ಕಣ್ವತೀರ್ಥ ಸಮುದ್ರ ಕಿನಾರೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಮಂಜೇಶ್ವರ: ಸಮುದ್ರಕಿನಾರೆ ಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ. ಮಂಜೇಶ್ವರ ಕಣ್ವತೀರ್ಥ ಸಮುದ್ರಕಿನಾರೆಯಲ್ಲಿ ನಿನ್ನೆ ಮಧ್ಯಾಹ್ನ ಜೀರ್ಣಾವಸ್ಥೆಯಲ್ಲಿ ರುವ ವ್ಯಕ್ತಿಯ ಮೃತದೇಹವನ್ನು ಸ್ಥಳೀಯ ಮೀನುಕಾರ್ಮಿಕರು ಪತ್ತೆಹಚ್ಚಿದ್ದಾರೆ. ಸುಮಾರು 40 ವರ್ಷ ಪ್ರಾಯ ಅಂದಾಜಿಸಲಾಗಿದೆ. ಸ್ಥಳಕ್ಕೆ ಶಿರಿಯ ಕರಾವಳಿ ಪೊಲೀಸ್ ಠಾಣೆಯ್ ಸಿಐ ದಿಲೀಶ್ ನೇತೃತ್ವ ದಲ್ಲಿ ತಲುಪಿದ ಪೊಲೀಸರು ಮೃತ ದೇಹವನ್ನು ಮಂಗಳೂರು ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಿ ದ್ದಾರೆ. ಕರ್ನಾಟಕ ನಿವಾಸಿಯಾಗಿ ರಬೇಕೆಂದು ಶಂಕಿಸಲಾಗುತ್ತಿದೆ.

You cannot copy contents of this page