು: ಬೈಕ್ ಢಿಕ್ಕಿ ಹೊಡೆದು ಕಾಂಗ್ರೆಸ್ ನೇತಾರ ಸಾವನ್ನಪ್ಪಿದ ಘಟನೆ ನಡೆದಿದೆ. ಕಾಂಗ್ರೆಸ್‌ನ ಪಳ್ಳಿಕೆರೆ ಮಂಡಲ ಸಮಿತಿ ಕಾರ್ಯದರ್ಶಿ ಪಳ್ಳಿಕ್ಕೆರೆ ತಚ್ಚಂಗಾಡ್ ನಿವಾಸಿ ಕೆ. ಧನಂಜಯನ್ ಕರುವಾ ಕೋಡ್ (64) ಸಾವನ್ನಪ್ಪಿದ ದುರ್ದೈವಿ. ಇವರು ಸೂಪರ್ ಮಾರ್ಕೆಟ್‌ನಿಂದ ಸಾಮಗ್ರಿಗಳನ್ನು ಖರೀದಿಸಿ ನಿನ್ನೆ ಸಂಜೆ ತಚ್ಚಂಗಾಡ್ ಸರಕಾರಿ ಹೈಸ್ಕೂಲ್‌ನ ಎದುರುಗಡೆಯ ರಸ್ತೆಯನ್ನು ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಧನಂಜಯನ್ ತಚ್ಚಂಗಾಡ್ ಶಾಲೆಯ ಬಳಿ ಕ್ಯಾಂಟೀನ್ ನಡೆಸಿ …

ನಿವೃತ್ತ ಸರಕಾರಿ ಉದ್ಯೋಗಿ ನಿಧನ

ಬದಿಯಡ್ಕ: ಕರಿಂಬಿಲ ನಿವಾಸಿ ಕೇಶವ ಪ್ರಭು (90) ನಿನ್ನೆ ನಿಧನ ಹೊಂದಿದರು.  ಅಸೌಖ್ಯನಿಮಿತ್ತ ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.  ಕೇರಳ ರಾಜ್ಯ ಮಲೇರಿಯ ನಿಯಂತ್ರಣ ಮಂಡಳಿ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಇವರು ನಿವೃತ್ತರಾಗಿದ್ದರು. ಮೃತರು ಪುತ್ರ ಅನಿಲ್ ಕುಮಾರ್ ಪ್ರಭು, ಸೊಸೆ ಸುಮನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಕೇಶವಪ್ರಭು ಅವರ ಪತ್ನಿ ಶ್ರೀಮತಿ ಹಾಗೂ ಇನ್ನೋರ್ವ ಪುತ್ರ ಚಂದ್ರಶೇಖರ ಪ್ರಭು ಈ ಹಿಂದೆ ನಿಧನರಾಗಿದ್ದಾರೆ.

ರೈಲಿನಲ್ಲಿ ಸಾಗಿಸುತ್ತಿದ್ದ 19 ಕಿಲೋ ಗಾಂಜಾ ಸಹಿತ ಯುವತಿ ಸೆರೆ

ಕಲ್ಲಿಕೋಟೆ: ಚೆನ್ನೈ-ಮಂಗಳೂರು ಎಕ್ಸ್ ಪ್ರೆಸ್ ರೈಲಿನಲ್ಲಿ ಸಾಗಿಸುತ್ತಿದ್ದ ೧೯ ಕಿಲೋ ಗಾಂಜಾವನ್ನು ವಶಪಡಿಸಿ ಓರ್ವೆ ಯುವತಿಯನ್ನು ಬಂಧಿಸಲಾಗಿದೆ. ಪಶ್ಚಿಮಬಂಗಾಳ ನೋರ್ತ್ ಫರ್ಹಾನಾಸ್ ನಿವಾಸಿ  ಮೀನೋತಿ ಬರ್ದಾರಿ (32) ಎಂಬಾಕೆಯನ್ನು ಆರ್‌ಪಿಎಫ್ ಹಾಗೂ ರೈಲ್ವೇ ಪೊಲೀಸರು ಸೇರಿ ಬಂಧಿಸಿದ್ದಾರೆ.  ಗಾಂಜಾವನ್ನು ಪ್ಯಾಕೆಟ್‌ಗಳಲ್ಲಿ ತುಂಬಿಸಿ ಸೀಟಿನ ಅಡಿಭಾಗದಲ್ಲಿ ಬಚ್ಚಿಡಲಾಗಿತ್ತು. ಒಡಿಶಾದ ಗ್ರಹಾಂಪುರ ಎಂಬಲ್ಲಿಂದ ಗಾಂಜಾ ತಂದಿರುವುದಾಗಿ ಯುವತಿ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾಳೆ. ಕೆಲವು ದಿನಗಳ  ಹಿಂದೆ 18 ಕಿಲೋ ಗಾಂಜಾ ಸಹಿತ ಇಬ್ಬರು ಯುವಕರನ್ನು ಇದೇ ರೈಲಿನಿಂದ ಬಂಧಿಸಲಾಗಿತ್ತು.

ವಿವಾಹ ಅಗತ್ಯಕ್ಕೆ ತೆಗೆದಿರಿಸಿದ್ದ 50 ಪವನ್ ಚಿನ್ನಾಭರಣಗಳನ್ನು ಕಳವುಗೈದ ಇಬ್ಬರು ಮಹಿಳೆಯರ ಸಹಿತ ಮೂವರು ಸೆರೆ

ತೃಶೂರು: ತೋಳೂರುನಲ್ಲಿ ಬಟ್ಟೆ ವ್ಯಾಪಾರಿಯ ಮನೆಯಿಂದ ೫೦ ಪವನ್ ಚಿನ್ನಾಭರಣ ಕಳವುಗೈದ ಪ್ರಕರಣದಲ್ಲಿ ಮೂರು ಮಂದಿಯನ್ನು ಸೆರೆ ಹಿಡಿಯಲಾಗಿದೆ. ಪೀಚಿ ಪಾಣಂಗೇರಿ ಪುಳಿಕ್ಕಲ್ ಸಂತೋಷ್ ಯಾನೆ ಕಲ್ಕಿ (44), ಮಣಲೂರ್ ಎಙಂಡಿ ನಿವಾಸಿ ಸಜಿತ (46), ಕೋತಪರಂಬ್ ನಿವಾಸಿ ಅಖಿಲ (35) ಎಂಬಿವರು ಸೆರೆಯಾದವರು. ಈ ತಿಂಗಳ ೨೦ರಂದು ಪರಪ್ಪೂರ್ ಸೆಂಟರ್‌ನಲ್ಲಿ ಬಟ್ಟೆ ಅಂಗಡಿ ನಡೆಸುವ ನಾಲಗತ್ ಸಕೀರ್‌ನ ಮನೆಯಿಂದ ಕಳವು ನಡೆಸಲಾಗಿತ್ತು. ಓಣಂ ಹಬ್ಬವಾದ ಕಾರಣ ಅಂಗಡಿ ಮುಚ್ಚಿ ತಡವಾಗಿ ಮನೆಗೆ ತಲುಪಿದಾಗ ಕಳವು ಗೈದಿರುವುದು …

ಬೀದಿ ದೀಪ ದುರಸ್ತಿ ವೇಳೆ ಮ್ಯಾನ್ ಲಿಫ್ಟ್‌ನಲ್ಲಿ ಸಿಲುಕಿದ ಕಾರ್ಮಿಕರು: ಅಗ್ನಿಶಾಮಕ ದಳದಿಂದ ರಕ್ಷಣೆ

ಕಾಸರಗೋಡು: ಬೀದಿ ದೀಪ ದುರಸ್ತಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಮ್ಯಾನ್ ಲಿಫ್ಟ್‌ನಲ್ಲಿ ಸಿಲುಕಿಕೊಂಡ ಕಾರ್ಮಿಕರನ್ನು ಅಗ್ನಿಶಾಮಕ ದಳ ರಕ್ಷಿಸಿದ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯ ತಲಪಾಡಿ – ಚೆಂಗಳ ರೀಚ್‌ಗೊಳಪಟ್ಟ ಕಾಸರಗೋಡು ಕರಂದಕ್ಕಾಡ್‌ಗೆ ಸಮೀಪದ 13 ಮೀಟರ್ ಎತ್ತರದಲ್ಲಿರುವ ವಿದ್ಯುತ್ ಕಂಬದ ಬೀದಿ ದೀಪದ ದುರಸ್ತಿ ಕೆಲಸ ನಿರ್ವಹಿಸಲೆಂದು ಗುತ್ತಿಗೆ ಕಾರ್ಮಿಕರಾದ ಅಶೋಕ್ (50) ಮತ್ತು ಶಿವಪ್ರಸಾದ್ (೪೦) ಹೈಡ್ರೋಲಿಕ್ಸ್ ವ್ಯವಸ್ಥೆಯಲ್ಲಿ ಕಾರ್ಯವೆಸಗುತ್ತಿರುವ ಮ್ಯಾನ್ ಲಿಫ್ಟ್‌ಗೇರಿ ದುರಸ್ತಿ ಕೆಲಸ ನಿರ್ವಹಿಸಿದ ಬಳಿಕ ಕೆಳಗೆ ಇಳಿಯುವ ಸಂದರ್ಭದಲ್ಲಿ ಲಿಫ್ಟ್ …

ನಗರದಲ್ಲಿ ವಿವಿಧ ಸಮಸ್ಯೆಗಳು: ಪರಿಹಾರ ಕ್ರಮಕ್ಕೆ ಆಗ್ರಹಿಸಿ ಸ್ಥಳೀಯಾಡಳಿತ ಸಚಿವರಿಗೆ ಬಿಜೆಪಿ ಕೌನ್ಸಿಲರ್‌ಗಳ ಮನವಿ

ಕಾಸರಗೋಡು:  ನಗರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಅವ್ಯವಸ್ಥೆ, ತ್ಯಾಜ್ಯ ವಿಲೇವಾರಿ ಸಮಸ್ಯೆ, ಬೀದಿ ದೀಪ ಸಮಸ್ಯೆ, ಶುಚಿತ್ವ ಕೊರತೆ ಮುಂತಾದವುಗಳನ್ನು ತುರ್ತಾಗಿ ಸರಿಪಡಿಸುವಂತೆ ಆಗ್ರಹಿಸಿ ನಗರಸಭೆಯ ಬಿಜೆಪಿ ಕೌನ್ಸಿಲರ್‌ಗಳು ಸ್ಥಳೀಯಾಡಳಿತ ಸಚಿವ ಕೆ.ಎಂ. ಶಾಜಿಯವರಿಗೆ ಮನವಿ ಸಲ್ಲಿಸಿದ್ದಾರೆ.  ನಗರದಲ್ಲಿ ಸಮರ್ಪಕ ಒಳ ಚರಂಡಿ, ತ್ಯಾಜ್ಯ ಸಂಸ್ಕರಣಾ ಘಟಕಗಳಿಲ್ಲದ ಕಾರಣ ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರಕ್ಕೆ ರಂಭೀರ ಪರಿಣಾಮ ಉಂಟಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ವಾಣಿಜ್ಯ ಮಳಿಗೆಗಳು, ಆಸ್ಪತ್ರೆಗಳು, ಹೋಟೆಲ್‌ಗಳ ಕೊಳಚೆ ನೀರು ನೇರವಾಗಿ ತೆರೆದ ಚರಂಡಿಗಳಿಗೆ ಹರಿಯುತ್ತಿದ್ದು, ಇದರಿಂದ …

ದೇವರ ನಿಂದನೆ: ವಿಶ್ವಹಿಂದೂ ಪರಿಷತ್‌ನಿಂದ ಕುಂಬಳೆ ಪೊಲೀಸ್ ಠಾಣೆಗೆ ದೂರು

ಕುಂಬಳೆ: ಶಬರಿಮಲೆ ಶ್ರೀ ಅಯ್ಯಪ್ಪ ಹಾಗೂ ಮಾಳಿಗ ಪುರ ತ್ತಮ್ಮ ದೇವಿಯನ್ನು ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿದ ಸನ್ನಿ ಎಂ. ಕಾಪಿಕೋಡ್ ವಿರುದ್ಧ ಕುಂಬಳೆ ಪೊಲೀಸ್ ಠಾಣೆಯಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ದೂರು ನೀಡಲಾಯಿತು. ತಿರೂರ್‌ನ ತುಂಜನ್ ಪರಂಬದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸನ್ನಿ ಎಂ ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡಿದ್ದು, ಹಿಂದೂಗಳ ಧಾರ್ಮಿಕ ಶ್ರದ್ದೆಗೆ ತುಂಬಾ ನೋವು ಉಂಟಾಗಿದೆ. ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ವಿಶ್ವ ಹಿಂದೂ ಪರಿಷತ್ …

ಕುಂಬಳೆ ಪ್ರೆಸ್ ಫೋರಂ ಓಣಂ ಆಚರಣೆ

ಕುಂಬಳೆ: ಕುಂಬಳೆ ಪ್ರೆಸ್ ಫೋ ರಂ ನೇತೃತ್ವದಲ್ಲಿ ಓಣಂ ಆಚರಿಸ ಲಾಯಿತು. ಪತ್ರಕರ್ತರು ಮತ್ತು ಕುಟುಂಬ ಸದಸ್ಯರಿಗೆ ವಿವಿಧ ಸ್ಪರ್ಧೆ ಗಳು ಮತ್ತು ಓಣಂ ಔತಣ ಏರ್ಪಡಿಸಲಾಗಿತ್ತು.ಸದಸ್ಯರ ಕುಟುಂಬಗಳ ಮಕ್ಕಳಿಗೆ ಸಂಗೀತ ಕುರ್ಚಿ, ಬಲೂನ್ ಪಾಪಿಂಗ್ ಮತ್ತು ಓಣಂ ಹಾಡಿನಂ ತಹ ಸ್ಪರ್ಧೆಗಳನ್ನು ಆಯೋಜಿಸಲಾ ಗಿತ್ತು. ಪ್ರೆಸ್ ಫೋರಂ ಸದಸ್ಯರಿಗೆ ಓಣಂ ಬಟ್ಟೆಯನ್ನು ಉದ್ಯಮಿ ಅಶ್ರಫ್ ಸ್ಕೈಲರ್ ವಿತರಿಸಿದರು.ಕಾಸರಗೋಡು ಬ್ಲಾಕ್ ಪಂಚಾಯತ್ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ಉದ್ಘಾಟಿಸಿದರು. ಪ್ರೆಸ್ ಫೋರಂ ಅಧ್ಯಕ್ಷ …